ಬ್ರೇಕಿಂಗ್ ನ್ಯೂಸ್
01-11-20 08:59 pm Mangaluru Correspondent ಕರಾವಳಿ
ಮಂಗಳೂರು, ನ.1: ಪ್ರತ್ಯೇಕ ತುಳು ರಾಜ್ಯಕ್ಕಾಗಿ ಬಾಂಬ್ ಸ್ಫೋಟ ಮಾಡಿ ಜನರನ್ನು ಪ್ರಚೋದಿಸಬೇಕೆಂದು ತುಳು ಸಾಹಿತ್ಯ ಅಕಾಡಮಿ ಅಧ್ಯಕ್ಷ ದಯಾನಂದ ಕತ್ತಲ್ಸಾರ್ ಹೇಳುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತೀವ್ರ ಚರ್ಚೆಗೆ ಕಾರಣವಾಗಿದೆ.
ಪ್ರತ್ಯೇಕ ತುಳು ರಾಜ್ಯಕ್ಕಾಗಿ ಹೋರಾಟ ಭುಗಿಲೇಳಬೇಕು. ಇದಕ್ಕಾಗಿ ದೊಡ್ಡ ಮಟ್ಟದಲ್ಲಿ ‘ಬ್ಲಾಸ್ಟ್’ ಮಾಡಬೇಕು. ಟಯರ್ಗಳಿಗೆ ಬೆಂಕಿ ಹಚ್ಚಬೇಕು. ಡಿ.ವಿ.ಸದಾನಂದ ಗೌಡ, ನಳಿನ್ ಕುಮಾರ್ ಕಟೀಲು ಸೇರಿದಂತೆ ರಾಜಕೀಯ ನಾಯಕರಿಗೆಲ್ಲ ಹಿಗ್ಗಾಮುಗ್ಗ ಬೈಯ್ಯಬೇಕು ಎಂದು ಹೇಳುತ್ತಿರುವುದು ಆಡಿಯೋದಲ್ಲಿದೆ. ತುಳುವಿನಲ್ಲಿ ಯಾರೊಂದಿಗೋ ಮಾತನಾಡುತ್ತಿರುವ ವೇಳೆ ಈ ಆಡಿಯೋ ರೆಕಾರ್ಡ್ ಮಾಡಲಾಗಿದ್ದು ಉದ್ದೇಶಪೂರ್ವಕ ಇದನ್ನು ರೆಕಾರ್ಡ್ ಮಾಡಿ ಜಾಲತಾಣದಲ್ಲಿ ಬಿಡಲಾಗಿದೆ. ರಾಜ್ಯದ ಮೂಲೆ ಮೂಲೆಯಲ್ಲಿ ತುಳು ರಾಜ್ಯಕ್ಕಾಗಿ ಹೋರಾಟ ಆದಲ್ಲಿ ಅಕಾಡಮಿಯವರನ್ನು ಕರೆದು ಸರಕಾರದ ಕಡೆಯಿಂದ ಮಾತುಕತೆ ನಡೆಸುತ್ತಾರೆ. ಆಗ ನಾವು ಹೋರಾಟಗಾರರನ್ನು ಸಮಾಧಾನಿಸಲು ಬೇರೆ ದಾರಿ ಇಲ್ಲ. ತುಳು ರಾಜ್ಯ ಘೋಷಣೆಯೇ ಮಾಡಬೇಕು ಎಂದು ಹೇಳಬಹುದು. ಹೀಗೆಂದು ದಯಾನಂದ್ ಕತ್ತಲ್ಸಾರ್ ಮಾತನಾಡಿದ್ದಾರೆ ಎನ್ನಲಾಗುವ ಆಡಿಯೋ ಇದ್ದು ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ಕೇಳಿಬಂದಿದೆ.
ಸರಕಾರದ ಅಕಾಡಮಿಯ ಅಧ್ಯಕ್ಷರಾಗಿರುವ ವ್ಯಕ್ತಿಯೊಬ್ಬರು ಹೀಗೆ ಹಿಂಸೆಗೆ ಪ್ರಚೋದಿಸುವ ರೀತಿ ಹೇಳಿಕೆ ನೀಡಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ದಯಾನಂದ ಕತ್ತಲ್ಸಾರ್, ಅದು ತನ್ನದೇ ಆಡಿಯೋ.. ಆದರೆ ಅದನ್ನು ಉದ್ದೇಶಪೂರ್ವಕ ಎಡಿಟ್ ಮಾಡಿ ಬಿಡಲಾಗಿದೆ. ಇದು ನನ್ನ ತೇಜೋವಧೆ ಮಾಡುವ ಪ್ರಯತ್ನ ಎಂದು ಹೇಳಿದ್ದಾರೆ.
ತಾನೇ ವೈರಲ್ ಮಾಡಿದ್ದಾಗಿ ಹೇಳಿಕೆ !
ಇದೇ ವೇಳೆ, ಆಡಿಯೋ ಪ್ರಸಾರವನ್ನು ತಾನೇ ಮಾಡಿದ್ದಾಗಿ ತುಳುನಾಡು ಟ್ರಸ್ಟ್ ಅಧ್ಯಕ್ಷ ಜಿ.ವಿ.ಎ ಸ್.ಉಳ್ಳಾಲ್ ಎಂಬವರು ಹೇಳಿದ್ದಾರೆ. ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ದಯಾನಂದ ಕತ್ತಲ್ಸಾರ್, ತುಳುನಾಡು ಸ್ಥಾಪನೆಗಾಗಿ ಈ ರೀತಿ ಪ್ರಚೋದನಾತ್ಮಕವಾಗಿ ನನ್ನ ಜೊತೆಯೇ ಮಾತನಾಡಿದ್ದು. ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿ ಹೀಗೆ ಮಾತನಾಡುವುದು ಸರಿಯಲ್ಲ. ಇದೇ ಕಾರಣಕ್ಕೆ ಈ ಮಾತುಕತೆಯ ಆಡಿಯೋವನ್ನು ವೈರಲ್ ಮಾಡಿದ್ದೇನೆ ಎಂದು ಜಿ.ವಿ.ಎಸ್.ಉಳ್ಳಾಲ್ ತಿಳಿಸಿದ್ದಾರೆ.
ತುಳು ಲಿಪಿ ವಿಚಾರವಾಗಿ ದಯಾನಂದ ಕತ್ತಲ್ಸಾರ್ ಅವರನ್ನು ಭೇಟಿಯಾಗಿದ್ದೆ. ಈ ವೇಳೆ ಮಾಹಿತಿಗಾಗಿ ಅವರ ಮಾತುಗಳನ್ನು ರೆಕಾರ್ಡ್ ಮಾಡಿಕೊಂಡಿದ್ದೆ. ಕತ್ತಲ್ಸಾರ್ ಮಾತನಾಡುತ್ತಾ, ಪ್ರತ್ಯೇಕ ತುಳು ರಾಜ್ಯಕ್ಕಾಗಿ ತುಳುನಾಡು ಟ್ರಸ್ಟ್ ಮೂಲಕ ಹಿಂಸೆಗೆ ಇಳಿಯುವಂತೆ ಹೇಳಿದ್ದರು ಎಂದಿದ್ದಾರೆ.
Tulu Academy President Dayananda Kathalsar lands in trouble for controversial statement of stating to Blast Managluru to make it a complete Tulu speaking District. Audio of this has gone viral on social media.
06-05-25 09:38 pm
HK News Desk
ಓಬಳಾಪುರಂ ಅಕ್ರಮ ಮೈನಿಂಗ್ ಪ್ರಕರಣ ; ಮಾಜಿ ಸಚಿವ ಗಾಲ...
06-05-25 08:18 pm
Hubballi Accident, Sagara, Five Killed: ಹುಬ್ಬ...
06-05-25 01:35 pm
Hassan Suicide, Police Constable Harrasment:...
05-05-25 01:30 pm
ಅಲ್ಲೊಂದು, ಇಲ್ಲೊಂದು ಕೊಲೆ ಆಗತ್ತೆ, ಅದನ್ಯಾಕೆ ಧರ್ಮ...
04-05-25 09:55 pm
06-05-25 02:45 pm
HK News Desk
ಭಾರತ - ಪಾಕ್ ಯುದ್ಧ ಸನ್ನಿವೇಶ ; ದೇಶಾದ್ಯಂತ ಮೇ 7ರಂ...
05-05-25 11:10 pm
ಪಾಕ್ ವಾಯು ಪ್ರದೇಶದಲ್ಲಿ ಭಾರತದ ವಿಮಾನಗಳಿಗೆ ನಿರ್ಬಂ...
30-04-25 06:59 pm
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
06-05-25 06:36 pm
Mangalore Correspondent
Suhas Shetty Murder, Bommai, Dinesh Gundurao:...
06-05-25 06:17 pm
Mangalore, Kodikere Loki Arrest: ಕಮ್ಯುನಲ್ ಕೇಸ...
06-05-25 04:02 pm
Suhas Shetty Murder, Mangalore, Police: ಅಹಿತಕ...
06-05-25 12:32 pm
Mangalore Police, Sharan Pumpwell: ದಕ್ಷಿಣ ಕನ್...
05-05-25 10:59 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm