ಬ್ರೇಕಿಂಗ್ ನ್ಯೂಸ್
29-03-22 01:47 pm Udupi Correspondent ಕರಾವಳಿ
ಉಡುಪಿ, ಮಾ.29 : ಕೊಲ್ಲೂರು ಮೂಕಾಂಬಿಕೆಗೆ ಟಿಪ್ಪು ಹೆಸರಲ್ಲಿ ಸಲಾಂ ಮಂಗಳಾರತಿ ಮಾಡುವುದನ್ನು ಆರ್ಎಸ್ಎಸ್ ಮುಖಂಡ ಪ್ರಭಾಕರ್ ಭಟ್ ಖಂಡಿಸಿದ್ದು ನಮ್ಮ ದೇವರನ್ನು ಅವಹೇಳನ ಮಾಡಿದಂತಹ, ನಮ್ಮ ಸಮಾಜವನ್ನು ನಾಶ ಮಾಡಲು ಹೊರಟಿದ್ದ ಒಬ್ಬ ವ್ಯಕ್ತಿಯ ಹೆಸರಿನಲ್ಲಿ ನಮ್ಮ ದೇವಸ್ಥಾನದಲ್ಲಿ ಪೂಜೆ ಮಾಡುವುದು ಸರಿಯಲ್ಲ. ಅದು ದೇವರಿಗೆ ಮಾಡುವಂತಹ ಅಪಮಾನ ಎಂದು ಹೇಳಿದ್ದಾರೆ.
ಇಂತಹ ಪೂಜೆ, ಸಂಪ್ರದಾಯವನ್ನು ಎಷ್ಟು ಬೇಗ ತೆಗೆದು ಹಾಕುತ್ತಾರೋ ಅಷ್ಟು ಶ್ರೇಯಸ್ಸು. ಈ ರೀತಿ ಮಾಡುವುದರಿಂದ ನಮ್ಮ ದೇವರ ಶಕ್ತಿ ಕಡಿಮೆ ಆಗುತ್ತದೆ. ಆ ಹೆಸರನ್ನು ತೆಗೆದು ಹಾಕಿ, ದೇವರ ಹೆಸರಿನಲ್ಲಿ ಪೂಜೆ ಮಾಡಲಿ.

ಈಗ ಸಲಾಂ ಹೆಸರು ಇರುತ್ತದೆ, ಮುಂದೆ ಇನ್ನೂ ಸ್ವಲ್ಪ ವರ್ಷ ಹೋದ್ರೆ, ಅಲಾಹು ಸಲಾಂ ಅಂತ ಬರುವ ಸಾಧ್ಯತೆಗಳು ಇರುತ್ತವೆ. ಅವರು ತಮ್ಮ ಮಸೀದಿಗಳಲ್ಲಿ ಬೇಕಾದರೆ ಪೂಜೆ ಏನು ಬೇಕಾದ್ರೂ ಮಾಡಿಕೊಳ್ಳಲಿ. ನಮ್ಮಲ್ಲಿ ಆತನ ಹೆಸರು ತೆಗೆಯೋದೂ ಅಪಚಾರ. ನಮ್ಮ ದೇವಸ್ಥಾನದಲ್ಲಿ ನಮ್ಮ ನಮ್ಮತನ ಇರಬೇಕೆ ಹೊರತು, ಯಾರೋ ಒಬ್ಬನ ವ್ಯಕ್ತಿಯ ಹೆಸರಲ್ಲಿ ಸಲಾಂ ಪೂಜೆ ನಡೆಯಬಾರದು. ಗೊತ್ತಿಲ್ಲದೆ ಇಷ್ಟರವರೆಗೆ ನಡೆದುಹೋಗಿದೆ, ಮುಂದೆ ನಡೆಯಕೂಡದು ಎಂದು ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದ್ದಾರೆ.
ಇದೇ ವೇಳೆ, ಹಿಂದು ದೇವಸ್ಥಾನದ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಸ್ಥ ನಿಷೇಧ ಬಗ್ಗೆ ಕೇಳಿದ್ದಕ್ಕೆ, 2002 ರಲ್ಲಿ ಎಸ್ಸೆಂ ಕೃಷ್ಣ ಸರಕಾರ ಇದ್ದಾಗ ದೇಗುಲದ ಉತ್ಸವ ಸಂದರ್ಭದಲ್ಲಿ ನೂರು ಮೀಟರ್ ವ್ಯಾಪ್ತಿಯಲ್ಲಿ ಅನ್ಯಧರ್ಮೀಯರಿಗೆ ನಿಷೇಧ ಹಾಕಲಾಗಿತ್ತು. ಆದರೆ ಈ ವಿಚಾರ ಸಿದ್ದರಾಮಯ್ಯ, ಡಿಕೆಶಿ ಅಂಥವರಿಗೆ ತಿಳಿದಿಲ್ಲ. ಅವರು ಮಸೀದಿ ವ್ಯಾಪ್ತಿಯಲ್ಲಿ ಹೂ, ಇನ್ನಿತರ ಏನು ಬೇಕಾದರೂ ಮಾರಿಕೊಳ್ಳಲಿ. ನಮ್ಮ ದೇವಸ್ಥಾನದ ಉತ್ಸವಗಳಲ್ಲಿ ಅವರು ಬಂದು ವ್ಯಾಪಾರ ಮಾಡುವುದು ಬೇಡ. ಇದು ಶಾಶ್ವತ ಆಗಿ ಮುಂದುವರಿಯಬೇಕು ಎಂದು ಹೇಳಿದರು.
Speaking at Byndoor, prominent RSS and Hindu leader, Kalladka Prabhakar Bhat, expressed the opinion that continuing to offer puja, 'Salaam Mangalarati' to Goddess Mookambika temple in Kollur in the name of a person who had derided Hindu gods, inflicted injustice on the society and had tried his best to destroy the society is an insult to the gods. He felt that such a practice should be ended at the earliest.
28-08-26 09:35 pm
HK News Staffer
ವಾಲ್ಮೀಕಿ ನಿಗಮ ಹಗರಣ ಎಫೆಕ್ಟ್ ; ಕೊನೆಗೂ ಸಚಿವ ಸ್ಥಾ...
28-08-26 12:41 pm
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
28-08-26 08:57 pm
HK News Staffer
ಚೀರುಂಭಾ ಭಗವತಿ ತೀಯಾ ಸಮಾಜ ಸೇವಾ ಸಂಘದಲ್ಲಿ ಅವ್ಯವಹಾ...
28-08-26 02:11 pm
ಪಾಲ್ಘಾಟ್ ರೈಲ್ವೇಯಿಂದ ಮಂಗಳೂರು ಪ್ರತ್ಯೇಕವಾದರೆ ಕೇರ...
28-08-26 01:19 pm
G R Hospital, VHP, Mangalore: ಜಿ.ಆರ್ ಆಸ್ಪತ್ರೆ...
27-08-26 10:59 pm
ಕ್ಯಾನ್ಸರ್ ಹೋರಾಟದ ಮಧ್ಯೆ ದರ್ಶನ ಪಾತ್ರಿಗೆ 7ನೇ ನಮೋ...
27-08-26 08:26 pm
28-08-26 09:03 pm
HK News Staffer
ಮಧ್ಯಪ್ರದೇಶದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಬಸ್ ;...
28-08-26 07:40 pm
ತೆರಿಗೆ ಮೊತ್ತವನ್ನು 80 ಲಕ್ಷದಿಂದ 30 ಲಕ್ಷ ರೂ.ಗೆ ಇ...
28-08-26 06:22 pm
ಕಾನ್ಪುರದಲ್ಲಿ ತರಬೇತಿ ವಿಮಾನ ಪತನ ; ಉಡುಪಿ ಮೂಲದ 22...
28-08-26 04:17 pm
ಪುತ್ತೂರಿನ ದಾಖಲೆ ಸುಟ್ಟ ಪ್ರಕರಣ ; ನಾವು ಹಿಂದು- ಮು...
27-08-26 07:23 pm