ಬ್ರೇಕಿಂಗ್ ನ್ಯೂಸ್
16-12-21 01:36 pm HK Desk news ಕರಾವಳಿ
ಉಡುಪಿ, ಡಿ.16 : ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಲು ರಾಜ್ಯ ಸರಕಾರ ತಯಾರಿ ನಡೆಸಿರುವಾಗಲೇ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಮೊದಲ ಹಂತದಲ್ಲಿ ಕ್ರಿಸ್ತಿಯನ್ನರಾಗಿ ಮತಾಂತರಗೊಂಡಿರುವ ಮಂದಿ ಹೆಚ್ಚು ಅಪಾಯಕಾರಿ ಎಂದು ವಿಶ್ಲೇಷಣೆ ಮಾಡಿದ್ದಾರೆ.
ಉಡುಪಿ ಕೃಷ್ಣ ಮಠದ ರಾಜಾಂಗಣದಲ್ಲಿ ಅದಮಾರು ಮಠದ ಪರ್ಯಾಯ ಹಿನ್ನೆಲೆಯ ವಿಶ್ವಾರ್ಪಣಂ ಕಾರ್ಯಕ್ರಮದಲ್ಲಿ ಬಿ.ಎಲ್.ಸಂತೋಷ್ ಈ ಮಾತು ಹೇಳಿದ್ದಾರೆ. ಹಿಂದು ಧರ್ಮದ ಪ್ರಸಕ್ತ ಸ್ಥಿತಿಗತಿ ವಿಚಾರದಲ್ಲಿ ಸಂತೋಷ್ ಉಪನ್ಯಾಸ ನೀಡಿದ್ದಾರೆ.
ಮತಾಂತರಗೊಂಡ ಕ್ರಿಸ್ತಿಯನ್ನರ ಪೈಕಿ ಮೊದಲ ತಲೆಮಾರು ಎರಡು ಮತ್ತು ಮೂರನೇ ಹಂತಕ್ಕಿಂತ ಹೆಚ್ಚು ಅಪಾಯಕಾರಿ. ಆಗಷ್ಟೇ ಮತಾಂತರಗೊಂಡ ಕ್ರಿಸ್ತಿಯನ್ನರು ನಮ್ಮ ಸುತ್ತಮುತ್ತ ಇದ್ದಾರೆ ಅಂದ್ರೆ, ನಮ್ಮ ಬಾಗಿಲಲ್ಲೇ ಅಪಾಯ ಇದೆಯೆಂದರ್ಥ. ನಮ್ಮ ಪರಿಸರದಲ್ಲಿ ಅಂತಹ ಕುಟುಂಬಗಳು ವಾಸವಿದ್ದರೆ ಅವರ ಬಗ್ಗೆ ಹೆಚ್ಚು ನಿಗಾ ಇಡಬೇಕು. ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಲಾಗುತ್ತಿದೆ. ಈ ಬಗ್ಗೆ ಸಿಎಂ ಬೊಮ್ಮಾಯಿ ಕೂಡ ಭರವಸೆ ನೀಡಿದ್ದಾರೆ. ಆದರೆ ಕಾನೂನು ಬಂದ ಮಾತ್ರಕ್ಕೆ ಸಮಸ್ಯೆ ನಿವಾರಣೆ ಆಗುವುದಿಲ್ಲ.
ಸಮಾಜದ ಪ್ರತೀ ಹಂತದ ಜನರು ಕೂಡ ಈ ಕಾಯ್ದೆ ಬಗ್ಗೆ ಜಾಗೃತರಾಗಬೇಕು. ಮತ್ತು ಮತಾಂತರ ವಿಚಾರದಲ್ಲಿ ಜಾಗೃತಿ ಹೊಂದಬೇಕು. ನಮ್ಮ ಹೆಣ್ಮಕ್ಕಳು ಲವ್ ಜಿಹಾದಿಗೆ ಬಲಿಯಾಗುತ್ತಿದ್ದಾರೆ. ಇಂಥ ಲವ್ ಜಿಹಾದಿ, ಮತಾಂತರಗಳ ಸಂಖ್ಯೆ ಸಮಾಜದಲ್ಲಿ ಹೆಚ್ಚುತ್ತಿದೆ ಅಂದ್ರೆ, ಎಚ್ಚರಿಕೆ ಗಂಟೆ ಅಂತಲೇ ಪರಿಗಣಿಸಬೇಕು ಎಂದು ಸಂತೋಷ್ ಹೇಳಿದರು.
ನಾವು ಕೃಷ್ಣ – ರಾಮನ ಹೆಸರೇಳಿಕೊಂಡ ಮಾತ್ರಕ್ಕೆ ಸಮಾಜದಲ್ಲಿ ಬದುಕಲು ಆಗುವುದಿಲ್ಲ. ಸರಿಯಾದ ಸಮಯಕ್ಕೆ ಏನೇನು ಕೆಲಸ ಆಗಬೇಕು, ಅದನ್ನು ನಾವು ಮಾಡಬೇಕು. ಜಾತಿ, ಜನಾಂಗ, ಭಾಷೆಯ ಭೇದ ಬಿಟ್ಟು ನಾವು ಒಗ್ಗಟ್ಟು ಹೊಂದಬೇಕು. ಪಾಶ್ಚಾತ್ಯ ಸಮಾಜ ನಮ್ಮ ಮೇಲೆ ಒಂದೇ ಭಾಷೆ, ಸಂಸ್ಕೃತಿ, ಪೋಷಾಕು ಶೈಲಿಯನ್ನು ಹೇರುವ ಮೂಲಕ ಪ್ರಾದೇಶಿಕ ಭಾವಕ್ಕೆ ಧಕ್ಕೆ ಉಂಟು ಮಾಡುತ್ತಿದೆ. ಈ ರೀತಿಯ ಏಕೀಕೃತ ವ್ಯವಸ್ಥೆಯ ಹೇರಿಕೆಯಿಂದ ನಮ್ಮ ಸಮಾಜಕ್ಕೆ ಅಪಾಯ ಹೆಚ್ಚು. ನಾವು ನಮ್ಮ ಮೂಲ ಸಂಸ್ಕೃತಿ ಮರೆಯಬಾರದು. ವಿದೇಶಿ ವಸ್ತುಗಳಿಗಿಂತ ನಮ್ಮ ಮನೆಯಲ್ಲಿರುವ ವಸ್ತುಗಳನ್ನು , ನಮ್ಮಲ್ಲೇ ಸಿಗುವ ವಸ್ತು-ಸಾಮಗ್ರಿಗಳನ್ನು ಬಳಸಲು ಒತ್ತು ಕೊಡಬೇಕು.
ಇತ್ತೀಚೆಗೆ ರೋಮ್ ದೇಶಕ್ಕೆ ಪ್ರಧಾನಿ ಮೋದಿ ತೆರಳಿದ್ದಾಗ, ಅಲ್ಲಿಯೂ ಯೋಗಕ್ಕೆ ಒತ್ತು ನೀಡಿದ್ದನ್ನು ಸ್ಮರಿಸಿದ ಸಂತೋಷ್, ಜಗತ್ತಿನಲ್ಲಿ ಹಿಂದು ಸಂಸ್ಕೃತಿಯನ್ನು ಅನುಕರಿಸುವುದು ಹೆಚ್ಚುತ್ತಿದೆ. ಹೆಚ್ಚೆಚ್ಚು ಜನರು ಹಿಂದುಯಿಸಂ ಬಗ್ಗೆ ಒಲವು ಹೊಂದಿ, ತಮ್ಮ ನಡೆ-ನುಡಿಯಲ್ಲಿ ಅನುಸರಿಸುತ್ತಿದ್ದಾರೆ. ನಮ್ಮ ನಂಬಿಕೆ, ಆಚರಣೆಗಳು ಬೇರೆಯವರಿಗೆ ತೊಂದರೆ ಕೊಡುವುದಿಲ್ಲ ಅನ್ನುವಾಗ ಬೇರೆಯವರ ನಂಬಿಕೆ, ಆಚರಣೆಗಳ ಬಗ್ಗೆಯೂ ನಮಗೆ ಸಮಸ್ಯೆ ಆಗುವುದಿಲ್ಲ ಎಂದು ಸಂತೋಷ್ ಹೇಳಿದರು.
ಉಡುಪಿ ಕೃಷ್ಣ ಮಠದ ಪರ್ಯಾಯ ಅದಮಾರು ಈಶಪ್ರಿಯ ಸ್ವಾಮೀಜಿ ಉಪಸ್ಥಿತರಿದ್ದರು.
The first generation Christians are much more dangerous than the second and third generations," said national general secretary of BJP, B L Santhosh. He was speaking at the ‘Vishwarpanam’, the concluding ceremony of Admaru Paryaya. Addressing the gathering on 'Current Affairs of Hindu Religion', Santhosh said, "If there are first generation of converted Christians, we need to understand that the danger is at our doors. They may be living in our surroundings, but we need to be vigilant about them.
28-08-26 09:35 pm
HK News Staffer
ವಾಲ್ಮೀಕಿ ನಿಗಮ ಹಗರಣ ಎಫೆಕ್ಟ್ ; ಕೊನೆಗೂ ಸಚಿವ ಸ್ಥಾ...
28-08-26 12:41 pm
ಮಹಿಳೆಯರು ಇಲ್ಲದ ಸಂಪುಟ ಅಪೂರ್ಣ, ಮಂತ್ರಿಗಿರಿ ಕೇಳಿಲ...
28-08-26 12:13 pm
Yadgir Prayer Meeting: ಯಾದಗಿರಿಯಲ್ಲಿ ಉಜ್ಜೀವನದ...
25-08-26 03:39 pm
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
27-08-26 12:39 pm
HK News Staffer
ಪುತ್ರಿಯ ಅಂತರ್ಜಾತಿ ವಿವಾಹ ; ಕಣ್ಣೂರು ಮುಚ್ಚಿಲೋಟ್...
26-08-26 06:41 pm
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
28-08-26 08:57 pm
HK News Staffer
ಚೀರುಂಭಾ ಭಗವತಿ ತೀಯಾ ಸಮಾಜ ಸೇವಾ ಸಂಘದಲ್ಲಿ ಅವ್ಯವಹಾ...
28-08-26 02:11 pm
ಪಾಲ್ಘಾಟ್ ರೈಲ್ವೇಯಿಂದ ಮಂಗಳೂರು ಪ್ರತ್ಯೇಕವಾದರೆ ಕೇರ...
28-08-26 01:19 pm
G R Hospital, VHP, Mangalore: ಜಿ.ಆರ್ ಆಸ್ಪತ್ರೆ...
27-08-26 10:59 pm
ಕ್ಯಾನ್ಸರ್ ಹೋರಾಟದ ಮಧ್ಯೆ ದರ್ಶನ ಪಾತ್ರಿಗೆ 7ನೇ ನಮೋ...
27-08-26 08:26 pm
28-08-26 09:03 pm
HK News Staffer
ಮಧ್ಯಪ್ರದೇಶದಲ್ಲಿ ಪ್ರಪಾತಕ್ಕೆ ಉರುಳಿ ಬಿದ್ದ ಬಸ್ ;...
28-08-26 07:40 pm
ತೆರಿಗೆ ಮೊತ್ತವನ್ನು 80 ಲಕ್ಷದಿಂದ 30 ಲಕ್ಷ ರೂ.ಗೆ ಇ...
28-08-26 06:22 pm
ಕಾನ್ಪುರದಲ್ಲಿ ತರಬೇತಿ ವಿಮಾನ ಪತನ ; ಉಡುಪಿ ಮೂಲದ 22...
28-08-26 04:17 pm
ಪುತ್ತೂರಿನ ದಾಖಲೆ ಸುಟ್ಟ ಪ್ರಕರಣ ; ನಾವು ಹಿಂದು- ಮು...
27-08-26 07:23 pm