ಬ್ರೇಕಿಂಗ್ ನ್ಯೂಸ್
06-03-26 09:50 am Giridhar Shetty, Headline Karnataka ದೇಶ - ವಿದೇಶ
ನವದೆಹಲಿ, ಮಾರ್ಚ್ 5: ಮಾರ್ಕ್ -48 ಟೊರ್ಪೆಡೋ ಹೆಸರಿನ ಈ ಜಲಾಂತರ್ಗಾಮಿ ಜಗತ್ತಿನ ಅತಿ ಬಲಿಷ್ಠ ನೌಕಾ ಶಕ್ತಿಗಳಲ್ಲಿ ಒಂದು. ಅಮೆರಿಕದ ನೌಕಾಪಡೆಯ ಪ್ರಬಲ ಅಸ್ತ್ರವಾಗಿರುವ ಈ ಜಲಾಂತರ್ಗಾಮಿ ಅಸ್ತ್ರವನ್ನು ಎರಡನೇ ಜಾಗತಿಕ ಯುದ್ಧದ ಬಳಿಕ ಮೊದಲ ಬಾರಿಗೆ ಹಿಂದು ಮಹಾಸಾಗರದಲ್ಲಿ ಸ್ಫೋಟಿಸಿ ಇರಾನಿನ ಯುದ್ಧ ಹಡಗನ್ನು ನಿರ್ನಾಮ ಮಾಡಿದೆ.
ಮಾರ್ಚ್ 4ರಂದು ಶ್ರೀಲಂಕಾ ಬಳಿಯ ಹಿಂದು ಮಹಾಸಾಗರದಲ್ಲಿ ಸಾಗುತ್ತಿದ್ದ ಇರಾನ್ ಯುದ್ಧ ನೌಕೆಯತ್ತ ಈ ಮಾರ್ಕ್ 48 ಟೊರ್ಪೆಡೋ ಅಸ್ತ್ರವನ್ನು ಅಮೆರಿಕ ಪ್ರಯೋಗಿಸಿತ್ತು. 1972ರಲ್ಲಿ ತನ್ನ ಬತ್ತಳಿಕೆ ಸೇರಿಸಿಕೊಂಡಿದ್ದ ಈ ಮಾರ್ಕ್ 48 ಅನ್ನು ಆನಂತರ ಹಲವು ಆಧುನಿಕ ತಂತ್ರಜ್ಞಾನದೊಂದಿಗೆ ಮಾರ್ಪಡಿಸಲಾಗಿತ್ತು. ಸದ್ಯ ಜಗತ್ತಿನ ಹಲವು ಕಡೆಗಳಲ್ಲಿ ಅಮೆರಿಕ ಈ ಅಸ್ತ್ರವನ್ನು ಸನ್ನದ್ಧವಾಗಿರಿಸಿದೆ.




19 ಅಡಿ ಉದ್ದ ಮತ್ತು 21 ಇಂಚ್ ವ್ಯಾಸ, ಒಂದು ಬದಿ ಡೂಮ್ ಮತ್ತೊಂದು ಬದಿ ದೊಡ್ಡ ಸಿಗರೇಟ್ ಮಾದರಿಯಲ್ಲಿರುವ ಈ ಕ್ಷಿಪಣಿ ರೂಪದ ಸ್ಫೋಟಕ ಅಂದಾಜು 1700 ಕೇಜಿ ಭಾರ ಇರುತ್ತದೆ. ಇದನ್ನು ಸಮುದ್ರದಾಳದಲ್ಲಿ ಪ್ರಯೋಗಿಸಲು ಅನುವಾಗುವಂತೆ ಆವಿಷ್ಕರಿಸಲಾಗಿತ್ತು. ಜಲಾಂತರ್ಗಾಮಿ ಹಡಗಿನಲ್ಲಿ ಇದನ್ನು ಕೊಂಡೊಯ್ದು 15-20 ಕಿಮೀ ದೂರದಿಂದ ನಿಗದಿತ ಗುರಿಯೆಡೆಗೆ ಉಡಾಯಿಸಲಾಗುತ್ತದೆ. ನೀರಿನಡಿಯಲ್ಲಿ ಗಂಟೆಗೆ 100 ಕಿಮೀ ವೇಗದಲ್ಲಿ ಈ ಅಸ್ತ್ರ ಮಿಸೈಲ್ ಮಾದರಿಯಲ್ಲೇ ಬಂದು ವಿರುದ್ಧ ದಿಕ್ಕಿನಲ್ಲಿರುವ ಹಡಗಿನೊಳಗೆ ನುಗ್ಗಿ ಅದನ್ನು ಸ್ಫೋಟಿಸುತ್ತದೆ. ಮಾರ್ಕ್ 48 ಸ್ಫೋಟದ ತೀವ್ರತೆ ಭೂಮಿಯ ಮೇಲ್ಭಾಗದಲ್ಲಿ 500 ಪೌಂಡ್ಸ್ ಟಿಎನ್ ಟಿ ಮಾದರಿಯ ಬಾಂಬ್ ಸ್ಫೋಟಕ್ಕೆ ಸಮವಾಗುತ್ತದೆ. ಎಷ್ಟೇ ಸಾಮರ್ಥ್ಯದ ಹಡಗಾಗಿದ್ದರೂ ಈ ಸ್ಫೋಟಕ್ಕೆ ಎರಡಾಗಿ ವಿಭಜನೆಗೊಂಡು ಒಮ್ಮೆಲೇ ನೀರಿನಲ್ಲಿ ಮುಳುಗುತ್ತದೆ. ಹೀಗಾಗಿ ಇದನ್ನು ಕ್ವಿಕ್ ಡೆತ್ ಎಂದು ಅಮೆರಿಕದ ರಕ್ಷಣಾ ಸಚಿವ ಹಗ್ಸೆತ್ ಬಣ್ಣಿಸಿದ್ದಾರೆ.
ಐರಿಸ್ ದೇನಾ ಹೆಸರಿನ ಇರಾನ್ ಹಡಗು ಭಾರತದ ವಿಶಾಖಪಟ್ಟಣದಲ್ಲಿ ನೌಕಾ ಸಮರಾಭ್ಯಾಸದಲ್ಲಿ ಪಾಲ್ಗೊಂಡು ಹಿಂದಿರುಗುತ್ತಿತ್ತು. ಅದರಲ್ಲಿ ಒಟ್ಟು 148 ಸಿಬಂದಿ ಇದ್ದರು. ಶ್ರೀಲಂಕಾದ ಗಾಲೆ ದ್ಪೀಪದಿಂದ 40 ಕಿಮೀ ದೂರದಲ್ಲಿ ಘಟನೆ ಸಂಭವಿಸಿದ್ದು, ಲಂಕಾ ಸೇನೆಯು ರಕ್ಷಣಾ ಕಾರ್ಯಾಚರಣೆ ನಡೆಸಿ ಹಡಗಿನಲ್ಲಿದ್ದ 32 ಮಂದಿಯನ್ನು ರಕ್ಷಣೆ ಮಾಡಿದೆ. 88 ಶವಗಳನ್ನು ಪತ್ತೆ ಮಾಡಿದ್ದರೆ, ಉಳಿದವರು ನಾಪತ್ತೆಯಾಗಿದ್ದರು. ಅಮೆರಿಕ ತನ್ನಿಂದ ಸಾವಿರಾರು ಕಿಮೀ ದೂರದ ಅಂತಾರಾಷ್ಟ್ರೀಯ ಸಮುದ್ರ ಮಾರ್ಗದಲ್ಲಿ ಯಾವುದೇ ಮುನ್ಸೂಚನೆ ಇಲ್ಲದೆ ಈ ರೀತಿಯ ದೌರ್ಜನ್ಯ ಎಸಗಿದ್ದು ವಿಶ್ವ ರಾಷ್ಟ್ರಗಳ ಖಂಡನೆಗೆ ಕಾರಣವಾಗಿದೆ.
ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಈ ಘಟನೆಯನ್ನು ತೀವ್ರ ಖಂಡಿಸಿದ್ದಲ್ಲದೆ, ಇದಕ್ಕಾಗಿ ಅಮೆರಿಕ ವಿಷಾದ ಪಡಬೇಕಾಗುತ್ತದೆ. ಅಂತಹ ದಿನ ಬಂದೇ ಬರುತ್ತದೆ. ಯಾಕಂದ್ರೆ, ಅಮೆರಿಕವು ಸಮುದ್ರದಲ್ಲಿ ಅಮಾನುಷ ರೀತಿಯ ದೌರ್ಜನ್ಯದ ಕೃತ್ಯ ಎಸಗಿದೆ ಎಂದಿದ್ದಾರೆ.
01-05-26 08:33 pm
HK News Staffer
ರಾಜ್ಯದಲ್ಲಿ ಸದ್ಯಕ್ಕೆ ಸಿಎಂ ಬದಲಾವಣೆ ಇಲ್ಲ, ನಾನು ಸ...
30-04-26 08:16 pm
ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳ...
30-04-26 11:53 am
ಸದ್ಯಕ್ಕಿಲ್ಲ ಡಿಕೆಶಿಗೆ ಸಿಎಂ ಭಾಗ್ಯ ; ರಾಜ್ಯಸಭೆ- ಏ...
29-04-26 10:36 am
ನಾಯಕತ್ವ ಬದಲಾವಣೆ ಮಾತೇ ಇಲ್ಲ, ಮೇ 20ರೊಳಗೆ ಸಂಪುಟ ವ...
26-04-26 08:05 pm
02-05-26 11:18 am
HK News Staffer
Actor Vijay, Election, Poll: ಚುನಾವಣೋತ್ತರ ಸಮೀಕ...
29-04-26 11:18 pm
ಇದು ಫ್ರೆಂಡ್ಲಿ ಫೆಡರಲ್ ಅಸ್ಸಾಸಿನ್, ಟ್ರಂಪ್ ಅತ್ಯಾಚ...
27-04-26 02:48 pm
ಶ್ವೇತಭವನದ ಡಿನ್ನರ್ ಪಾರ್ಟಿಯಲ್ಲಿ ಗುಂಡಿನ ದಾಳಿ ; ಭ...
26-04-26 12:49 pm
ರಾಘವ್ ಚಡ್ಡಾ ಸೇರಿ ಏಳು ಆಪ್ ಸಂಸದರು ಬಿಜೆಪಿಗೆ ; ಮೇ...
25-04-26 03:54 pm
29-04-26 11:05 pm
HK News Staffer
ತಾಲೂಕು ಆಸ್ಪತ್ರೆ ಖಾಸಗಿ ವಶಕ್ಕೆ ; ಆರೋಗ್ಯ ಸಚಿವರ ಉ...
28-04-26 09:18 pm
ASI Assault Case, Mangalore: ಎಎಸ್ಐ ಮೇಲೆ ಹಲ್ಲೆ...
28-04-26 01:35 pm
ನೂತನ ಮನೆಯ ಔತಣಕೂಟ ದಿನವೇ ಮೃತಪಟ್ಟ ಯಜಮಾನ ; ಬಂಟ್ವಾ...
28-04-26 01:26 pm
ಮಂಗಳೂರು- ಬೆಂಗಳೂರು ರೈಲಿನಲ್ಲಿ ಮಗುವಿಗೆ ಜನ್ಮವಿತ್ತ...
27-04-26 10:29 am
01-05-26 09:24 pm
HK News Staffer
ಸಹೋದ್ಯೋಗಿ ಮೇಲೆ ಆಸಿಡ್ ದಾಳಿ ; ಕೇರಳ ಮೂಲದ ವ್ಯಕ್...
01-05-26 07:18 pm
Rakesh Gladson Dsouza: ಮಂಗಳೂರಿನ ಯುವ ಉದ್ಯಮಿ ರಾ...
01-05-26 06:36 pm
ಮಕ್ಕಳ ಆಯೋಗ ಸಮಿತಿ ಸದಸ್ಯನಿಂದಲೇ ಹಲವು ಮಹಿಳೆಯರಿಗೆ...
01-05-26 01:45 pm
ಬೆಂಗಳೂರಿನ ಜ್ಯುವೆಲ್ಲರಿ ಶಾಪ್ ಗೋಡೆ ಕೊರೆದು ಕೋಟ್ಯಂ...
01-05-26 11:48 am