ಬ್ರೇಕಿಂಗ್ ನ್ಯೂಸ್
07-07-26 03:50 pm HK News Staffer ಕ್ರೈಂ
ಉಳ್ಳಾಲ, ಜು.07: ಕೊಣಾಜೆ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾಗಿರುವ ಪೋಕ್ಸೊ ಪ್ರಕರಣದ ಆರೋಪಿ ಆಟೋ ಚಾಲಕನನ್ನು ಪೊಲೀಸರು ಆಟೋದಲ್ಲಿ ಠಾಣೆಗೆ ಕರೆತರುತ್ತಿದ್ದಾಗ ಆರೋಪಿ ಹೊರಕ್ಕೆ ಜಿಗಿದು ಪರಾರಿಯಾದ ಘಟನೆ ನಡುಪದವು ಎಂಬಲ್ಲಿ ಸೋಮವಾರ ನಡೆದಿದ್ದು ಸ್ಥಳೀಯ ಕಾಂಗ್ರೆಸ್ ಪುಢಾರಿಯೊಬ್ಬ ಕೇಸನ್ನು ಮುಚ್ಚಿ ಹಾಕಲು ಒತ್ತಡ ಹೇರಿದ ಹಿನ್ನೆಲೆಯಲ್ಲಿ ಕೊಣಾಜೆ ಪೊಲೀಸರು ಪ್ರಕರಣವನ್ನು ಹಳ್ಳ ಹಿಡಿಸಲು ಯತ್ನಿಸುತ್ತಿದ್ದಾರೆಂಬ ಆರೋಪ ಕೇಳಿಬಂದಿದೆ.
ಆರೋಪಿ ಆಟೋ ಚಾಲಕ ಕೊಣಾಜೆ ಠಾಣೆ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕಿಗೆ ತನ್ನ ಗುಪ್ತಾಂಗ ತೋರಿಸಿದ್ದು, ಆಕ್ರೋಶಗೊಂಡ ಬಾಲಕಿ ಕಡೆಯವರು ಆರೋಪಿಗೆ ಹಿಗ್ಗಾಮುಗ್ಗಾ ಗೂಸಾ ನೀಡಿದ್ದರೆನ್ನಲಾಗಿದೆ. ಕೊಣಾಜೆ ಪೊಲೀಸರಿಗೆ ವಿಚಾರ ತಿಳಿದು ರಿಕ್ಷಾ ಚಾಲಕನಾಗಿದ್ದ ಆರೋಪಿಯ ಮೊಬೈಲ್ ಟವರನ್ನ ಟ್ರೇಸ್ ಮಾಡಿದ್ದಾರೆ. ನಿನ್ನೆ (ಸೋಮವಾರ) ಮಧ್ಯಾಹ್ನ ಆರೋಪಿಯನ್ನ ಕೊಣಾಜೆ ಪೊಲೀಸರಿಬ್ಬರು ಮುಡಿಪುವಿನಲ್ಲಿ ವಶಕ್ಕೆ ಪಡೆದು ಆತನ ಆಟೋ ರಿಕ್ಷಾದಲ್ಲೇ ಪೊಲೀಸ್ ಠಾಣೆಯ ಕಡೆ ಬಂದಿದ್ದಾರೆ. ನಡುಪದವು ತಲುಪುತ್ತಿದ್ದಂತೆ ಆರೋಪಿ ರಿಕ್ಷಾ ಚಾಲಕ ಚಾಲನೆಯಲ್ಲಿದ್ದ ಆಟೋ ರಿಕ್ಷಾದಿಂದ ಜಿಗಿದು ಪರಾರಿಯಾಗಿದ್ದಾನೆ. ಇಬ್ಬರು ಪೊಲೀಸರಿದ್ದ ಆಟೋ ರಿಕ್ಷಾ ಅದೃಷ್ಟವಶಾತ್ ರಸ್ತೆ ಬದಿಯ ಕಮರಿಗೆ ಬಿದ್ದು ನಿಂತಿದೆ.


ಘಟನಾ ಸ್ಥಳದಲ್ಲಿ ಜನ ಜಮಾಯಿಸಿದ್ದು, ಪೊಲೀಸರು ಪರಾರಿಯಾದ ಆರೋಪಿಯ ಹುಡುಕಾಟ ನಡೆಸಿದ್ದರೆನ್ನಲಾಗಿದೆ. ಘಟನೆಯನ್ನ ಕಣ್ಣಾರೆ ಕಂಡ ಪ್ರತ್ಯಕ್ಷದರ್ಶಿಗಳು ಆಟೋ ರಿಕ್ಷಾದ ಫೋಟೊಗಳನ್ನ ಕ್ಲಿಕ್ಕಿಸಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ ಆರೋಪಿಯನ್ನ ಕರೆ ತರುತ್ತಿದ್ದ ಆಟೋ ರಿಕ್ಷಾವನ್ನು ಕೊಣಾಜೆ ಠಾಣೆಯ 102 ಪೊಲೀಸ್ ತುರ್ತು ವಾಹನವು ಹಿಂಬಾಲಿಸುತ್ತಿತ್ತೆಂದು ಹೇಳಲಾಗಿದೆ. ಪೊಲೀಸರ ಎಡವಟ್ಟಿನಿಂದಲೇ ಈ ಘಟನೆ ನಡೆದಿದೆ ಎನ್ನುವ ಆರೋಪ ಕೇಳಿಬಂದಿದೆ.
ಆರೋಪಿ ಪರಾರಿಯಾದ ಬಳಿಕ ಕೊಣಾಜೆ ಠಾಣೆಗೆ ಸ್ಥಳೀಯವಾಗಿ ಮಣ್ಣು ಮಾಫಿಯಾದಲ್ಲಿ ತೊಡಗಿಸಿರುವ ಕೈ ಪುಢಾರಿಯೋರ್ವ ಭೇಟಿ ನೀಡಿ ಪ್ರಕರಣ ಮುಚ್ಚಿ ಹಾಕುವಂತೆ ಒತ್ತಡ ಹೇರಿದ್ದಾನೆಂದು ಹೇಳಲಾಗುತ್ತಿದೆ. ಕೊಣಾಜೆ ಪೊಲೀಸರಲ್ಲಿ ಈ ಬಗ್ಗೆ ವಿಚಾರಿಸಿದಾಗ ಪೋಕ್ಸೊ ಪ್ರಕರಣದ ಬಗ್ಗೆ ನಮಗೆ ಮಾಹಿತಿಯೇ ಬಂದಿಲ್ಲ. ಪೊಲೀಸರು ಆಟೋ ರಿಕ್ಷಾದಲ್ಲಿ ಬರುತ್ತಿದ್ದ ವೇಳೆ ರಿಕ್ಷಾ ಚಾಲಕ ಪೊಲೀಸರನ್ನ ಬಿಟ್ಟು ಗಾಬರಿಗೊಂಡು ಓಡಿಹೋಗಿದ್ದು, ಈ ಬಗ್ಗೆ ಜಾಲತಾಣಗಳಲ್ಲಿ ಊಹಾಪೋಹಗಳು ಹರಡುತ್ತಿವೆಯೆಂಬ ಸಬೂಬು ನೀಡಿದ್ದಾರೆ. ಪೊಲೀಸರು ಆಟೋ ರಿಕ್ಷಾದಲ್ಲಿ ಯಾಕೆ ಬಂದರು? ರಿಕ್ಷಾ ಚಾಲಕ ಚಲಿಸುತ್ತಿದ್ದ ಆಟೋ ರಿಕ್ಷಾದಿಂದ ಜಿಗಿದು ಪರಾರಿಯಾಗಿದ್ದೇಕೆ ಎಂಬ ಪ್ರಶ್ನೆಗಳಿಗೆ ಹಿರಿಯ ಅಧಿಕಾರಿಗಳೇ ಉತ್ತರ ನೀಡಬೇಕಿದೆ.
A man accused in a Protection of Children from Sexual Offences (POCSO) case allegedly escaped by jumping out of an auto-rickshaw while being taken to the Konaje Police Station on Monday. The incident reportedly occurred at Nadupadavu, raising questions over police handling of the accused and prompting allegations that attempts are being made to suppress the case.
07-07-26 10:52 am
HK News Staffer
ಮೈಸೂರು ದಸರಾದಲ್ಲಿ ಕಂಬಳ ಬೇಡವೇ ಬೇಡ ; ಯದುವೀರ್ ಒಡ...
06-07-26 04:40 pm
ಬೆಂಗಳೂರು ಕೆ.ಆರ್ ವೃತ್ತದಲ್ಲಿ ಬಿಎಂಟಿಸಿ ಬಸ್ಸುಗಳ ಡ...
04-07-26 02:51 pm
ರಾಮನಗರ ಕಲ್ಯಾಣ ಮಂಟಪದಲ್ಲಿ ಮತದಾರರನ್ನು ಸೇರಿಸಿ ಎಸ್...
03-07-26 01:21 pm
ರಾಮನಗರದಲ್ಲಿ 10 ಸಾವಿರಕ್ಕೂ ಹೆಚ್ಚು ಬಾಂಗ್ಲಾ ಪ್ರಜೆ...
02-07-26 09:19 pm
07-07-26 03:22 pm
HK News Staffer
ವಯನಾಡಿನಲ್ಲಿ ಮತ್ತೆ ಭೀಕರ ಭೂಕುಸಿತ ; ಭಾರೀ ಮಳೆಗೆ ಸ...
07-07-26 01:51 pm
ಮುಂಬೈನಲ್ಲಿ ಮರಣ ಮಳೆಗೆ 13 ಮಂದಿ ಬಲಿ; ಕುಸಿದ ರಸ್ತ...
06-07-26 01:14 pm
ಅಟ್ಲಾಂಟಿಕ್ ಸಾಗರದಲ್ಲಿ 80 ವರ್ಷಗಳ ಹಿಂದೆ ಮುಳುಗಿದ್...
05-07-26 08:39 pm
ಚೀನಾ ಮಹಾಗೋಡೆ ಮಾದರಿಯಲ್ಲೇ ಆಫ್ರಿಕಾ ಮರುಭೂಮಿಯಲ್ಲಿ...
04-07-26 08:09 pm
06-07-26 10:00 pm
HK News Desk
ಮಂಗಳೂರು ವಿಧಾನಸಭೆ ಕ್ಷೇತ್ರದಲ್ಲಿ ಎಸ್ ಐಆರ್ ಪ್ರಕ್ರ...
06-07-26 09:13 pm
ಧರ್ಮ ಕಾರ್ಯಗಳ ಅನುಷ್ಠಾನದಿಂದ ವ್ಯವಹಾರದಲ್ಲಿ ಯಶಸ್ಸು...
05-07-26 10:15 pm
ಉನ್ನತ ಶಿಕ್ಷಣಕ್ಕಾಗಿ ಜರ್ಮನಿ ತೆರಳಿದ್ದ ಮಂಗಳೂರಿನ ಯ...
05-07-26 09:34 pm
Panambur Block, Mangalore: ಪಣಂಬೂರು ಹೆದ್ದಾರಿಯಲ...
05-07-26 06:33 pm
07-07-26 03:50 pm
HK News Staffer
Mangalore Panambur Truck Block; ಪಣಂಬೂರಿನಲ್ಲಿ...
06-07-26 04:49 pm
Panambur Gold Robbery, Photo Released: ಚಿನ್ನದ...
06-07-26 12:28 pm
ಬಂಟ್ವಾಳ ; ಬಸ್ಸಿಗೆ ನಿಂತಿದ್ದ ಪಿಯುಸಿ ವಿದ್ಯಾರ್ಥಿನ...
06-07-26 11:59 am
ಅಯೋಧ್ಯೆ ರಾಮ ಮಂದಿರ ಬೆನ್ನಲ್ಲೇ ಬದರಿನಾಥ ಕ್ಷೇತ್ರದಲ...
04-07-26 09:47 pm