ಬ್ರೇಕಿಂಗ್ ನ್ಯೂಸ್
13-10-20 06:02 pm Mangalore Correspondent ಕರಾವಳಿ
ಮಂಗಳೂರು, ಅಕ್ಟೋಬರ್ 13: ಆತ ಓದಿದ್ದು ದೂರದ ಲಂಡನ್ ನಗರದ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ. ಆದರೆ ಕೊನೊನಾ ಲಾಕ್ಡೌನ್, ಸೂಕ್ತ ಅವಕಾಶ ಲಭಿಸದ ಕಾರಣ ಉದ್ಯೋಗ ಇಲ್ಲದಾಗಿತ್ತು. ಈ ನಡುವೆ, ಒಲಿದು ಬಂದ ಅವಕಾಶವೂ ಕೈತಪ್ಪಿ ಹೋಯ್ತು. ಹಾಗೆಂದು ಯುವಕ ಎದೆಗುಂದಲಿಲ್ಲ. ಪ್ರಧಾನಿ ಮೋದಿ ಮಾತಿನಂತೆ ಆತ್ಮ ನಿರ್ಭರನಾಗಲು ಹೊರಟ ಯುವಕ ಈಗ ಮಂಗಳೂರಿನಲ್ಲಿ ಫುಲ್ ಟೈಮ್ ಮೀನು ವ್ಯಾಪಾರಿಯಾಗಿ ಸುದ್ದಿಯಾಗಿದ್ದಾನೆ.
ಲಂಡನ್ ನಗರದ ಕೊವೆಂಟ್ರಿ ವಿಶ್ವವಿದ್ಯಾಲಯದಲ್ಲಿ ಬಿಐಎಂ ಹಾಗೂ ಪ್ರೊಡಕ್ಷನ್ ಮ್ಯಾನೇಜ್ಮೆಂಟಿನಲ್ಲಿ ಎಂಎಸ್ಸಿ ಪದವಿ ಪೂರೈಸಿದ ಮಂಗಳೂರಿನ ಬಿಕರ್ನಕಟ್ಟೆಯ ವರುಣ್ ಶೇಣವ, ನಂತೂರು ಬಳಿಯ ಬಿಕರ್ನಕಟ್ಟೆಯ ರಸ್ತೆ ಬದಿಯಲ್ಲಿ ಕಡಲ್ ಎನ್ನುವ ಮೀನು ವ್ಯಾಪಾರದ ಶಾಪ್ ಹಾಕಿದ್ದಾರೆ. ಈ ಮೂಲಕ ಸ್ವಾವಲಂಬನೆಯತ್ತ ಹೆಜ್ಜೆ ಇಟ್ಟಿದ್ದಾರೆ.
ಕಳೆದ ವರ್ಷವಷ್ಟೇ ಲಂಡನ್ನಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ ಬಂದಿದ್ದ ವರುಣ್, ಸಂಬಂಧಿಕರು ತೀರಿಕೊಂಡ ಕಾರಣಕ್ಕೆ ಊರಲ್ಲೇ ಉಳಿದುಕೊಂಡಿದ್ದರು. ಹೀಗಾಗಿ, ಲಂಡನ್ನಲ್ಲಿ ದೊರೆತಿದ್ದ ಉದ್ಯೋಗದ ಅವಕಾಶಕ್ಕೂ ತೆರಳಲು ಸಾಧ್ಯವಾಗಿರಲಿಲ್ಲ. ಆಬಳಿಕ ಬೆಂಗಳೂರಿನ ನಿರ್ಮಾಣ ಸಂಸ್ಥೆಯೊಂದು ಉದ್ಯೋಗದ ಸಂದರ್ಶನಕ್ಕಾಗಿ ಆಹ್ವಾನಿಸಿತ್ತು. ಆದರೆ, ಲಾಕ್ಡೌನ್ ಕಾರಣದಿಂದಾಗಿ ಸಂದರ್ಶನಕ್ಕೆ ಹಾಜರಾಗುವುದಕ್ಕೂ ಆಗಿರಲಿಲ್ಲ. ಇದರಿಂದ ಸುದೀರ್ಘ ಆರು ತಿಂಗಳ ಕಾಲ ಲಾಕ್ಡೌನ್ ಕಾರಣ ಉದ್ಯೋಗವಿಲ್ಲದೇ ಇರಬೇಕಾಯಿತು. ಈ ನಡುವೆ, ಸ್ನೇಹಿತರ ಜೊತೆ ಚರ್ಚಿಸಿ, ಉದ್ಯೋಗಕ್ಕೆ ಯಾವುದಾದರೇನು ಎಂದು ವರುಣ್ ಮೀನು ವ್ಯಾಪಾರಕ್ಕಿಳಿದಿದ್ದಾರೆ.
ಸುಮಾರು 4 ಲಕ್ಷ ಬಂಡವಾಳ ಹೂಡಿ, ಫ್ರೀಝರ್, ಶಾಪ್ ರೆಡಿ ಮಾಡಿದ ಫುಲ್ ಟೈಮ್ ಮೀನು ವ್ಯಾಪಾರಕ್ಕೆ ಇಳಿದಿರುವ ವರುಣ್ ಸಾಹಸಕ್ಕೆ ಗೆಳೆಯರು, ಹಿತೈಷಿಗಳು ಪ್ರೋತ್ಸಾಹ ನೀಡಿದ್ದಾರೆ. ಕೆಲಸಕ್ಕೆ ಇಬ್ಬರು ಯುವಕರನ್ನು ನೇಮಿಸಿಕೊಂಡಿದ್ದಾರೆ. ಜೊತೆಗೆ, ನಗರದ ಒಳಗೆ ಯಾರಾದ್ರೂ ಮೀನಿನ ಬೇಡಿಕೆ ಹೇಳಿಕೊಂಡರೆ ಉಚಿತವಾಗಿ ಮೀನು ತಲುಪಿಸುತ್ತಾರೆ. ಮೀನನ್ನು ಕ್ಲೀನ್ ಮಾಡಲು ಕೇಳಿಕೊಂಡಲ್ಲಿ ಅದನ್ನೂ ರೆಡಿ ಮಾಡಿಸಿ, ಪೂರೈಸುತ್ತಾರೆ. ಒಟ್ಟಿನಲ್ಲಿ ಲಂಡನ್ನಲ್ಲಿ ಕಲಿತ ಯುವಕ ಈಗ ಫುಲ್ ಟೈಮ್ ಮೀನು ವ್ಯಾಪಾರಿಯಾಗಿ ಸುದ್ದಿಯಾಗಿದ್ದಾನೆ.
Varun from Mangalore who has done his Masters in Construction Management in the United Kingdom (UK) has started a fish business at due to covid lockdown in India.
05-05-25 01:30 pm
HK News Desk
ಅಲ್ಲೊಂದು, ಇಲ್ಲೊಂದು ಕೊಲೆ ಆಗತ್ತೆ, ಅದನ್ಯಾಕೆ ಧರ್ಮ...
04-05-25 09:55 pm
ಸಿಇಟಿ ಬಳಿಕ ನೀಟ್ ಪರೀಕ್ಷೆಗೂ ಜನಿವಾರಕ್ಕೆ ಕತ್ತರಿ !...
04-05-25 09:26 pm
ಹಿಮಾಲಯ - ದೆಹಲಿಗೆ ಸುನಾಮಿ, ಮಹಾನ್ ನಾಯಕರ ದುರ್ಮರಣ...
04-05-25 09:15 pm
Bangalore Girl Naked, HSR Layout: ಬೆಂಗಳೂರಿನಲ್...
04-05-25 02:27 pm
05-05-25 11:10 pm
HK News Desk
ಪಾಕ್ ವಾಯು ಪ್ರದೇಶದಲ್ಲಿ ಭಾರತದ ವಿಮಾನಗಳಿಗೆ ನಿರ್ಬಂ...
30-04-25 06:59 pm
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
05-05-25 10:59 pm
Mangalore Correspondent
Suhas Shetty murder, MP Brijesh Chowta, Param...
05-05-25 10:43 pm
Mangalore Suhas Shetty murder, BJP Umanath Ko...
05-05-25 07:15 pm
MLA Harish Poonja, Dinesh Gundurao: ಬುರ್ಖಾಧಾರ...
05-05-25 05:10 pm
Suhas Shetty Murder, VHP, Bajpe Police: ಸುಹಾಸ...
05-05-25 03:24 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm