ಬ್ರೇಕಿಂಗ್ ನ್ಯೂಸ್
12-09-22 10:22 pm Mangalore Correspondent ಕರಾವಳಿ
ಉಳ್ಳಾಲ, ಸೆ.12 : ಕೊರೊನಾ ಲಾಕ್ಡೌನ್ ಸಂದರ್ಭ ಹಣ್ಣು ಕೀಳಲು ಹಲಸಿನ ಮರವೇರಿ ಕೆಳಗೆ ಬಿದ್ದು ಸೊಂಟದ ಸ್ವಾಧೀನವನ್ನೇ ಕಳಕೊಂಡಿದ್ದ ಬೆಳ್ಮ ಗ್ರಾಮದ ಅಶಕ್ತ ಕುಟುಂಬದ ಯುವಕನೋರ್ವನಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಒಂದು ಲಕ್ಷ ರೂಪಾಯಿ ಪರಿಹಾರ ಧನ ಲಭಿಸಿದೆ.
ಬೆಳ್ಮ ಗ್ರಾಮದ ಬರಿಕೆ, ಕುಂಭಲಚ್ಚಿಲ್ ನಿವಾಸಿಗಳಾದ ಬಾಲಕೃಷ್ಣ ಪೂಜಾರಿ ಮತ್ತು ಪುಷ್ಪಾವತಿ ದಂಪತಿಯ ದ್ವಿತೀಯ ಪುತ್ರ ಭಾಸ್ಕರ ಪೂಜಾರಿ ಅವರು ಕಳೆದ ಒಂದೂವರೆ ವರುಷದ ಹಿಂದೆ ಹಣ್ಣು ಕೀಳಲು ಹಲಸಿನ ಮರ ಏರಿದ್ದಾಗ ರೆಂಬೆ ತುಂಡಾಗಿ ಕೆಳಗೆ ಬಿದ್ದು ಸೊಂಟದ ಸ್ವಾಧೀನ ಕಳಕೊಂಡು ಹಾಸಿಗೆ ಹಿಡಿದಿದ್ದರು. ಭಾಸ್ಕರ್ ಅವರ ಚಿಕಿತ್ಸೆಗೆ ಅನೇಕ ಸಂಘ, ಸಂಸ್ಥೆಗಳು, ಸ್ಥಳೀಯರು ಸೇರಿ ಆರ್ಥಿಕ ಸಹಕಾರ ನೀಡಿದ್ದರು.ಆ ಸಂದರ್ಭದಲ್ಲಿ ಅಲೆಮಾರಿ, ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಅವರು ಭಾಸ್ಕರ್ ಅವರಿಗೆ ವೈಯಕ್ತಿಕ ಸಹಾಯ ನೀಡಿದಲ್ಲದೆ ವಿಶೇಷ ಮುತುವರ್ಜಿ ವಹಿಸಿ ಅಂದಿನ ಸಿಎಂ ಬಿ.ಎಸ್ ಯಡಿಯೂರಪ್ಪ ಅವರಲ್ಲಿ ಪರಿಹಾರ ನಿಧಿಗಾಗಿ ಮನವಿ ಮಾಡಿದ್ದರು. ಮಾಜಿ ಸಿಎಂ ಬಿಎಸ್ ವೈ ಆದೇಶದಂತೆ ಹಾಲಿ ಸಿ.ಎಂ ಬಸವರಾಜ ಬೊಮ್ಮಾಯಿ ಅವರು ಭಾಸ್ಕರ್ ಅವರಿಗೆ ಒಂದು ಲಕ್ಷ ರೂಪಾಯಿಗಳನ್ನ ಪರಿಹಾರವಾಗಿ ನೀಡಿದ್ದಾರೆ.
ಅಲೆಮಾರಿ, ಅರೆ ಅಲೆಮಾರಿ ನಿಗಮದ ಮಾಜಿ ಅಧ್ಯಕ್ಷರಾದ ರವೀಂದ್ರ ಶೆಟ್ಟಿ ಉಳಿದೊಟ್ಟು, ದಿ ಮೈಸೂರು ಇಲೆಕ್ಟ್ರಿಕಲ್ಸ್ (ಲಿ)ನ ಮಾಜಿ ಅಧ್ಯಕ್ಷರಾದ ಸಂತೋಷ್ ರೈ ಬೋಳಿಯಾರ್ ನೇತೃತ್ವದ ತಂಡದ ಸದಸ್ಯರು ಪರಿಹಾರ ನಿಧಿಯ ಫಲಾನುಭವಿ ಭಾಸ್ಕರ್ ಅವರನ್ನ ಭೇಟಿ ಮಾಡಿ ಧೈರ್ಯ ತುಂಬಿದರು.
ತಮ್ಮ ಮನವಿಗೆ ಸ್ಪಂದಿಸಿ ಪರಿಹಾರ ಧನ ನೀಡಿದ ಮಾಜಿ ಸಿ.ಎಂ ಬಿಎಸ್ ವೈ ಮತ್ತು ಹಾಲಿ ಸಿ.ಎಂ ಬಸವರಾಜ ಬೊಮ್ಮಾಯಿ ಅವರಿಗೆ ರವೀಂದ್ರ ಶೆಟ್ಟಿ ಅವರು ಅಭಿನಂದನೆ ಸಲ್ಲಿಸಿದ್ದು, ಭಾಸ್ಕರ್ ಅವರು ಹಂತ, ಹಂತವಾಗಿ ಚೇತರಿಸುತ್ತಿದ್ದು ಸಮಾಜದ ಸಹೃದಯಿಗಳು ಮುಂದೆಯೂ ಅವರಿಗೆ ಸಹಾಯ, ಸಹಕಾರ ನೀಡುವಂತೆ ಕೋರಿದ್ದಾರೆ.
Ullal Man loses strength to walk after falling down from tree, CM Fund issued after visiting his house in Belman.
22-06-25 07:52 pm
HK News Desk
Heart Attack, Hassan: ಊಟಕ್ಕೆ ಕುಳಿತುಕೊಳ್ಳುವಾಗ...
22-06-25 12:36 pm
Iran Attack Illegal,War, CM Siddaramaiah; ಇರಾ...
21-06-25 02:48 pm
ಗುತ್ತಿಗೆ ಮೀಸಲು ಹೆಚ್ಚಳ ಬೆನ್ನಲ್ಲೇ ಅಲ್ಪಸಂಖ್ಯಾತರಿ...
20-06-25 10:36 am
ಕಮಲ್ ನಟನೆಯ 'ಥಗ್ ಲೈಫ್' ಸಿನಿಮಾ ಪ್ರಸಾರಕ್ಕೆ ಸುಪ್ರ...
17-06-25 05:35 pm
22-06-25 07:48 pm
HK News Desk
Yoga Haram Muslims; ಯೋಗವನ್ನು ಒಪ್ಪುತ್ತೇವೆ, ಸೂರ...
22-06-25 04:57 pm
Pahalgam Attack, NIA Arrest; ಪಹಲ್ಗಾಮ್ ದಾಳಿಗೂ...
22-06-25 04:49 pm
Israel Iran Conflict, B-2 Stealth Bombers; ಇಸ...
22-06-25 10:58 am
IndiGo Flight News, Bangalore; ಇಂಡಿಗೋ ವಿಮಾನದಲ...
21-06-25 08:50 pm
21-06-25 11:04 pm
Mangaluru Correspondent
Krishnaveni Mines Geology, Mangalore;18 ದಿನ ಜ...
21-06-25 03:56 pm
Fake NEET Marksheet, Udupi Topper; ನಕಲಿ ನೀಟ್...
21-06-25 01:59 pm
Sakleshpur, Mangalore Bangalore Train; ಸಕಲೇಶಪ...
21-06-25 12:03 pm
Kudupu Murder, Sajith Shetty Post, Sudheer Ku...
20-06-25 11:04 pm
21-06-25 08:58 pm
Mangaluru Correspondent
Crime Mangalore, Bantwal Attack, Fake News; ಬ...
21-06-25 12:21 pm
Brahmavar, Udupi Murder, Crime: ಪತ್ನಿಗೆ ಮೊಬೈಲ...
20-06-25 02:04 pm
Mangalore, Bantwal Pregnant Woman Murder, Sui...
19-06-25 04:37 pm
Ccb Police, Bangalore, Drugs, crime: ಚೂಡಿದಾರ್...
17-06-25 05:06 pm