ಬ್ರೇಕಿಂಗ್ ನ್ಯೂಸ್
13-04-24 08:49 pm H K News ದೇಶ - ವಿದೇಶ
ಕೋಜಿಕ್ಕೋಡ್, ಎ.13: ಸೌದಿ ಅರೇಬಿಯಾದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ವ್ಯಕ್ತಿಯನ್ನು ಕೇರಳದಲ್ಲಿ ಅಭಿಯಾನ ನಡೆಸುವ ಮೂಲಕ 34 ಕೋಟಿ ಹಣ ಒಟ್ಟು ಮಾಡಿ ಶಿಕ್ಷೆಯಿಂದ ಪಾರು ಮಾಡಲಾಗಿದೆ.
ಕೋಜಿಕ್ಕೋಡ್ ಮೂಲದ ನಿವಾಸಿ ಅಬ್ದುಲ್ ರಹೀಮ್ ಸೌದಿ ಅರೇಬಿಯಾದಲ್ಲಿ ಗಲ್ಲು ಶಿಕ್ಷೆಯಿಂದ ಪಾರಾಗಿ ಬಂದವರು. 18 ವರ್ಷಗಳಿಂದ ಜೈಲಿನಲ್ಲಿದ್ದ ಅಬ್ದುಲ್ ರಹೀಮ್ ಪರವಾಗಿ ಕೇರಳದಲ್ಲಿ ಬಹುದೊಡ್ಡ ಅಭಿಯಾನ ನಡೆಸಲಾಗಿತ್ತು. ಅಬ್ದುರ್ ರಹೀಂ 2006ರಲ್ಲಿ ಡ್ರೈವರ್ ವೀಸಾದಲ್ಲಿ ರಿಯಾದ್ ತೆರಳಿದ್ದರು. ಸೌದಿ ಕುಟುಂಬದ ಮನೆಯೊಂದರಲ್ಲಿ ಕಾರು ಚಾಲಕನಾಗಿದ್ದುಕೊಂಡು ಬುದ್ಧಿಮಾಂದ್ಯ ಬಾಲಕನನ್ನು ನೋಡಿಕೊಳ್ಳುವ ಜವಾಬ್ದಾರಿಯೂ ಜೊತೆಗಿತ್ತು. ಕಾರಿನಲ್ಲಿ ಬಾಲಕನ ಜೊತೆಗೆ ಪ್ರಯಾಣಿಸುತ್ತಿದ್ದಾಗ ಅಪಘಾತವಾಗಿದ್ದು, ಬಾಲಕನಿಗೆ ಇಡಲಾಗಿದ್ದ ಕೃತಕ ಉಸಿರಾಟದ ಮೆಷಿನ್ ಸಂಪರ್ಕ ಕಡಿತವಾಗಿತ್ತು. ರಕ್ಷಿಸಲು ಅಬ್ದುಲ್ ರಹೀಂ ಮಾಡಿದ ಪ್ರಯತ್ನ ಕೈಕೊಟ್ಟಿದ್ದರಿಂದ ಬಾಲಕ ಮೃತಪಟ್ಟಿದ್ದ. ಅದರಂತೆ, ರಹೀಮ್ ವಿರುದ್ಧ ದಾಖಲಾಗಿ ಸೌದಿ ಕಾನೂನು ಪ್ರಕಾರ ಜೈಲಿನಲ್ಲಿ ಇಡಲಾಗಿತ್ತು.
2018ರಲ್ಲಿ ಸೌದಿ ಕೋರ್ಟ್ ರಹೀಮ್ ಗೆ ಬಾಲಕನ ಸಾವಿಗೆ ಕಾರಣವಾಗಿದ್ದಕ್ಕೆ ಪ್ರತಿಯಾಗಿ ಗಲ್ಲು ಶಿಕ್ಷೆ ವಿಧಿಸಿತ್ತು. ಇದೇ ವೇಳೆ, ಬಾಲಕನ ಕುಟುಂಬಕ್ಕೆ ‘ಬ್ಲಡ್ ಮನಿ’ ರೂಪದಲ್ಲಿ 34 ಕೋಟಿ ಪರಿಹಾರ ಧನ ಪಾವತಿಸಿದಲ್ಲಿ ಗಲ್ಲು ಶಿಕ್ಷೆಯಿಂದ ಕಡಿತ ಮಾಡುವ ಪ್ರಸ್ತಾಪ ಇಡಲಾಗಿತ್ತು. ಹೀಗಾಗಿ ಲೀಗಲ್ ಏಕ್ಷನ್ ಕಮಿಟಿ ಹೆಸರಲ್ಲಿ ರಹೀಮ್ ಪರವಾಗಿ ಅಭಿಯಾನ ನಡೆಸಿದ್ದಕ್ಕೆ ಕೇರಳದ ಜನರು ಸ್ಪಂದಿಸಿದ್ದು ಹಣ ಹೊಂದಿಸುವ ಮೂಲಕ ಸಹಾಯ ಹಸ್ತ ಚಾಚಿದ್ದಾರೆ.
ಸೇವ್ ಅಬ್ದುಲ್ ರಹೀಂ ಹೆಸರಲ್ಲಿ ಪ್ರತ್ಯೇಕ ಏಪ್ ಮಾಡಿ, ಹಣಕ್ಕಾಗಿ ಕ್ಯಾಂಪೇನ್ ಮಾಡಲಾಗಿತ್ತು. ಎನ್ಆರ್ ಐ ಉದ್ಯಮಿಗಳು, ಸಾಮಾಜಿಕ ಕಾರ್ಯಕರ್ತರು ಅಭಿಯಾನದ ಮುಂಚೂಣಿಯಲ್ಲಿದ್ದರಿಂದ ಹಣ ಹರಿದು ಬಂದಿತ್ತು. 34 ಕೋಟಿ ಹಣ ಒಟ್ಟಾಗುತ್ತಲೇ ಭಾರತೀಯ ವಿದೇಶಾಂಗ ಇಲಾಖೆಯ ಮೂಲಕ ಸೌದಿ ಅರೇಬಿಯಾದ ಇಂಡಿಯನ್ ಎಂಬಸ್ಸಿಗೆ ಹಣ ತಲುಪಿಸಲಾಗಿದೆ. ರಿಯಾದ್ ಜೈಲಿನಲ್ಲಿರುವ ಅಬ್ದುಲ್ ರಹೀಂ ತನ್ನೂರಿನ ಜನರು ಹಣ ಒಟ್ಟು ಮಾಡಿದ್ದರಿಂದ ಸಂತಸಗೊಂಡಿದ್ದು ಇದು ಒರಿಜಿನಲ್ ಕೇರಳ ಸ್ಟೋರಿ ಎಂದು ಪ್ರತಿಕ್ರಿಯಿಸಿದ್ದಾರೆ.
The deadline loomed like the sword of Damocles but an astonishing four days is all it took for people in Kerala to channel their compassion and rally together to raise an astounding ₹34 crore to save a man from the state from the gallows in Saudi Arabia.
28-06-26 06:30 pm
HK News Staffer
ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಗಲಾಟೆ ; ಪ್ರದೀಪ್...
27-06-26 08:31 pm
ಅಂಬಾನಿ ಕೊಟ್ಟ 900 ಕೋಟಿ ದೇಣಿಗೆಗೂ ಲೆಕ್ಕ ಇಲ್ಲ, ಈಗ...
27-06-26 04:21 pm
ಆರ್ಎಸ್ಎಸ್ ಗಲಿಬಿಲಿಗೊಂಡರೆ ಬಿಜೆಪಿ ಬುಸುಗುಡುತ್ತದ...
26-06-26 08:30 pm
ಬಿಡದಿಯಲ್ಲಿ ರೈತರ ವಿರುದ್ಧವಾಗಿ ಟೌನ್ಶಿಪ್ ಕಟ್ಟುವ...
26-06-26 05:10 pm
28-06-26 04:03 pm
HK News Staffer
ದೇಶಾದ್ಯಂತ ಕಿಡ್ನಿ ಕಸಿ ಪ್ರಕ್ರಿಯೆ ಫಲಿತಾಂಶಗಳ ಬಹಿರ...
27-06-26 09:10 pm
40 ಸೆಕೆಂಡ್ ನಲ್ಲಿ ಎರಡು ಬಾರಿ ಭೂಕಂಪ ; ತತ್ತರಿಸಿ ಹ...
25-06-26 12:13 pm
ಕೂಲ್ ಸಿಟಿ ಯುರೋಪಿನಲ್ಲೀಗ ಬಿಸಿಲ ಹೊಡೆತ ; ಫ್ರಾನ್ಸ್...
24-06-26 01:51 pm
ಮಾಹಿತಿ ಹಕ್ಕು ನಿಯಮಗಳಿಗೆ ಮಹಾರಾಷ್ಟ್ರ ಸರ್ಕಾರ ತಿದ್...
23-06-26 10:47 pm
27-06-26 02:44 pm
HK News Staffer
Rss ಸಂಘಟನೆಯನ್ನು ರಿಜಿಸ್ಟರ್ ಮಾಡಿದ್ರೆ ಒಳ್ಳೇದು ;...
26-06-26 09:42 pm
ಸಾಂಪ್ರದಾಯಿಕ ಕನ್ನಡ ಎಂಎ ಪದವಿಗೆ ಆಧುನಿಕ ಟಚ್; ಸಂತ...
26-06-26 08:33 pm
ಡಿಕೆಶಿ ಜೊತೆ ಯಾವುದೇ ವ್ಯಾವಹಾರಿಕ ಸಂಬಂಧವಿಲ್ಲ, ಅಪಪ...
26-06-26 02:14 pm
ಮಂಗಳೂರು, ಮೈಸೂರು ಸೇರಿ ರಾಜ್ಯದ 10 ನಗರಗಳಿಗೆ ಇಲೆಕ್...
25-06-26 10:56 pm
28-06-26 09:38 pm
HK News Staffer
Derlakatte Accident, Mangalore: ದೇರಳಕಟ್ಟೆ ಬಳಿ...
27-06-26 08:01 pm
ಬೆಂಗಳೂರಿನಿಂದ ಪ್ರಿಯತಮೆಯ ಅಪಹರಣ ; ಅಂಕೋಲಾಕ್ಕೆ ಹೋಗ...
27-06-26 04:23 pm
ಬೆಂಗಳೂರಿನಲ್ಲಿ ಅಕ್ರಮ ಹಣದ ಭಾರಿ ಬೇಟೆ ; ಕುರುಬರಹಳ್...
27-06-26 04:19 pm
ಮಂತ್ರಾಲಯ ಯಾತ್ರೆ ಮಧ್ಯೆ ಯಮನಂತೆ ನುಗ್ಗಿದ ಲಾರಿ! ಡಿ...
27-06-26 11:46 am