ಬ್ರೇಕಿಂಗ್ ನ್ಯೂಸ್
15-02-23 04:42 pm HK News Desk ದೇಶ - ವಿದೇಶ
ವೆಲ್ಲಿಂಗ್ಟನ್, ಫೆ.15: ನ್ಯೂಜಿಲ್ಯಾಂಡ್ನಲ್ಲಿ ಬುಧವಾರ ಭಾರಿ ಪ್ರಬಲ ಭೂಕಂಪನ ಸಂಭವಿಸಿದೆ. ಕರಾವಳಿ ಭಾಗದಲ್ಲಿ ಉಂಟಾಗಿರುವ ಅವಘಡದಲ್ಲಿ, ರಿಕ್ಟರ್ ಮಾಪನದಲ್ಲಿ 6.1 ತೀವ್ರತೆಯಲ್ಲಿ ಭೂಮಿ ನಡುಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯುರೋಪಿಯನ್- ಮೆಡಿಟರೇನಿಯನ್ ಭೂಕಂಪಶಾಸ್ತ್ರ ಕೇಂದ್ರ (ಇಎಂಎಸ್ಸಿ) ಮಾಹಿತಿ ಪ್ರಕಾರ, ವೆಲ್ಲಿಂಗ್ಟನ್ ಸಮೀಪದ ಲೋವರ್ ಹಟ್ನ ವಾಯವ್ಯದ 78 ಕಿಮೀ ದೂರದಲ್ಲಿ ಭೂಕಂಪನ ಉಂಟಾಗಿದೆ. ಸುಮಾರು 48 ಕಿಮೀ (30 ಮೈಲು) ಆಳದಲ್ಲಿ ಕಂಪನ ಉಂಟಾಗಿದೆ ಎಂದು ಸರ್ಕಾರಿ ಭೂಕಂಪನ ನಿಗಾ ಕೇಂದ್ರ ಜಿಯೋನೆಟ್ ಹೇಳಿದೆ.

ಪರಾಪರೌಮು ಪಟ್ಟಣದಿಂದ 50 ಕಿಮೀ ದೂರದಲ್ಲಿ ಭೂಕಂಪನದ ಕೇಂದ್ರಬಿಂದು ದಾಖಲಾಗಿದೆ ಎಂದು ಅದು ಮಾಹಿತಿ ನೀಡಿದೆ. ಭೂಕಂಪನದ ಕಾರಣದಿಂದ ಯಾವುದೇ ಜೀವ ಅಥವಾ ಆಸ್ತಿಪಾಸ್ತಿಗಳಿಗೆ ಹಾನಿಯಾಗಿರುವ ಬಗ್ಗೆ ತಕ್ಷಣಕ್ಕೆ ವರದಿಯಾಗಿಲ್ಲ. ಸ್ಥಳೀಯ ಕಾಲಮಾನ ಸಂಜೆ 7.38ರ ಸುಮಾರಿಗೆ ಭೂಮಿ ಕಂಪಿಸಿದೆ.
ನ್ಯೂಜಿಲ್ಯಾಂಡ್, ಒಂದೆಡೆ ಅಗ್ನಿಪರ್ವತಗಳು ಹಾಗೂ ಸಮುದ್ರದ ತೀರಗಳಿಂದ ಸುತ್ತುವರಿದಿರುವುದರಿಂದ ಭೂಕಂಪನದ ಅಪಾಯಗಳಿಗೆ ಒಳಗಾಗಿದೆ. 40,000 ಕಿಮೀ ಅಗ್ನಿಪರ್ವತಗಳು ಮತ್ತು ಪೆಸಿಫಿಕ್ ಸಾಗರದ ತೀರಗಳು ಅದನ್ನು ಸುತ್ತುವರಿದಿದ್ದು, 'ಬೆಂಕಿಯ ಬಲೆ'ಯಲ್ಲಿ ದೇಶವಿದೆ.

ಟರ್ಕಿ- ಸಿರಿಯಾ ಸಾವಿನ ಸಂಖ್ಯೆ ಏರಿಕೆ
ಟರ್ಕಿ ಮತ್ತು ಸಿರಿಯಾ ದೇಶಗಳ ಜನತೆಯ ಬದುಕನ್ನು ಛಿದ್ರಗೊಳಿಸಿರುವ ಅನಾಹುತಕಾರಿ ಭೂಕಂಪನಕ್ಕೆ ಈವರೆಗೂ ಬಲಿಯಾದವರ ಸಂಖ್ಯೆ 41 ಸಾವಿರ ದಾಟಿದೆ. ಭಾರತ ಸೇರಿದಂತೆ 50ಕ್ಕೂ ಹೆಚ್ಚು ದೇಶಗಳು ಅಪಾಯಕ್ಕೆ ತುತ್ತಾದ ಈ ದೇಶಗಳಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಗಳನ್ನು ನಡೆಸುತ್ತಿವೆ. ಆದರೆ ಸಾವಿರಾರು ಕಟ್ಟಡಗಳು ನೆಲಸಮವಾಗಿರುವುದರಿಂದ ಅವುಗಳನ್ನು ತೆರವುಗೊಳಿಸಿ ಅವಶೇಷಗಳ ಅಡಿಯಿಂದ ಜನರನ್ನು ಜೀವಂತ ಹೊರಗೆ ತರುವುದು ಕಷ್ಟವಾಗುತ್ತಿದೆ.
ಭೂಕಂಪ ಸಂಭವಿಸಿ ಹತ್ತು ದಿನ ಕಳೆದಿದೆ. ಆದರೂ ಜನರು ಬದುಕಿ ಉಳಿದಿರಬಹುದು ಎಂಬ ಆಶಯದೊಂದಿಗೆ ಅವಶೇಷಗಳ ಅಡಿಯಲ್ಲಿ ಹುಡುಕಾಟ ಮುಂದುವರಿದಿದೆ. ಟರ್ಕಿಯ ಕಹ್ರಮಾನ್ಮರಸ್ನಲ್ಲಿ ಭೂಕಂಪ ಸಂಭವಿಸಿದ 222 ಗಂಟೆಗಳ ಬಳಿಕ 42 ವರ್ಷದ ಮಹಿಳೆಯನ್ನು ಜೀವಂತ ರಕ್ಷಿಸಲಾಗಿದೆ.
An earthquake of magnitude 6.1 on the Richter scale struck New Zealand on Wednesday. According to the European-Mediterranean Seismological Centre (EMSC), the earthquake occurred 78 km northwest of Lower Hutt, near Wellington. The tremors were felt at a depth of 48 km (30 miles), government seismic monitor Geonet stated.
22-08-26 10:15 pm
HK News Staffer
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
ದೇಶದ ರಾಜಕೀಯದಲ್ಲಿ ಬಹುದೊಡ್ಡ ಬಿರುಗಾಳಿ; ವಿರುದ್ಧ ಧ...
21-08-26 03:42 pm
ಆಟೋಗಳ ರೀತಿ ಗಂಟೆಗೆ 55 ಕಿಮೀ ಓಡುವ ರೈಲುಗಳನ್ನೇ ‘ಸೂ...
19-08-26 09:55 pm
22-08-26 08:37 pm
HK News Staffer
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
'ಜನ ಗಣ ಮನ' ಗೀತೆಯನ್ನು ಬ್ರಿಟನ್ ರಾಣಿಯ ಹೊಗಳಲು ಬರೆ...
19-08-26 12:10 pm
23-08-26 06:17 pm
HK News Staffer
ಧಾರ್ಮಿಕ ದ್ವೇಷದ ನೆಪದಲ್ಲಿ ಪುತ್ತೂರು ಬಂದ್ ಕರೆ ಕೊಟ...
23-08-26 05:36 pm
ತಾಂತ್ರಿಕ ದೋಷದಿಂದ ದಾಖಲೆ ಸುಟ್ಟ ಆರೋಪ ; ಪುತ್ತೂರಿನ...
23-08-26 05:18 pm
ರಾಜ್ಯದಲ್ಲಿ ಕೃತಕ ಪನೀರ್ ಬ್ಯಾನ್, ನಕಲಿ ಔಷಧ ಜಾಲ ಹಿ...
22-08-26 01:37 pm
ಮಂಗಳೂರು ರೈಲ್ವೇ ಕೊನೆಗೂ ಕರ್ನಾಟಕಕ್ಕೆ ಸೇರ್ಪಡೆ ; ಅ...
21-08-26 09:54 pm
23-08-26 05:20 pm
HK News Staffer
ಹೆತ್ತವರನ್ನು ಕೊಲ್ತೇನೆಂದು ಹೇಳಿ ಒಂಬತ್ತನೇ ಕ್ಲಾಸ್...
22-08-26 12:43 pm
ಬಾಳೆಹಣ್ಣಿಗೆ ಕೃತಕ ಬಣ್ಣ, ಕೆಮಿಕಲ್ ಬಳಸಿ ಹಣ್ಣಾಗಿಸು...
21-08-26 12:20 pm
ಇಷ್ಟದ ವಿದ್ಯಾರ್ಥಿಯನ್ನು ಕಂಡು “ಏಯ್ ಬಾಬೂ” ಎಂದಿದ್ದ...
21-08-26 11:03 am
ಎಸಿಪಿ ಕಚೇರಿ ಅಂಗಳದಲ್ಲೇ ಮಹಾಲಕ್ಷ್ಮಿ ದೇವಸ್ಥಾನಕ್ಕೆ...
20-08-26 08:06 pm