ಬ್ರೇಕಿಂಗ್ ನ್ಯೂಸ್
01-05-21 05:28 pm Mangalore Correspondent ಕರಾವಳಿ
ಮಂಗಳೂರು, ಮೇ 1: ನದಿಗೆ ತ್ಯಾಜ್ಯ ಎಸೆಯಬಾರದು, ನೀರು ಮಲಿನ ಮಾಡಬಾರದೆಂದು ಅಭಿಯಾನ ನಡೆಸಲಾಗುತ್ತಿದೆ. ಆದರೆ, ಉಳ್ಳಾಲದ ನೇತ್ರಾವತಿ ಸೇತುವೆಯಲ್ಲಿ ಟೂರಿಸ್ಟ್ ಕಾರಿನಲ್ಲಿ ಬಂದ ಪ್ರವಾಸಿಗರು ಕಾರಿನಿಂದ ಇಳಿದು ತ್ಯಾಜ್ಯದ ಪ್ಯಾಕೆಟನ್ನು ಎಸೆಯುವ ವಿಡಿಯೋ ಸೆರೆಯಾಗಿದ್ದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಸೇತುವೆಯಲ್ಲಿ ಕಾರಿನಿಂದ ಇಳಿದ ಮಹಿಳೆಯೋರ್ವರು ತಾನು ತಂದಿದ್ದ ತ್ಯಾಜ್ಯದ ಪೊಟ್ಟಣವನ್ನ ಸೇತುವೆ ಉದ್ದಕ್ಕೆ ಕಟ್ಟಿರುವ ತಡೆಬೇಲಿಯ ಮೇಲಿಂದ ಎಸೆದಿರುವ ಘಟನೆ ನಡೆದಿದ್ದು ಅದರ ವೀಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ.

KA 03 NB 4648 ನೋಂದಣಿಯ ಕಾರು ನೇತ್ರಾವತಿ ನದಿಯ ಹೊಸ ಸೇತುವೆಯಲ್ಲಿ ನಿಂತಿದ್ದು ಇಬ್ಬರು ಮಹಿಳೆಯರು ಕಾರಿನಿಂದ ಇಳಿದಿದ್ದಾರೆ. ಅದರಲ್ಲಿ ಮಧ್ಯ ವಯಸ್ಕ ಮಹಿಳೆಯೋರ್ವರು ಧಮ್ ಲಗಾಕೆ ಐಸಾ ಅಂತ ಸೇತುವೆಯಲ್ಲಿ ಆತ್ಮಹತ್ಯೆ ತಡೆಗೆಂದು ಹಾಕಲಾಗಿರುವ ಕಬ್ಬಿಣದ ಬೇಲಿಯ ಮೇಲಕ್ಕೆ ತ್ಯಾಜ್ಯದ ಪೊಟ್ಟಣ ಎಸೆಯುತ್ತಿರುವುದನ್ನು ಹಿಂದಿನ ವಾಹನದವರು ಚಿತ್ರೀಕರಿಸಿ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ. ಸದ್ಯ ವೀಡಿಯೋ ಸಾಕಷ್ಟು ವೈರಲ್ ಆಗಿದ್ದು ನೇತ್ರಾವತಿ ನದಿಯನ್ನ ಬೇಕು, ಬೇಕಂತಲೇ ಮಲಿನಗೊಳಿಸುತ್ತಿರುವ ಸಮಾಜದ ದೊಡ್ಡ ಮನುಷ್ಯರೆಂದುಕೊಂಡಿರುವ ಮಂದಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹ ವ್ಯಕ್ತವಾಗಿದೆ.

ಉಳ್ಳಾಲ ಕೋಟೆಪುರದ ಸಮುದ್ರ ತೀರದಲ್ಲಿ ಈ ಹಿಂದೆ ಲಾರಿಯೊಂದರಲ್ಲಿ ಕಸ ತಂದು ಸುರಿದಿದ್ದು ಇದನ್ನು ಸ್ಥಳೀಯರು ಚಿತ್ರೀಕರಿಸಿ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಪರಿಣಾಮ ಕಸ ಸುರಿದ ಲಾರಿಯ ವಿರುದ್ಧ ಉಳ್ಳಾಲ ನಗರಸಭೆ ಕ್ರಮ ಜರುಗಿಸಿ ಲಾರಿಯನ್ನ ಜಪ್ತಿ ಮಾಡಿತ್ತು.
ಸದ್ಯ ನೇತ್ರಾವತಿಯಲ್ಲಿ ಕಸ ಎಸೆದ ಪ್ರಕರಣ ಮಂಗಳೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆದಿದೆ. ನಗರ ಪಾಲಿಕೆ ಕಮೀಷನರ್ ಇದರ ವಿರುದ್ಧ ಏನು ಕ್ರಮ ಕೈಗೊಳ್ಳತ್ತಾರೆಂದು ಕಾದು ನೋಡಬೇಕಿದೆ.
Video:
A video of a lady throwing garbage over the fence of Netravati bridge is going viral on social media. In the said viral video, a lady is seen coming out of a car bearing registration number KA 03 NB 4648 and hurling a plastic full of garbage over the fence into Netravati river.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
26-08-26 06:41 pm
HK News Staffer
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
26-08-26 10:58 pm
HK News Desk
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗ...
26-08-26 10:48 pm
ಜಿರಳೆ ಇದೆಯೆಂದು ತೊಕ್ಕೊಟ್ಟಿನ ಹೊಟೇಲಿಗೆ ಆಹಾರ ಇಲಾಖ...
25-08-26 09:37 pm
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
26-08-26 09:36 pm
HK News Staffer
ಸೂರ್ಯಪೇಟೆಯಲ್ಲಿ ಭೀಕರ ಅಪಘಾತ ; ಕಂಟೇನರ್ ಲಾರಿಗೆ ಬ...
26-08-26 11:26 am
ವಿಜಯಪುರದಲ್ಲಿ ಭೀಕರ ದುರಂತ ; ನಾಪತ್ತೆಯಾಗಿದ್ದ ಒಂದೇ...
26-08-26 11:23 am
ಚಿಕ್ಕಮಗಳೂರು ; ಟಿಪ್ಪು ಕಟೌಟ್ ಜೊತೆಗೆ ಮುಜಾಹಿದ್ ಹಾ...
25-08-26 10:39 pm
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm