ಬ್ರೇಕಿಂಗ್ ನ್ಯೂಸ್
11-05-21 09:28 pm Headline Karnataka News Network ದೇಶ - ವಿದೇಶ
ನವದೆಹಲಿ, ಮೇ 11: ಭಾರತದಲ್ಲಿ ಕಂಡುಬಂದಿರುವ ಕೊರೊನಾ ರೂಪಾಂತರಿ ವೈರಸ್ ಅತಿ ವೇಗವಾಗಿ ಹರಡುತ್ತಿದ್ದು, ಈಗಾಗ್ಲೇ 30ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಕಂಡುಬಂದಿದೆ. ಹೀಗಾಗಿ ಬಿ 1617 ಮಾದರಿಯ ಈ ವೈರಸನ್ನು ಜಗತ್ತಿನಲ್ಲಿ ಕಳವಳ ಮೂಡಿಸಿದ ರೂಪಾಂತರಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಣೆ ಮಾಡಿದೆ.
ಭಾರತದ ಹಲವೆಡೆ ಕಂಡುಬಂದಿರುವ ಬಿ1617 ಹೆಸರಿನ ವೈರಸ್, ಮೂಲ ವೈರಸಿಗಿಂತ ತುಂಬ ವೇಗವಾಗಿ ಮತ್ತು ಸುಲಭದಲ್ಲಿ ಹರಡುತ್ತಿದೆ. 30ಕ್ಕೂ ಹೆಚ್ಚು ದೇಶಗಳಿಗೆ ಈಗಾಗ್ಲೇ ಈ ವೈರಸ್ ಹರಡಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಅಧಿಕಾರಿಗಳು ಹೇಳಿದ್ದಾರೆ.
ಈಗಾಗ್ಲೇ ಡಬ್ಲ್ಯುಎಚ್ ಓ, ಯುಕೆಯಲ್ಲಿ (ಬಿ117), ದಕ್ಷಿಣ ಆಫ್ರಿಕಾ (ಬಿ1351), ಬ್ರಿಜಿಲ್ (ಪಿ1) ದೇಶಗಳಲ್ಲಿ ಕೊರೊನಾ ವೈರಸಿನ ರೂಪಾಂತರಿಗಳನ್ನು ಪತ್ತೆ ಮಾಡಿದ್ದು ಅವುಗಳಿಗೆ ಪ್ರತ್ಯೇಕ ಹೆಸರನ್ನೂ ಇಟ್ಟಿದೆ. ಭಾರತದಲ್ಲಿ ಕಂಡುಬಂದಿರುವ ಪ್ರಭೇದ ವಿಭಿನ್ನವಾಗಿದ್ದು, ಸುಲಭದಲ್ಲಿ ಹರಡುವುದು, ಗಂಭೀರ ಪರಿಣಾಮಗಳಿಗೆ ಕಾರಣವಾಗುವುದು, ರೋಗ ನಿರೋಧಕ ಶಕ್ತಿಯನ್ನು ನಾಶ ಮಾಡುವುದು, ಚಿಕಿತ್ಸೆ ಅಥವಾ ಲಸಿಕೆಯ ಪರಿಣಾಮಗಳನ್ನು ಕುಂಠಿತಗೊಳಿಸುವುದನ್ನು ಪತ್ತೆ ಮಾಡಲಾಗಿದೆ. ಇವೆಲ್ಲ ಕಾರಣಗಳಿಂದಾಗಿ ಜಾಗತಿಕ ಮಟ್ಟದಲ್ಲಿ ತುಂಬ ವಿಭಿನ್ನ ತಳಿಯೆಂದು ಗುರುತಿಸಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಕೋವಿಡ್ 19 ಟೆಕ್ನಿಕಲ್ ಮುಖ್ಯಸ್ಥೆ ಮರಿಯಾ ವೆನ್ ಕೆರ್ಕೋವ್ ಹೇಳಿದ್ದಾರೆ.
ಹಾಗಿದ್ದರೂ, ಈಗ ಲಭ್ಯವಿರುವ ಲಸಿಕೆಗಳು ಹೊಸ ಮಾದರಿಯ ವೈರಸ್ ದಾಳಿಯ ಪರಿಣಾಮಗಳಿಂದ ಮತ್ತು ಅದರಿಂದ ಸಾವು ಸಂಭವಿಸುವುದನ್ನು ತಪ್ಪಿಸುವಷ್ಟು ಶಕ್ತವಾಗಿದೆ ಎಂದಿದ್ದಾರೆ. ಜಗತ್ತಿನಲ್ಲೀಗ ಕೋವಿಡ್ 19 ವೈರಸ್ಸಿನ ಹತ್ತು ರೂಪಾಂತರಿ ವೈರಸ್ ಗಳನ್ನು ಪತ್ತೆ ಮಾಡಲಾಗಿದೆ. ಅದರಲ್ಲಿ ಬಿ1617 ಮಾದರಿಯ ವೈರಸ್ ವಿಭಿನ್ನವಾಗಿರುವುದು ಕಂಡುಬಂದಿದೆ. ಇದರ ಬಗ್ಗೆ ಅರಿತುಕೊಳ್ಳಲು ಇನ್ನಷ್ಟು ಸಂಶೋಧನೆ ಅಗತ್ಯವಿದೆ ಎಂದಿದ್ದಾರೆ.
A World Health Organization official said Monday it is reclassifying the highly contagious triple-mutant Covid variant spreading in India as a “variant of concern,” indicating that it’s become a global health threat.
14-08-25 03:51 pm
Bangalore Correspondent
DK Shivakumar, Dharmasthala, Virendra Heggade...
14-08-25 03:49 pm
IPS Alok Kumar, News: ಪೊಲೀಸ್ ಶಾಲೆಗಳಲ್ಲೇ ಲಂಚ,...
14-08-25 01:48 pm
Dharmasthala Case, Dinesh Gundu Rao: ಮತ್ತೆ ಗು...
13-08-25 07:03 pm
ವಜಾ ಹಿಂದೆ ದೊಡ್ಡ ಷಡ್ಯಂತ್ರ ಆಗಿದೆ, ರಾಹುಲ್ ಗಾಂಧಿ...
12-08-25 10:39 pm
14-08-25 07:24 pm
HK News Desk
ಯುಎಇ ಸುದ್ದಿ ; ಆರೇ ತಿಂಗಳಲ್ಲಿ ದುಬೈನಲ್ಲಿ 3,600ಕ್...
14-08-25 07:02 pm
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮೋಡಿ ಮಾಡಲಿದ್ದಾರ...
14-08-25 11:26 am
ತಾಯಿ ಜೊತೆ ಅಂಡಮಾನ್ ಹೋಗ್ತೀನಿ ಎಂದಿದ್ದ ಮಗಳು ; ಬೇಡ...
13-08-25 11:56 am
ಪುಣ್ಯಕ್ಷೇತ್ರ ಯಾತ್ರೆ ಹೊರಟವರ ಮೇಲೆರಗಿದ ಜವರಾಯ ; ರ...
13-08-25 10:41 am
14-08-25 10:29 pm
Mangalore Correspondent
SCDCC Bank Launches Special Independence Day...
14-08-25 01:12 pm
Bantwal Deputy Tahsildar, Lokayukta: 20 ಸಾವಿರ...
13-08-25 10:22 pm
Dharmasthala News Today, Point No 13: ಕಡೆಗೂ ಪ...
13-08-25 10:01 pm
The Ocean Pearl Brings “Flavors of India” to...
13-08-25 08:23 pm
14-08-25 05:31 pm
Bangalore Correspondent
Supreme Court, Actor Darshan Jail Order: ಸುಪ್...
14-08-25 11:51 am
Fake Stock Market Scam, Fraud: 10 ಲಕ್ಷ ಹೂಡಿಕೆ...
13-08-25 05:40 pm
Fraud, Laxmi Hebbalkar: ಸಚಿವೆ ಲಕ್ಷ್ಮೀ ಹೆಬ್ಬಾಳ...
13-08-25 04:14 pm
ಅನೈತಿಕ ಸಂಬಂಧ ಶಂಕೆ ; ಅತ್ತೆ ಮೇಲಿನ ದ್ವೇಷದಿಂದ ಕೊಲ...
12-08-25 12:36 pm