ಬ್ರೇಕಿಂಗ್ ನ್ಯೂಸ್
24-06-21 11:11 am Headline Karnataka News Network ದೇಶ - ವಿದೇಶ
ಫಿಲಿಪೈನ್ಸ್, ಜೂನ್ 24: ಕೊರೊನಾ ಲಸಿಕೆ ಹಾಕಿಸಿಕೊಳ್ಳದಿದ್ದರೆ ಬಂಧಿಸಬೇಕಾಗುತ್ತದೆ. ಒಂದೋ ಕೊರೊನಾ ಲಸಿಕೆ ಹಾಕಿಸಿಕೊಳ್ಳಿ. ಇಲ್ಲದಿದ್ದರೆ ಫಿಲಿಪೈನ್ಸ್ ಬಿಟ್ಟು ಹೋಗಿ. ಭಾರತಕ್ಕೋ, ಅಮೆರಿಕಕ್ಕೆ ಎಲ್ಲಾದ್ರೂ ಹೋಗಿ ಅಡಗಿಕೊಳ್ಳಿ.. ಹೀಗೆಂದು ಫಿಲಿಪೈನ್ಸ್ ಅಧ್ಯಕ್ಷ ರೋಡ್ರಿಗೋ ಡ್ಯುಟರ್ಟ್ ಅಬ್ಬರಿಸಿದ್ದಾರೆ.
ದಕ್ಷಿಣ ಏಷ್ಯಾದಲ್ಲಿ ಕೊರೊನಾ ಸೋಂಕಿಗೆ ಅತಿ ಹೆಚ್ಚು ಪೀಡಿತವಾಗಿರುವ ಫಿಲಿಪೈನ್ಸ್ ದೇಶದಲ್ಲಿ ಕೊರೊನಾ ಲಸಿಕೆ ನೀಡಲಾಗುತ್ತಿದ್ದು, ಆದರೆ ಅಲ್ಲಿನ ಜನರು ಲಸಿಕೆ ಪಡೆಯಲು ನಿರಾಕರಿಸುತ್ತಿದ್ದಾರೆ. ಇದರಿಂದ ಸಿಟ್ಟಾಗಿರುವ ಅಧ್ಯಕ್ಷ ರೋಡ್ರಿಗೋ, ನನ್ನ ಕೈಯಲ್ಲಿ ತಪ್ಪು ಕೆಲಸ ಮಾಡಿಸಬೇಡಿ. ದೇಶದಲ್ಲಿ ತುರ್ತು ಪರಿಸ್ಥಿತಿಯ ಸ್ಥಿತಿ ಎದುರಾಗಿದೆ. ಎಲ್ಲರೂ ವ್ಯಾಕ್ಸಿನ್ ಹಾಕಿಸ್ಕೊಳ್ಳಲೇಬೇಕು. ಇಲ್ಲದಿದ್ದರೆ ನಾನು ಬಂಧಿಸಬೇಕಾಗುತ್ತದೆ. ಬಲವಂತವಾಗಿ ವ್ಯಾಕ್ಸಿನ್ ಚುಚ್ಚಬೇಕಾಗುತ್ತದೆ. ನಾವು ಈಗಾಗ್ಲೇ ಕಷ್ಟದಲ್ಲಿದ್ದು, ಇನ್ನಷ್ಟು ಕಠಿಣ ಸ್ಥಿತಿಗೆ ನೂಕಬೇಡಿ ಎಂದಿದ್ದಾರೆ.


ಆದರೆ, ನನ್ನ ಕೈಗಳಲ್ಲಿ ಆ ರೀತಿಯ ಕೆಲಸ ಮಾಡಿಸಬೇಡಿ. ಬಲವಂತದಿಂದ ಚುಚ್ಚುಮದ್ದು ಹಾಕಿಸುವುದನ್ನು ನೀವು ಬಯಸುವುದಿಲ್ಲ ಎಂದು ಗೊತ್ತು. ಆದರೆ, ವ್ಯಾಕ್ಸಿನ್ ಹಾಕಿಸದೇ ಇದ್ದವರು ಇಲ್ಲಿ ಉಳಿಯಬೇಡಿ. ನೀವು ಭಾರತಕ್ಕೋ, ಅಮೆರಿಕಕ್ಕೋ ಹೋಗಿಬಿಡಿ. ನೀವು ಹೆಚ್ಚು ಕಾಲ ಲಸಿಕೆ ಪಡೆಯದೇ ಇಲ್ಲಿ ಉಳಿದುಕೊಂಡರೆ ನೀವೇ ಇಲ್ಲಿ ವೈರಸ್ ಹರಡುತ್ತೀರಿ. ಹಾಗಾಗಿ ಆದಷ್ಟು ಬೇಗ ವ್ಯಾಕ್ಸಿನ್ ಹಾಕಿಸಿಕೊಳ್ಳಿ ಎಂದು ರೋಡ್ರಿಗೋ ಜನರನ್ನು ಬೆದರಿಸಿದ್ದಾರೆ.
ಕೆಲವು ಮೂರ್ಖರು ಲಸಿಕೆ ಪಡೆಯದೇ ಉಳಿದುಕೊಂಡಿದ್ದಾರೆ. ಅವರೇ ವೈರಸನ್ನು ಹೆಚ್ಚು ಹರಡುತ್ತಾರೆ. ಒಂದು ಕಡೆಯಿಂದ ಇನ್ನೊಂದು ಕಡೆಗೆ ತೆರಳುವಾಗ, ಬೇರೆಯವರಿಗೆ ಹರಡುತ್ತಾರೆ. ಯಾರು ಲಸಿಕೆ ಹಾಕಿಸಿಕೊಳ್ಳದೆ, ಓಡಾಟ ಮಾಡ್ತೀರೋ ಅಂಥವರಿಗೆ ನಾನೇ ವ್ಯಾಕ್ಸಿನ್ ಹಾಕಿಸುತ್ತೇನೆ. ಅವರಿಗೆ ಹಂದಿಗಳಿಗೆ ಕೊಡುವ ivermectin ಇಂಜೆಕ್ಷನ್ ಚುಚ್ಚುತ್ತೇನೆ. ಅದು ನಿಮ್ಮಲ್ಲಿರುವ ವೈರಸ್ಸನ್ನೂ ಕೊಲ್ಲುತ್ತದೆ. ಜೊತೆಗೆ, ನಿಮ್ಮನ್ನೂ ಮುಗಿಸುತ್ತದೆ ಎಂದು ರೋಡ್ರಿಗೋ ಗುಡುಗಿದ್ದಾರೆ.
The Philippines President Rodrigo Duterte said during a public address that people who are not willing to get vaccinated will be arrested. He also asked the vaccine decliners to go to India or America.
22-08-26 10:15 pm
HK News Staffer
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
ದೇಶದ ರಾಜಕೀಯದಲ್ಲಿ ಬಹುದೊಡ್ಡ ಬಿರುಗಾಳಿ; ವಿರುದ್ಧ ಧ...
21-08-26 03:42 pm
ಆಟೋಗಳ ರೀತಿ ಗಂಟೆಗೆ 55 ಕಿಮೀ ಓಡುವ ರೈಲುಗಳನ್ನೇ ‘ಸೂ...
19-08-26 09:55 pm
22-08-26 08:37 pm
HK News Staffer
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
'ಜನ ಗಣ ಮನ' ಗೀತೆಯನ್ನು ಬ್ರಿಟನ್ ರಾಣಿಯ ಹೊಗಳಲು ಬರೆ...
19-08-26 12:10 pm
22-08-26 01:37 pm
HK News Staffer
ಮಂಗಳೂರು ರೈಲ್ವೇ ಕೊನೆಗೂ ಕರ್ನಾಟಕಕ್ಕೆ ಸೇರ್ಪಡೆ ; ಅ...
21-08-26 09:54 pm
Mfc Hotel Raid, Mangalorr: ಕೆಎಫ್ ಸಿ ಬಳಿಕ ಮಂಗಳ...
21-08-26 08:17 pm
ಬೆಂಗಳೂರು, ಮಂಗಳೂರು ಸೇರಿ ರಾಜ್ಯಾದ್ಯಂತ 36 ರೈಲ್ವೇ...
21-08-26 03:12 pm
ಬೆಳ್ತಂಗಡಿ ; ಹುಳ ಬಿದ್ದ ಪಡಿತರ ಅಕ್ಕಿ ಪೂರೈಕೆ, 50ಕ...
20-08-26 05:16 pm
22-08-26 12:43 pm
HK News Staffer
ಬಾಳೆಹಣ್ಣಿಗೆ ಕೃತಕ ಬಣ್ಣ, ಕೆಮಿಕಲ್ ಬಳಸಿ ಹಣ್ಣಾಗಿಸು...
21-08-26 12:20 pm
ಇಷ್ಟದ ವಿದ್ಯಾರ್ಥಿಯನ್ನು ಕಂಡು “ಏಯ್ ಬಾಬೂ” ಎಂದಿದ್ದ...
21-08-26 11:03 am
ಎಸಿಪಿ ಕಚೇರಿ ಅಂಗಳದಲ್ಲೇ ಮಹಾಲಕ್ಷ್ಮಿ ದೇವಸ್ಥಾನಕ್ಕೆ...
20-08-26 08:06 pm
8.50 ಲಕ್ಷ ನಗದು ಹಣದೊಂದಿಗೆ ಬೈಕಿನಲ್ಲಿ ಬರುತ್ತಿದ್ದ...
20-08-26 05:33 pm