ಬ್ರೇಕಿಂಗ್ ನ್ಯೂಸ್
16-11-22 05:19 pm HK News Desk ಕ್ರೈಂ
ನವದೆಹಲಿ, ನ.16: ಹೆತ್ತವರನ್ನು ಬಿಟ್ಟು ಬಂದಿದ್ದ ಹಿಂದು ಪ್ರೇಯಸಿಯನ್ನು ಯಾವುದೇ ದಾಕ್ಷೀಣ್ಯ ಇಲ್ಲದೆ ಮುಸ್ಲಿಂ ಯುವಕನೊಬ್ಬ ಕೊಂದು 35 ಪೀಸ್ ಗಳನ್ನಾಗಿ ಕತ್ತರಿಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಅಫ್ತಾಬ್ ಪೂನಾವಾಲನ ಮಂಪರು ಪರೀಕ್ಷೆಗೆ ದೆಹಲಿ ಕೋರ್ಟ್ ಬುಧವಾರ ಅನುಮತಿ ನೀಡಿದೆ.
ಇಡೀ ದೇಶದ ಗಮನ ಸೆಳೆದಿದ್ದ ಭಯಾನಕ ಕೃತ್ಯ ಆಗಿದ್ದರಿಂದ ಅಫ್ತಾಬ್ ಗೆ ಮಂಪರು ಪರೀಕ್ಷೆ ನಡೆಸಲು ಅನುಮತಿ ನೀಡಬೇಕೆಂದು ಪೊಲೀಸರು ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಕೋರ್ಟ್ ಮಂಪರು ಪರೀಕ್ಷೆ ಅನುಮತಿ ನೀಡಿದೆ. ಮಂಪರು (ನಾರ್ಕೋ) ಪರೀಕ್ಷೆ ನಡೆಸುವ ಮೊದಲು ಪೊಲೀಸರು ಆರೋಪಿಯ ಒಪ್ಪಿಗೆ ಪಡೆಯಬೇಕಾಗಿದೆ.

ಘಟನೆ ನಡೆದ ಸ್ಥಳದಲ್ಲಿ ಸಂಗ್ರಹಿಸಿದ್ದ ಸಾಕ್ಷ್ಯಾಧಾರಗಳನ್ನು ಪರೀಕ್ಷಿಸಲು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಅಡುಗೆ ಕೋಣೆಯಲ್ಲಿ ಸಂಗ್ರಹಿಸಿದ್ದ ಕೆಲವು ರಕ್ತದ ಮಾದರಿಯನ್ನು ಪರೀಕ್ಷಿಸಲಾಗುತ್ತಿದೆ. ಈ ಮೂಲಕ ಇದು ಶ್ರದ್ಧಾಳ ದೇಹದ ಭಾಗವೇ ಎಂಬುದನ್ನು ಪತ್ತೆ ಹಚ್ಚಲು ಸಾಧ್ಯವಾಗಲಿದೆ. ಈ ನಡುವೆ, ದೆಹಲಿ ಪೊಲೀಸರು ಅಫ್ತಾಬ್ ಪೂನಾವಾಲನಿಗೆ ಮಾನಸಿಕ ಪರೀಕ್ಷೆಯನ್ನು ನಡೆಸಲು ಸಿದ್ಧತೆ ನಡೆಸಿದ್ದಾರೆ.


ಶ್ರದ್ಧಾಳ ತಲೆಯ ಭಾಗಕ್ಕೆ ಶೋಧ
ಅಫ್ತಾಬ್ ಅಮಿನ್ ಪೂನಾವಾಲ ಪ್ರೇಯಸಿ ಶ್ರದ್ಧಾಳನ್ನು ಕೊಂದು ದೇಹವನ್ನು 35 ಭಾಗಗಳನ್ನಾಗಿ ಕತ್ತರಿಸಿ ಫ್ರಿಡ್ಜ್ ನಲ್ಲಿಟ್ಟಿದ್ದ. ನಂತರ ಒಂದೊಂದೇ ಭಾಗಗಳನ್ನು ಕಾಡಿನ ಪ್ರದೇಶದಲ್ಲಿ ಎಸೆದು ಬರುತ್ತಿದ್ದ. ಆದರೆ ದೆಹಲಿ ಪೊಲೀಸರ ಪ್ರಕಾರ, ಆತ ಶ್ರದ್ದಾಳ ಶವವನ್ನು ಕತ್ತರಿಸುವಾಗ ತಲೆಯನ್ನು ಕತ್ತರಿಸದಿರಬಹುದು. ಒಂದು ವೇಳೆ ತಲೆಯ ಭಾಗ ಪತ್ತೆಯಾದರೆ, ಸಂತ್ರಸ್ತೆಯ ಗುರುತನ್ನು ಪತ್ತೆ ಸಾಧ್ಯವಾಗುತ್ತದೆ ಎಂದು ಕೊನೆಯ ಬಾರಿಗೆ ಅದನ್ನು ಯಾರಿಗೂ ಸಿಗದಂತೆ ಮಾಡಿರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
The search is on for the head of 26-year-old Shraddha Walkar, who was allegedly killed by her live-in partner Aaftab Amin Poonawala in May this year, who chopped her body into 35 pieces, before dumping them in a forest area. The Delhi police believe that while dismembering her body, Poonawala may not have been able to mutilate Walkar’s head and if it could be recovered, it would help the police in establishing the victim’s identity.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
27-08-26 10:59 pm
HK News Desk
ಕ್ಯಾನ್ಸರ್ ಹೋರಾಟದ ಮಧ್ಯೆ ದರ್ಶನ ಪಾತ್ರಿಗೆ 7ನೇ ನಮೋ...
27-08-26 08:26 pm
ಕೊಟ್ಟಾರದಲ್ಲಿ ಗಾಳಿ ಮಳೆಗೆ ಧರೆಗುರುಳಿದ ಬೃಹತ್ ಮರ ;...
27-08-26 06:55 pm
ಸೌಜನ್ಯಾ ಮನೆಗೆ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ...
27-08-26 11:22 am
ಪಕ್ಕದ ವಾರ್ಡಿನ ಸರಕಾರಿ ಶಾಲಾಭಿವೃದ್ಧಿಗೆ ಅನುದಾನ ಕೊ...
26-08-26 10:58 pm
27-08-26 07:23 pm
HK News Staffer
ಆಪ್ತನಿಂದಲೇ ನಂಬಿಕೆ ದ್ರೋಹ, ಐಟಿ ದಾಳಿಯ ಒತ್ತಡ ; ಕಾ...
27-08-26 05:24 pm
Samson Coutinho, Mangalore, Fiona Sweedal Mur...
26-08-26 09:36 pm
ಸೂರ್ಯಪೇಟೆಯಲ್ಲಿ ಭೀಕರ ಅಪಘಾತ ; ಕಂಟೇನರ್ ಲಾರಿಗೆ ಬ...
26-08-26 11:26 am
ವಿಜಯಪುರದಲ್ಲಿ ಭೀಕರ ದುರಂತ ; ನಾಪತ್ತೆಯಾಗಿದ್ದ ಒಂದೇ...
26-08-26 11:23 am