ಬ್ರೇಕಿಂಗ್ ನ್ಯೂಸ್
06-09-21 05:52 pm Headline Karnataka News Network ದೇಶ - ವಿದೇಶ
ನವದೆಹಲಿ, ಸೆ.6: ದೇಶದ ಪ್ರತಿಷ್ಠಿತ ಐಟಿ ಸಂಸ್ಥೆ ಇನ್ಫೋಸಿಸ್ ಬಗ್ಗೆ ಆರೆಸ್ಸೆಸ್ ಮುಖವಾಣಿ ಪಾಂಚಜನ್ಯದಲ್ಲಿ ಅವಹೇಳನಕಾರಿ ವರದಿ ಮಾಡಿದ್ದು, ಈಗ ವಿವಾದಕ್ಕೆ ಕಾರಣವಾಗಿದೆ. ಐಟಿ ತೆರಿಗೆ ಸಲ್ಲಿಕೆಗಾಗಿ ವೆಬ್ ಪೋರ್ಟಲ್ ರೆಡಿ ಮಾಡಲು ಇನ್ಫೋಸಿಸ್ ಸಂಸ್ಥೆಗೆ ಕೇಂದ್ರ ಹಣಕಾಸು ಇಲಾಖೆಯಿಂದ ಗುತ್ತಿಗೆ ನೀಡಲಾಗಿತ್ತು. ಎರಡೂವರೆ ತಿಂಗಳ ಹಿಂದೆ ವೆಬ್ ಸೈಟ್ ಲಾಂಚ್ ಆಗಿದ್ದರೂ, ಪದೇ ಪದೇ ಕೈಕೊಡುವುದು, ಸ್ಥಗಿತ ಆಗುತ್ತಿದ್ದುದು ಕೇಂದ್ರ ಹಣಕಾಸು ಇಲಾಖೆಗೆ ಭಾರೀ ಇರಿಸುಮುರಿಸು ಉಂಟುಮಾಡಿತ್ತು.
ಕಳೆದ ವಾರ ಎರಡು ದಿನಗಳ ಕಾಲ ವೆಬ್ ಕೈಕೊಟ್ಟಿತ್ತು. ಈ ಬಗ್ಗೆ ಹಲವು ಕಡೆಗಳಿಂದ ವ್ಯತಿರಿಕ್ತ ಅಭಿಪ್ರಾಯಗಳು ಕೇಳಿಬಂದಿದ್ದವು. ಇದೇ ವಿಚಾರದಲ್ಲಿ ಇನ್ಫೋಸಿಸ್ ಸಂಸ್ಥೆಯ ಸಿಇಓ ಸಲೀಲ್ ಪರೇಖ್ ಅವರನ್ನು ಕರೆದು ಮಾತನಾಡಿದ್ದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ವೆಬ್ ಸೈಟ್ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದರು. ಎಲ್ಲ ಸಮಸ್ಯೆಗಳನ್ನು ಸರಿಪಡಿಸುವಂತೆ ಸೂಚಿಸಿ ಸೆಪ್ಟಂಬರ್ 15ರ ವರೆಗೆ ಗಡುವು ಕೊಟ್ಟಿದ್ದರು. ಈ ಬೆಳವಣಿಗೆಯ ಬೆನ್ನಲ್ಲೇ ಪಾಂಚಜನ್ಯ ಪತ್ರಿಕೆಯಲ್ಲಿ ಸುದೀರ್ಘ ಅಂಕಣ ಪ್ರಕಟಗೊಂಡಿದ್ದು, ಇನ್ಫೋಸಿಸ್ ಸಂಸ್ಥೆಯ ವಿರುದ್ಧ ಹೀನಾಯವಾಗಿ ಬರೆದು ಅವಹೇಳನ ಮಾಡಲಾಗಿದೆ. ಅಲ್ಲದೆ, ಪತ್ರಿಕೆಯ ಹಿಂದಿ ಅವತರಣಿಕೆಯಲ್ಲಿ ಇನ್ಫೋಸಿಸ್ ಸಂಸ್ಥೆಯ ಸ್ಥಾಪಕ ನಾರಾಯಣಮೂರ್ತಿ ಫೋಟೋ ಪ್ರಕಟಿಸಿ, ಶಾಖ್ ಔರ್ ಆಘಾತ್ ಎಂದು ಹೆಡ್ ಲೈನ್ ಕೊಟ್ಟಿತ್ತು.
3) Some elements are mentioning RSS in this episode due to vested interests. Remember, this report is not related to the Sangh, the report is about Infosys. It is a matter of facts and facts relating to the incompetence of the company.#Infosys @epanchjanya @editorvskbharat pic.twitter.com/hNGU2HYVgO
— Hitesh Shankar (@hiteshshankar) September 5, 2021
ಗೂಡ್ಸ್ ಮತ್ತು ಸರ್ವಿಸ್ ಟ್ಯಾಕ್ಸ್ ಪಾವತಿದಾರರು ವೆಬ್ ಸೈಟನ್ನು ಅವಲಂಬಿಸಿದ್ದಾರೆ. ಆದರೆ, ಇನ್ಫೋಸಿಸ್ ಸಂಸ್ಥೆಯು ಭಾರತದ ಆರ್ಥಿಕತೆಯನ್ನೇ ಬುಡಮೇಲು ಮಾಡುವ ಹುನ್ನಾರ ಇದ್ದಂತೆ ವರ್ತಿಸುತ್ತಿದೆ. ಭಾರತದ ಆರ್ಥಿಕತೆಯನ್ನು ಅಸ್ಥಿರಗೊಳಿಸುವ ಹಿತಾಸಕ್ತಿ ಇದರೆ ಹಿಂದಿರುವಂತೆ ತೋರುತ್ತಿದೆ. ಇದರ ಹಿಂದೆ ದೇಶದ್ರೋಹಿ ಹಿತಾಸಕ್ತಿಗಳ ಕೈವಾಡ ಇದೆಯೇ ಎಂದು ಪಾಂಚಜನ್ಯದ ಲೇಖನದಲ್ಲಿ ಗಂಭೀರ ಪ್ರಶ್ನೆ ಎತ್ತಲಾಗಿದೆ. ಅಲ್ಲದೆ, ಇನ್ಫೋಸಿಸ್ ಈ ಹಿಂದೆ ನಕ್ಸಲೈಟ್, ಎಡಪಂಥೀಯರು ಮತ್ತು ತುಕ್ಡೆ ತುಕ್ಡೆ ಗ್ಯಾಂಗ್ ಗಳಿಗೆ ಸಹಾಯ ಮಾಡಿರುವ ಚರಿತ್ರೆ ಹೊಂದಿದೆ ಎಂದು ಪತ್ರಿಕೆ ಆರೋಪಿಸಿದೆ.
ಅಂಕಣದ ಬಗ್ಗೆ ಭಾರೀ ಆಕ್ರೋಶ, ಪರ – ವಿರೋಧ ಕೇಳಿಬರುತ್ತಿದ್ದಂತೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಪಾಂಚಜನ್ಯ ಪತ್ರಿಕೆಯ ಸಂಪಾದಕ ಹಿತೇಶ್ ಶಂಕರ್, ಇನ್ಫೋಸಿಸ್ ದೊಡ್ಡ ಸಂಸ್ಥೆಯಾಗಿದ್ದು, ಅದರ ಮೇಲಿನ ನಂಬಿಕೆಯಿಂದ ಸರಕಾರದ ದೊಡ್ಡ ಪ್ರಾಜೆಕ್ಟನ್ನು ವಹಿಸಲಾಗಿತ್ತು. ಈ ರೀತಿಯ ಟ್ಯಾಕ್ಸ್ ಪೋರ್ಟಲ್ ಹಿಂದೆ ದೇಶದ ಹಿತಾಸಕ್ತಿ ಅಡಗಿರುತ್ತದೆ. ಈ ಬಗ್ಗೆ ಇನ್ಫೋಸಿಸ್ ಸಂಸ್ಥೆಗೆ ಅಷ್ಟೇ ಜವಾಬ್ದಾರಿಯೂ ಇರುತ್ತದೆ ಎಂದು ಹೇಳಿದ್ದಾರೆ.
As an Indian company, Infosys has made seminal contribution in progress of the country. There might be certain issues with a portal run by Infosys, but the article published by Panchjanya in this context only reflects individual opinion of the author. @editorvskbharat
— Sunil Ambekar (@SunilAmbekarM) September 5, 2021
ಪಾಂಚಜನ್ಯ ಅಂಕಣದ ಬಗ್ಗೆ ವಿರೋಧ ಕೇಳಿಬಂದಿರುವ ಹಿನ್ನೆಲೆಯಲ್ಲಿ ಆರೆಸ್ಸೆಸ್ ತನಗೂ ಅದಕ್ಕೂ ಸಂಬಂಧ ಇಲ್ಲ ಎಂದು ಹೇಳಿಕೆ ನೀಡಿದೆ. ಪಾಂಚಜನ್ಯ ನಮ್ಮ ಮುಖವಾಣಿಯಲ್ಲ. ಅದರಲ್ಲಿ ಬಂದಿರುವ ವರದಿ ಆರೆಸ್ಸೆಸ್ ಅಭಿಪ್ರಾಯವೂ ಅಲ್ಲ. ಅಂಕಣ ಬಂದಿದ್ದರೆ ಅದು ಆಯಾ ಲೇಖಕನ ಅಭಿಪ್ರಾಯ ಮಾತ್ರ ಆಗಿರುತ್ತದೆ ಎಂದು ಹೇಳಿದೆ. ಈ ಬಗ್ಗೆ ಆರೆಸ್ಸೆಸ್ ನಾಯಕ ಸುನಿಲ್ ಅಂಬೇಕರ್, ತೇಪೆ ಹಚ್ಚುವ ರೀತಿಯ ಅಭಿಪ್ರಾಯವನ್ನು ಟ್ವೀಟ್ ಮೂಲಕ ನೀಡಿದ್ದಾರೆ.
The BJP's ideological mentor RSS has distanced itself from a piece published in Panchjanya - a journal with roots in the Sangh - that questioned whether an "anti-national" conspiracy could be behind glitches on India's tax-filing websites handled by information technology giant Infosys Ltd. The editor of the magazine, Hitesh Shankar, backed the article and said if Infosys has objections "it should present its side by urging for a more thorough investigation".
16-08-25 10:03 pm
Bangalore Correspondent
ಸೆ.9ರಂದು ಉಪ ರಾಷ್ಟ್ರಪತಿ ಚುನಾವಣೆ ; ಬಿಹಾರ ರಾಜ್ಯಪ...
16-08-25 09:58 pm
Dharmasthala, Eshwar kandre: ಧರ್ಮಸ್ಥಳ ತಲೆಬುರು...
16-08-25 09:15 pm
BJP, Dharmasthala, DK Shivakumar, SIT Probe:...
16-08-25 08:05 pm
ಧರ್ಮಸ್ಥಳ ಪ್ರಕರಣದಲ್ಲಿ ಸುಳ್ಳು ಹೇಳಿ, ಅಪಪ್ರಚಾರ ಮಾ...
15-08-25 10:29 pm
17-08-25 09:09 pm
HK News Desk
ಜಮ್ಮು, ಕಾಶ್ಮೀರದಲ್ಲಿ ಮತ್ತೆ ಮೇಘ ಸ್ಫೋಟ, ಏಳು ಮಂದಿ...
17-08-25 03:02 pm
ಭಾರತಕ್ಕೆ ಮರಳಿದ ಗಗನಯಾತ್ರಿ ಶುಭಾಂಶು ಶುಕ್ಲಾ ; ದೆಹ...
17-08-25 12:54 pm
Dharmasthala, Dk Shivakumar, Pralhad Joshi: ಧ...
16-08-25 03:34 pm
ಕೆಂಪುಕೋಟೆಯಲ್ಲಿ ಸತತ 12ನೇ ಬಾರಿಗೆ ಸ್ವಾತಂತ್ರ್ಯೋತ್...
15-08-25 08:46 pm
17-08-25 05:26 pm
Mangalore Correspondent
Mangalore, Talapady Toll Plaza Fight: ಟೋಲ್ ತಪ...
17-08-25 04:13 pm
Landslide at Shiradi Ghat: ಭಾರೀ ಮಳೆಗೆ ಶಿರಾಡಿ...
16-08-25 11:11 pm
Dharmasthala, BJP MLA S.R. Vishwanath: ಸೌಜನ್ಯ...
16-08-25 09:19 pm
ಕಾವೂರು ಮೊಸರು ಕುಡಿಕೆ ಉತ್ಸವದಲ್ಲಿ ಡಿಜೆ ಬಳಕೆ ; ಸೌ...
16-08-25 08:26 pm
17-08-25 10:07 pm
Mangalore Correspondent
Mangalore Police, Drugs, Arrest: ಗಾಂಜಾ ಸೇವನೆ...
16-08-25 10:49 pm
Bengaluru Woman Hurls Abuses at Traffic Cops:...
16-08-25 07:06 pm
ಉತ್ತರ ಪ್ರದೇಶದಲ್ಲಿ ಮತ್ತೊಂದು ಮತಾಂತರ ಜಾಲ ; ಹಿಂದು...
16-08-25 11:25 am
Gold Robbery, Mangalore, Kerala: ಕೇರಳದ ಚಿನ್ನದ...
16-08-25 10:20 am