ಬ್ರೇಕಿಂಗ್ ನ್ಯೂಸ್
24-12-20 04:17 pm Source: MYKHEL Madhukara Shetty ಕ್ರೀಡೆ
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದ ಹೀನಾಯ ಸೋಲನ್ನು ಟೀಮ್ ಇಂಡಿಯಾ ಹಿಂದಕ್ಕೆ ಬಿಟ್ಟು ಮುಂದುವರಿಯಬೇಕು ಹಾಗೂ ಹೊಸ ಆರಂಭವನ್ನು ಈ ಮೂಲಕ ಪಡೆದುಕೊಳ್ಳಬೇಕು. ಇದು ಆಟಗಾರರ ಬಲ ಹಾಗೂ ಸಾಮರ್ಥ್ಯವನ್ನು ತೋರಿಸುತ್ತದೆ ಎಂದು ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಹೇಳಿದ್ದಾರೆ.
ಇದೆ ಸಂದರ್ಭದಲ್ಲಿ ವಿವಿಎಸ್ ಲಕ್ಷ್ಮಣ್ ಒಂದು ಕೆಟ್ಟ ಸಂದರ್ಭದ ಪ್ರದರ್ಶನದಿಂದ ಭಾರತದ ಆಟದ ಗುಣಮಟ್ಟವನ್ನು ವ್ಯಾಖ್ಯಾನಿಸಲಾಗದು. ಈಗ ಭಾರತ ತಂಡದಲ್ಲಿ ಹೊಸ ಹೀರೋಗಳು ಹುಟ್ಟಲು ಉತ್ತಮ ಅವಕಾಶವಿದೆ. ಈ ಸಂದರ್ಭವನ್ನು ನೋಡಿಕೊಂಡು ಸಮಯವನ್ನು ಅದ್ಭುತವಾಗಿ ಬಳಸಿಕೊಳ್ಳಬಹುದು ಎಂದಿದ್ದಾರೆ.
"ಈ ಕೆಟ್ಟ ಸಂದರ್ಭ ಆಟಗಾರರ ಗುಣಮಟ್ಟವನ್ನು ವ್ಯಾಖ್ಯಾನಿಸಲಾಗದು. ಅವರೆಲ್ಲಾ ವಿಶ್ವದ ಅನೇಕ ಕಡೆಗಳಲ್ಲಿ ಸಾಕಷ್ಟು ಆಟವನ್ನು ಆಡಿದವರಾಗಿದ್ದಾರೆ. ಮೊದಲ ಟೆಸ್ಟ್ನ ಮೊದಲ ಆರು ಸೆಶನ್ಗಳಲ್ಲಿ ಭಾತರತ ಉತ್ತಮ ಆಟವನ್ನು ಪ್ರದರ್ಶಿಸಿತ್ತು. ಆದರೆ 70 ನಿಮಿಷಗಳ ಕೆಟ್ಟ ಸಂದರ್ಭ ಎಲ್ಲವನ್ನೂ ಹಾಳು ಮಾಡಿತ್ತು" ಎಂದು ವಿವಿಎಸ್ ಲಕ್ಷ್ಮಣ್ ಟೈಮ್ಸ್ ಆಫ್ ಇಂಡಿಯಾಗೆ ಬರೆದ ಅಂಕಣದಲ್ಲಿ ಹೇಳಿದ್ದಾರೆ. "ಈಗ ಟೆಸ್ಟ್ ಸರಣಿಯ ಕಾಲು ಭಾಗ ಮಾತ್ರವೇ ಅಂತ್ಯವಾಗಿದೆ. ಇನ್ನೂ ಮೂರು ಪಂದ್ಯಗಳು ನಡೆಯಬೇಕಾಗಿರುವುದರಿಂದ ಆಡಲು ಎಲ್ಲವೂ ಇದೆ. ಇದು ತಂಡದ ಸಾಮರ್ಥ್ಯ ಹಾಗೂ ಬಲದ ನಿಜವಾದ ಪರೀಕ್ಷೆಯಾಗಿರಲಿದೆ" ಎಮದು ವಿವಿಎಸ್ ಲಕ್ಷ್ಮಣ್ ಹೇಳಿದ್ದಾರೆ.
"ತಂಡದಲ್ಲಿ ಹೊಸ ಮ್ಯಾಚ್ವಿನ್ನರ್ಗಳು ಸೃಷ್ಟಿಯಾಗಲು ಇದು ನಿಜಕ್ಕೂ ಅತ್ಯುತ್ತಮವಾದ ಸಂದರ್ಭವಾಗಿದೆ. ಈ ಸಂದರ್ಭವನ್ನು ಬಳಸಿಕೊಂಡು ತಮ್ಮ ಕೇ ಮೇಲೆತ್ತಿ ತಂಡಕ್ಕೆ ಆಸರೆಯಾಗಬಹುದು. ಇದು ಅಡಿಲೇಡ್ ಸೋಲನ್ನು ಹಿಂದಕ್ಕೆ ತಳ್ಳಿ ಹೊಸ ಆರಂಬವನ್ನು ಪಡೆಯಲು ಅತ್ಯುತ್ತಮವಾದ ಸಂದರ್ಭ" ಎಂದು ವಿವಿಎಸ್ ಲಕ್ಷ್ಮಣ್ ತಮ್ಮ ಅಂಕಣದಲ್ಲಿ ಸ್ಪೂರ್ತಿಯ ಮಾತುಗಳನ್ನು ಆಡಿದ್ದಾರೆ.
This News Article is a Copy of MYKHEL
30-04-25 05:08 pm
Bangalore Correspondent
R Ahsok, Cm Siddaramaiah, Pak: ಕಾಂಗ್ರೆಸ್ನವರಿ...
29-04-25 10:45 pm
CM Siddaramaiah, Belagavi, BJP Suresh Kumar:...
29-04-25 09:51 pm
Protest Kalaburagi, islamabad Locality: ಕಲಬುರ...
29-04-25 09:20 pm
Kudupu Murder, Mob attack, Parameshwar: ಕುಡುಪ...
29-04-25 04:28 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
30-04-25 08:29 pm
Mangalore Correspondent
Mangalore, Dinesh Gundurao, Kudupu Murder: ಕು...
30-04-25 04:06 pm
ಗುಂಪು ಥಳಿತಕ್ಕೆ ಸಾವು ಪ್ರಕರಣ ; ಕೇರಳ ಮೂಲದ ಯುವಕನೆ...
30-04-25 11:26 am
Puttur Elephant Attack: ಕಾಡಾನೆ ತಿವಿತಕ್ಕೆ ಪುತ್...
29-04-25 11:00 pm
Mangalore, Ullal Nethravathi Bridge: ಉಳ್ಳಾಲ ನ...
29-04-25 05:45 pm
30-04-25 04:09 pm
Mangalore Correspondent
Mangalore Mudipu Murder, Mob, Police, Crime:...
29-04-25 09:59 pm
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am