ಬ್ರೇಕಿಂಗ್ ನ್ಯೂಸ್
26-12-20 02:30 pm Source: MYKHEL Madhukara Shetty ಕ್ರೀಡೆ
ಮೊದಲ ಟೆಸ್ಟ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ 36 ರನ್ಗಳಿಗೆ ಆಲೌಟ್ ಆಗಿದ್ದಲ್ಲದೆ ಹೀನಾಯ ಸೋಲು ಕಂಡಿದ್ದ ಭಾರತ ಎರಡನೇ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ಮತ್ತೆ ತಿರುಗಿ ಬಿದ್ದಿದೆ. ಆಸ್ಟ್ರೇಲಿಯಾ ಬ್ಯಾಟಿಂಗ್ ಪಡೆಯನ್ನು ಟೀಮ್ ಇಂಡಿಯಾ ಬೌಲರ್ಗಳು 195 ರನ್ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಅದ್ಭುತ ಪ್ರದರ್ಶನ ನಿಡಿದೆ ಟೀಮ್ ಇಂಡಿಯಾ.
ಕುತೂಹಲಕಾರಿ ಸಂಗತಿಯೆಂದರೆ 17 ವರ್ಷಗಳ ಹಿಂದೆ ಟೀಮ್ ಇಂಡಿಯಾದ ಸ್ಪೋಟಕ ಆಟಗಾರ ವಿರೇಂದ್ರ ಸೆಹ್ವಾಗ್ ಏಕಾಂಗಿಯಾಗಿ 195 ರನ್ಅನ್ನು ಇದೇ ಅಂಗಳದಲ್ಲಿ ದಾಖಲಿಸಿದ್ದರು. ಇಷ್ಟು ಮಾತ್ರವಲ್ಲ ಸೆಹ್ವಾಗ್ ಒಬ್ಬರೇ ಸಿಡಿಸಿದ ಬೌಂಡರಿ ಸಂಖ್ಯೆಗಳು ಕೂಡ ಆಸ್ಟ್ರೇಲಿಯಾ ಇಡೀ ತಂಡ ಸಿಡಿಸಿದ ಬೌಂಡರಿಗಳಿಗಿಂತ ಹೆಚ್ಚಿನದಾಗಿದೆ. ಜೊತೆಗೆ ಆಸ್ಟ್ರೇಲಿಯಾ ಆಟಗಾರರ ಒಟ್ಟು ಸ್ಟ್ರೈಕ್ರೇಟ್ಗಿಂತಲೂ ಸೆಹ್ವಾಗ್ ಸ್ಟ್ರೈಕ್ರೇಟ್ ಅದ್ಭುತವಾಗಿತ್ತು.
ವೀರೇಂದ್ರ ಸೆಹ್ವಾಗ್ ಅಂದು ತಮ್ಮ 195 ರನ್ಗಳ ಅದ್ಭುತ ಇನ್ನಿಂಗ್ಸ್ನಲ್ಲಿ 5 ಸಿಕ್ಸರ್ ಹಾಗೂ 25 ಬೌಂಡರಿಗಳು ಒಳಗೊಂಡಿತ್ತು. ಆದರೆ ಟಿಮ್ ಪೈನ್ ಬಳಗ ಇಡೀ ಇನ್ನಿಂಗ್ಸ್ನಲ್ಲಿ ಒಂದು ಸಿಕ್ಸರ್ ಮಾತ್ರ ಸಿಡಿಸಿದ್ದಲ್ಲದೆ 18 ಬೌಂಡರಿ ಮಾತ್ರವೇ ಸಿಡಿಸಲು ಶಕ್ತವಾಗಿತ್ತು. ಭಾರತದ ಸ್ಪೋಟಕ ಆರಂಭಿಕ ಆಟಗಾರ ಅಂದು 195 ರನ್ ಗಳಿಸಲು 233 ಎಸೆತ ತೆಗೆದುಕೊಂಡಿದ್ದರೆ ಆಸ್ಟ್ರೇಲಿಯಾ ಇಷ್ಟೇ ಮೊತ್ತವನ್ನು ದಾಖಲಿಸಲು 435 ಎಸೆತವನ್ನು ಬಳಸಿಕೊಂಡಿತು.
ಆಸ್ಟ್ರೇಲಿಯಾ ತಂಡದ ಪರವಾಗಿ ಇಂದಿನ ಇನ್ನಿಂಗ್ಸ್ ಯಾವ ಬ್ಯಾಟ್ಸ್ಮನ್ ಕೂಡ ಅರ್ಧ ಶತಕವನ್ನು ಬಾರಿಸಲು ಯಶಸ್ವಿಯಾಗಲಿಲ್ಲ. ಮರ್ನಾಸ್ ಲ್ಯಾಬುಶೈನ್ ಬಾರಿಸಿದ 48 ರನ್ ಆಸಿಸ್ ಇನ್ನಿಂಗ್ಸ್ನ ಅತಿ ಹೆಚ್ಚಿನ ಸ್ಕೋರ್ ಆಗಿದೆ. ಲ್ಯಾಬುಶೈನ್ ಹಾಗೂ ಟ್ರಾವಿಸ್ ಹೆಡ್ 86 ರನ್ಗಳ ಜೊತೆಯಾಟವನ್ನು ನೀಡಿ ತಂಡಕ್ಕೆ ಆಸರೆಯಾದರು. ಈ ಜೋಡಿಯನ್ನು ಬೂಮ್ರಾ ಬೇರ್ಪಡಿಸುವ ಮೂಲಕ ಮತ್ತೆ ಯಶಸ್ಸು ನೀಡಿದರು.
This News Article is a Copy of MYKHEL
24-08-26 03:16 pm
HK News Staffer
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
ದೇಶದ ರಾಜಕೀಯದಲ್ಲಿ ಬಹುದೊಡ್ಡ ಬಿರುಗಾಳಿ; ವಿರುದ್ಧ ಧ...
21-08-26 03:42 pm
24-08-26 04:55 pm
HK News Staffer
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
24-08-26 06:25 pm
HK News Staffer
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
ಅಡಿಕೆ ಎಲೆ ಚುಕ್ಕಿ ರೋಗ ನಿಯಂತ್ರಣಕ್ಕೆ ಸಿಪಿಸಿಆರ್ ಐ...
24-08-26 04:11 pm
ಎಂಆರ್ ಪಿಎಲ್ ನಲ್ಲಿ 26 ಇಂಜಿನಿಯರಿಂಗ್ ಹುದ್ದೆಗಳ ಭರ...
24-08-26 01:13 pm
ಹಲ್ಲೆಗೀಡಾದವರ ಮೇಲೆ ಕೊಲೆಯತ್ನ ಕೇಸು ಹಾಕಿದ್ದಾರೆ, ಹ...
23-08-26 06:17 pm
24-08-26 09:06 pm
HK News Staffer
ಸಾವಿರಾರು ಕೋಟಿ ವಂಚಕ, ಶಿವಂ ಅಸೋಸಿಯೇಟ್ಸ್ ಮಾಲೀಕ ಶಿ...
24-08-26 07:04 pm
ಚಿಕ್ಕಮಗಳೂರಿನಲ್ಲಿ ಈದ್ ಮೆರವಣಿಗೆ ಸಿದ್ಧತೆ ; ಬೃಹತ್...
24-08-26 02:35 pm
ಕುಂಬಳೆಯ ಮುಸ್ಲಿಂ ವ್ಯಾಪಾರಿಗೆ ಹನಿಟ್ರ್ಯಾಪ್ ; ವಿಡಿ...
24-08-26 02:25 pm
ನದಿಗೆ ಬಿದ್ದ ಫುಟ್ಬಾಲ್ ಹೆಕ್ಕಲು ಹೋಗಿ ಜೀವ ಕಳಕೊಂಡ...
24-08-26 01:03 pm