ಬ್ರೇಕಿಂಗ್ ನ್ಯೂಸ್
27-01-26 03:21 pm Mangaluru Staffer ಕ್ರೈಂ
ಮಂಗಳೂರು, ಜ.27: ನಿಮ್ಮ ಕ್ರೆಡಿಟ್ ಕಾರ್ಡ್ ಮೇಲೆ ಬೋನಸ್ ಬಂದಿದೆ ಎಂದು ಸೈಬರ್ ವಂಚಕರು ಹಿರಿಯ ನಾಗರಿಕರೊಬ್ಬರಿಗೆ ಕರೆ ಮಾಡಿದ್ದು ಅದನ್ನು ನಂಬಿದ ವ್ಯಕ್ತಿ ವಂಚಕರಿಗೆ ಒಟಿಪಿ ನಂಬರ್ ನೀಡಿ 3 ಲಕ್ಷಕ್ಕೂ ಹೆಚ್ಚು ಹಣ ಕಳೆದುಕೊಂಡಿದ್ದಾರೆ.
ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇವರ ಮೊಬೈಲಿಗೆ ಅಪರಿಚಿತರು (ಮೊಬೈಲ್ ನಂಬ್ರ-9582276944) ಕರೆ ಮಾಡಿದ್ದು, ಈ ವೇಳೆ ಕ್ರೆಡಿಟ್ ಕಾರ್ಡ್ ಬೋನಸ್ ಬಂದಿದೆ, ಅದನ್ನು ಪಡೆದುಕೊಳ್ಳಲು ನಾವು ಕಳಿಸಿರುವ ಎಪಿಕೆ ಫೈಲ್ ಮೂಲಕ ಏಪ್ ಡೌನ್ಲೋಡ್ ಮಾಡಲು ಹೇಳಿದ್ದಾರೆ. ಬಳಿಕ ಸೈಬರ್ ವಂಚಕರು ಬೋನಸ್ ಡೆಪಾಸಿಟ್ ಮಾಡಲು ಎಟಿಎಂ ಕಾರ್ಡ್ ನಂಬ್ರ ತಿಳಿಸಲು ಹೇಳಿದ್ದಾರೆ. ಅದರಂತೆ ವ್ಯಕ್ತಿ ಕಾರ್ಡ್ ನಂಬರ್ ತಿಳಿಸಿದ್ದು ಕೆಲ ಸಮಯದ ನಂತರ ಮತ್ತೊಂದು (ಮೊಬೈಲ್ ನಂಬ್ರ-8937098978) ನಂಬರಿನಿಂದ ಕರೆ ಮಾಡಿ ಒ ಟಿ ಪಿ ತಿಳಿಸಿದರೇ ಮಾತ್ರ ಬೊನಸ್ ಜಮಾ ಆಗುವುದು ಎಂದು ಹೇಳಿದ್ದಾರೆ.
ಇದರಂತೆ ಹಲವು ಬಾರಿ ಒಟಿಪಿ ನಂಬರ್ ಕೇಳಿದ್ದು ಇವರು ಹೇಳಿದ್ದಾರೆ. ಕೆಲ ಹೊತ್ತಿನಲ್ಲೇ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ನಿಂದ 19,551 ರಂತೆ ಎರಡು ಬಾರಿ ಹಣ ಕಡಿತವಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಖಾತೆಯಿಂದ ಜ.16ರಿಂದ 21ರ ವರೆಗೆ 2,93,144 ರೂ. ಹಣ ಕಡಿತವಾಗಿದೆ.
ಇದೇ ವೇಳೆ, ವ್ಯಕ್ತಿಯ ಪತ್ನಿಗೆ ಏನೋ ಸಂಶಯ ಬಂದು ಮಗನಿಗೆ, ನಿನ್ನ ತಂದೆ ಯಾರಿಗೋ ಓಟಿಪಿ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ. ಈ ವೇಳೆ ಮಗ ಬಂದು ವಿಚಾರಿಸಿದಾಗ ಅವರ ಐಸಿಐಸಿ ಐ ಬ್ಯಾಂಕ್ ಕ್ರೆಡಿಟ್ ಕಾರ್ಡ ನಿಂದ 39,103 ರೂ. ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾನಿಂದ ರೂ.293144 ರಂತೆ ಹಣ ಕಡಿತವಾದ ಬಗ್ಗೆ ತಿಳಿದುಬಂದಿದೆ. ಒಟ್ಟು ಮೊತ್ತ ರೂ. 3,32,247 ರೂ. ಹಣವನ್ನು ಸೈಬರ್ ವಂಚಕರು ವಂಚಿಸಿದ್ದಾರೆ.
Cyber fraudsters have cheated a senior citizen in Mangaluru of ₹3.32 lakh by luring him with a fake claim of a credit card bonus. According to the complaint registered at the Barke Police Station, unknown persons called the victim from mobile number 9582276944, claiming that a bonus amount had been credited to his credit card. They instructed him to download an application through an APK file sent to his phone to process the bonus.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am