ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್ ಭಗವತಿ ಕ್ಷೇತ್ರದ ಅರ್ಚಕರಿಗೆ ಅಮಾನತು ಶಿಕ್ಷೆ ! ಮಲಬಾರ್ ದೇವಸ್ವಂ ಮಂಡಳಿಗೆ ದೂರು

26-08-26 06:41 pm       HK News Staffer   ದೇಶ - ವಿದೇಶ

ಪುತ್ರಿ ಅಂತರ್ಜಾತಿ ವಿವಾಹವಾಗಿದ್ದ ನೆಪದಲ್ಲಿ ದೇವಸ್ಥಾನದ ಅರ್ಚಕರೊಬ್ಬರನ್ನು ಸೇವೆಯಿಂದ ಅಮಾನತುಗೊಳಿಸಿದ ಆರೋಪ ಕೇರಳದ ಕಣ್ಣೂರಿನಲ್ಲಿ ಕೇಳಿಬಂದಿದೆ. ಮಲಬಾರ್ ದೇವಸ್ವಂ ಮಂಡಳಿಗೆ ಒಳಪಟ್ಟ ಕಣ್ಣೂರಿನ ಮುಚಿಲೋಟ್ ಭಗವತಿ ದೇವಸ್ಥಾನದಲ್ಲಿ ಪೂಜಾ ಸಹಾಯಕರಾಗಿದ್ದ ಸಿ.ವಿ. ರಾಜನ್ ಅವರು ತನ್ನ ಅಮಾನತು ಕ್ರಮವನ್ನು ಪ್ರಶ್ನಿಸಿ ಮಲಬಾರ್ ದೇವಸ್ವಂ ಮಂಡಳಿಯ ಉಪ ಆಯುಕ್ತರಿಗೆ ದೂರು ನೀಡಿದ್ದಾರೆ.

ಕಣ್ಣೂರು, ಆ.26: ಪುತ್ರಿ ಅಂತರ್ಜಾತಿ ವಿವಾಹವಾಗಿದ್ದ ನೆಪದಲ್ಲಿ ದೇವಸ್ಥಾನದ ಅರ್ಚಕರೊಬ್ಬರನ್ನು ಸೇವೆಯಿಂದ ಅಮಾನತುಗೊಳಿಸಿದ ಆರೋಪ ಕೇರಳದ ಕಣ್ಣೂರಿನಲ್ಲಿ ಕೇಳಿಬಂದಿದೆ. ಮಲಬಾರ್ ದೇವಸ್ವಂ ಮಂಡಳಿಗೆ ಒಳಪಟ್ಟ ಕಣ್ಣೂರಿನ ಮುಚಿಲೋಟ್ ಭಗವತಿ ದೇವಸ್ಥಾನದಲ್ಲಿ ಪೂಜಾ ಸಹಾಯಕರಾಗಿದ್ದ ಸಿ.ವಿ. ರಾಜನ್ ಅವರು ತನ್ನ ಅಮಾನತು ಕ್ರಮವನ್ನು ಪ್ರಶ್ನಿಸಿ ಮಲಬಾರ್ ದೇವಸ್ವಂ ಮಂಡಳಿಯ ಉಪ ಆಯುಕ್ತರಿಗೆ ದೂರು ನೀಡಿದ್ದಾರೆ.

ರಾಜನ್ ಅವರು ಕಳೆದ 30 ವರ್ಷಗಳಿಂದ ಪೂಜಾ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ದೇವಸ್ಥಾನ ಸಮಿತಿ ತಮ್ಮನ್ನು ಅಮಾನತುಗೊಳಿಸಿದ ಕ್ರಮವನ್ನು ಪ್ರಶ್ನಿಸಿ ಅವರು ಮಂಡಳಿಯ ಉಪ ಆಯುಕ್ತರಿಗೆ ದೂರು ನೀಡಿದ್ದು, ತನ್ನ ಪುತ್ರಿಯ ಮದುವೆ ಕಾರಣದಿಂದಲೇ ತಮ್ಮನ್ನು ಅಮಾನತು ಮಾಡಿದ್ದಾಗಿ ಆರೋಪಿಸಿದ್ದಾರೆ. ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೂ ರಾಜನ್ ದೂರು ಸಲ್ಲಿಸಿದ್ದಾರೆ.

ವಣಿಯ ಸಮುದಾಯಕ್ಕೆ ಸೇರಿದ ರಾಜನ್ ಅವರ ಪುತ್ರಿಯ ವಿವಾಹವು ಕಳೆದ ಮಾರ್ಚ್ ತಿಂಗಳಲ್ಲಿ ನಡೆದಿತ್ತು. ಮೇಲ್ಜಾತಿಯ ಪೊದುವಾಳ್ ಸಮುದಾಯದ ವ್ಯಕ್ತಿಯನ್ನು ವಿವಾಹವಾಗಿದ್ದು ಸಾಂಪ್ರದಾಯಿಕ ಪದ್ಧತಿ ಅನುಸರಿಸುತ್ತಿದ್ದ ಇವರ ಜಾತಿ ಪ್ರಮುಖರಲ್ಲಿ ಚರ್ಚೆಗೆ ಕಾರಣವಾಗಿತ್ತು. ಪುತ್ರಿಯ ನಿಶ್ಚಿತಾರ್ಥ ಒಂದು ವರ್ಷದ ಹಿಂದೆಯೇ ನಡೆದಿದ್ದು ಆಬಳಿಕ ತಮ್ಮನ್ನು ಕೆಲಸದಿಂದ ದೂರ ಉಳಿಯುವಂತೆ ದೇವಸ್ಥಾನ ಸಮಿತಿ ಸೂಚಿಸಿತ್ತು ಎಂದು ರಾಜನ್ ಆರೋಪಿಸಿದ್ದಾರೆ.

ಶಾಸಕ ವಿ. ಕುಂಜಿಕೃಷ್ಣನ್ ಅವರಿಗೂ ರಾಜನ್ ದೂರು ನೀಡಿದ್ದು ತಾನು ಮತ್ತು ತನ್ನ ಪುತ್ರಿ ಕೇರಳಂ ಮಾನವ ಹಕ್ಕುಗಳ ಆಯೋಗಕ್ಕೆ ಒಟ್ಟು ಮೂರು ದೂರುಗಳನ್ನು ಸಲ್ಲಿಸಿದ್ದೇವೆ. ಆದರೆ, ಆಯೋಗ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಹೇಳಿದ್ದಾರೆ.