ಬ್ರೇಕಿಂಗ್ ನ್ಯೂಸ್
08-03-26 03:41 pm HK News Staffer ಕರ್ನಾಟಕ
ಬೆಂಗಳೂರು, ಮಾರ್ಚ್ 08: ಅಪರೂಪದ ಕಾನೂನು ಬೆಳವಣಿಗೆಯೊಂದರಲ್ಲಿ ಶ್ರೀಲಂಕಾ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿರುವ ಎ.ಎಚ್.ಎಂ.ಡಿ ನವಾಝ್ ತಮ್ಮ ವಿರುದ್ಧ 2015 ಮತ್ತು 2020ರಲ್ಲಿ ಕೆಲವು ಶ್ರೀಲಂಕಾ ಆನ್ಲೈನ್ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದ ಆರೋಪಿತ ಮಾನಹಾನಿಕರ ಸುದ್ದಿಗಳ ಲಿಂಕ್ಗಳನ್ನು ಜಾಲತಾಣದಿಂದ ತೆಗೆದುಹಾಕುವಂತೆ ನಿರ್ದೇಶನ ಕೋರಿ ಕರ್ನಾಟಕ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರು ಗೂಗಲ್ ಇಂಡಿಯಾ ಹಾಗೂ ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದ್ದು, ಪ್ರಕರಣದ ಮುಂದಿನ ವಿಚಾರಣೆಯನ್ನು ಮಾರ್ಚ್ 16ಕ್ಕೆ ಮುಂದೂಡಿದ್ದಾರೆ.
ಇ-ಮೇಲ್ ಮೂಲಕ ವಿದೇಶಿ ಮಾಧ್ಯಮಗಳಿಗೆ ನೋಟಿಸ್:
ಇದರೊಂದಿಗೆ, ಶ್ರೀಲಂಕಾದ ಆನ್ಲೈನ್ ಸುದ್ದಿಸಂಸ್ಥೆಗಳಾದ ಕೊಲಂಬೊ ಟೆಲಿಗ್ರಾಫ್ ಹಾಗೂ ಲಂಕಾ ಇ- ನ್ಯೂಸ್ ಗಳಿಗೆ ಇ-ಮೇಲ್ ಮೂಲಕ ನೋಟಿಸ್ ನೀಡುವಂತೆ ಅರ್ಜಿದಾರರ ಪರ ವಕೀಲರಿಗೆ ನ್ಯಾಯಾಲಯ ಸೂಚಿಸಿದೆ.
ಅರ್ಜಿಯ ಪ್ರಕಾರ, ಸಂಬಂಧಿತ ಸುದ್ದಿಗಳು ಪ್ರಕಟವಾದ ಸಮಯದಲ್ಲಿ ನವಾಝ್ ಅವರು ಶ್ರೀಲಂಕಾ ಕೋರ್ಟ್ ಆಫ್ ಅಪೀಲ್ಸ್ನ ಅಧ್ಯಕ್ಷರಾಗಿದ್ದರು. ನಂತರ ಅವರ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಶ್ರೀಲಂಕಾ ಸುಪ್ರೀಂ ಕೋರ್ಟ್ ರದ್ದುಪಡಿಸಿತ್ತು. ಬಳಿಕ ಅವರು ಶ್ರೀಲಂಕಾ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡು ಪ್ರಸ್ತುತ ಆ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಪ್ರತಿಷ್ಠೆ ಮತ್ತು ವೃತ್ತಿ ಗೌರವಕ್ಕೆ ಧಕ್ಕೆ ಆರೋಪ:
ಅರ್ಜಿಯಲ್ಲಿ ತಿಳಿಸಿರುವಂತೆ, ಪ್ರಕರಣ ನ್ಯಾಯಾಲಯದಲ್ಲಿ ರದ್ದುಪಡಿಸಲ್ಪಟ್ಟಿದ್ದರೂ, ಸಂಬಂಧಿತ ಹಳೆಯ ಸುದ್ದಿಗಳು ಗೂಗಲ್ ಶೋಧ ಫಲಿತಾಂಶಗಳಲ್ಲಿ ಇನ್ನೂ ಲಭ್ಯವಾಗುತ್ತಿರುವುದರಿಂದ ತಮ್ಮ ವೃತ್ತಿಜೀವನ ಹಾಗೂ ವೈಯಕ್ತಿಕ ಪ್ರತಿಷ್ಠೆಗೆ ಧಕ್ಕೆಯಾಗುತ್ತಿದೆ.
ದಕ್ಷಿಣ ಏಷ್ಯಾ ಸಹಕಾರ ಸಂಘಟನೆ (ಸಾರ್ಕ್) ರಾಷ್ಟ್ರಗಳ ಹಲವು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಅತಿಥಿ ಸದಸ್ಯರಾಗಿರುವ ಹಿನ್ನೆಲೆ, ಈ ಸುದ್ದಿಗಳು ಜಾಲತಾಣದಲ್ಲಿ ಲಭ್ಯತೆ ತಮ್ಮ ಶೈಕ್ಷಣಿಕ ಹಾಗೂ ಕಾನೂನು ವಲಯದಲ್ಲಿನ ಗೌರವಕ್ಕೆ ಹಾನಿಯಾಗಿದೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.
ಕರ್ನಾಟಕ ಹೈಕೋರ್ಟ್ಗೆ ಮೊರೆ ಯಾಕೆ?
ತಾವು ಶ್ರೀಲಂಕಾ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿರುವ ಕಾರಣ, ತಮ್ಮ ವಿರುದ್ಧದ ಸುದ್ದಿಗಳ ಕುರಿತು ಶ್ರೀಲಂಕಾದಲ್ಲಿಯೇ ನ್ಯಾಯಾಂಗ ಕ್ರಮ ಕೈಗೊಳ್ಳುವುದು ನೈತಿಕವಾಗಿ ಸಾಧ್ಯವಿಲ್ಲ. “ತಾನೇ ತನ್ನ ಪ್ರಕರಣದಲ್ಲಿ ನ್ಯಾಯಾಧೀಶರಾಗಲು ಸಾಧ್ಯವಿಲ್ಲ” ಎಂಬ ಮೂಲಭೂತ ಕಾನೂನು ತತ್ವದ ಹಿನ್ನೆಲೆಯಲ್ಲಿ ಈ ನಿರ್ಬಂಧ ಎದುರಾಗಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ಭಾರತದ ನ್ಯಾಯಾಂಗ ವ್ಯವಸ್ಥೆ ಕಾನೂನು ಪ್ರಭುತ್ವವನ್ನು ದೃಢವಾಗಿ ಕಾಪಾಡುವ ಸಾಮರ್ಥ್ಯ ಹೊಂದಿದೆ ಎಂಬ ನಂಬಿಕೆಯಿಂದ ಈ ಅರ್ಜಿಯನ್ನು ಸಲ್ಲಿಸಲಾಗಿದೆ ಎಂದು ನವಾಝ್ ತಿಳಿಸಿದ್ದಾರೆ. ಜೊತೆಗೆ, ಗೂಗಲ್ ಇಂಡಿಯಾದ ಮುಖ್ಯ ಕಚೇರಿ ಬೆಂಗಳೂರಿನಲ್ಲಿ ಇರುವುದರಿಂದ ಕರ್ನಾಟಕ ಹೈಕೋರ್ಟ್ನ ನ್ಯಾಯಾಧಿಕಾರವನ್ನು ಅವಲಂಬಿಸಲಾಗಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
ಹಳೆಯ ಆನ್ಲೈನ್ ಮಾಹಿತಿಯನ್ನು ತೆರವುಗೊಳಿಸುವ “ಮರೆಯಲ್ಪಡುವ ಹಕ್ಕು” (ರೈಟ್ ಟು ಬಿ ಫರ್ಗಾಟನ್) ಕುರಿತಾಗಿ ದೆಹಲಿ ಹೈಕೋರ್ಟ್ ನೀಡಿದ ಮಹತ್ವದ ತೀರ್ಪನ್ನೂ ತಮ್ಮ ವಾದಕ್ಕೆ ಆಧಾರವಾಗಿ ಅರ್ಜಿದಾರರು ಉಲ್ಲೇಖಿಸಿದ್ದಾರೆ.
25-04-26 10:56 pm
HK Staffer
ಫೇಲ್ ಎನ್ನಲಾಗಿದ್ದ ವಿದ್ಯಾರ್ಥಿನಿ ಟಾಪರ್ ; SSLC...
24-04-26 10:52 pm
ದಾವಣಗೆರೆ ಬಿಸಿ ; ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ಜೋ...
24-04-26 02:35 pm
‘ಪಿಯುಸಿ ಸೈನ್ಸ್’ ಗುಮ್ಮ ಮುಂದಿಟ್ಟು ದಂಧೆಗಿಳಿದ ಖಾಸ...
23-04-26 07:06 pm
ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಭರ್ಜರಿ ದಾಖಲೆ ; ಒಟ್...
23-04-26 01:36 pm
25-04-26 03:54 pm
HK News Staffer
ರಾಘವ್ ಚಡ್ಡಾ ಸೇರಿ ಏಳು ಆಪ್ ಸಂಸದರು ಬಿಜೆಪಿಗೆ ; ಮೇ...
25-04-26 03:53 pm
ಆಗಷ್ಟೇ ಕಣ್ಬಿಟ್ಟಿದ್ದ ಮಗಳ ಅಂಗಾಂಗ ದಾನದಿಂದ ಮರುಜೀವ...
24-04-26 07:35 pm
ಹಾರ್ಮುಜ್ ಜಲಸಂಧಿಯಲ್ಲಿ ಮೂರು ಹಡಗುಗಳ ಮೇಲೆ ಇರಾನ್ ಗ...
23-04-26 10:22 am
ಭಾರತಕ್ಕೆ ಬರುತ್ತಿದ್ದ ಮತ್ತೆ ಮೂರು ತೈಲ ಹಡಗು ಇರಾನ್...
22-04-26 09:10 pm
25-04-26 01:45 pm
HK News Staffer
Commissioner Sudheer Reddy, Mangalore: ಕಮಿಷನರ...
24-04-26 07:10 pm
ಬೆಳ್ತಂಗಡಿ, ಬಂಟ್ವಾಳ ತಾಲೂಕು ಆಸ್ಪತ್ರೆ ಖಾಸಗಿ ತೆಕ್...
23-04-26 04:43 pm
ನಿರುದ್ಯೋಗಿಗಳಿಗೆ ಸುವರ್ಣಾವಕಾಶ ; ಮಂಗಳೂರಿನಲ್ಲಿ ಬೃ...
22-04-26 10:58 am
ಪುತ್ತೂರು ಜಾತ್ರೆಗೆ ಅಡ್ಡಿ ನೆಪ ; ಏಕಾಏಕಿ ಖಾಸಗಿ ಕಟ...
21-04-26 06:33 pm
25-04-26 10:43 pm
Mangalore Correspondent
ಉಡುಪಿ ; ಸಂಸ್ಕೃತ ಕಾಲೇಜಿನ ಉಪನ್ಯಾಸಕ ಬಾವಿಯಲ್ಲಿ ಶ...
25-04-26 03:57 pm
ಮಣಿಪಾಲದಲ್ಲಿ ಪಬ್ಲಿಕ್ನಲ್ಲೇ ವಿದ್ಯಾರ್ಥಿಗಳ ಓಪನ್ ರೋ...
25-04-26 02:05 pm
ಕಾರ್ಕಳ ಹೆದ್ದಾರಿಯಲ್ಲಿ ಭೀಕರ ಅಪಘಾತ ; ಬೈಕ್ ಗೆ ಡಿಕ...
25-04-26 12:55 pm
ವೇಣೂರು ; ಬಳಂಜ ದೇವಸ್ಥಾನಕ್ಕೆ ನುಗ್ಗಿ ದೇವರ ಮೂರ್ತಿ...
24-04-26 04:37 pm