ಬ್ರೇಕಿಂಗ್ ನ್ಯೂಸ್
15-08-20 09:39 pm Headline Karnataka News Network ಡಾಕ್ಟರ್ಸ್ ನೋಟ್
ನೀವು ಕೆಲವೊಮ್ಮೆ ಆರಾಮವಾಗಿ ಮನೆಯಲ್ಲಿ ಸುಮ್ಮನೆ ಟಿವಿ ನೋಡುತ್ತಾ ಕುಳಿತಿದ್ದಾಗ ಅಥವಾ ಇತರರ ಜೊತೆ ಮಾತನಾಡುತ್ತಾ ಇರಬೇಕಾದರೆ ಅಥವಾ ನಿಮ್ಮದೇ ಯಾವುದೋ ಒಂದು ಕೆಲಸದಲ್ಲಿ ನಿರತವಾಗಿ ಕಾಲ ಕಳೆಯುತ್ತಿರುವ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ನಿಮ್ಮ ಹೊಟ್ಟೆ ಕರಕರ ಎಂದು ಶಬ್ದ ಮಾಡಲು ಪ್ರಾರಂಭ ಮಾಡುತ್ತದೆ. ಇಂತಹ ಸಮಯದಲ್ಲಿ ನೀವು ಒಬ್ಬರೇ ಇದ್ದರೇನೋ ಸರಿ.
ಅಪ್ಪಿ ತಪ್ಪಿ ಬೇರೆ ನಿಮ್ಮ ಸ್ನೇಹಿತರು, ನಿಮ್ಮ ಮೇಲಧಿಕಾರಿಗಳು, ಸಹೋದ್ಯೋಗಿಗಳು ಇದ್ದರಂತೂ ನಿಮ್ಮ ಪಾಡು ಹರೋಹರ. ಆಡಿಕೊಂಡು ನಗುವವರಿಗೆ ನೀವೇ ದಾರಿ ಮಾಡಿಕೊಟ್ಟಂತೆ ಆಗುತ್ತದೆ.
ಆದರೆ ಇದು ಬೇಕೆಂದು ನೀವೇ ಮಾಡಿಕೊಂಡ ಸಮಸ್ಯೆಯೇನಲ್ಲ. ತಾನಾಗಿಯೇ ಹೊಟ್ಟೆಯಿಂದ ಉತ್ಪತ್ತಿ ಆಗುವ ಇಂತಹ ಶಬ್ದಕ್ಕೆ ಯಾರು ಹೊಣೆ ? ಹೊಟ್ಟೆಯ ಆರೋಗ್ಯವನ್ನು ಸರಿಯಾಗಿ ಕಾಪಾಡಿಲ್ಲ ಎಂಬುದು ಇದರ ಸೂಚನೆ. ಇಂತಹ ಸಂದರ್ಭದಲ್ಲಿ ನೀವು ಏನು ಮಾಡಬಹುದು? ಮುಂದೆ ಓದಿ.
ಹೊಟ್ಟೆಯಲ್ಲಿ ಶಬ್ದ
ಸಾಮಾನ್ಯವಾಗಿ ನಮ್ಮ ಹೊಟ್ಟೆಯಲ್ಲಿ ಶಬ್ದ ಬಂದಂತೆ ನಮಗೆ ಕೇಳಿಸುತ್ತದೆ. ಆದರೆ ಇದು ಕರುಳಿನ ಶಬ್ದ ಕೂಡ ಆಗಿರಬಹುದು. ಹಾಗಾದರೆ ಇಂತಹ ಧ್ವನಿಗಳಿಗೆ ಕಾರಣವೇನು ಎಂಬುದನ್ನು ನೋಡುವುದಾದರೆ,
ಹೊಟ್ಟೆಯ ಶಬ್ದಗಳಿಗೆ ಮನೆ ಮದ್ದುಗಳು
ನೀವು ಕೆಲವೊಂದು ಟಿಪ್ಸ್ ಗಳನ್ನು ಅನುಸರಿಸುವ ಮೂಲಕ ನಿಮ್ಮ ಹೊಟ್ಟೆಯ ಸಂಬಂಧಿತ ಶಬ್ದಗಳನ್ನು ಮತ್ತು ಹೊಟ್ಟೆಯ ಸಮಸ್ಯೆಗಳನ್ನು ಕಡಿಮೆ ಮಾಡಿಕೊಳ್ಳಬಹುದು.
ಈ ಕೆಳಗಿನ ಕೆಲವೊಂದು ಮನೆ ಮದ್ದುಗಳು ಅತ್ಯಂತ ತ್ವರಿತಗತಿಯಲ್ಲಿ ಕೆಲಸ ಮಾಡುತ್ತವೆ. ಆದರೆ ಕೆಲವೊಂದು ಮನೆ ಮದ್ದುಗಳನ್ನು ನಿರಂತರವಾಗಿ ಮಾಡಬೇಕಾಗಿರುತ್ತದೆ.
ನೀರು ಕುಡಿಯಿರಿ
ಎಂದಾದರೂ ನಿಮಗೆ ಹೊಟ್ಟೆಯಲ್ಲಿ ಶಬ್ದ ಬರುವ ಅನುಭವ ಉಂಟಾದರೆ ತಕ್ಷಣವೇ ಒಂದು ಲೋಟ ನೀರು ಕುಡಿಯಿರಿ. ಇದು ನಿಮ್ಮ ಹೊಟ್ಟೆಗೂ ಒಳ್ಳೆಯದು ಮತ್ತು ನಿಮ್ಮ ಜೀರ್ಣಾಂಗದ ಆರೋಗ್ಯಕ್ಕೂ ಒಳ್ಳೆಯದು. ಕೆಲವೊಮ್ಮೆ ಹೊಟ್ಟೆ ಖಾಲಿ ಇದ್ದರೆ ಈ ರೀತಿ ಶಬ್ದ ಬರುತ್ತದೆ ಎಂದು ಹೇಳುತ್ತಾರೆ. ಹಾಗಾಗಿ ಹೊಟ್ಟೆ ತುಂಬ ನೀರು ಕುಡಿದು ನೀವು ಶಬ್ದವನ್ನು ಕಡಿಮೆ ಮಾಡಿಕೊಳ್ಳಬಹುದು.
ನೀವು ಸಾಕಷ್ಟು ನೀರು ಕುಡಿಯದೇ ಇರುವುದು ಹೊಟ್ಟೆಯಲ್ಲಿ ಶಬ್ದ ಬರಲು ಒಂದು ಸೂಚನೆ ಆಗಿರಬಹುದು. ನಿಧಾನವಾಗಿ ನೀರು ಕುಡಿಸುವುದರಿಂದ ನಿಮ್ಮ ಹೊಟ್ಟೆಯಲ್ಲಿನ ಗಾಳಿ ಕಡಿಮೆಯಾಗಿ ಹೊಟ್ಟೆಗೆ ಸಂಬಂಧ ಪಟ್ಟ ಶಬ್ದಗಳು ನಿವಾರಣೆ ಆಗುತ್ತವೆ.
ಏನಾದರೂ ಆಹಾರ ಸೇವಿಸಿ
ಮೊದಲೇ ಹೇಳಿದಂತೆ ನಿಮ್ಮ ಹೊಟ್ಟೆ ತುಂಬಾ ಹಸಿದಿದ್ದರೆ ಅದು ಕರಕರ ಎಂದು ಶಬ್ದ ಮಾಡುವ ಸಂಭವವಿರುತ್ತದೆ. ಹಾಗಾಗಿ ಹೊಟ್ಟೆ ಯಿಂದ ಬರುವ ಶಬ್ದಗಳು ನಿಮಗೆ ಆಹಾರ ತಿನ್ನಲು ಹೇಳುವ ಕರೆಗಂಟೆ ಆಗಿರಬಹುದು.
ಈ ಸಮಯದಲ್ಲಿ ತಕ್ಷಣಕ್ಕೆ ನಿಮಗೆ ಯಾವುದೇ ಆರೋಗ್ಯಕರವಾದ ಆಹಾರ ಸಿಕ್ಕಿದರೂ ಅದನ್ನು ಸೇವಿಸಿ. ಕೆಲವರಿಗೆ ಪ್ರತಿ ದಿನವೂ ಒಂದೇ ಸಮಯಕ್ಕೆ ಹೊಟ್ಟೆ ಈ ರೀತಿ ಶಬ್ದ ಮಾಡುತ್ತದೆ. ಅಂತಹವರು ಮರುದಿನ ಮತ್ತೆ ಆ ಸಮಯ ಬರುವುದಕ್ಕೆ ಮುಂಚೆ ಸ್ವಲ್ಪ ನೀರು ಸೇವಿಸಿ ಆಹಾರ ತಿನ್ನುವುದರಿಂದ ಈ ಸಮಸ್ಯೆಯಿಂದ ಪಾರಾಗಬಹುದು.
ಹೆಚ್ಚಾಗಿ ಒಂದೇ ಬಾರಿ ಅತಿ ಹೆಚ್ಚು ಆಹಾರ ಸೇವಿಸುವುದನ್ನು ಬಿಟ್ಟು ದಿನದಲ್ಲಿ ಆಗಾಗ ಸ್ವಲ್ಪ ಸ್ವಲ್ಪವೇ ಆಹಾರವನ್ನು ಸೇವಿಸಲು ಮುಂದಾಗುವುದು ಕೂಡ ಹೊಟ್ಟೆಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಆಹಾರವನ್ನು ಸರಿಯಾಗಿ ಜಗಿದು ತಿನ್ನಿ
ಕೆಲವರನ್ನು ನಾವು ನೋಡಿರುತ್ತೇವೆ ಸಿಕ್ಕಂತಹ ಆಹಾರವನ್ನು ಗಬಗಬನೆ ತಿಂದು ಬಿಡುತ್ತಾರೆ. ಈ ಸಮಯದಲ್ಲಿ ಸರಿಯಾಗಿ ಅವರು ಆಹಾರವನ್ನು ಬಾಯಿಯಲ್ಲಿ ಹಲ್ಲುಗಳ ಮಧ್ಯೆ ಜಿಗಿದು ಸೇವಿಸಿರುವುದಿಲ್ಲ.
ಹೀಗಾಗಿ ಅರ್ಧಂಬರ್ಧ ಜಿಗಿದ ಆಹಾರ ಹೊಟ್ಟೆಯ ಜೀರ್ಣಾಂಗ ಸೇರಿ ಮಧ್ಯ ಮಧ್ಯ ಗಾಳಿಯನ್ನು ತುಂಬಿಕೊಂಡಿರುವುದರಿಂದ ಅಜೀರ್ಣತೆ ಮತ್ತು ಗ್ಯಾಸ್ಟಿಕ್ ಸಮಸ್ಯೆ ಉಂಟಾಗುತ್ತದೆ. ಇದು ಕರುಳಿನ ಭಾಗದಲ್ಲಿ ಶೇಖರಣೆ ಆಗಿ ಶಬ್ದದ ಮೂಲಕ ಹೊರ ಬರುತ್ತದೆ.
ಹೆಚ್ಚು ಸಕ್ಕರೆಯುಕ್ತ ಆಹಾರಗಳನ್ನು ಸೇವಿಸಬೇಡಿ
ನಿಮ್ಮ ಆಹಾರದಲ್ಲಿ ಆದಷ್ಟು ಉಪ್ಪಿನ ಅಂಶ ಮತ್ತು ಸಕ್ಕರೆ ಅಂಶ ಕಡಿಮೆ ಇರಬೇಕು. ಇದು ನಿಮ್ಮ ಜೀರ್ಣ ಪ್ರಕ್ರಿಯೆಗೆ ಸಹಕಾರಿಯಾಗಿ ಜೀರ್ಣಾಂಗಕ್ಕೆ ಸಂಬಂಧ ಪಟ್ಟ ಯಾವುದೇ ಅವ್ಯವಸ್ಥೆಗಳು ಕಾಡುವುದಿಲ್ಲ.
ಹೆಚ್ಚು ಸಕ್ಕರೆ ಅಂಶಗಳನ್ನು ಹೊಂದಿದ ಆಹಾರ ಸೇವಿಸಿದರೆ ಅಜೀರ್ಣತೆ, ಎದೆಯುರಿ ಮತ್ತು ಹೊಟ್ಟೆ ನೋವು ಕಾಡಲು ಪ್ರಾರಂಭವಾಗುತ್ತದೆ. ಹಾಗಾಗಿ ಇಂತಹ ಆಹಾರಗಳ ಬಗ್ಗೆ ಹೆಚ್ಚು ಗಮನ ವಹಿಸಿ.
ಗ್ಯಾಸ್ಟಿಕ್ ಸಮಸ್ಯೆಯನ್ನು ಉಂಟು ಮಾಡುವ ಆಹಾರಗಳು
ನಾವು ಸೇವಿಸುವ ಆಹಾರದಲ್ಲಿ ಕೆಲವೊಂದು ನಮಗೆ ಗ್ಯಾಸ್ಟಿಕ್ ಸಮಸ್ಯೆಯನ್ನು ತಂದು ಕೊಡುತ್ತವೆ. ಉದಾಹರಣೆಗೆ, ಕೆಲವೊಂದು ಕಾಳುಗಳು ಮತ್ತು ಧಾನ್ಯಗಳು.
ಜೀರ್ಣಶಕ್ತಿ ಚೆನ್ನಾಗಿರುವವರಿಗೆ ಇಂತಹ ಆಹಾರ ಪದಾರ್ಥಗಳು ಸರಿಯಾಗಿ ಜೀರ್ಣ ಆಗುತ್ತವೆ. ಆದರೆ ಸ್ವಲ್ಪ ದುರ್ಬಲ ಜೀರ್ಣ ಶಕ್ತಿ ಹೊಂದಿರುವವರಿಗೆ ಇವುಗಳು ಹೊಟ್ಟೆಯಲ್ಲಿ ಗ್ಯಾಸ್ಟ್ರಿಕ್ ಸಮಸ್ಯೆ ಉಂಟು ಮಾಡುತ್ತವೆ. ಗ್ಯಾಸ್ಟಿಕ್ ಸಮಸ್ಯೆ ಆದಾಗ ಹೊಟ್ಟೆಯಿಂದ ಶಬ್ದ ಹೊರ ಬರುವುದು ಸಾಮಾನ್ಯ.
ಈ ಮೇಲಿನ ಎಲ್ಲಾ ಕೆಲವೊಂದು ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೂ ಕೂಡ ನಿಮ್ಮ ಹೊಟ್ಟೆಯ ಶಬ್ದಗಳು ಕಡಿಮೆ ಆಗದಿದ್ದರೆ ನಿಮ್ಮ ಹೊಟ್ಟೆಯಲ್ಲಿ ಬೇರೆ ಯಾವುದೋ ಸಮಸ್ಯೆ ಇರಬೇಕು. ಹಾಗಾಗಿ ವೈದ್ಯರಿಂದ ಚಿಕಿತ್ಸೆ ಈ ಸಮಯದಲ್ಲಿ ಅಗತ್ಯ ಎಂದು ತೋರುತ್ತದೆ.
14-06-25 11:05 pm
Bangalore Correspondent
A.H. Vishwanath, CM Sidddaramaiah ; ನವೆಂಬರ್ ನ...
14-06-25 07:45 pm
Bike Taxi, Ola, Uber, Karnataka: ರ್ಯಾಪಿಡೋ, ಉ...
13-06-25 08:47 pm
Agumbe Ghat, Closed: ಜೂ.15ರಿಂದ - ಸೆ. 30ರವರೆಗೆ...
13-06-25 07:01 pm
ಕಾರವಾರ ಜಿಲ್ಲಾ ಆಸ್ಪತ್ರೆಗೆ ನುಗ್ಗಿದ್ದ ಚರಂಡಿ ನೀರು...
12-06-25 11:07 pm
14-06-25 12:00 pm
HK News Desk
Kasaragod Deputy Tahsildar Suspended: ವಿಮಾನ ದ...
13-06-25 11:09 pm
Air India Plane Crash, Black Box Recovered: ವ...
13-06-25 10:42 pm
ಏರ್ ಇಂಡಿಯಾ ವಿಮಾನ ದುರಂತ ; ಲಂಡನ್ನಲ್ಲೇ ಬದುಕು ಕಟ್...
13-06-25 03:08 pm
ಇರಾನ್ ಮೇಲೆ ಇಸ್ರೇಲ್ ಡೆಡ್ಲಿ ಅಟ್ಯಾಕ್ ; ಅಣ್ವಸ್ತ್ರ...
13-06-25 02:14 pm
15-06-25 03:20 pm
Mangalore Correspondent
Mangalore Rain, Compound Wall Collapsed Video...
15-06-25 12:12 pm
Rahiman Murder, Senior Advocate Balan, Mangal...
14-06-25 10:21 pm
Mangalore Heavy Rain, Traffic, Pumpwell: ಒಂದೇ...
14-06-25 09:00 pm
Bangalore RCB Stampede, Veerappa Moily: ಕಾಲ್ತ...
14-06-25 02:49 pm
14-06-25 11:02 pm
Bangalore Correspondent
Lokayukta Corruption, Bengaluru SP Srinath Jo...
14-06-25 05:59 pm
Mangalore, Yeyyadi Bar, Murder, Kaushik: ಯೆಯ್...
13-06-25 07:30 pm
Mangalore, Puttur, Dr Adarsh, Sullia, Marriag...
13-06-25 05:37 pm
Goa Rape, Calangute Beach: ಬಕ್ರೀದ್ ಪಾರ್ಟಿಗೆ ಬ...
12-06-25 12:31 pm