ಬ್ರೇಕಿಂಗ್ ನ್ಯೂಸ್
17-11-20 09:39 pm Mangaluru Crime Correspondent ಕರಾವಳಿ
ಉಳ್ಳಾಲ, ನವಂಬರ್ 17: ಕಳೆದ ವಾರವಷ್ಟೆ ಉಳ್ಳಾಲ ಕೋಟೆಪುರದ ಕಡಲ ತೀರದಲ್ಲಿ ನಡೆಯುತ್ತಿರುವ ಅಕ್ರಮ ಮರಳು ಧಂಧೆಯನ್ನು ವೀಡಿಯೋ ಸಹಿತ ಹೆಡ್ ಲೈನ್ ಕರ್ನಾಟಕ ವರದಿ ಮಾಡಿತ್ತು. ಇದೀಗ ಕೋಟೆಪುರದ ನದಿ ತೀರದಲ್ಲೂ ಮರಳು ಧಂಧೆ ರಾಜಾರೋಷವಾಗಿ ನಡೆಯುತ್ತಿರುವುದನ್ನು ಪತ್ತೆ ಮಾಡಿದೆ. ಈ ಬಗ್ಗೆ ಡಿಸಿಪಿಗೆ ಮಾಹಿತಿ ನೀಡಿದ್ದು, ಉಳ್ಳಾಲ ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ಧಂಧೆಕೋರರು ಎಸ್ಕೇಪ್ ಆಗಿದ್ದಾರೆ.
ಉಳ್ಳಾಲ ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲಿರುವ ಕೋಟೆಪುರ ವೃತ್ತದ ಬಲಗಡೆಯ ನದಿ ತೀರದಲ್ಲಿ ನಿತ್ಯವೂ ಲೋಡ್ ಗಟ್ಟಲೆ ಮರಳನ್ನು ಅಕ್ರಮವಾಗಿ ಟಿಪ್ಪರ್ ಲಾರಿಗೆ ತುಂಬಿಸಿ ಸಾಗಿಸಲಾಗುತ್ತಿದೆ. ಈ ಬಗ್ಗೆ ಸ್ಥಳದಿಂದಲೇ ಡಿಸಿಪಿ ಅರುಣಾಂಶು ಗಿರಿ ಅವರಿಗೆ ಫೋನ್ ಮಾಡಿ ವಿಚಾರ ತಿಳಿಸಲಾಗಿದೆ. ಅದರಂತೆ, ಒಂದು ಪಿಸಿಆರ್ ವಾಹನ ಕೋಟೆಪುರ ಸರ್ಕಲ್ ಕಡೆಗೆ ದೌಡಾಯಿಸಿದ್ದಲ್ಲದೆ, ಒಂದು ಸುತ್ತು ಹೊಡೆದು ಮತ್ತೆ ಠಾಣೆ ಕಡೆ ಹಿಂದಿರುಗಿದೆ. ಸ್ಥಳೀಯ ಪೊಲೀಸರೇ ಹೊಯ್ಗೆಯವರಿಗೆ ಮಾಹಿತಿ ನೀಡಿದರೋ ಏನೋ ಎನ್ನುವಂತೆ ಅಲ್ಲಿದ್ದ ಎರಡು ಟಿಪ್ಪರ್ ಗಳು ಕೋಟೆಪುರ ಒಳದಾರಿ ಮೂಲಕ ಕಾಲ್ಕಿತ್ತಿದೆ.
ಇದೇನು ಉಳ್ಳಾಲ ಪೊಲೀಸರಿಗೆ ತಿಳಿಯದೆ ಆಗುತ್ತಿರೋ ವ್ಯವಹಾರ ಏನಲ್ಲ. ಪೊಲೀಸರ ಎದುರಲ್ಲೇ ಟಿಪ್ಪರ್ ಲಾರಿಗಳಲ್ಲಿ ಮರಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ. ನದಿ ತೀರದಿಂದ ದೋಣಿಗಳಲ್ಲಿ ತಂದ ಮರಳನ್ನು ರಾಜಾರೋಷವಾಗಿ ಟಿಪ್ಪರ್ ಗೆ ಲೋಡ್ ಮಾಡಲಾಗುತ್ತದೆ. ಆದರೆ, ಈ ಬಗ್ಗೆ ಪೊಲೀಸರಿಗೆ, ಮೇಲಧಿಕಾರಿಗಳಿಗೆ ತಿಳಿಸಿದರೆ, ಅಲ್ಲಿಂದಲೇ ಹೊಯ್ಗೆ ಮಾಫಿಯಾಕ್ಕೆ ವಿಚಾರ ಹೋಗುತ್ತದೆ. ಕಳ್ಳನಿಗೆ ಪೊಲೀಸನೇ ಮಾಹಿತಿದಾರನಾದರೆ ಕಳ್ಳನ ಹಿಡಿಯೋದು ಸಾಧ್ಯವೇ ಎಂಬ ಪ್ರಶ್ನೆ ಸಾರ್ವಜನಿಕರದ್ದು. ಇದರ ಹಿಂದೆ ಬರೀಯ ಪೊಲೀಸರೇ ಇರೋದಾ, ಪೊಲೀಸರನ್ನು ಕುಣಿಸೋ ಆಡಳಿತ ಪಕ್ಷಗಳ ನಾಯಕರು ಕೂಡ ಇದ್ದಾರೆಯೇ ಎನ್ನುವ ಅನುಮಾನ ಮೂಡಿದೆ.
ಮರಳು ನೀತಿ ಜಾರಿಗೆ ತಡೆ ಯಾರು ?
ಸಾಮಾನ್ಯ ಜನರಿಗೆ ಮರಳು ಸಿಗದ ವಿಚಾರದಲ್ಲಿ ಸಂಸದರ ಬಳಿ ಇತ್ತೀಚೆಗೆ ಮರಳು ವ್ಯಾಪಾರಿಗಳೇ ಹೋಗಿದ್ದರಂತೆ. ಮರಳು ನೀತಿ ವಿಚಾರದಲ್ಲಿ ಜಿಲ್ಲಾಡಳಿತ ನಿರ್ಧಾರಕ್ಕೆ ಬರಬೇಕೆಂದು ಅಹವಾಲು ಮುಂದಿಟ್ಟಿದ್ದರಂತೆ. ಆದರೆ, ಈ ಬಗ್ಗೆ ಸಮಾಲೋಚಿಸಿ ನಿರ್ಧಾರ ಪ್ರಕಟಿಸುವ ಆಯಕಟ್ಟಿನಲ್ಲಿರುವ ವ್ಯಕ್ತಿಯೇ ತಿರುಗಿ ಬಿದ್ದು, ಮರಳು ವ್ಯಾಪಾರಿಗಳನ್ನು ಬೈದು ಕಳಿಸಿದ್ದರಂತೆ.. ಹೀಗೆ ಅಂತೆ ಕಂತೆಗಳನ್ನು ಬಿಜೆಪಿಯವರೇ ಹೇಳುತ್ತಿದ್ದು ಮರಳು ನೀತಿ ಜಾರಿಗೆ ಬರದಿರಲು ಅಡ್ಡಿಯಾಗಿರುವ ಕಾಣದ ಕೈಗಳ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಾರೆ.
The Headline Karnataka Team in Mangalore has exposed the illegal sand mining at Kotepura, Ullal, Mangalore. Though the Ullal police know about the illegal activity yet no action is been taken place.
07-05-25 04:07 pm
Bangalore Correspondent
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
Mysuru, Prison, Arrest, Siddaramaiah: ಬೆಳಗಾವಿ...
06-05-25 09:38 pm
ಓಬಳಾಪುರಂ ಅಕ್ರಮ ಮೈನಿಂಗ್ ಪ್ರಕರಣ ; ಮಾಜಿ ಸಚಿವ ಗಾಲ...
06-05-25 08:18 pm
Hubballi Accident, Sagara, Five Killed: ಹುಬ್ಬ...
06-05-25 01:35 pm
07-05-25 06:14 pm
HK News Desk
Kasaragod Toll, Kumbla: ತಲಪಾಡಿ – ಚೆರ್ಕಳ ಆರು ಪ...
07-05-25 12:20 pm
India strikes terror camps in Pak; ಪಾಕಿಸ್ತಾನದ...
07-05-25 09:54 am
ವಿಶ್ವಸಂಸ್ಥೆಯಲ್ಲಿ ಬೆತ್ತಲಾದ ಪಾಕ್ ; ಚೀನಾ ಬಿಟ್ಟು...
06-05-25 02:45 pm
ಭಾರತ - ಪಾಕ್ ಯುದ್ಧ ಸನ್ನಿವೇಶ ; ದೇಶಾದ್ಯಂತ ಮೇ 7ರಂ...
05-05-25 11:10 pm
07-05-25 03:36 pm
Mangalore Correspondent
Hindu Maha Sabha, Mangalore, Rajesh Pavitran:...
07-05-25 02:36 pm
Mangalore, Satish Kumapla, U T Khader: ಚಿಕ್ಕಮ...
06-05-25 06:36 pm
Suhas Shetty Murder, Bommai, Dinesh Gundurao:...
06-05-25 06:17 pm
Mangalore, Kodikere Loki Arrest: ಕಮ್ಯುನಲ್ ಕೇಸ...
06-05-25 04:02 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm