ತಂದೆ ಸ್ಥಾಪಿಸಿದ ಬಿಆರ್ ಎಸ್ ಪಕ್ಷದಿಂದ ಮಗಳಿಗೆ ಗೇಟ್ ಪಾಸ್ ; ಅಬಕಾರಿ ಹಗರಣದಲ್ಲಿ ಬಂಧನ ಬಳಿಕ ಪಕ್ಷದಲ್ಲಿ ಮೂಲೆಗುಂಪು, ಉಚ್ಚಾಟನೆ ಬೆನ್ನಲ್ಲೇ ಪರಿಷತ್‌ ಸದಸ್ಯತ್ವಕ್ಕೆ ರಾಜೀನಾಮೆ, ಕಾಂಗ್ರೆಸಿನತ್ತ ಒಲವು 

03-09-25 10:04 pm       HK News Desk   ದೇಶ - ವಿದೇಶ

ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಸ್ಥಾಪಿಸಿದ್ದ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್‌) ಪಕ್ಷದಿಂದ ಅವರ ಮಗಳನ್ನೇ ಉಚ್ಛಾಟಿಸಲಾಗಿದೆ. ಪಕ್ಷ ವಿರೋಧಿ ಚಟುವಟಿಕೆಗಳ ಕಾರಣವೊಡ್ಡಿ ಮಗಳು ಕೆ.ಕವಿತಾ ಅವರನ್ನು ಚಂದ್ರಶೇಖರ್‌ ರಾವ್‌ ತಮ್ಮ ಪಕ್ಷದಿಂದ ಮಂಗಳವಾರ ಅಮಾನತು ಮಾಡಿದ್ದು, ಇದರ ಬೆನ್ನಲ್ಲೇ ಆಕೆ ತಾನು ಪ್ರತಿನಿಧಿಸುತ್ತಿದ್ದ ವಿಧಾನ ಪರಿಷತ್‌ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ. 

ಹೈದರಾಬಾದ್, ಸೆ‌.3 : ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಸ್ಥಾಪಿಸಿದ್ದ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್‌) ಪಕ್ಷದಿಂದ ಅವರ ಮಗಳನ್ನೇ ಉಚ್ಛಾಟಿಸಲಾಗಿದೆ. ಪಕ್ಷ ವಿರೋಧಿ ಚಟುವಟಿಕೆಗಳ ಕಾರಣವೊಡ್ಡಿ ಮಗಳು ಕೆ.ಕವಿತಾ ಅವರನ್ನು ಚಂದ್ರಶೇಖರ್‌ ರಾವ್‌ ತಮ್ಮ ಪಕ್ಷದಿಂದ ಮಂಗಳವಾರ ಅಮಾನತು ಮಾಡಿದ್ದು, ಇದರ ಬೆನ್ನಲ್ಲೇ ಆಕೆ ತಾನು ಪ್ರತಿನಿಧಿಸುತ್ತಿದ್ದ ವಿಧಾನ ಪರಿಷತ್‌ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ. 

ನನಗೆ ಯಾವುದೇ ಹುದ್ದೆ ಮೇಲೆ ದುರಾಸೆ ಇಲ್ಲ. ನಾನೇ ಬಿಆರ್‌ಎಸ್‌ ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಕವಿತಾ ಹೇಳಿದ್ದಾರೆ.  ಬಿಆರ್‌ಎಸ್‌ನೊಳಗಿನ ಒಂದು ಗುಂಪು ತಮ್ಮ ಸ್ವಂತ ಆರ್ಥಿಕ ಮತ್ತು ರಾಜಕೀಯ ಹಿತಾಸಕ್ತಿಗಳಿಗಾಗಿ ಬಿಆರ್‌ಎಸ್ ಕುಟುಂಬವನ್ನು ಛಿದ್ರ ಮಾಡಲು ಮುಂದಾಗಿದೆ. ತಮ್ಮ ಸುತ್ತ ಸುತ್ತುವರಿದಿರುವ ಸಲಹೆಗಾರರು ಎಂದು ಹೇಳಿಕೊಳ್ಳುತ್ತಿರುವವರ ​​ಉದ್ದೇಶಗಳು ಮತ್ತು ಅವರ ಹಿತಾಸಕ್ತಿಗಳ ಬಗ್ಗೆ ತಂದೆ ಚಂದ್ರಶೇಖರ್‌ ರಾವ್‌ ಅವರು ಗಮನ ಹರಿಸಬೇಕು ಎಂದು ಕವಿತಾ ಅವರು ಸಲಹೆ ನೀಡಿದ್ದಾರೆ. 

ನಾನು ತೆಲಂಗಾಣದ ಜನರ ಹಿತಾಸಕ್ತಿಗೆ ವಿರುದ್ಧವಾಗಿ ಎಂದಿಗೂ ಕೆಲಸ ಮಾಡಿಲ್ಲ, ಆದರೆ ಸ್ವಾರ್ಥ ಹಿತಾಸಕ್ತಿಗಳನ್ನು ಹೊಂದಿರುವ ಮತ್ತು ತಮ್ಮ ಪ್ರಯೋಜನಗಳ ಬಗ್ಗೆ ಮಾತ್ರ ಯೋಚಿಸುವ ಬಿಆರ್‌ಎಸ್‌ನ ಕೆಲವು ನಾಯಕರು ನನ್ನ ಬಗ್ಗೆ ಇಲ್ಲಸಲ್ಲದ ಮಾತುಗಳನ್ನು ಹೇಳಿ ಪಕ್ಷದಿಂದ ನನ್ನನ್ನು ದೂರ ಸರಿಯುವಂತೆ ಮಾಡಿದ್ದಾರೆ. ಹಿಂದುಳಿದ ವರ್ಗಗಳಿಗೆ ಮೀಸಲಾತಿಗಾಗಿ ಬಿಆರ್‌ಎಸ್ ಧ್ವಜವನ್ನು ಧರಿಸಿ ತೆಲಂಗಾಣದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿದ್ದು ಹೇಗೆ 'ಪಕ್ಷ ವಿರೋಧಿ' ಚಟುವಟಿಕೆಗಳಾಗಿವೆ ಎಂದು ನನಗೆ ಅರ್ಥವಾಗುತ್ತಿಲ್ಲ ಕವಿತಾ ತಿಳಿಸಿದ್ದಾರೆ. 

ಚಂದ್ರಶೇಖರ್ ರಾವ್ ಪುತ್ರಿ ಕವಿತಾ ಅವರನ್ನು ಕಳೆದ 2024ರಲ್ಲಿ ದೆಹಲಿ ಅಬಕಾರಿ ಹಗರಣದಲ್ಲಿ ಇಡಿ ಅಧಿಕಾರಿಗಳು ಬಂಧಿಸಿದ್ದರು. ಆನಂತರ, ಜಾಮೀನಿನಲ್ಲಿ ಹೊರಬಂದರೂ, ಪಕ್ಷದಲ್ಲಿ ಸಕ್ರಿಯವಾಗಿರಲಿಲ್ಲ. ಅಲ್ಲದೆ, ಅವರನ್ನು ಪಕ್ಷದಲ್ಲಿ ಮೂಲೆಗುಂಪು ಮಾಡಲಾಗಿತ್ತು. ಸೋದರ ಹರೀಶ್ ರಾವ್, ಕೆಟಿ ರಾಮ ರಾವ್ ಜೊತೆಗೂ ಸಂಬಂಧ ಕೆಡಿಸಿಕೊಂಡಿದ್ದರು. ವಿದೇಶದಲ್ಲಿ ಕಂಪ್ಯೂಟರ್ ಸೈನ್ಸ್ ನಲ್ಲಿ ಎಂಎಸ್ ಓದಿ ಬಂದ ಬಳಿಕ ಕವಿತಾ ನೇರವಾಗಿ ರಾಜಕೀಯ ಪ್ರವೇಶ ಮಾಡಿದ್ದರು. 2014ರಲ್ಲಿ ನಿಜಾಮಬಾದ್ ನಿಂದ ಮೊದಲ ಬಾರಿಗೆ ಲೋಕಸಭೆ ಚುನಾವಣೆ ನಿಂತು ಗೆದ್ದಿದ್ದರು. 2019ರಲ್ಲಿ ಚುನಾವಣೆ ಸೋತಿದ್ದರಿಂದ ಪಕ್ಷದಿಂದ ಎಂಎಲ್ಸಿ ಮಾಡಲಾಗಿತ್ತು. ಅಬಕಾರಿ ಹಗರಣದಲ್ಲಿ ಬಂಧನದ ಬಳಿಕ ಪಕ್ಷದಲ್ಲಿ ಮೂಲೆಗುಂಪು ಆಗಿದ್ದರಿಂದ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ಇದರಿಂದ ಸಿಟ್ಟಿಗೆದ್ದ ಚಂದ್ರಶೇಖರ್ ರಾವ್ ಮತ್ತು ಕುಟುಂಬ ಪಕ್ಷದಿಂದಲೇ ಕವಿತಾರನ್ನು ಉಚ್ಚಾಟನೆ ಮಾಡಿದೆ.

In a dramatic political twist, former Telangana Chief Minister K. Chandrashekar Rao has expelled his own daughter, K. Kavitha, from the Bharat Rashtra Samithi (BRS) for “anti-party activities.” Hours after the suspension, Kavitha resigned from her Legislative Council seat, signaling a possible shift towards the Congress party.