ಬ್ರೇಕಿಂಗ್ ನ್ಯೂಸ್
03-11-20 02:08 pm Mangalore Correspondent ಕರಾವಳಿ
ಮಂಗಳೂರು, ನವೆಂಬರ್ 03 : ದಕ್ಷಿಣ ಕನ್ನಡ ಜಿಲ್ಲೆಯ ಮೂಲದ ಸ್ವಾತಂತ್ರ್ಯ ಹೋರಾಟಗಾರ ಎಂ.ಡಿ.ಶ್ಯಾಮರಾವ್ (97) ಮಂಗಳವಾರ ಬೆಳಗ್ಗೆ ಶಿವಮೊಗ್ಗದಲ್ಲಿ ನಿಧನರಾಗಿದ್ದಾರೆ.
ಮೂಲತಃ ಬಂಟ್ವಾಳ ತಾಲೂಕಿನ ಬಿ.ಸಿ.ರೋಡಿನವರಾದ ಇವರು, ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದು, ಶಿವಮೊಗ್ಗದ ಮಗನ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಮೃತರು ಪತ್ನಿ, ಪುತ್ರ ಹಾಗೂ ಐವರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
ತಮ್ಮ ಜೀವಿತದ ಬಹುಕಾಲ ಶಿವಮೊಗ್ಗದಲ್ಲೇ ಕಳೆದಿದ್ದರೂ, ಮೂಲತಃ ಬಂಟ್ವಾಳ ತಾಲೂಕಿನ ಬಿ.ಸಿ.ರೋಡಿನವರು. ಕಲಿತದ್ದು 7ನೇ ತರಗತಿ ಆಗಿದ್ದರೂ ಕನ್ನಡ, ತಮಿಳು, ಹಿಂದಿ, ಇಂಗ್ಲಿಷ್, ತೆಲುಗು ಹೀಗೆ ಹಲವು ಭಾಷೆಗಳನ್ನು ಬಲ್ಲವರಾಗಿದ್ದರು.
ವಿದ್ಯಾರ್ಥಿ ದೆಸೆಯಿಂದಲೇ ಸ್ವಾತಂತ್ರ್ಯದ ಕಿಚ್ಚು ಹಚ್ಚಿಸಿದ್ದ ಶ್ಯಾಮರಾಯರು, ಬಾವುಟ ಹಿಡಿದು, ಜೈಕಾರ ಕೂಗುವುದು. ಕರಪತ್ರ ಹಂಚುವುದು ಹೀಗೆ ಸದ್ದಿಲ್ಲದೆ ಕ್ರಾಂತಿಕಾರಿ ಚಟುವಟಿಕೆಯಲ್ಲಿ ಗುರುತಿಸಿಕೊಂಡಿದ್ದರು. 1942ರ ಬಳಿಕ ಪೂರ್ಣ ಪ್ರಮಾಣದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು.
1923 ರಲ್ಲಿ ಬಂಟ್ವಾಳ ತಾಲೂಕಿನ ಬಿ ಮೂಡ ಗ್ರಾಮದಲ್ಲಿ ಜನಿಸಿದ್ದ ಶ್ಯಾಮರಾಯ ಆಚಾರ್ಯರು ಶಿವಮೊಗ್ಗದಲ್ಲಿ ಎಂ.ಡಿ.ಶ್ಯಾಮರಾವ್ ಎಂದೇ ಹೆಸರು ಗಳಿಸಿದ್ದರು. ಬಂಟ್ವಾಳದ ಮುಖ್ಯ ರಸ್ತೆಯ ಪಕ್ಕದಲ್ಲಿ ಇದ್ದ ತಮ್ಮ ಮನೆಯ ಮುಂದೆಯೇ ಹಾದು ಹೋಗುತ್ತಿದ್ದ ಸ್ವಾತಂತ್ರ್ಯ ಚಳವಳಿಗಾರರ ಪ್ರತಿಭಟನೆ, ಪಥ ಸಂಚಲನ ಸಣ್ಣ ವಯಸ್ಸಿನ ಶಾಮರಾಯರ ಮನಸ್ಸಿನಲ್ಲಿ ಸ್ವಾತಂತ್ರ್ಯ, ರಾಷ್ಟ್ರೀಯತೆ ಭಾವನೆ ಬೆಳೆಯುವಂತೆ ಮಾಡಿತ್ತು.
ಎಳೆಯದರಲ್ಲಿ ಸ್ನೇಹಿತರೊಂದಿಗೆ ಸೇರಿಕೊಂಡು ಬ್ರಿಟಿಷರ ದೂರವಾಣಿ ಲೈನ್ ಕಟ್ ಮಾಡುವುದು, ಚಳವಳಿಗಾರರಿಗೆ ಮಾಹಿತಿ ತಲುಪಿಸುವ ಸಂವಾಹಕನಾಗಿ ಕೆಲಸ ಮಾಡಿದ್ದರು. ಎಳವೆಯಲ್ಲೇ ಹುಡುಗನ ಕ್ರಾಂತಿಕಾರಿ ಕೆಲಸಗಳು, ಊರು ತುಂಬಾ ಹರಡಿ ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಯ್ತು. ವಿಷಯ ಬಳಿಕ ತಂದೆಯ ಗಮನಕ್ಕೆ ಬಂದು ಗದರಿದ್ದರಿಂದ ಊರನ್ನೇ ಬಿಟ್ಟು ಹೋಗಿದ್ದ ಶ್ಯಾಮರಾಯರು, ಶಿವಮೊಗ್ಗದಲ್ಲಿ ನೆಲೆಸಿದ್ದರು. ಚಳವಳಿಗಾರರ ಜೊತೆ ಮೂರ್ನಾಲ್ಕು ದಿನ ನಡೆದುಕೊಂಡೇ ಗೌಪ್ಯವಾಗಿ ಶಿವಮೊಗ್ಗ ತಲುಪಿದ್ದರು. ಬಳಿಕ ಕುಟುಂಬದಿಂದ ದೂರ ಉಳಿದುಕೊಂಡೇ ಸ್ವಾತಂತ್ರ್ಯ ಚಳುವಳಿಯಲ್ಲಿ ತಮ್ಮನ್ನು ತೊಡಗಿಸಿಕೊಂಡರು.
ಅಂದಿನ ಕಾಂಗ್ರೆಸ್ ಸೇವಾದಳಕ್ಕೆ ಸೇರಿ ವಿವಿಧೆಡೆ ನಡೆಯುವ ಚಳುವಳಿಗಳ ಆಯೋಜನೆಗಳಲ್ಲಿ ಸಹಾಯ ಮಾಡತೊಡಗಿದ್ದರು. ಈ ವೇಳೆ, ಅನೇಕ ಮಹನೀಯರ ಒಡನಾಟ ಶ್ಯಾಮರಾಯರಿಗೆ ದೊರಕಿತು. ಗೋಪಾಲ ಗೌಡರು, ರವಳಪ್ಪ, ದೊರೆಸ್ವಾಮಿ ಅಯ್ಯಂಗಾರ್, ಪೊನ್ನಮ್ಮ, ಎಂ.ಪಿ. ಈಶ್ವರಪ್ಪ, ಲಾಯರ್ ಸಿದ್ದಯ್ಯ, ನಾಗಪ್ಪ ಶೆಟ್ಟಿ, ಖಾದಿ ಶಂಕರಪ್ಪ ಮುಂತಾದವರ ಒಡನಾಟ ಸಿಕ್ಕಿತ್ತು. ಈ ನಡುವೆ, 1946 ರಲ್ಲಿ ಬಂಧಿತರಾಗಿ ಶಿವಮೊಗ್ಗದ ಜೈಲಿನಲ್ಲಿ 2 ತಿಂಗಳ ಕಾಲ ಜೈಲು ಶಿಕ್ಷೆಗೂ ಒಳಗಾದರು.
ಸ್ವಾತಂತ್ರ್ಯ ಬಳಿಕ ಗಾಂಧೀಜಿ ಪ್ರೇರಣೆಯಂತೆ ಸೇವಾ ಚಟುವಟಿಕೆಗಳಲ್ಲಿ ತೊಡಗಿದ್ದರು. ಹಿಂದಿ ಕಲಿತು, ಹಿಂದಿಯನ್ನು ದೇಶದ ಸಂಪರ್ಕ ಭಾಷೆ ಮಾಡುವ ಗಾಂಧೀಜಿಯವರ ಕನಸನ್ನು ಈಡೇರಿಸಲು ಓಡಾಡಿದರು. ಶಿವಮೊಗ್ಗದಲ್ಲಿ ಲ ಗಾಂಧಿ ಮಂದಿರ ಸ್ಥಾಪಿಸಿ, ಸಾವಿರಾರು ಜನರಿಗೆ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಮೂಲಕ ಯಾವುದೇ ಶುಲ್ಕವಿಲ್ಲದೇ ಹಿಂದಿ ಪಾಠ ಮಾಡಿದರು.
1960 ರಲ್ಲಿ ರಾಜೀವಿ ಎಂಬವರನ್ನು ಮದುವೆಯಾಗಿ ಜೀವನ ನಡೆಸಲು ಟೈಪ್ ರೈಟರ್ ರಿಪೇರಿ, ವೈದ್ಯಕೀಯ ಉಪಕರಣಗಳ ರಿಪೇರಿ ಕೆಲಸಗಳನ್ನು ಮಾಡತೊಡಗಿದ್ದರು. ಬಾಂಬೆ ಮತ್ತು ಬೆಂಗಳೂರಿನಿಂದ ತಂತ್ರಜ್ಞರು ಬರ ಬೇಕಾಗಿದ್ದ ಸಂಧರ್ಭದಲ್ಲಿ ಅವರ ಕೆಲಸಗಳನ್ನು ಸ್ವತಃ ಕಲಿತು, ಕೆಲಸ ಮಾಡಿದ್ದು ಜನರ ಪ್ರೀತಿ ಗಳಿಸಲು ನೆರವಾಗಿತ್ತು.
ಅಂಬರ ಚರಕದಲ್ಲಿ ನೂಲು ತೆಗೆಯುವುದನ್ನು ಅರಿತಿದ್ದ ಶ್ಯಾಮರಾಯರು, ಮನೆ ಮನೆಗೆ ತೆರಳಿ ಚರಕದಿಂದ ಇವರು ನೂಲು ತೆಗೆಯುವುದನ್ನು ಜನರಿಗೆ ಕಲಿಸುತ್ತಿದ್ದರು. ಚಿನ್ನದ ಕೆಲಸದಲ್ಲೂ ವಿಶೇಷ ಪ್ರಾವಿಣ್ಯತೆ ಹೊಂದಿದ್ದರು. ಹೋರಾಟದ ದಿನಗಳಲ್ಲಿ ರಾತ್ರಿ ಹೊತ್ತು ತನ್ನ ಅಣ್ಣ ಪುಟ್ಟಣ್ಣ ಆಚಾರ್ ರೊಂದಿಗೆ ಚಿನ್ನದ ಕೆಲಸ ಮಾಡಿಕೊಂಡಿದ್ದರೆಂದು ಹಿರಿಯರು ನೆನಪಿಸಿಕೊಳ್ಳುತ್ತಾರೆ.
M D Shyamarao (97) from Bantwal, who had actively participated in the freedom movement, breathed his last on Tuesday November 3 morning. His end came at the Metro Hospital, Shivamogga.
06-05-25 11:23 pm
Bangalore Correspondent
Mysuru, Prison, Arrest, Siddaramaiah: ಬೆಳಗಾವಿ...
06-05-25 09:38 pm
ಓಬಳಾಪುರಂ ಅಕ್ರಮ ಮೈನಿಂಗ್ ಪ್ರಕರಣ ; ಮಾಜಿ ಸಚಿವ ಗಾಲ...
06-05-25 08:18 pm
Hubballi Accident, Sagara, Five Killed: ಹುಬ್ಬ...
06-05-25 01:35 pm
Hassan Suicide, Police Constable Harrasment:...
05-05-25 01:30 pm
06-05-25 02:45 pm
HK News Desk
ಭಾರತ - ಪಾಕ್ ಯುದ್ಧ ಸನ್ನಿವೇಶ ; ದೇಶಾದ್ಯಂತ ಮೇ 7ರಂ...
05-05-25 11:10 pm
ಪಾಕ್ ವಾಯು ಪ್ರದೇಶದಲ್ಲಿ ಭಾರತದ ವಿಮಾನಗಳಿಗೆ ನಿರ್ಬಂ...
30-04-25 06:59 pm
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
06-05-25 06:36 pm
Mangalore Correspondent
Suhas Shetty Murder, Bommai, Dinesh Gundurao:...
06-05-25 06:17 pm
Mangalore, Kodikere Loki Arrest: ಕಮ್ಯುನಲ್ ಕೇಸ...
06-05-25 04:02 pm
Suhas Shetty Murder, Mangalore, Police: ಅಹಿತಕ...
06-05-25 12:32 pm
Mangalore Police, Sharan Pumpwell: ದಕ್ಷಿಣ ಕನ್...
05-05-25 10:59 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm