ಬ್ರೇಕಿಂಗ್ ನ್ಯೂಸ್
17-03-22 11:51 am Mangalore Correspondent ಕರಾವಳಿ
ಮಂಗಳೂರು, ಮಾ.17: ಹಿಜಾಬ್ ಕುರಿತ ಹೈಕೋರ್ಟ್ ತೀರ್ಪನ್ನು ವಿರೋಧಿಸಿ ಮುಸ್ಲಿಂ ಸಂಘಟನೆಗಳ ಮುಷ್ಕರದ ಕರೆಗೆ ಮುಸ್ಲಿಮ್ ವರ್ತಕರು ಓಗೊಟ್ಟಿದ್ದಾರೆ. ಮಂಗಳೂರಿನಲ್ಲಿ ಮುಸ್ಲಿಮರ ಅಂಗಡಿ, ವ್ಯಾಪಾರ ಸಂಸ್ಥೆಗಳು ಪೂರ್ತಿಯಾಗಿ ಬಂದ್ ಆಗಿವೆ. ಅಲ್ಲದೆ, ಯಾವತ್ತೂ ಗಿಜಿಗುಟ್ಟುವ ಮೀನುಗಾರಿಕಾ ದಕ್ಕೆ ಪೂರ್ತಿ ಸ್ತಬ್ಧ ಆಗಿದೆ.
ಮಂಗಳೂರು ನಗರದ ಸೆಂಟ್ರಲ್ ಮಾರುಕಟ್ಟೆ ಆಸುಪಾಸಿನಲ್ಲಿರುವ ಅಂಗಡಿಗಳು, ಸ್ಟೇಟ್ ಬ್ಯಾಂಕ್ ಪರಿಸರದಲ್ಲಿನ ಅಂಗಡಿಗಳು ಹೆಚ್ಚಿನವು ಬಂದ್ ಆಗಿವೆ. ಬಂದರು ರಸ್ತೆಯಲ್ಲಿ ಅತಿ ಹೆಚ್ಚು ಮುಸ್ಲಿಂ ವರ್ತಕರಿದ್ದು, ತಮ್ಮ ವ್ಯಾಪಾರ, ವಹಿವಾಟಿಗೆ ಶಟರ್ ಎಳೆದು ಹಿಜಾಬ್ ತೀರ್ಪಿಗೆ ಅಸಮ್ಮತಿ ಸೂಚಿಸಿದ್ದಾರೆ.



ಉಳ್ಳಾಲ, ತೊಕ್ಕೊಟ್ಟಿನಲ್ಲೂ ಮುಸ್ಲಿಮ್ ವರ್ತಕರು ವ್ಯಾಪಕ ಬೆಂಬಲ ನೀಡಿದ್ದು, ಎಲ್ಲ ರೀತಿಯ ವಹಿವಾಟನ್ನು ಸ್ಧಗಿತಗೊಳಿಸಿದ್ದಾರೆ. ಮೆಡಿಕಲ್, ಬಟ್ಟೆ ಮಳಿಗೆ, ಜೀನಸಿ ಅಂಗಡಿಗಳು ಸೇರಿ ಇನ್ನಿತರ ಹಾರ್ಡ್ ವೇರ್, ಚಪ್ಪಲಿ ಅಂಗಡಿ, ಪೈಂಟ್ ಎಲ್ಲ ರೀತಿಯ ಅಂಗಡಿಗಳು ಬಂದ್ ಆಗಿವೆ. ಇದರಿಂದಾಗಿ ಉಳ್ಳಾಲ ಬಿಕೋ ಎನ್ನುತ್ತಿದ್ದು, ಜನರ ಸಂಚಾರವೂ ಕಡಿಮೆಯಾಗಿ ಖಾಲಿ ಖಾಲಿಯಾಗಿದೆ. ಇದಲ್ಲದ, ಉಳ್ಳಾಲದಲ್ಲಿ ಮುಸ್ಲಿಮರ ಮಾಲೀಕತ್ವದ ಶಾಲೆ, ಕಾಲೇಜುಗಳು ಕೂಡ ಬಂದ್ ಆಗಿವೆ.




ಮೀನು ವಹಿವಾಟಿಗೆ ಕೋಟ್ಯಂತರ ನಷ್ಟ
ಮಂಗಳೂರಿನ ಮೀನುಗಾರಿಕಾ ದಕ್ಕೆಯಲ್ಲಿ ಹಿಂದು- ಮುಸ್ಲಿಮರ ಬೋಟ್ ಗಳಿದ್ದರೂ, ದಕ್ಕೆಯಲ್ಲಿ ಮೀನು ಏಲಂ ವಹಿವಾಟು ನಡೆಸುವುದರಲ್ಲಿ ಮುಸ್ಲಿಮರದ್ದೇ ಎತ್ತಿದ ಕೈ. ಹೀಗಾಗಿ ಬೋಟ್ ಗಳು ಬಂದರೂ ಮೀನುಗಳನ್ನು ನಿಯಮಿತವಾಗಿ ಏಲಂ ನಡೆಸಲಾಗುತ್ತಿಲ್ಲ. ಅಲ್ಲದೆ, ಮೀನು ವ್ಯಾಪಾರದಲ್ಲಿ ಮುಸ್ಲಿಮರೇ ಹೆಚ್ಚಿರುವುದರಿಂದ ಮೀನು ವಹಿವಾಟು ಪೂರ್ತಿ ಸ್ತಬ್ಧ ಆಗುವಂತಾಗಿದೆ. ಮಂಗಳೂರಿನ ದಕ್ಕೆಯಲ್ಲಿ ಮುಸ್ಲಿಮರದ್ದೇ ಹೆಚ್ಚು ಬೋಟ್ ಇರುವುದು ಮತ್ತು ವ್ಯಾಪಾರಸ್ಥರು ಕೂಡ ಮುಸ್ಲಿಮರೇ ಹೆಚ್ಚಿದ್ದಾರೆ. ಇದರಿಂದಾಗಿ ಮುಸ್ಲಿಮರ ಮುಷ್ಕರದಿಂದ ಮಂಗಳೂರಿನಲ್ಲಿ ಮೀನು ವಹಿವಾಟಿಗೆ ದೊಡ್ಡ ಪೆಟ್ಟು ಬಿದ್ದಿದೆ.



ಮಂಗಳೂರು ನಗರ, ಉಳ್ಳಾಲ, ತೊಕ್ಕೊಟ್ಟು ಸೇರಿದಂತೆ ಮುಸ್ಲಿಮರ ಸಂಖ್ಯೆ ಹೆಚ್ಚಿರುವ ಕಡೆ ಮುಸ್ಲಿಮ್ ಆಟೋ ಚಾಲಕರು ಕೂಡ ತಮ್ಮ ಕರ್ತವ್ಯಕ್ಕೆ ಇಳಿದಿಲ್ಲ. ಹಿಜಾಬ್ ತೀರ್ಪು ವಿರೋಧಿಸಿ ತಮ್ಮ ಕೆಲಸ ಸ್ಥಗಿತಗೊಳಿಸಿದ್ದಾರೆ. ಉಳಿದಂತೆ, ಯಾವುದೇ ಮೆರವಣಿಗೆ, ಗಲಾಟೆ ನಡೆದಿಲ್ಲ. ಸ್ವಯಂಪ್ರೇರಿತವಾಗಿ ಮುಷ್ಕರ ನಡೆಸಿದ್ದು ಸಾತ್ವಿಕ ಸಿಟ್ಟನ್ನು ತೋರಿಸಿದ್ದಾರೆ.
Muslim organizations in the state have called for a day's state-wide bandh on Thursday March 17 in protest against the verdict delivered by the state high court in Hijab case. The organizations, which had fully supported the students who went to the high court against the insistence of the educational institutions which had barred the students with Hijabs from attending schools and colleges. The organizations are peeved over the high court order that mentions that the Holy Quran does not have mention about the wearing of the Hijabs.
28-08-26 09:35 pm
HK News Staffer
ವಾಲ್ಮೀಕಿ ನಿಗಮ ಹಗರಣ ಎಫೆಕ್ಟ್ ; ಕೊನೆಗೂ ಸಚಿವ ಸ್ಥಾ...
28-08-26 12:41 pm
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
28-08-26 08:57 pm
HK News Staffer
ಚೀರುಂಭಾ ಭಗವತಿ ತೀಯಾ ಸಮಾಜ ಸೇವಾ ಸಂಘದಲ್ಲಿ ಅವ್ಯವಹಾ...
28-08-26 02:11 pm
ಪಾಲ್ಘಾಟ್ ರೈಲ್ವೇಯಿಂದ ಮಂಗಳೂರು ಪ್ರತ್ಯೇಕವಾದರೆ ಕೇರ...
28-08-26 01:19 pm
G R Hospital, VHP, Mangalore: ಜಿ.ಆರ್ ಆಸ್ಪತ್ರೆ...
27-08-26 10:59 pm
ಕ್ಯಾನ್ಸರ್ ಹೋರಾಟದ ಮಧ್ಯೆ ದರ್ಶನ ಪಾತ್ರಿಗೆ 7ನೇ ನಮೋ...
27-08-26 08:26 pm
28-08-26 09:03 pm
HK News Staffer
ಮಧ್ಯಪ್ರದೇಶದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಬಸ್ ;...
28-08-26 07:40 pm
ತೆರಿಗೆ ಮೊತ್ತವನ್ನು 80 ಲಕ್ಷದಿಂದ 30 ಲಕ್ಷ ರೂ.ಗೆ ಇ...
28-08-26 06:22 pm
ಕಾನ್ಪುರದಲ್ಲಿ ತರಬೇತಿ ವಿಮಾನ ಪತನ ; ಉಡುಪಿ ಮೂಲದ 22...
28-08-26 04:17 pm
ಪುತ್ತೂರಿನ ದಾಖಲೆ ಸುಟ್ಟ ಪ್ರಕರಣ ; ನಾವು ಹಿಂದು- ಮು...
27-08-26 07:23 pm