ಬ್ರೇಕಿಂಗ್ ನ್ಯೂಸ್
23-12-21 12:00 pm Mangalore Correspondent ಕರಾವಳಿ
ಉಳ್ಳಾಲ, ಡಿ.23 : ಮಂಗಳೂರಲ್ಲಿ ಆಂಬುಲೆನ್ಸ್ ಸೇವೆಯಲ್ಲೇ ಎಲ್ಲರಿಗೂ ಪರಿಚಿತರಾಗಿದ್ದು ಮಾನವೀಯ ಸೇವಕರಾಗಿದ್ದ ಅತ್ತಾವರ ನಿವಾಸಿ ಗಂಗಾಧರ್ ಚೆಟ್ಟಿಯಾರ್(62) ಬುಧವಾರ ರಾತ್ರಿ ನಿಧನರಾಗಿದ್ದಾರೆ.
ಮೊನ್ನೆ ಗಂಗಾಧರ್ ಅವರು ಇದ್ದಕ್ಕಿದ್ದಂತೆ ವಾಂತಿ ಮಾಡಲಾರಂಭಿಸಿದ್ದು ತಕ್ಷಣ ಅವರನ್ನ ಫಳ್ನೀರಿನ ಹೈಲ್ಯಾಂಡ್ ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಿದ್ದು ಕರುಳು ನಿಷ್ಕ್ರಿಯಗೊಂಡ ಪರಿಣಾಮ ಗಂಗಾಧರ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.


ಮಂಗಳೂರಿನಲ್ಲಿ ಒಂದು ಆಂಬುಲೆನ್ಸ್ ಖರೀದಿಸಿ ಜನ ಸೇವೆ ಆರಂಭಿಸಿದ ಗಂಗಾಧರ್ ಅವರು ನಿನ್ನೆಯ ವರೆಗೆ 20 ಆಂಬುಲೆನ್ಸ್ ಗಳ ಮಾಲಕರಾಗಿದ್ದರು. ರಸ್ತೆ ಅಪಘಾತ, ಕೊಲೆ, ಆತ್ಮಹತ್ಯೆ, ರೈಲು ಅಪಘಾತ ಹೀಗೆ ಯಾವುದೇ ಪ್ರಕರಣ ನಡೆದಾಗಲೂ ಪೊಲೀಸ್ ಇಲಾಖೆ ಮೊದಲು ನೆನಪಿಸಿಕೊಳ್ಳುತ್ತಿದ್ದದ್ದೇ ಗಂಗಾಧರ್ ಅವರನ್ನ. ಕೊಲೆ, ಆತ್ಮಹತ್ಯೆ , ಅಪಘಾತ ನಡೆದ ಸ್ಥಳಗಳಿಗೆ ತಕ್ಷಣ ಗಂಗಾಧರ್ ಅವರು ಆಂಬುಲೆನ್ಸ್ ಸಮೇತ ಹಾಜರಾಗುತ್ತಿದ್ದರು. ಅಲ್ಲದೆ ರೈಲು ಅಪಘಾತಗಳಲ್ಲಿ ಛಿದ್ರಗೊಂಡಂತಹ ಮೃತದೇಹಗಳ ಭಾಗಗಳನ್ನ ಒಗ್ಗೂಡಿಸಿ ಆಂಬುಲೆನ್ಸಲ್ಲಿ ಒಯ್ಯುತ್ತಿದ್ದರು. ಆತ್ಮಹತ್ಯೆ, ಕೊಲೆಗಳಂತಹ ಪ್ರಕರಣಗಳು ನಡೆದಾಗ ಶವಗಳು ಕೊಳೆತು ನಾರುವ ಸ್ಥಿತಿಯಲ್ಲಿದ್ದರೂ ಅದನ್ನು ಒಯ್ದು ಮಾನವೀಯತೆಯ ಸೇವೆ ನೀಡುತ್ತಿದ್ದರು.

ಮಾನವೀಯ ಸೇವೆಯಲ್ಲೇ ಗಂಗಾಧರ್ ಅವರು ಹಂತ ಹಂತವಾಗಿ ಬೆಳೆದು 20 ಆಂಬುಲೆನ್ಸ್ ಗಳನ್ನ ಖರೀದಿಸಿ ಅದಕ್ಕೆ ಮಾನವೀಯ ಮೌಲ್ಯತೆಯುಳ್ಳ ಚಾಲಕರನ್ನೇ ನೇಮಿಸಿ ವ್ಯವಸ್ಥಿತವಾದ ಗಣೇಶ್ ಆಂಬುಲೆನ್ಸ್ ಸೇವೆಯನ್ನು ನೀಡುತ್ತಿದ್ದರು. ಗಂಗಾಧರ್ ಅವರ ಮಾನವೀಯ ಸೇವೆಯನ್ನು ದೇರಳಕಟ್ಟೆಯ ನಿಟ್ಟೆ ವಿಶ್ವವಿದ್ಯಾನಿಲಯ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ಗುರುತಿಸಿ ಗೌರವಿಸಿದ್ದವು. ಮೃತರ ಅಂತಿಮ ಸಂಸ್ಕಾರ ಇಂದು ಸಂಜೆ 3 ಗಂಟೆಗೆ ನಡೆಯಲಿದೆ ಎಂದು ಅವರ ಸಹೋದರ ತಿಳಿಸಿದ್ದಾರೆ. ಮೃತ ಗಂಗಾಧರ್ ಅವರು ಪತ್ನಿ ಚಿತ್ರ, ಪುತ್ರ ಪ್ರಸಾದ್, ಪುತ್ರಿ ಪಲ್ಲವಿಯನ್ನ ಅಗಲಿದ್ದಾರೆ.
Mangalore Sri Ganesh Ambulance Owner and Social worker Gangadhar Chettiar passes away at 62. Gangadhar who started with one ambulance is the owner of 20 vehicles. Ganagadhar would be present at crime, suicide and also at the railway tracks in lifting the dead bodies and shifting them to the government hospitals.
28-08-26 09:35 pm
HK News Staffer
ವಾಲ್ಮೀಕಿ ನಿಗಮ ಹಗರಣ ಎಫೆಕ್ಟ್ ; ಕೊನೆಗೂ ಸಚಿವ ಸ್ಥಾ...
28-08-26 12:41 pm
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
28-08-26 08:57 pm
HK News Staffer
ಚೀರುಂಭಾ ಭಗವತಿ ತೀಯಾ ಸಮಾಜ ಸೇವಾ ಸಂಘದಲ್ಲಿ ಅವ್ಯವಹಾ...
28-08-26 02:11 pm
ಪಾಲ್ಘಾಟ್ ರೈಲ್ವೇಯಿಂದ ಮಂಗಳೂರು ಪ್ರತ್ಯೇಕವಾದರೆ ಕೇರ...
28-08-26 01:19 pm
G R Hospital, VHP, Mangalore: ಜಿ.ಆರ್ ಆಸ್ಪತ್ರೆ...
27-08-26 10:59 pm
ಕ್ಯಾನ್ಸರ್ ಹೋರಾಟದ ಮಧ್ಯೆ ದರ್ಶನ ಪಾತ್ರಿಗೆ 7ನೇ ನಮೋ...
27-08-26 08:26 pm
28-08-26 09:03 pm
HK News Staffer
ಮಧ್ಯಪ್ರದೇಶದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಬಸ್ ;...
28-08-26 07:40 pm
ತೆರಿಗೆ ಮೊತ್ತವನ್ನು 80 ಲಕ್ಷದಿಂದ 30 ಲಕ್ಷ ರೂ.ಗೆ ಇ...
28-08-26 06:22 pm
ಕಾನ್ಪುರದಲ್ಲಿ ತರಬೇತಿ ವಿಮಾನ ಪತನ ; ಉಡುಪಿ ಮೂಲದ 22...
28-08-26 04:17 pm
ಪುತ್ತೂರಿನ ದಾಖಲೆ ಸುಟ್ಟ ಪ್ರಕರಣ ; ನಾವು ಹಿಂದು- ಮು...
27-08-26 07:23 pm