ಬ್ರೇಕಿಂಗ್ ನ್ಯೂಸ್
28-02-26 05:28 pm HK News Desk ದೇಶ - ವಿದೇಶ
ನವದೆಹಲಿ, ಫೆ.28: ಬಹುಕಾಲದ ಉದ್ವಿಗ್ನತೆಯ ಬಳಿಕ ಅಮೆರಿಕ- ಇಸ್ರೇಲ್ ಸೇನೆಯು ಇರಾನ್ ಮೇಲೆ ಹಠಾತ್ ದಾಳಿ ಆರಂಭಿಸಿದೆ. ಶನಿವಾರ ಬೆಳಗ್ಗಿನಿಂದಲೇ ಇರಾನ್ ರಾಜಧಾನಿ ಟೆಹ್ರಾನ್ ಸೇರಿದಂತೆ ಪ್ರಮುಖ ಸೇನಾ ನೆಲೆಗಳನ್ನು ಗುರಿಯಾಗಿಸಿ ಕ್ಷಿಪಣಿ ದಾಳಿಯಾಗಿದೆ. ಇದರ ಬೆನ್ನಲ್ಲೇ ಇರಾನ್ ಕಡೆಯಿಂದ ಅಮೆರಿಕದ ಮಿಲಿಟರಿ ಬೇಸ್ ಇರುವ ಕತಾರ್, ಕುವೈತ್, ಯುಎಇ ಮೇಲೆ ಮಿಸೈಲ್ ದಾಳಿಯಾಗಿದೆ.
ದಕ್ಷಿಣ ಇರಾನ್ ಭಾಗದ ಮಿನಾಬ್ ನಗರದಲ್ಲಿ ಮಿಸೈಲ್ ದಾಳಿಗೆ ಐದು ಬಾಲಕಿಯರು ಸಾವನ್ನಪ್ಪಿದ್ದಾರೆಂದು ಇರಾನ್ ಮಾಧ್ಯಮ ಐಆರ್ ಎನ್ಎ ನ್ಯೂಸ್ ವರದಿ ಮಾಡಿದೆ. ಮಿನಾಬ್ ಸಿಟಿಯಲ್ಲಿ ಇರಾನ್ ಪ್ಯಾರಾ ಮಿಲಿಟರಿ ರೆವೊಲ್ಯುಶನರಿ ಗಾರ್ಡ್ ಬೇಸ್ ಇದ್ದು, ಅದನ್ನು ಗುರಿಯಾಗಿಸಿ ಅಮೆರಿಕ ದಾಳಿ ನಡೆಸಿರುವ ಸಾಧ್ಯತೆಯಿದೆ. ಇದೇ ವೇಳೆ, ಇರಾನ್ ಭಾಗದಲ್ಲಿ ಹಲವಾರು ರೆವೊಲ್ಯುಶನರಿ ಗಾರ್ಡ್ ಯೋಧರು ಮೃತಪಟ್ಟಿದ್ದಾರೆ, ದಾಳಿಯಲ್ಲಿ ದೊಡ್ಡ ಯಶಸ್ಸು ಸಿಕ್ಕಿದೆ ಎಂದು ಇಸ್ರೇಲ್ ಹೇಳಿದೆ.


ಕತಾರ್, ಯುಎಇ ಮೇಲೆ ದಾಳಿಯಾಗಿರುವುದರಿಂದ ಕತಾರಿ ಏರ್ವೇಸ್ ಸೇರಿದಂತೆ ತಮ್ಮ ವಾಯುಪ್ರದೇಶದಲ್ಲಿ ವಿಮಾನ ಹಾರಾಟವನ್ನು ನಿಷೇಧಿಸಿದೆ. ಇದೇ ವೇಳೆ, ಇರಾನ್ ವಿದೇಶಾಂಗ ಇಲಾಖೆಯ ಹೇಳಿಕೆಯಲ್ಲಿ, ತವರು ನೆಲವನ್ನು ರಕ್ಷಿಸಿಕೊಳ್ಳುವ ಸಮಯ ಬಂದಿದೆ ಎಂದು ಅಮೆರಿಕ ದಾಳಿಗೆ ಪ್ರತಿಯಾಗಿ ಹೇಳಿಕೊಂಡಿದೆ. ಇದಕ್ಕೆ ಪ್ರತಿಯಾಗಿ ಇಸ್ರೇಲ್ ಮಿಲಿಟರಿಯು, ತಿಂಗಳ ಕಾಲದ ಜಂಟಿ ಯೋಜನೆಯ ಬಳಿಕ ಇರಾನ್ ದೇಶದ ಡಜನ್ನಷ್ಟು ಮಿಲಿಟರಿ ಬೇಸನ್ನು ಗುರಿಯಾಗಿಸಿ ದಾಳಿ ಮಾಡಲಾಗಿದೆ ಎಂದಿದೆ.
ಯುಎಇ, ಬೆಹ್ರೈನ್ ಮೇಲೆಯೂ ಇರಾನ್ ಕಡೆಯಿಂದ ಕ್ಷಿಪಣಿ ದಾಳಿಯಾಗಿದ್ದು, ದುಬೈನಲ್ಲಿ ಒಬ್ಬ ಪ್ರಜೆ ಸಾವಿಗೀಡಾಗಿದ್ದಾನೆ. ಹೀಗಾಗಿ ಯುಎಇ ಮತ್ತು ಬೆಹ್ರೈನ್ ದೇಶಗಳು ತಮ್ಮ ವಾಯು ಪ್ರದೇಶದಲ್ಲಿ ವಿಮಾನ ಹಾರಾಟವನ್ನು ನಿಷೇಧಿಸಿವೆ. ಕತಾರಿನಲ್ಲಿ ಎಲ್ಲ ಪ್ರಜೆಗಳು ತಮ್ಮ ಮನೆ ಅಥವಾ ಕಟ್ಟಡಗಳ ಒಳಗಡೆಯಲ್ಲೇ ಇರುವಂತೆ ಮತ್ತು ಮಿಲಿಟರಿ ಬೇಸ್ ಹತ್ತಿರ ಬರದಂತೆ ಸಲಹೆ ನೀಡಲಾಗಿದೆ. ಇರಾನ್ ಮೇಲೆ ದಾಳಿಯಾಗುತ್ತಿರುವುದರಿಂದ ಅಲ್ಲಿ ಮೊಬೈಲ್ ಇಂಟರ್ನೆಟ್ ಬ್ಯಾನ್ ಮಾಡಲಾಗಿದೆ. ರಾಜಧಾನಿ ಟೆಹ್ರಾನ್ ನಲ್ಲಿ ಹೆಚ್ಚುವರಿ ಭದ್ರತೆ ಏರ್ಪಡಿಸಿದ್ದು, ಖಮೇನಿ ನಿವಾಸಕ್ಕೆ ತೆರಳುವ ರಸ್ತೆಯನ್ನು ಬ್ಲಾಕ್ ಮಾಡಲಾಗಿದೆ.
ದಾಳಿ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ್ದು, ನಾವು ಫಿನಿಷ್ ಮಾಡಿದ ಕೂಡಲೇ ನೀವು ಅಧಿಕಾರಕ್ಕೇರಲು ಸಜ್ಜಾಗಿ. ನಿಮ್ಮ ಸರಕಾರವನ್ನು ನೀವೇ ಮಾಡಿಕೊಳ್ಳಿ. ಈಗಿನ ಜನರೇಶನ್ನಿಗೆ ಇದೊಂದು ಅಪೂರ್ವ ಅವಕಾಶ ಎಂದು ಹೇಳಿಕೊಂಡಿದ್ದಾರೆ. ಅಮೆರಿಕವು ಇರಾನ್ ಸುತ್ತಮುತ್ತ ಇರುವ ಕತಾರ್, ಕುವೈತ್, ಸೌದಿ ಅರೇಬಿಯಾ, ಯುಎಇ ದೇಶಗಳಲ್ಲಿ ತನ್ನ ಮಿಲಿಟರಿ ಬೇಸ್ ಮಾಡಿಕೊಂಡಿದ್ದು, ಇರಾನ್ ಈಗ ಅದನ್ನು ಗುರಿಯಾಗಿಸಿ ದಾಳಿ ಮಾಡತೊಡಗಿದೆ.
25-06-26 09:10 pm
HK News Staffer
ಗೃಹಲಕ್ಷ್ಮಿ ಯೋಜನೆಯಲ್ಲಿ ಭಾರೀ ಕಳ್ಳಾಟ ! 19 ಸಾವಿರ...
24-06-26 05:55 pm
ಅಡ್ಡ ಮತದಾನ ; ರಾಜ್ಯ ನಾಯಕತ್ವದ ನಿರ್ಲಕ್ಷ್ಯವೇ ಕಾರಣ...
23-06-26 05:58 pm
ಅಡ್ಡ ಮತದಾನ; ಧರ್ಮಸ್ಥಳದಲ್ಲಿ ಶಾಸಕರು ಬಂದು ಆಣೆ ಮಾಡ...
22-06-26 08:18 pm
ವಿಧಾನ ಪರಿಷತ್ ಚುನಾವಣೆಗೂ ಮುನ್ನ ರಹಸ್ಯ ಸಭೆ ; ಬಿಜೆ...
22-06-26 03:44 pm
25-06-26 12:13 pm
HK News Staffer
ಕೂಲ್ ಸಿಟಿ ಯುರೋಪಿನಲ್ಲೀಗ ಬಿಸಿಲ ಹೊಡೆತ ; ಫ್ರಾನ್ಸ್...
24-06-26 01:51 pm
ಮಾಹಿತಿ ಹಕ್ಕು ನಿಯಮಗಳಿಗೆ ಮಹಾರಾಷ್ಟ್ರ ಸರ್ಕಾರ ತಿದ್...
23-06-26 10:47 pm
ಟಿಎಂಸಿಯಲ್ಲಿ ರಾಜಕೀಯ ಭೂಕಂಪ ; ಮಮತಾ ಬ್ಯಾನರ್ಜಿ ಅಧ...
23-06-26 12:21 pm
ಕತಾರ್ ಕೈಗಾರಿಕಾ ಪ್ರದೇಶದಲ್ಲಿ ಭಾರೀ ಸ್ಫೋಟ ; 54 ಜನ...
22-06-26 12:55 pm
25-06-26 10:56 pm
HK News Staffer
ಒಂದು ವರ್ಷದಲ್ಲಿ 400 ಡ್ರಗ್ ಪೆಡ್ಲರ್ಗಳ ಬಂಧನ ; 2,...
25-06-26 10:48 pm
ಸಂಪುಟ ವಿಸ್ತರಣೆ ವಿಳಂಬ ; ಪ್ರಕೃತಿ ವಿಕೋಪ ಮೇಲುಸ್ತು...
25-06-26 02:39 pm
ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ನಿಧನ; ‘ಸಮಾಜ ಕಳೆ...
23-06-26 06:02 pm
ಬಸ್ ಚಲಿಸುತ್ತಿದ್ದಾಗಲೇ ಬಿಪಿ ಲೋ ಆಗಿ ಕುಸಿದ ಚಾಲಕ !...
23-06-26 03:18 pm
25-06-26 09:40 pm
HK News Staffer
ಮಂಡ್ಯದಲ್ಲಿ ಸೆಲ್ಫಿ ಹುಚ್ಚಿಗೆ ಐವರ ಬಲಿ ; ಕಾವೇರಿ ನ...
25-06-26 01:00 pm
ಹಸೆಮಣೆ ಏರಬೇಕಿದ್ದವಳೇ ಭಾವಿ ಪತಿಯನ್ನು ಫೋಟೊ ಶೂಟ್ ನ...
24-06-26 09:28 pm
30 ಲಕ್ಷ ಸಾಲ, ಲಿವ್-ಇನ್ ಸಂಬಂಧಕ್ಕೆ ಪೋಷಕರ ವಿರೋಧ ;...
24-06-26 08:53 pm
ರಾಮ ಮಂದಿರವನ್ನ ಸ್ಫೋಟಿಸಲು ಪ್ಲಾನ್ ಮಾಡಿದ್ವಿ ! ;...
24-06-26 07:53 pm