ಬ್ರೇಕಿಂಗ್ ನ್ಯೂಸ್
10-08-25 01:01 pm Mangalore Correspondent ಕರಾವಳಿ
ಉಳ್ಳಾಲ, ಆ.10 : ಮನುಷ್ಯ ಸತ್ತ ಮೇಲೆ ದೇವಸ್ಥಾನದ ವಠಾರದಲ್ಲಿ ಹೂಳುವ ಕ್ರಮವು ಭಾರತೀಯ ಸಂಸ್ಕೃತಿಯಾಗಿದೆ. ಧರ್ಮಸ್ಥಳದ ಹೆಸರು ಹಾಳಾಗುತ್ತಿದ್ದರೂ ಪ್ರಧಾನಿ ಮೋದಿಯವರೇ ನೀವು ಏನು ಮಾಡುತ್ತಿದ್ದೀರಿ. ಮೋದಿಯವರೇ ಧೈರ್ಯ ತಾಕತ್ತಿದ್ದರೆ ಧರ್ಮಸ್ಥಳಕ್ಕೆ ಹೋಗಿ ನಿಂತು ಭಾಷಣ ಮಾಡಿ. ಶವ ಹೂಳುವುದು ದೇವಸ್ಥಾನಗಳಲ್ಲಿ ಮಾತ್ರವೇ.. ಮಸೀದಿ, ಚರ್ಚ್ ಗಳಲ್ಲೂ ಶವಗಳನ್ನ ಹೂತಿಲ್ಲವೇ ಎಂದು ಕೇಳಿ ಎಂದು ಮಾಜಿ ಕೇಂದ್ರ ಸಚಿವರೂ ಹಿರಿಯ ಕಾಂಗ್ರೆಸ್ ಮುಖಂಡರೂ ಆದ ಬಿ.ಜನಾರ್ಧನ ಪೂಜಾರಿ ಗುಡುಗಿದ್ದಾರೆ.
ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ತೊಕ್ಕೊಟ್ಟಿನ ಮುದ್ದುಕೃಷ್ಣ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ತೊಕ್ಕೊಟ್ಟು ಒಳಪೇಟೆಯ ಅಂಬೇಡ್ಕರ್ ಮೈದಾನದಲ್ಲಿ ಭಾನುವಾರ ನಡೆದ "ಮುದ್ದುಕೃಷ್ಣ -2025" ಕೃಷ್ಣ ವೇಷ ಸ್ಪರ್ಧೆಯನ್ನ ಉದ್ಘಾಟಿಸಿ ಅವರು ಮಾತನಾಡಿದರು.







ಧರ್ಮಸ್ಥಳ ಕ್ಷೇತ್ರಕ್ಕೆ ಅವಹೇಳನ ಆಗುತ್ತಿದ್ದರೂ ಪೂಜಾರಿ ಯಾಕೆ ಸುಮ್ಮನಿದ್ದಾರೆಂದು ಇಡೀ ದೇಶ, ಜಗತ್ತು ಕೇಳುತ್ತಾ ಇದೆ. ಹೆಗ್ಗಡೆಯವರೇ ಧರ್ಮಸ್ಥಳದ ಒಟ್ಟಿಗೆ ಇಡೀ ದೇಶ ಅಲ್ಲ, ಜಗತ್ತೇ ಇದೆ. ಕುದ್ರೋಳಿ ದೇವಸ್ಥಾನ ನಿರ್ಮಿಸುವಾಗ ಎಷ್ಟು ಕಷ್ಟ ಆಗಿದೆ. ದೇವಸ್ಥಾನವನ್ನ ನಡೆಸಲು ಎಷ್ಟೊಂದು ಕಷ್ಟ ಇದೆ ಅನ್ನೋದು ನನಗೆ ತಿಳಿದಿದೆ. ಹೆಗ್ಗಡೆಯವರೇ ನಿಮ್ಮ ಜೊತೆ ಪೂಜಾರಿ ಇದ್ದಾರೆ. ನಾನು ಕೂಡಾ ಧರ್ಮಸ್ಥಳದ ಭಕ್ತನಾಗಿದ್ದೇನೆ. ಧರ್ಮಸ್ಥಳವು ಧರ್ಮದ ಸ್ಥಳವಾಗಿದೆ. ಅದು ಜೈನರಿಗೆ ಮಾತ್ರ ಸೇರಿಲ್ಲ, ಜಗತ್ತಿಗೆ ಅದು ಹೆಮ್ಮೆಯ ಸ್ಥಳವಾಗಿದೆ. ಧರ್ಮಸ್ಥಳವನ್ನ ಹಾಳು ಮಾಡಲು ಯಮನಿಂದಲೂ ಸಾಧ್ಯವಿಲ್ಲ.
ಹಿಂದೂಗಳು ಮಾತ್ರವಲ್ಲ ಮುಸ್ಲಿಂ, ಕ್ರಿಶ್ಚಿಯನ್ನರು ಸತ್ತಾಗಲೂ ಶವಗಳನ್ನ ಮಸೀದಿ, ಚರ್ಚ್ ಗಳ ವಠಾರದಲ್ಲಿ ಹೂಳುವುದು ಅದು ಭಾರತೀಯ ಸಂಸ್ಕೃತಿಯಾಗಿದೆ.
ಶವಗಳನ್ನ ಹೂತಿಟ್ಟ ಆರೋಪದಲ್ಲಿ ಧರ್ಮಸ್ಥಳ ವಠಾರವನ್ನ ಎಸ್ ಐಟಿ ಯವರು ಅಗೆಯುತ್ತಿದ್ದಾರೆ. ಎಸ್ ಐಟಿಯವರು ಹುಡುಕಿದರೂ ಏನೂ ಸಿಕ್ಕಿಲ್ಲ, ಸಿಗೋದಿಲ್ಲ. ನೀವು ಎಷ್ಟು ಹುಡುಕಿದರೂ ಸಿಗುವುದಿಲ್ಲ. ಎಸ್ ಐಟಿಯವರೇ, ಮುಖ್ಯಮಂತ್ರಿಯವರೇ ಏನು ಮಾಡುತ್ತಿದ್ದೀರಿ ನೀವು. ಧರ್ಮಸ್ಥಳದ ಹೆಸರು ಹಾಳಾಗುತ್ತಿದ್ದರೂ ಯಾಕೆ ನೀವು ಬಾಯಿ ಬಿಡುವುದಿಲ್ಲ, ನಾಚಿಗೆ ಆಗುತ್ತಿದೆ ನನಗೆ. ದೇವಸ್ಥಾನವನ್ನು ಹಾಳು ಮಾಡುವಾಗ ಮಾತನಾಡುವ ಧೈರ್ಯ ನಿಮಗಿಲ್ಲ. ಆದರೆ ನಾನು ಮಾತನಾಡುತ್ತಿದ್ದೇನೆ. ಪೂಜಾರಿಯನ್ನ ಜೈಲಿಗೆ ಹಾಕಿದರೂ ಧರ್ಮಸ್ಥಳದ ಹೆಸರು ಹಾಳು ಮಾಡಲು ಬಿಡೋದಿಲ್ಲ ಎಂದು ಗುಡುಗಿದರು.
ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರಾದ ಸುರೇಶ್ ಭಟ್ನಗರ, ಮುದ್ದುಕೃಷ್ಣ ಸಾಂಸ್ಕೃತಿಕ ಟ್ರಸ್ಟ್ ಅಧ್ಯಕ್ಷರಾದ ಚಂದ್ರಕಾಂತ್ ಕ್ಲಿಕ್ ತೊಕ್ಕೊಟ್ಟು, ಉಪಾಧ್ಯಕ್ಷರಾದ ಸತೀಶ್ ದೀಪಂ, ಪ್ರಧಾನ ಕಾರ್ಯದರ್ಶಿ ಭವಿತ್ ಬಂಗೇರ, ಕಾರ್ಯಕ್ರಮ ಸಂಯೋಜಕ ಅಶೋಕ್ ಕ್ಲಿಕ್ ಮೊದಲಾದವರು ಉಪಸ್ಥಿತರಿದ್ದರು.
Former Union Minister and senior Congress leader B. Janardhan Poojary has strongly criticised the ongoing SIT investigation into allegations of human remains being buried in the Dharmasthala temple premises, calling it an insult to the sacred site.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
26-08-26 12:01 pm
HK News Staffer
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
25-08-26 09:37 pm
HK News Staffer
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರೊಫೆಸರ್, ಮಂಗಳೂ...
24-08-26 06:25 pm
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
26-08-26 11:26 am
HK News Staffer
ವಿಜಯಪುರದಲ್ಲಿ ಭೀಕರ ದುರಂತ ; ನಾಪತ್ತೆಯಾಗಿದ್ದ ಒಂದೇ...
26-08-26 11:23 am
ಚಿಕ್ಕಮಗಳೂರು ; ಟಿಪ್ಪು ಕಟೌಟ್ ಜೊತೆಗೆ ಮುಜಾಹಿದ್ ಹಾ...
25-08-26 10:39 pm
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm
ವಿಟ್ಲ ; ಈಜಲು ತೆರಳಿದ್ದ ಎಸ್ಸಿಡಿಸಿಸಿ ಬ್ಯಾಂಕ್...
25-08-26 12:46 pm