ಬ್ರೇಕಿಂಗ್ ನ್ಯೂಸ್
01-03-26 09:52 am HK News Staffer ದೇಶ - ವಿದೇಶ
ಟೆಹ್ರಾನ್, ಮಾ.1: ಅಮೆರಿಕ- ಇಸ್ರೇಲ್ ಏರ್ ಸ್ಟ್ರೈಕ್ ನಲ್ಲಿ ಇರಾನ್ ಪರಮೋಚ್ಚ ನಾಯಕ ಅಯತೊಲ್ಲಾ ಅಲ್ ಖಮೇನಿ ಅವರು ಹತ್ಯೆಗೀಡಾಗಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಖಮೇನಿ ಹತ್ಯೆ ಮಾಡಿದ್ದಾಗಿ ತಮ್ಮ ಸೋಶಿಯಲ್ ಮೀಡಿಯಾ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
ಅಯತೊಲ್ಲಾ ಖಮೇನಿ ಜೊತೆಗೆ ಅವರ ಪುತ್ರಿ, ಮೊಮ್ಮಗು, ಅಳಿಯ, ಸೊಸೆಯೂ ಹತ್ಯೆಗೀಡಾಗಿದ್ದಾರೆ. ಖಮೇನಿ ಅವರು ಆಡಳಿತವನ್ನು ಪ್ರಧಾನಿಗೆ ಒಪ್ಪಿಸಿ ಒಂದು ವಾರದಿಂದ ಅಡಗು ತಾಣಕ್ಕೆ ತೆರಳಿದ್ದರು. ಆದರೆ ಇಸ್ರೇಲಿನ ಗುಪ್ತಚರ ಪಡೆ ಮೊಸಾದ್, ಖಮೇನಿ ಅಡಗಿದ್ದ ಸ್ಥಳವನ್ನು ಪತ್ತೆಹಚ್ಚಿ ಗುರಿಯಿಟ್ಟು ಬಾಂಬ್ ಹಾಕಿ ಇಡೀ ಕುಟುಂಬವನ್ನು ಹತ್ಯೆ ಮಾಡಿದೆ. ಖಮೇನಿ ಶನಿವಾರ ಬೆಳಗ್ಗೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಹತ್ಯೆಗೀಡಾಗಿದ್ದಾರೆ ಎಂದು ಇರಾನ್ ಮಾಧ್ಯಮ ಐಆರ್ ಎನ್ ನ್ಯೂಸ್ ವರದಿ ಮಾಡಿದೆ.
ಖಮೇನಿ ಗೌರವಾರ್ಥ ಇರಾನ್ ದೇಶದಲ್ಲಿ 40 ದಿನಗಳ ಶೋಕಾಚರಣೆ ಘೋಷಿಸಲಾಗಿದೆ. ಅಲ್ಲದೆ, ಏಳು ದಿನಗಳ ರಾಷ್ಟ್ರ ವ್ಯಾಪಿ ಸರ್ಕಾರಿ ರಜಾ ದಿನ ಘೋಷಣೆ ಮಾಡಲಾಗಿದೆ. ಖಮೇನಿ ಹತ್ಯೆಯ ಬಗ್ಗೆ ವಿಶ್ವಸಂಸ್ಥೆ ಯಾವುದೇ ರೀತಿಯ ಹೇಳಿಕೆ ಬಿಡುಗಡೆ ಮಾಡಿಲ್ಲ. 86 ವರ್ಷದ ಖಮೇನಿ ಇರಾನ್ ದೇಶವನ್ನು 1989ರಿಂದ ಆಡಳಿತದಲ್ಲಿದ್ದರು. ರೆವೊಲ್ಯುಶನರಿ ಗಾರ್ಡ್ ಎನ್ನುವ ಪ್ರಭಾವಿ ಪಡೆಯನ್ನು ಕಟ್ಟಿದ್ದರು. ಅಮೆರಿಕದ ಬೆದರಿಕೆ ನಡುವೆಯೂ ಅಣು ಬಾಂಬ್ ತಯಾರಿಸುತ್ತಿದ್ದಾರೆ ಎನ್ನುವುದು ಖಮೇನಿ ಮೇಲಿನ ಆರೋಪವಾಗಿತ್ತು. ಅಣು ಶಸ್ತ್ರ ಹೊಂದಬಾರದು ಎಂಬ ನಿರಂತರ ಬೆದರಿಕೆ ಬಳಿಕ ಇಸ್ರೇಲ್- ಅಮೆರಿಕ ಜಂಟಿಯಾಗಿ ಇರಾನ್ ಮೇಲೆ ಮುಗಿಬಿದ್ದು ಹತ್ಯೆ ಮಾಡಿದೆ.
ತನ್ನ ಮೇಲಿನ ದಾಳಿಗೆದುರಾಗಿ ಇರಾನ್ ಪಡೆಗಳು ಅಮೆರಿಕದ ಮಿಲಿಟರಿ ಬೇಸ್ ಇರುವ ಯುಎಇ, ಕತಾರ್, ಬೆಹ್ರೈನ್ ಮೇಲೆ ದಾಳಿ ನಡೆಸಿತ್ತು.

ಜಾಗತಿಕ ಭಯೋತ್ಪಾದನೆಯ ಸೂತ್ರಧಾರನ ಸಾವು :
ಜಾಗತಿಕ ಭಯೋತ್ಪಾದನೆಯ ಅತಿದೊಡ್ಡ ಪ್ರತಿಪಾದಕ, ಸೂತ್ರಧಾರ ಕಡೆಗೂ ಸಾವನ್ನಪ್ಪಿದ್ದಾನೆ ಎಂದು ಅಮೆರಿಕ ಹೇಳಿಕೆ ಬಿಡುಗಡೆ ಮಾಡಿದೆ. ಎಕ್ಸ್ ನಲ್ಲಿ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಕಡೆಯಿಂದ ಹೇಳಿಕೆ ನೀಡಲಾಗಿದ್ದು ದಶಕಗಳ ಕಾಲದಿಂದ ನಡೆಸುತ್ತಿದ್ದ ಭಯೋತ್ಪಾದನಾ ಯುಗದ ಅಂತ್ಯವಾಗಿದೆ. ಅಲಿ ಖಮೇನಿ ಹತ್ಯೆಯಿಂದ ಜಗತ್ತು ಸುರಕ್ಷತೆಯತ್ತ ಮರಳಿದೆ ಎಂದು ಹೇಳಿದೆ.
01-05-26 08:33 pm
HK News Staffer
ರಾಜ್ಯದಲ್ಲಿ ಸದ್ಯಕ್ಕೆ ಸಿಎಂ ಬದಲಾವಣೆ ಇಲ್ಲ, ನಾನು ಸ...
30-04-26 08:16 pm
ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳ...
30-04-26 11:53 am
ಸದ್ಯಕ್ಕಿಲ್ಲ ಡಿಕೆಶಿಗೆ ಸಿಎಂ ಭಾಗ್ಯ ; ರಾಜ್ಯಸಭೆ- ಏ...
29-04-26 10:36 am
ನಾಯಕತ್ವ ಬದಲಾವಣೆ ಮಾತೇ ಇಲ್ಲ, ಮೇ 20ರೊಳಗೆ ಸಂಪುಟ ವ...
26-04-26 08:05 pm
02-05-26 11:18 am
HK News Staffer
Actor Vijay, Election, Poll: ಚುನಾವಣೋತ್ತರ ಸಮೀಕ...
29-04-26 11:18 pm
ಇದು ಫ್ರೆಂಡ್ಲಿ ಫೆಡರಲ್ ಅಸ್ಸಾಸಿನ್, ಟ್ರಂಪ್ ಅತ್ಯಾಚ...
27-04-26 02:48 pm
ಶ್ವೇತಭವನದ ಡಿನ್ನರ್ ಪಾರ್ಟಿಯಲ್ಲಿ ಗುಂಡಿನ ದಾಳಿ ; ಭ...
26-04-26 12:49 pm
ರಾಘವ್ ಚಡ್ಡಾ ಸೇರಿ ಏಳು ಆಪ್ ಸಂಸದರು ಬಿಜೆಪಿಗೆ ; ಮೇ...
25-04-26 03:54 pm
29-04-26 11:05 pm
HK News Staffer
ತಾಲೂಕು ಆಸ್ಪತ್ರೆ ಖಾಸಗಿ ವಶಕ್ಕೆ ; ಆರೋಗ್ಯ ಸಚಿವರ ಉ...
28-04-26 09:18 pm
ASI Assault Case, Mangalore: ಎಎಸ್ಐ ಮೇಲೆ ಹಲ್ಲೆ...
28-04-26 01:35 pm
ನೂತನ ಮನೆಯ ಔತಣಕೂಟ ದಿನವೇ ಮೃತಪಟ್ಟ ಯಜಮಾನ ; ಬಂಟ್ವಾ...
28-04-26 01:26 pm
ಮಂಗಳೂರು- ಬೆಂಗಳೂರು ರೈಲಿನಲ್ಲಿ ಮಗುವಿಗೆ ಜನ್ಮವಿತ್ತ...
27-04-26 10:29 am
01-05-26 09:24 pm
HK News Staffer
ಸಹೋದ್ಯೋಗಿ ಮೇಲೆ ಆಸಿಡ್ ದಾಳಿ ; ಕೇರಳ ಮೂಲದ ವ್ಯಕ್...
01-05-26 07:18 pm
Rakesh Gladson Dsouza: ಮಂಗಳೂರಿನ ಯುವ ಉದ್ಯಮಿ ರಾ...
01-05-26 06:36 pm
ಮಕ್ಕಳ ಆಯೋಗ ಸಮಿತಿ ಸದಸ್ಯನಿಂದಲೇ ಹಲವು ಮಹಿಳೆಯರಿಗೆ...
01-05-26 01:45 pm
ಬೆಂಗಳೂರಿನ ಜ್ಯುವೆಲ್ಲರಿ ಶಾಪ್ ಗೋಡೆ ಕೊರೆದು ಕೋಟ್ಯಂ...
01-05-26 11:48 am