ಬ್ರೇಕಿಂಗ್ ನ್ಯೂಸ್
06-03-24 04:20 pm HK News Desk ದೇಶ - ವಿದೇಶ
ಕೊಲ್ಕತ್ತಾ, ಮಾ.6: ದೇಶದಲ್ಲಿ ಇದೇ ಮೊದಲ ಬಾರಿಗೆ ನದಿಯ ಅಡಿಭಾಗದಲ್ಲಿ ಸುರಂಗ ಕೊರೆದು ಅದರಲ್ಲಿ ಮೆಟ್ರೋ ರೈಲನ್ನು ಸಂಚರಿಸುವಂತೆ ಮಾಡಲಾಗಿದ್ದು, ಅಪೂರ್ವ ಯೋಜನೆಯನ್ನು ಕೊಲ್ಕತ್ತಾ ನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶಕ್ಕೆ ಸಮರ್ಪಿಸಿದ್ದಾರೆ.
ಕೊಲ್ಕತ್ತಾ ಮತ್ತು ಹೌರಾ ನಗರವನ್ನು ಪೂರ್ವ- ಪಶ್ಚಿಮಕ್ಕೆ ಸಂಪರ್ಕಿಸುವ ಮೆಟ್ರೋ ಯೋಜನೆ ಇದಾಗಿದ್ದು, 4.8 ಕಿಮೀ ಉದ್ದಕ್ಕೆ ಸುರಂಗ ಮಾರ್ಗದಲ್ಲಿ ಸಂಚಾರ ಮಾಡಲಿದೆ. ಈ ಭಾಗದ ಆರು ಮೆಟ್ರೋ ನಿಲ್ದಾಣಗಳ ಪೈಕಿ ಮೂರು ನಿಲ್ದಾಣಗಳು ಸುರಂಗದ ಒಳಗಡೆಯೇ ಇದೆ. ಹೌರಾ ಮೈದಾನ್ ಮತ್ತು ಇಸ್ಪ್ಲಾನೇಡ್ ನಿಲ್ದಾಣಗಳ ನಡುವೆ 4.8 ಕಿಮೀ ಅಂತರ ಇದೆ. ಇದರ ನಡುವೆ 1.2 ಕಿಮೀ ಅಂತರದಲ್ಲಿ ಹೂಗ್ಲಿ ನದಿಯಿದ್ದು, ಅದರ ಅಡಿಭಾಗದಲ್ಲಿ 30 ಮೀಟರ್ ಆಳದಲ್ಲಿ ಮೆಟ್ರೋ ಸುರಂಗ ಹಾದು ಹೋಗಿದೆ.
ಪ್ರಧಾನಿ ಮೋದಿ ಈ ಸುರಂಗ ಮಾರ್ಗವನ್ನು ಲೋಕಾರ್ಪಣೆ ಮಾಡಿದ್ದಲ್ಲದೆ, ಅದೇ ರೈಲಿನಲ್ಲಿ ಮಕ್ಕಳ ಜೊತೆಗೆ ಕುಳಿತು ಸಂಚಾರ ಮಾಡಿದ್ದಾರೆ. ಶಾಲಾ ಮಕ್ಕಳ ಜೊತೆಗೆ ಕುಳಿತು ಸಂವಾದ ನಡೆಸುವ ವಿಡಿಯೋ ಟ್ವಿಟರ್ ನಲ್ಲಿ ವೈರಲ್ ಆಗಿದೆ. ಮೆಟ್ರೋ ಸುರಂಗ ಮಾರ್ಗವನ್ನು 4138 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದ್ದು ದೇಶದ ಮೊದಲ ನೀರಿನಾಳದಲ್ಲಿ ನಿರ್ಮಿಸಲ್ಪಟ್ಟ ರೈಲು ಮಾರ್ಗ ಎಂದೆನಿಸಿದೆ.
ಪ್ರಧಾನಿ ಮೋದಿ ಒಟ್ಟು 15450 ಕೋಟಿ ಮೊತ್ತದ ವಿವಿಧ ಯೋಜನೆಗಳಿಗೆ ಇದೇ ಸಂದರ್ಭ ಲೋಕಾರ್ಪಣೆ ಮತ್ತು ಶಿಲಾನ್ಯಾಸ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಭಾರೀ ಸಂಖ್ಯೆಯಲ್ಲಿ ಸೇರಿದ್ದ ಜನರು ಮೋದಿ ಮೋದಿ ಮತ್ತು ಜೈಶ್ರೀರಾಮ್ ಘೋಷಣೆ ಕೂಗಿದ್ದಾರೆ. ಅಲ್ಲದೆ, ರಸ್ತೆ ಉದ್ದಕ್ಕೂ ಸೇರಿದ್ದ ಜನರು ಮೋದಿಗೆ ಜೈಕಾರ ಹಾಕಿದ್ದಾರೆ. ಜನರನ್ನು ನೋಡಿ ಉತ್ಸಾಹಗೊಂಡ ಮೋದಿ ಕಾರಿನಲ್ಲೇ 12 ಕಿಮೀ ಉದ್ದಕ್ಕೆ ರಸ್ತೆಯಲ್ಲಿ ಸಂಚರಿಸಿದ್ದಾರೆ.
Prime Minister Narendra Modi on Wednesday inaugurated India's first underwater metro services, an engineering marvel in itself.
07-10-25 11:20 pm
Bangalore Correspondent
Big Boss, Prashanth Sambargi, Dk Shivakumar,...
07-10-25 10:49 pm
Big Boss Kannada, Close, Update: ಬಿಗ್ ಬಾಸ್ ಮನ...
07-10-25 10:18 pm
Big Boss Kannada Closed: ಕನ್ನಡ ಶೋ ಬಿಗ್ ಬಾಸ್ ಗ...
07-10-25 07:32 pm
ದಸರಾ ರಜಾ ಅವಧಿ ವಿಸ್ತರಣೆ ಮಾಡಿ ಎಂದು ಮನವಿ ; 10 ದಿ...
07-10-25 05:23 pm
07-10-25 11:16 pm
HK News Desk
ವಿಶ್ವಸಂಸ್ಥೆ ಮಹಾಧಿವೇಶನಕ್ಕೆ ಪಿಪಿ ಚೌಧರಿ ನೇತೃತ್ವದ...
07-10-25 01:53 pm
ಮೊಘಲ್ ಆಕ್ರಮಣದಿಂದ ವಿಷ್ಣು ಮೂರ್ತಿ ಭಗ್ನ ; ಪ್ರತಿಮೆ...
06-10-25 07:56 pm
ಬಿಹಾರ ಚುನಾವಣೆಗೆ ಮುಹೂರ್ತ ನಿಗದಿ ; ಎರಡು ಹಂತದಲ್ಲಿ...
06-10-25 07:21 pm
ಕುಂಬಳೆಯಲ್ಲಿ ಡಿವೈಎಫ್ಐ ನಾಯಕಿ, ಯುವ ವಕೀಲೆ ಆತ್ಮಹತ್...
05-10-25 11:07 pm
07-10-25 11:14 pm
Mangalore Correspondent
Mangaluru, Sudheer Reddy: ಶಾರದೋತ್ಸವ ಗೊಂದಲ ಇತ್...
07-10-25 10:54 pm
Ullal News, Mangalore, BJP, Police: ಉಳ್ಳಾಲ ಶಾ...
07-10-25 05:17 pm
Talapady, Mangalore, Crime: ತಲಪಾಡಿ ಅಕ್ಷಯ ಫಾರ್...
07-10-25 05:04 pm
ಫಿಶ್ ಮೀಲ್ ಲಾರಿಗಳಿಂದ ಉಳ್ಳಾಲದಲ್ಲಿ ಗಬ್ಬುನಾತ ! ರಸ...
07-10-25 03:33 pm
07-10-25 10:13 pm
Mangalore Correspondent
Kasaragod Gang War, Crime: ಕುಂಬಳೆ ಸೀತಾಂಗೋಳಿಯಲ...
07-10-25 10:31 am
Kali Yogish, Arrest, Mangalore: ಮಂಗಳೂರು, ಮೈಸೂ...
05-10-25 03:22 pm
Shivamogga Murder, Mother: ಶಿವಮೊಗ್ಗ ; ಮಗಳನ್ನು...
04-10-25 02:57 pm
Karkala Murder, Crime: ಕಾರ್ಕಳ ; ಪ್ರೀತಿಸಿದ ಯುವ...
03-10-25 11:28 pm