ಬ್ರೇಕಿಂಗ್ ನ್ಯೂಸ್
11-05-21 09:28 pm Headline Karnataka News Network ದೇಶ - ವಿದೇಶ
ನವದೆಹಲಿ, ಮೇ 11: ಭಾರತದಲ್ಲಿ ಕಂಡುಬಂದಿರುವ ಕೊರೊನಾ ರೂಪಾಂತರಿ ವೈರಸ್ ಅತಿ ವೇಗವಾಗಿ ಹರಡುತ್ತಿದ್ದು, ಈಗಾಗ್ಲೇ 30ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಕಂಡುಬಂದಿದೆ. ಹೀಗಾಗಿ ಬಿ 1617 ಮಾದರಿಯ ಈ ವೈರಸನ್ನು ಜಗತ್ತಿನಲ್ಲಿ ಕಳವಳ ಮೂಡಿಸಿದ ರೂಪಾಂತರಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಣೆ ಮಾಡಿದೆ.
ಭಾರತದ ಹಲವೆಡೆ ಕಂಡುಬಂದಿರುವ ಬಿ1617 ಹೆಸರಿನ ವೈರಸ್, ಮೂಲ ವೈರಸಿಗಿಂತ ತುಂಬ ವೇಗವಾಗಿ ಮತ್ತು ಸುಲಭದಲ್ಲಿ ಹರಡುತ್ತಿದೆ. 30ಕ್ಕೂ ಹೆಚ್ಚು ದೇಶಗಳಿಗೆ ಈಗಾಗ್ಲೇ ಈ ವೈರಸ್ ಹರಡಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಅಧಿಕಾರಿಗಳು ಹೇಳಿದ್ದಾರೆ.
ಈಗಾಗ್ಲೇ ಡಬ್ಲ್ಯುಎಚ್ ಓ, ಯುಕೆಯಲ್ಲಿ (ಬಿ117), ದಕ್ಷಿಣ ಆಫ್ರಿಕಾ (ಬಿ1351), ಬ್ರಿಜಿಲ್ (ಪಿ1) ದೇಶಗಳಲ್ಲಿ ಕೊರೊನಾ ವೈರಸಿನ ರೂಪಾಂತರಿಗಳನ್ನು ಪತ್ತೆ ಮಾಡಿದ್ದು ಅವುಗಳಿಗೆ ಪ್ರತ್ಯೇಕ ಹೆಸರನ್ನೂ ಇಟ್ಟಿದೆ. ಭಾರತದಲ್ಲಿ ಕಂಡುಬಂದಿರುವ ಪ್ರಭೇದ ವಿಭಿನ್ನವಾಗಿದ್ದು, ಸುಲಭದಲ್ಲಿ ಹರಡುವುದು, ಗಂಭೀರ ಪರಿಣಾಮಗಳಿಗೆ ಕಾರಣವಾಗುವುದು, ರೋಗ ನಿರೋಧಕ ಶಕ್ತಿಯನ್ನು ನಾಶ ಮಾಡುವುದು, ಚಿಕಿತ್ಸೆ ಅಥವಾ ಲಸಿಕೆಯ ಪರಿಣಾಮಗಳನ್ನು ಕುಂಠಿತಗೊಳಿಸುವುದನ್ನು ಪತ್ತೆ ಮಾಡಲಾಗಿದೆ. ಇವೆಲ್ಲ ಕಾರಣಗಳಿಂದಾಗಿ ಜಾಗತಿಕ ಮಟ್ಟದಲ್ಲಿ ತುಂಬ ವಿಭಿನ್ನ ತಳಿಯೆಂದು ಗುರುತಿಸಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಕೋವಿಡ್ 19 ಟೆಕ್ನಿಕಲ್ ಮುಖ್ಯಸ್ಥೆ ಮರಿಯಾ ವೆನ್ ಕೆರ್ಕೋವ್ ಹೇಳಿದ್ದಾರೆ.
ಹಾಗಿದ್ದರೂ, ಈಗ ಲಭ್ಯವಿರುವ ಲಸಿಕೆಗಳು ಹೊಸ ಮಾದರಿಯ ವೈರಸ್ ದಾಳಿಯ ಪರಿಣಾಮಗಳಿಂದ ಮತ್ತು ಅದರಿಂದ ಸಾವು ಸಂಭವಿಸುವುದನ್ನು ತಪ್ಪಿಸುವಷ್ಟು ಶಕ್ತವಾಗಿದೆ ಎಂದಿದ್ದಾರೆ. ಜಗತ್ತಿನಲ್ಲೀಗ ಕೋವಿಡ್ 19 ವೈರಸ್ಸಿನ ಹತ್ತು ರೂಪಾಂತರಿ ವೈರಸ್ ಗಳನ್ನು ಪತ್ತೆ ಮಾಡಲಾಗಿದೆ. ಅದರಲ್ಲಿ ಬಿ1617 ಮಾದರಿಯ ವೈರಸ್ ವಿಭಿನ್ನವಾಗಿರುವುದು ಕಂಡುಬಂದಿದೆ. ಇದರ ಬಗ್ಗೆ ಅರಿತುಕೊಳ್ಳಲು ಇನ್ನಷ್ಟು ಸಂಶೋಧನೆ ಅಗತ್ಯವಿದೆ ಎಂದಿದ್ದಾರೆ.
A World Health Organization official said Monday it is reclassifying the highly contagious triple-mutant Covid variant spreading in India as a “variant of concern,” indicating that it’s become a global health threat.
22-08-26 10:15 pm
HK News Staffer
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
ದೇಶದ ರಾಜಕೀಯದಲ್ಲಿ ಬಹುದೊಡ್ಡ ಬಿರುಗಾಳಿ; ವಿರುದ್ಧ ಧ...
21-08-26 03:42 pm
ಆಟೋಗಳ ರೀತಿ ಗಂಟೆಗೆ 55 ಕಿಮೀ ಓಡುವ ರೈಲುಗಳನ್ನೇ ‘ಸೂ...
19-08-26 09:55 pm
22-08-26 08:37 pm
HK News Staffer
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
'ಜನ ಗಣ ಮನ' ಗೀತೆಯನ್ನು ಬ್ರಿಟನ್ ರಾಣಿಯ ಹೊಗಳಲು ಬರೆ...
19-08-26 12:10 pm
22-08-26 01:37 pm
HK News Staffer
ಮಂಗಳೂರು ರೈಲ್ವೇ ಕೊನೆಗೂ ಕರ್ನಾಟಕಕ್ಕೆ ಸೇರ್ಪಡೆ ; ಅ...
21-08-26 09:54 pm
Mfc Hotel Raid, Mangalorr: ಕೆಎಫ್ ಸಿ ಬಳಿಕ ಮಂಗಳ...
21-08-26 08:17 pm
ಬೆಂಗಳೂರು, ಮಂಗಳೂರು ಸೇರಿ ರಾಜ್ಯಾದ್ಯಂತ 36 ರೈಲ್ವೇ...
21-08-26 03:12 pm
ಬೆಳ್ತಂಗಡಿ ; ಹುಳ ಬಿದ್ದ ಪಡಿತರ ಅಕ್ಕಿ ಪೂರೈಕೆ, 50ಕ...
20-08-26 05:16 pm
22-08-26 12:43 pm
HK News Staffer
ಬಾಳೆಹಣ್ಣಿಗೆ ಕೃತಕ ಬಣ್ಣ, ಕೆಮಿಕಲ್ ಬಳಸಿ ಹಣ್ಣಾಗಿಸು...
21-08-26 12:20 pm
ಇಷ್ಟದ ವಿದ್ಯಾರ್ಥಿಯನ್ನು ಕಂಡು “ಏಯ್ ಬಾಬೂ” ಎಂದಿದ್ದ...
21-08-26 11:03 am
ಎಸಿಪಿ ಕಚೇರಿ ಅಂಗಳದಲ್ಲೇ ಮಹಾಲಕ್ಷ್ಮಿ ದೇವಸ್ಥಾನಕ್ಕೆ...
20-08-26 08:06 pm
8.50 ಲಕ್ಷ ನಗದು ಹಣದೊಂದಿಗೆ ಬೈಕಿನಲ್ಲಿ ಬರುತ್ತಿದ್ದ...
20-08-26 05:33 pm