ಬ್ರೇಕಿಂಗ್ ನ್ಯೂಸ್
07-09-24 03:02 pm HK News Desk ದೇಶ - ವಿದೇಶ
ಇಂದೋರ್, ಸೆ.7: ಪತಿಯ ನಿರಂತರ ಕಿರುಕುಳದಿಂದ ನೊಂದ ಮುಸ್ಲಿಂ ಮಹಿಳೆಯೊಬ್ಬರು ತನ್ನ ಇಬ್ಬರು ಮಕ್ಕಳೊಂದಿಗೆ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಘಟನೆ ಮಧ್ಯಪ್ರದೇಶದ ಮಂಡಸೌರ್ ಜಿಲ್ಲೆಯಲ್ಲಿ ನಡೆದಿದೆ. ಮಹಿಳೆ ತನ್ನ ಪುತ್ರರಿಗೆ ಲವ-ಕುಶ ಎಂದು ಹೆಸರಿಟ್ಟಿದ್ದು ತನ್ನ ಹೆಸರನ್ನು ಮೆಹನಾಜ್ ಬದಲಿಗೆ ಮೀನಾಕ್ಷಿ ಎಂದು ಬದಲಿಸಿದ್ದಾರೆ.
ಧಮ್ನಾರ್ ಗ್ರಾಮದ ನಿವಾಸಿ ಮೆಹನಾಜ್ (30) ಅವರು ತಮ್ಮ 12 ಮತ್ತು 11 ವರ್ಷದ ಇಬ್ಬರು ಪುತ್ರರೊಂದಿಗೆ ಮಂಡಸೌರ್ನ ಗಾಯತ್ರಿ ದೇವಸ್ಥಾನದಲ್ಲಿ ಮತಾಂತರ ಆಗಿದ್ದು ಶುದ್ಧೀಕರಣದ ನಂತರ ಮನೆಗೆ ಮರಳಿದ್ದಾರೆ. ಮನೆಯವರು ತನಗೆ ಚಿತ್ರಹಿಂಸೆ ನೀಡಿದ್ದಾರೆ ಎಂದು ಮೀನಾಕ್ಷಿ ಹೇಳಿದ್ದಾರೆ. ಸನಾತನ ಧರ್ಮದಲ್ಲಿ ಮಹಿಳೆಯರಿಗೆ ಗೌರವವಿದೆ ಎಂಬ ದೃಷ್ಟಿಯಿಂದ ಮತಾಂತರ ಆಗಿದ್ದೇನೆ ಎಂದು ಹೇಳಿದರು. ತಾನೇ ಹಿಂದೂ ಸಂಘಟನೆಯ ಜನರನ್ನು ಸಂಪರ್ಕಿಸಿ ಸನಾತನ ಧರ್ಮವನ್ನು ಅಳವಡಿಸಿಕೊಂಡಿದ್ದಾರೆ.
ಮಾಹಿತಿ ಪ್ರಕಾರ, ಮೆಹನಾಜ್ 15 ವರ್ಷಗಳ ಹಿಂದೆ ಧಮ್ನಾರ್ನ ಇರ್ಫಾನ್ ಖಾನ್ ಎಂಬವರನ್ನು ಮದುವೆಯಾಗಿದ್ದರು. ಮೆಹನಾಜ್ ತಂದೆ ಅಬ್ದುಲ್ ರಶೀದ್ ರೈತ. ಆರಂಭದಲ್ಲಿ ಎಲ್ಲವೂ ಸರಿಯಾಗಿತ್ತು. ಆದರೆ ನಂತರ ಪತಿ ಮತ್ತು ಅತ್ತೆ ಸಣ್ಣಪುಟ್ಟ ವಿಷಯಗಳಿಗೂ ಜಗಳ ಆರಂಭಿಸಿದರು. ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದು ಸಣ್ಣಪುಟ್ಟ ವಿಚಾರಕ್ಕೂ ಕೈ ಎತ್ತುತ್ತಿದ್ದರು. ಈ ಬಗ್ಗೆ ನನ್ನ ತಂದೆಗೆ ತಿಳಿಸಿದಾಗ, ಅವರು ಇದು ನಿಮ್ಮ ಕುಟುಂಬದ ವಿಷಯ ಎಂದು ಹೇಳಿ ಸಹಾಯಕ್ಕೆ ಬರಲಿಲ್ಲ.
ದೇವಸ್ಥಾನದಲ್ಲಿ ಒಂದೂವರೆ ಗಂಟೆಗಳ ಕಾಲ ಮಂತ್ರಗಳನ್ನು ಪಠಿಸಿದ ನಂತರ ತಾಯಿ ಮಕ್ಕಳು ಸನಾತನ ಧರ್ಮಕ್ಕೆ ಮತಾಂತರಗೊಂಡರು. ಮಹಿಳೆ ಮತ್ತು ಇಬ್ಬರು ಪುತ್ರರಿಗೆ ವೇದ ಮಂತ್ರಗಳೊಂದಿಗೆ ಹಾಲು, ಮೊಸರು, ಜೇನುತುಪ್ಪ, ಗಂಗಾಜಲ, ಗೋಮೂತ್ರ ಮತ್ತು ಗೋಮಯದಿಂದ ಸ್ನಾನ ಮಾಡಲಾಯಿತು. ಇದೇ ವೇಳೆ, ಹಿಂದೂ ಯುವವಾಹಿನಿಯ ರಾಜ್ಯ ಉಸ್ತುವಾರಿ ಚೈತನ್ಯ ಸಿಂಗ್ ರಜಪೂತ್ ಮಾತನಾಡಿ, 2-3 ತಿಂಗಳ ಹಿಂದೆ ಮೆಹನಾಜ್ ನಮ್ಮನ್ನು ಸಂಪರ್ಕಿಸಿದ್ದರು. ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ, ಮೆಹ್ನಾಜ್ ಮತ್ತು ಅವರ ಇಬ್ಬರು ಪುತ್ರರನ್ನು ಘರ್ ವಾಪ್ಸಿ ಮಾಡಿಸಲಾಯಿತು. ಇದುವರೆಗೆ 40 ಮಹಿಳೆಯರು, 5 ಪುರುಷರು ಮತ್ತು ಇಬ್ಬರು ಮಕ್ಕಳನ್ನು ಕಾನೂನು ಪ್ರಕಾರವೇ ಘರ್ ವಾಪ್ಸಿ ಮಾಡಿಸಿದ್ದೇವೆ ಎಂದು ಹೇಳಿದ್ದಾರೆ.
Indore Muslim women converts to Hindu with her two children after torture by husband.
06-10-25 05:27 pm
HK News Desk
Basavaraj Rayareddy, Mallikarjuna kharge, CM...
05-10-25 09:41 pm
ನಾಯಿ ದಾಳಿಗೆ ಸ್ಥಳೀಯರ ಆಕ್ರೋಶ ; ಬೀದಿ ನಾಯಿಗಳ ಮೇಲೆ...
05-10-25 08:08 pm
ಲಿಂಗಾಯತರನ್ನು ಪ್ರತ್ಯೇಕಿಸುವುದು ಸಮಾಜ ವಿರೋಧಿ ಕೆಲಸ...
05-10-25 07:57 pm
ಬಿಹಾರ ಚುನಾವಣೆ ಬಳಿಕ ರಾಜ್ಯದಲ್ಲಿ ರಾಜಕೀಯ ಕ್ರಾಂತಿ...
05-10-25 07:38 pm
06-10-25 07:56 pm
HK News Desk
ಬಿಹಾರ ಚುನಾವಣೆಗೆ ಮುಹೂರ್ತ ನಿಗದಿ ; ಎರಡು ಹಂತದಲ್ಲಿ...
06-10-25 07:21 pm
ಕುಂಬಳೆಯಲ್ಲಿ ಡಿವೈಎಫ್ಐ ನಾಯಕಿ, ಯುವ ವಕೀಲೆ ಆತ್ಮಹತ್...
05-10-25 11:07 pm
ಡೆಡ್ಲಿ ಸಿರಪ್ 'ಕೋಲ್ಡ್ರಿಫ್ 'ಶಿಫಾರಸು ಮಾಡಿದ್ದ...
05-10-25 10:38 pm
Coldrif syrup: ಸಿರಪ್ ಸೇವಿಸಿ 11 ಮಕ್ಕಳು ಸಾವು ;...
04-10-25 04:45 pm
06-10-25 07:19 pm
Mangalore Correspondent
ಮಂಗಳೂರಿನ ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಹೃದ್ರೋಗ...
06-10-25 04:57 pm
ಟ್ರಾಫಿಕ್ ಸಿಬಂದಿ ಕಾರು ನಿಲ್ಲಿಸಲೆತ್ನಿಸಿ ಒಡೆದ ಗಾಜ...
06-10-25 02:58 pm
Ullal, UT Khader, Sharadotsava Clash: ಉಳ್ಳಾಲ...
04-10-25 10:29 pm
103ನೇ ವರ್ಷದ ರಥಬೀದಿ 'ಮಂಗಳೂರು ಶಾರದಾ ಮಹೋತ್ಸವ' ಸಂ...
03-10-25 11:07 pm
05-10-25 03:22 pm
Mangalore Correspondent
Shivamogga Murder, Mother: ಶಿವಮೊಗ್ಗ ; ಮಗಳನ್ನು...
04-10-25 02:57 pm
Karkala Murder, Crime: ಕಾರ್ಕಳ ; ಪ್ರೀತಿಸಿದ ಯುವ...
03-10-25 11:28 pm
ಸುಧಾಮೂರ್ತಿ, ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಎಐ ವಿಡ...
01-10-25 02:39 pm
Ullal Gold Robbery, Mangalore, CCB police: ಜು...
29-09-25 01:24 pm