ಬ್ರೇಕಿಂಗ್ ನ್ಯೂಸ್
12-09-22 04:49 pm Mangalore Correspondent ಕರಾವಳಿ
ಮಂಗಳೂರು, ಸೆ.12 : ನಾರಾಯಣ ಗುರುಗಳ ಜಯಂತಿಯನ್ನು ಜಿಲ್ಲಾ ಮಟ್ಟಕ್ಕೆ ಸೀಮಿತಗೊಳಿಸಿದ್ದಾರೆ. ಹಿಂದೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಕಾರ್ಯಕ್ರಮ ಮಾಡುತ್ತಿದ್ದರು. ಮುಖ್ಯ ಕಾರ್ಯದರ್ಶಿ, ಮುಖ್ಯಮಂತ್ರಿ ಇದ್ದು ಕಾರ್ಯಕ್ರಮ ನಡೆಯುತ್ತಿತ್ತು. ಆದರೆ ಒಬ್ಬ ಮಹಾನ್ ದಾರ್ಶನಿಕನ ಜಯಂತಿಯನ್ನು ಜಿಲ್ಲೆಗೆ ಸೀಮಿತಗೊಳಿಸಿದ್ದು ಬಿಜೆಪಿ ನಾರಾಯಣ ಗುರುಗಳಿಗೆ ಮಾಡಿರುವ ಸರಣಿ ಅಪಮಾನ ಎಂದು ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ಮುಖಂಡ ರಮಾನಾಥ ರೈ ಹೇಳಿದ್ದಾರೆ.
ನಗರದ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿದ ರಮಾನಾಥ ರೈ, ಕಳೆದ ಎರಡು ವರ್ಷಗಳಲ್ಲಿ ಸಿಎಂ ಆಗಿದ್ದ ಯಡಿಯೂರಪ್ಪ, ಬೊಮ್ಮಾಯಿ ನಾರಾಯಣ ಗುರುಗಳ ಜಯಂತಿಯಲ್ಲಿ ಭಾಗವಹಿಸಲಿಲ್ಲ. ಈ ಬಾರಿ ಜಿಲ್ಲಾ ಮಟ್ಟದಲ್ಲಿ ಕಾರ್ಯಕ್ರಮ ಮಾಡುವುದಿದ್ದರೆ ಮುಖ್ಯಮಂತ್ರಿ ನೇತೃತ್ವದಲ್ಲೇ ಮಾಡಬೇಕಿತ್ತು. ಜನರ ಮಧ್ಯೆ ಮಾಡಬೇಕಿದ್ದರೆ ಮುಖ್ಯಮಂತ್ರಿ ಜನರ ನಡುವೆ ಬರಬೇಕಿತ್ತು. ಆದರೆ ಮುಖ್ಯಮಂತ್ರಿ ಬೊಮ್ಮಾಯಿ ಜನಸ್ಪಂದನ ಮಾಡುವಲ್ಲಿ ಬಿಝಿಯಾಗಿದ್ದರು ಎಂದು ಹೇಳಿದರು.
ಕಳೆದ ಬಾರಿ ಗಣರಾಜ್ಯ ಸಂದರ್ಭದಲ್ಲಿ ನಾರಾಯಣ ಗುರುಗಳ ಟ್ಯಾಬ್ಲೋ ರಿಜೆಕ್ಟ್ ಮಾಡಿದ್ದರು. ಆನಂತರ ಹತ್ತನೇ ತರಗತಿ ಪಠ್ಯದಲ್ಲಿ ನಾರಾಯಣ ಗುರು ಪಠ್ಯವನ್ನೇ ಹೊರಗಿಟ್ಡಿದ್ದರು. ಈಗ ಗುರುಗಳ ಜಯಂತಿ ಕಾರ್ಯಕ್ರಮವನ್ನೆ ರಾಜಧಾನಿಯಿಂದ ಹೊರಗೆ ಇರಿಸಿದ್ದಾರೆ. ಈ ಬಾರಿ ನಾರಾಯಣ ಗುರು ಜಯಂತಿ ಸಂದರ್ಭದಲ್ಲೇ ಬಿಜೆಪಿ ಸರಕಾರ ಜನಸ್ಪಂದನ ಕಾರ್ಯಕ್ರಮ ನಡೆಸಿದ್ದರೂ, ಅಲ್ಲಿ ಕನಿಷ್ಠ ಹೆಸರನ್ನೂ ಉಲ್ಲೇಖಿಸಿಲ್ಲ. ದೇಶ ಕಂಡ ದೊಡ್ಡ ದಾರ್ಶನಿಕರನನ್ನು ಕಡೆಗಣಿಸಿ ಒಂದು ಜಿಲ್ಲೆಗೆ ಸೀಮಿತಗೊಳಿಸಿರುವುದನ್ನು ಖಂಡಿಸುತ್ತೇವೆ. ಕೆಲವರು ಇದನ್ನು ಸಮರ್ಥನೆ ಮಾಡಿದ್ದರೆ ಅದು ಗುರುಗಳಿಗೆ ಮಾಡಿದ ಅಪಮಾನ.
ಕರಾವಳಿ ಭಾಗ ನಾರಾಯಣ ಗುರುಗಳಿಗೆ ದೊಡ್ಡ ಮಟ್ಟಿನ ಬೆಂಬಲಿಗರನ್ನು ಹೊಂದಿರುವ ಪ್ರದೇಶ. ಕೆಲವರ ಮನಸ್ಸಲ್ಲಿ ಅಂದುಕೊಂಡ ರೀತಿ ಕಾರ್ಯಕ್ರಮ ಮಾಡಿರುವುದು ಸರಿಯಲ್ಲ. ಬೊಮ್ಮಾಯಿ ಸ್ವತಃ ಕಳೆದ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದರೂ ಪಾಲ್ಗೊಳ್ಳದೇ ಇರುವುದರ ಅರ್ಥ ಏನು ಅಂತ ಸ್ಪಷ್ಟನೆ ನೀಡಬೇಕು ಎಂದು ಹೇಳಿದರು. ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಬಗ್ಗೆ ತಾನು ಕೊಟ್ಟ ಮನವಿ ಮೇರೆಗೆ ಸಿದ್ದರಾಮಯ್ಯ ಸರಕಾರ ಆದೇಶ ಮಾಡಿತ್ತು. ಆಗಿನ ಸಚಿವೆ ಉಮಾಶ್ರೀಯವರ ಮೂಲಕ ಆದೇಶ ಮಾಡಿಸಲಾಗಿತ್ತು. ಕರಾವಳಿಯ ನಾರಾಯಣ ಗುರುಗಳ ಅನುಯಾಯಿಗಳು, ಸಮಸ್ತ ಶೋಷಿತ ವರ್ಗದ ಪರವಾಗಿ ಜಯಂತಿ ಕಾರ್ಯಕ್ರಮ ಆಚರಣೆಗೆ ತರಲಾಗಿತ್ತು ಎಂದು ರಮಾನಾಥ ರೈ ಹೇಳಿದರು.
ಅಲ್ಲದೆ, ಸಮಾಜದಲ್ಲಿದ್ದ ಮೇಲು ಕೀಳು, ಅಸ್ಪೃಶ್ಯತೆ ತೊಡೆದು ಹಾಕುವ ನಿಟ್ಟಿನಲ್ಲಿ ನಾರಾಯಣ ಗುರುಗಳು ನೋವಿನ ಕಣ್ಣೀರಿನಲ್ಲಿ ಶಿವಲಿಂಗಕ್ಕೆ ಅಭಿಷೇಕ ಮಾಡಿದ್ದಾರೆ, ಸಮಸ್ತ ಹಿಂದುಳಿದ ವರ್ಗದವರ ಪರವಾಗಿ ಶಿವಲಿಂಗ ಸ್ಥಾಪನೆ ಮಾಡಿದ್ದರು. ಕುದ್ರೋಳಿ ನಾರಾಯಣ ಗುರುಗಳಿಂದ ಸ್ಥಾಪಿತ ಕ್ಷೇತ್ರ. ಅಲ್ಲಿ ರಾಜ್ಯ ಮಟ್ಟದ ನಾರಾಯಣ ಗುರು ಜಯಂತಿ ಮಾಡುತ್ತಿದ್ದರೆ ಹೆಚ್ಚು ಅರ್ಥ ಬರುತ್ತಿತ್ತು. ಆದರೆ ಈ ರೀತಿ ಅಪಮಾನ ಮಾಡಿರುವುದು ಸರಿಯಲ್ಲ. ಕೇರಳದಿಂದ ಬಂದು ಇಲ್ಲಿ ತಳವೂರಿದ ಮಂಗಳೂರಿನ ರೈಲು ನಿಲ್ದಾಣಕ್ಕೆ ನಾರಾಯಣ ಗುರುಗಳ ಹೆಸರಿಡಬೇಕೆಂದು ಕಾಂಗ್ರೆಸ್ ಸರಕಾರ ಇದ್ದಾಗ ಪಾಲಿಕೆಯಲ್ಲಿ ನಿರ್ಣಯ ಮಾಡಿದ್ದೆವು. ಆದರೆ ಬಿಜೆಪಿ ಸರಕಾರ ಅದಕ್ಕೂ ಸ್ಪಂದನೆ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಜಯೇಂದ್ರ 60 ಸಾವಿರದ ಬೆಲ್ಟ್ ಹಾಕಿದ್ರೆ ತಪ್ಪು ಕಂಡಿಲ್ಲವೇ ?
ರಾಹುಲ್ ಗಾಂಧಿ ಹಾಕಿದ್ದ ಟೀ ಶರ್ಟ್ ಬಗ್ಗೆ ಬಿಜೆಪಿ ಆಕ್ಷೇಪಕ್ಕೆ ಪ್ರತಿಕ್ರಿಯಿಸಿದ ರಮಾನಾಥ ರೈ, ರಾಹುಲ್ ಗಾಂಧಿ, ಸ್ವಾತಂತ್ರ್ಯ ಪೂರ್ವಕ್ಕೂ ಶ್ರೀಮಂತವಾಗಿದ್ದ ಮೋತಿಲಾಲ ನೆಹರು ಕುಟುಂಬದಿಂದ ಬಂದವರು. ಅವರೇನು ತಾನು ಚೌಕಿದಾರ, ಚಾಯ್ ವಾಲ ಅಂತ ಹೇಳಿಕೊಂಡಿಲ್ಲ. ಹತ್ತು ಲಕ್ಷದ ಸೂಟನ್ನೂ ಹಾಕಿಲ್ಲ. ವಿಜಯೇಂದ್ರ 60 ಸಾವಿರದ ಬೆಲ್ಟ್ ಹಾಕಿದ್ದಾರೆ ಅಂತ ಯಾರೋ ಒಬ್ಬರು ಹೇಳುತ್ತಿದ್ದರು. ಹಾಗಾದ್ರೆ, 40 ಸಾವಿರದ ಶರ್ಟ್ ಮೇಲೋ, ವಿಜಯೇಂದ್ರ ಹಾಕ್ಕೊಂಡ ಬೆಲ್ಟ್ ಮೇಲೋ ಎಂದು ಕೇಳಬೇಕಾಗಿದೆ ಎಂದು ಪ್ರಶ್ನೆ ಮಾಡಿದರು.
Narayana Guru is continuously put to shame by BJP slams Ramanath Rai in Mangalore.
09-09-25 10:52 pm
Bangalore Correspondent
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
Shivamogga Accident: ಸೆ.25ಕ್ಕೆ ಹಸೆಮಣೆ ಏರಬೇಕಿದ...
08-09-25 08:07 pm
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
10-09-25 04:22 pm
HK News Desk
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
10-09-25 02:10 pm
Mangalore Correspondent
ಬಂಟ್ವಾಳ : ತನ್ನ ಮೇಲೆ ಹಲ್ಲೆ, ಕೊಲೆಯತ್ನವೆಂದು ಸುಳ್...
10-09-25 11:02 am
"ಅಮೃತ ಸೋಮೇಶ್ವರ ರಸ್ತೆ" ನಾಮಕರಣಕ್ಕೆ ಸೋಮೇಶ್ವರ ಪುರ...
09-09-25 10:47 pm
Mangalore Accident, Kulur, NHAI: ಕುಳೂರು ರಸ್ತೆ...
09-09-25 08:01 pm
YouTuber Munaf, SIT, Dharmasthala Case: ಎಸ್ಐಟ...
09-09-25 05:59 pm
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm