ಬ್ರೇಕಿಂಗ್ ನ್ಯೂಸ್
01-08-20 02:07 pm Headline Karnataka News Network ಕ್ರೀಡೆ
ಹೊಸದಿಲ್ಲಿ: ದಾಖಲೆಗಳಿಗೆ ಪರ್ಯಾಯ ಹೆಸರೇ ಸಚಿನ್ ತೆಂಡುಲ್ಕರ್. ಆದರೆ ಅವರಿಗೆ ಒಲಿಯದ ದಾಖಲೆಗಳೂ ಸಾಕಷ್ಟಿವೆ. ಇದರಲ್ಲಿ ಪ್ರಮುಖವಾದುದೆಂದರೆ, ಟೆಸ್ಟ್ ಕ್ರಿಕೆಟ್ನಲ್ಲಿ ಶತಕ ಬಾರಿಸಿದ ಅತೀ ಕಿರಿಯ ಆಟಗಾರನೆಂಬ ದಾಖಲೆ ಸ್ವಲ್ಪದರಲ್ಲೇ ಕೈತಪ್ಪಿದ್ದು. ಇದಕ್ಕೆ ತಾನೇ ಕಾರಣ ಎಂದು ನ್ಯೂಜಿಲ್ಯಾಂಡಿನ ಮಾಜಿ ವೇಗಿ ಡ್ಯಾನಿ ಮಾರಿಸನ್ ಬಹಳ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ!
ನಾಯಕ ನೀಡಿದ ಎಚ್ಚರಿಕೆ
‘ಆಗಷ್ಟೇ ಪಾಕಿಸ್ಥಾನ ಪ್ರವಾಸ ಮುಗಿಸಿದ ತೆಂಡುಲ್ಕರ್ ನ್ಯೂಜಿಲ್ಯಾಂಡಿಗೆ ಆಗಮಿಸಿದ್ದರು. ಈ ಹುಡುಗನ ಬಗ್ಗೆ ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ಅಭ್ಯಾಸ ತಂಡದ ನಾಯಕ ಕೆನ್ ರುದರ್ಫೋರ್ಡ್ ಎಚ್ಚರಿಸಿದ್ದರು.
ನನಗೂ 16ರ ಹರೆಯದ ಸಚಿನ್ ಬಗ್ಗೆ ಕುತೂಹಲ ಮೂಡಿತ್ತು. ಆವರು ರಿಚರ್ಡ್ ಹ್ಯಾಡ್ಲಿ ಎಸೆತಗಳನ್ನೂ ದಿಟ್ಟ ರೀತಿಯಲ್ಲಿ ನಿಭಾಯಿಸುತ್ತಿದ್ದರು…’ ಎಂದು ಮಾರಿಸನ್ 1990ರ ಘಟನೆಯನ್ನು ಮೆಲುಕು ಹಾಕಿದ್ದಾರೆ.
29 ವರ್ಷಗಳ ದಾಖಲೆ
ಪ್ರಥಮ ಪಂದ್ಯದಲ್ಲಿ ಸೊನ್ನೆ ಮತ್ತು 24 ರನ್ ಮಾಡಿದ ಸಚಿನ್, ನೇಪಿಯರ್ನ ದ್ವಿತೀಯ ಟೆಸ್ಟ್ನಲ್ಲಿ ಶತಕದತ್ತ ದೌಡಾಯಿಸಿದ್ದರು. ಇದನ್ನು ಸಾಧಿಸಿದ್ದೇ ಆದಲ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ ಶತಕ ಬಾರಿಸಿದ ವಿಶ್ವದ ಅತೀ ಕಿರಿಯ ಆಟಗಾರನೆಂಬ ವಿಶ್ವ ದಾಖಲೆ ನಿರ್ಮಾಣಗೊಳ್ಳುತ್ತಿತ್ತು. 1961ರಷ್ಟು ಹಿಂದೆ ಪಾಕಿಸ್ಥಾನದ ಮುಷ್ತಾಕ್ ಮೊಹಮ್ಮದ್ 17 ವರ್ಷ, 78ನೇ ದಿನದಲ್ಲಿ ಬಾರಿಸಿದ ಶತಕದ ದಾಖಲೆ ಪತನಗೊಳ್ಳುತ್ತಿತ್ತು.
88ಕ್ಕೆ ಕೊನೆಗೊಂಡ ಆಟ
’88 ರನ್ ಮಾಡಿ ಆಡುತ್ತಿದ್ದ ತೆಂಡುಲ್ಕರ್ಗೆ ನಾನು ಬೌಲಿಂಗ್ ಮಾಡಲಿಳಿದಿದ್ದೆ. ನನಗೆ 3 ಬೌಂಡರಿಗಳ ರುಚಿ ತೋರಿಸಿ ಶತಕ ಪೂರ್ತಿ ಮಾಡುತ್ತಾರೇನೋ ಎಂಬ ಆತಂಕ ಮನೆಮಾಡಿತ್ತು. ಆದರೆ ಅದೇ ಮೊತ್ತಕ್ಕೆ ನಾನು ಅವರ ವಿಕೆಟ್ ಹಾರಿಸಿದೆ. ಮಿಡ್ ಆಫ್ನಲ್ಲಿದ್ದ ಜಾನ್ ರೈಟ್ ಕ್ಯಾಚ್ ಪಡೆದಿದ್ದರು. ನಾನೊಂದು ದೊಡ್ಡ ಸಾಹಸ ಮಾಡಿದ್ದೆ’ ಎಂದು ಮಾರಿಸನ್ ಖುಷಿಯಿಂದ ಹೇಳಿದರು.
25-07-26 03:06 pm
HK News Staffer
ಧಾರವಾಡ ; ಮಗ ರೈಲು ಹಳಿಗೆ ಬಿದ್ದು ಆತ್ಮಹತ್ಯೆ, ಸಾವಿ...
23-07-26 08:05 pm
Soujanya case: ಸೌಜನ್ಯ ಪ್ರಕರಣದಲ್ಲಿ ಸಿಬಿಐಗೆ ತರಾ...
22-07-26 06:00 pm
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
26-07-26 01:32 pm
HK News Staffer
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
NEET ಪ್ರತಿಭಟನೆ ಹಿಂಸಾಚಾರ ; 117 ಶಂಕಿತರ ಫೋಟೋ ಬಿಡ...
24-07-26 03:25 pm
ಪ್ರಶ್ನೆಪತ್ರಿಕೆ ಸೋರಿಕೆ ; ಕೇಂದ್ರ ಸರ್ಕಾರದ ಭರವಸೆಗ...
24-07-26 11:18 am
26-07-26 09:57 pm
HK News Desk
ಕದ್ರಿ ಯುದ್ಧ ಸ್ಮಾರಕದ ಬಳಿ ಟಿ-55 ಯುದ್ಧ ಟ್ಯಾಂಕರ್...
26-07-26 09:14 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಹವಾಮಾನ ಇಲಾಖೆಯ ಅವೈಜ್ಞಾನಿಕ ವರದಿ, ತರಾತುರಿಯ ರಜೆ ಘ...
25-07-26 02:42 pm
26-07-26 04:30 pm
HK News Staffer
ಶಾಲಾ ಬಸ್ಸಿಗೆ ಮರ ಬಿದ್ದು ಮಗು ಸಾವು ಪ್ರಕರಣ ; ಬಸ್ಸ...
25-07-26 07:36 pm
Vikky Bappal, Mangalore Crime: ಕುಖ್ಯಾತ ರೌಡಿ ವ...
25-07-26 03:50 pm
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಯುವತಿಯಿಂದ ಬ್ಲ...
24-07-26 08:57 pm
ಪಿಡಿಓ ಹುದ್ದೆ ಕೊಡಿಸುವುದಾಗಿ ಹೇಳಿ 26 ಲಕ್ಷ ಪೀಕಿಸಿ...
24-07-26 08:31 pm