ಬ್ರೇಕಿಂಗ್ ನ್ಯೂಸ್
04-08-25 07:38 pm Mangalore Correspondent ಕರಾವಳಿ
ಬೆಳ್ತಂಗಡಿ, ಆ.4 : ಹೆಣ ಹೂತ ಪ್ರಕರಣ ಸಂಬಂಧಿಸಿ ದೂರುದಾರ ಧರ್ಮಸ್ಥಳ ಬಳಿಯ ಬಂಗ್ಲೆಗುಡ್ಡೆ ಕಾಡಿನಲ್ಲಿ ಹನ್ನೊಂದನೇ ಪಾಯಿಂಟ್ ಗುರುತಿಸಿದ್ದು ಆ ಜಾಗದಲ್ಲಿ ಎಸ್ಐಟಿ ಅಧಿಕಾರಿಗಳೇ ಶಾಕ್ ಆಗುವಂತಹ ಬೆಳವಣಿಗೆ ನಡೆದಿದೆ. ಗುಡ್ಡದ ಮೇಲ್ಭಾಗದಲ್ಲಿ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿರುವ ರೀತಿಯ ಕೊಳೆತು ನಾರುತ್ತಿದ್ದ ಶವ ಪತ್ತೆಯಾಗಿದೆ ಎನ್ನಲಾಗುತ್ತಿಗೆ. ಇದಲ್ಲದೆ, ಆ ಜಾಗದಲ್ಲಿ ಅಗೆತ ಮಾಡಿದ ಸಂದರ್ಭದಲ್ಲಿ ಎಲುಬಿನ ತುಂಡುಗಳು ಸಿಕ್ಕಿವೆ ಎನ್ನುವ ಮಾಹಿತಿಗಳಿದ್ದು, ಹೆಣ ಹೂತ ಪ್ರಕರಣ ಮತ್ತೆ ಕುತೂಹಲಕ್ಕೆ ಕಾರಣವಾಗಿದೆ.
ಇಲ್ಲಿ ವರೆಗೆ ಅಗೆದಿರುವ ಹತ್ತು ಪಾಯಿಂಟ್ ಗಳಲ್ಲಿ ಆರನೇ ಗುರುತು ಹಾಕಿದ್ದ ಜಾಗದಲ್ಲಿ ಮಾತ್ರ ಶವದ ಅವಶೇಷ ಸಿಕ್ಕಿತ್ತು. ಉಳಿದ ಕಡೆ ಶವಗಳ ಯಾವುದೇ ಸಾಕ್ಷ್ಯ ಸಿಗದೇ ಇದ್ದುದರಿಂದ ದೂರುದಾರನ ಬಗ್ಗೆಯೇ ಸಂಶಯ ವ್ಯಕ್ತವಾಗಿತ್ತು. ಇದೇ ವೇಳೆ, ನೇತ್ರಾವತಿ ನದಿ ಪಕ್ಕದಲ್ಲಿ ಅನಾಥ ಶವಗಳನ್ನು ಪೋಸ್ಟ್ ಮಾರ್ಟಂ ಮಾಡಿಯೇ ಹೂಳಲಾಗಿತ್ತು ಎಂದು ವಿಧಿ ವಿಜ್ಞಾನ ತಂಡದ ವೈದ್ಯ ಡಾ.ಮಹಾಬಲ ಶೆಟ್ಟಿ ಅವರೂ ಹೇಳಿದ್ದರು. ಹೀಗಾಗಿ ಹೆಣ ಹೂತಿದ್ದೇನೆಂದು ತೋರಿಸಿದ್ದ ವಿಚಾರ ಗೊಂದಲಕ್ಕೆ ಕಾರಣವಾಗಿರುವಾಗಲೇ ದೂರುದಾರ ಹನ್ನೊಂದನೇ ಪಾಯಿಂಟನ್ನು ಬದಲಿಸಿದ್ದಾರೆ.
ಧರ್ಮಸ್ಥಳ ಸ್ನಾನಘಟ್ಟ ಬಳಿಯಿಂದ ಅಲ್ಲಿಯೇ ಮೇಲ್ಭಾಗದ ಬಂಗ್ಲೆಗುಡ್ಡೆ ಕಾಡಿಗೆ ಪೊಲೀಸರನ್ನು ಕರೆದೊಯ್ದಿದ್ದು ಅಲ್ಲಿ ಅನಿರೀಕ್ಷಿತವಾಗಿ ಇತ್ತೀಚೆಗೆ ಮೃತಪಟ್ಟ ಶವ ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ಇದಕ್ಕಾಗಿ ಮೂರು ಮೂಟೆಗಳಲ್ಲಿ ಉಪ್ಪನ್ನು ಪೊಲೀಸರು ಸ್ಥಳಕ್ಕೆ ಹೊತ್ತೊಯ್ದಿದ್ದಾರೆ. ಶವ ಕೊಳೆತಿರುವುದರಿಂದ ಉಪ್ಪು ಒಯ್ದಿದ್ದಾರೆ ಎಂದು ಹೇಳಲಾಗುತ್ತಿದ್ದರೂ, ಇದರ ಬಗ್ಗೆ ಪೊಲೀಸರು ಯಾವುದೇ ಮಾಹಿತಿ ನೀಡಿಲ್ಲ. ಎಸ್ಪಿ ಜಿತೇಂದ್ರ ದಯಾಮ ಸೇರಿದಂತೆ ಹಿರಿಯ ಅಧಿಕಾರಿಗಳು ಮಧ್ಯಾಹ್ನ ಊಟಕ್ಕೂ ಬಾರದೆ ಸಂಜೆಯ ವರೆಗೂ ಸ್ಥಳದಲ್ಲೇ ಇದ್ದು, ತನಿಖೆ ನಡೆಸುತ್ತಿದ್ದಾರೆ. ಶವ ಸಿಕ್ಕಿದೆ ಎನ್ನುವ ಸುದ್ದಿ ಹಬ್ಬುತ್ತಿದ್ದಂತೆ ಸ್ಥಳದಲ್ಲಿ ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದಾರೆ. ಗುಡ್ಡಕ್ಕೆ ಯಾರು ಹೋಗದಂತೆ ಎಎನ್ಎಫ್ ಪಡೆಯನ್ನು ನಿಯೋಜನೆ ಮಾಡಲಾಗಿದೆ.
In a surprising twist in the ongoing Dharmasthala burial investigation, the Special Investigation Team (SIT) discovered a highly decomposed body and what appear to be human bone fragments in the Banglegudde forest area, near the eleventh excavation point marked by the original complainant.
04-08-25 01:00 pm
Bangalore Correspondent
Veerappa Moily, Kharge: 1980ರಲ್ಲೇ ನಾನು ಸಿಎಂ ಆ...
03-08-25 09:30 pm
Ravi Poojary Aide Kaviraj Arrested, Kolar Pol...
03-08-25 10:52 am
Dharmasthala News, High Court; ಧರ್ಮಸ್ಥಳ ಸುದ್ದ...
01-08-25 11:34 pm
‘Comedy Kiladigalu’, Chandrashekhar Siddi Sui...
01-08-25 10:45 pm
04-08-25 05:11 pm
HK News Desk
ಗೆಳೆಯನೊಂದಿಗೆ ಪತ್ನಿಯ ಸರಸ ; ಪರಿ ಪರಿ ಬೇಡಿಕೊಂಡರೂ...
04-08-25 02:16 pm
ವಿಮಾನದಲ್ಲಿ ಸಹ ಪ್ರಯಾಣಿಕನಿಗೆ ಕಪಾಳಮೋಕ್ಷ ; ಅಶಿಸ್ತ...
03-08-25 05:44 pm
ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ನರೇಂದ್ರ ಮೋದಿ, ಭಾಗ...
03-08-25 04:25 pm
ಮಾಲೆಗಾಂವ್ ಪ್ರಕರಣದಲ್ಲಿ ಮೋಹನ್ ಭಾಗವತ್ ಬಂಧಿಸುವುದಕ...
01-08-25 10:48 pm
04-08-25 09:51 pm
Mangalore Correspondent
Dharmasthala Case, SIT, Body Found: ಬಂಗ್ಲೆಗುಡ...
04-08-25 07:38 pm
ವಿದ್ಯುತ್ ನಿಗಮಗಳ ನೌಕರರಿಗೆ ಪಿಂಚಣಿಗಾಗಿ ಗ್ರಾಹಕರಿ...
04-08-25 06:05 pm
VK Furniture & Electronics Launches 4th Annua...
04-08-25 04:48 pm
Dharmasthala Skeleton Mystery: ಧರ್ಮಸ್ಥಳ ಅಸ್ತಿ...
04-08-25 01:58 pm
03-08-25 10:11 pm
Mangalore Correspondent
ಮುಖ್ಯಶಿಕ್ಷಕನ ವರ್ಗಾವಣೆಗೆ ಸಂಚು ; ಶಾಲೆಯ ವಾಟರ್ ಟ...
03-08-25 08:16 pm
Mangalore Massive Lucky Scheme Fraud: ಸುರತ್ಕಲ...
02-08-25 10:04 pm
ಪ್ರಜ್ವಲ್ ರೇವಣ್ಣ ಅಪರಾಧಿ ; 14 ವರ್ಷ ಅಲ್ಲ, ಜೀವನಪರ...
02-08-25 07:20 pm
Suhas Shetty Murder, NIA Raid Mangalore: ಸುಹಾ...
02-08-25 04:43 pm