ಬ್ರೇಕಿಂಗ್ ನ್ಯೂಸ್
18-01-22 12:44 pm HK Desk news ಕರಾವಳಿ
ಕಾಸರಗೋಡು, ಜ.18 : ಇತ್ತೀಚೆಗೆ ವಿಟ್ಲ ಬಳಿಯ ಸಾಲೆತ್ತೂರಿನಲ್ಲಿ ಮದುವೆ ಸಂಭ್ರಮದಲ್ಲಿ ಕೊರಗಜ್ಜನ ರೀತಿ ವೇಷ ತೊಟ್ಟು ಅಪಮಾನಗೈದ ಪ್ರಕರಣದ ಆರೋಪಿ ಮದುವೆ ಗಂಡಿನ ಉಪ್ಪಳದ ಮನೆಗೆ ಕಲ್ಲು ತೂರಾಟ ನಡೆಸಲಾಗಿದೆ. ಜನವರಿ 17ರ ಸೋಮವಾರ ರಾತ್ರಿ ಬೈಕಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಮನೆಗೆ ಕಲ್ಲು ತೂರಿದ್ದು, ಕಿಟಕಿ ಗಾಜು ಪುಡಿಯಾಗಿದೆ. ಅಲ್ಲದೆ, ಮನೆಯ ಕಂಪೌಂಡ್ ಗೋಡೆಗೆ ಕೇಸರಿ ಪೈಂಟ್ ಬಳಿಯಲಾಗಿದೆ.
ರಾತ್ರಿ ವೇಳೆ ಏನೋ ಶಬ್ದ ಕೇಳಿ, ಮನೆಯವರು ಹೊರ ಬಂದಿದ್ದಾರೆ. ಹೊರಗಡೆ ಬೈಕಿನಲ್ಲಿ ಇಬ್ಬರು ಯುವಕರು ಕಂಡುಬಂದಿದ್ದು, ಮನೆಮಂದಿ ಬೊಬ್ಬೆ ಹಾಕುತ್ತಲೇ ಪರಾರಿಯಾಗಿದ್ದಾರೆ. ಗಮನಿಸಿದಾಗ ಮನೆಯ ಕಿಟಕಿ ಗಾಜು ಪುಡಿಯಾಗಿತ್ತು. ಅಲ್ಲದೆ, ಕಂಪೌಂಡ್ ಗೋಡೆಯಲ್ಲಿ ಕೇಸರಿ ಬಣ್ಣ ಬಳಿಯಲಾಗಿತ್ತು.
ಘಟನೆ ಬಗ್ಗೆ ಕುಂಬಳೆ ಠಾಣೆಗೆ ದೂರು ನೀಡಲಾಗಿದ್ದು, ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ, ಉಪ್ಪಳ ಬಳಿಯ ಬೇಕೂರಿನಲ್ಲಿರುವ ಉಮರುಲ್ ಬಾಷಿತ್ ಮನೆಗೆ ಪೊಲೀಸ್ ಭದ್ರತೆ ನೀಡಲಾಗಿದೆ. ಕೊರಗಜ್ಜನ ವೇಷ ತೊಟ್ಟು ವಿಕೃತಿ ಮೆರೆದ ಬಗ್ಗೆ ವಿಟ್ಲ ಠಾಣೆಯಲ್ಲಿ ಮದುಮಗ ಉಮರುಲ್ ಬಾಷಿತ್ ಸೇರಿ 25 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಪೈಕಿ ಇಬ್ಬರನ್ನು ಪೊಲೀಸರು ಬಂಧಿಸಿ ಕ್ರಮ ಜರುಗಿಸಿದ್ದಾರೆ. ವಿಟ್ಲ ಬಳಿಯ ಸಾಲೆತ್ತೂರಿನ ಯುವತಿಯನ್ನು ಉಪ್ಪಳದ ಉಮರುಲ್ ಬಾಷಿತ್ ಮದುವೆಯಾಗಿದ್ದು, ಮದುವೆಯ ದಿನ ರಾತ್ರಿ ಸಂಪ್ರದಾಯದಂತೆ ವಧುವಿನ ಮನೆಗೆ ಬಂದಿದ್ದಾಗ ಕೊರಗಜ್ಜನ ರೀತಿ ವೇಷ ತೊಟ್ಟಿದ್ದು ಹಿಂದು ಸಂಘಟನೆಗಳ ವಿರೋಧಕ್ಕೆ ಕಾರಣವಾಗಿತ್ತು.
ಮುಸ್ಲಿಂ ಮದುವೆ ಸಂಭ್ರಮ ; ಕೊರಗಜ್ಜನ ರೀತಿ ವೇಷ ತೊಟ್ಟು ಕುಣಿದು ಕುಪ್ಪಳಿಸಿದ ಯುವಕರು, ಆಕ್ರೋಶ
ಮುಸ್ಲಿಂ ಮದುವೆ ಸಂಭ್ರಮದಲ್ಲಿ ಕೊರಗಜ್ಜನಿಗೆ ಅವಮಾನ ; ಸಾಲೆತ್ತೂರಿನ ಮನೆಗೆ ಬಜರಂಗದಳ ಮುತ್ತಿಗೆ ಯತ್ನ, ಬಂಧನ
ಅಪಹಾಸ್ಯದ ಬಗ್ಗೆ ಕೊರಗಜ್ಜನಿಗೆ ದೂರು ; ಯಾವ ರೀತಿ ಕುಣಿಸಿದ್ದಾರೋ ಅದೇ ರೀತಿ ಬೀದಿಯಲ್ಲಿ ಅಲೆದಾಡಿಸುತ್ತೇನೆ !
The house of Umarul Baatish from Uppala Bekur, who has been accused of visiting the house of his bride at Vittal Salethur duly dressed and made up like Koragajja deity of Tulunadu, was stoned on Monday January 17. Window glasses were shattered. The miscreants also reportedly painted the compound wall of the said house saffron.
17-06-25 05:35 pm
Bangalore Correspondent
Dk Shivakumar, Plan Crash: ವಿಮಾನ ದುರಂತ ; ಬಿಜೆ...
16-06-25 10:44 pm
Judge Heart Attack, Kalaburagi Court: ನ್ಯಾಯಾಲ...
16-06-25 02:56 pm
ಎರಡೇ ವರ್ಷಗಳಲ್ಲಿ ಬೆಂಗಳೂರಿನ ಶಾಸಕರ ಆದಾಯ ವಿಪರೀತ ಹ...
15-06-25 09:29 pm
Lokayukta, Crypto Firms, Notice: ಲೋಕಾಯುಕ್ತ ಹೆ...
14-06-25 11:05 pm
17-06-25 11:02 pm
HK News Desk
ಇರಾನ್ ಸಂಘರ್ಷ ; ಇನ್ನೇನೋ ದೊಡ್ಡದು ನಡೆಯಲಿದೆ ಎಂದ ಟ...
17-06-25 10:47 pm
ಬಾಂಬ್ ಬೆದರಿಕೆ ; ಜರ್ಮನಿಯಿಂದ ಹೈದ್ರಾಬಾದ್ ಬರುತ್ತಿ...
16-06-25 05:29 pm
Iran-Israel War: ಇಸ್ರೇಲ್- ಇರಾನ್ ಸಂಘರ್ಷ ; ಇರಾನ...
16-06-25 01:33 pm
ಅಹಮದಾಬಾದ್ ಬೆನ್ನಲ್ಲೇ ಮತ್ತೊಂದು ದುರಂತ ; ಕೇದಾರನಾ...
15-06-25 10:29 pm
17-06-25 09:57 pm
Mangalore Correspondent
Mangalore Jail Jammer: ಜೈಲಿನ ಜಾಮರ್ ಸಮಸ್ಯೆಗೆ ದ...
17-06-25 08:17 pm
Baby Death, Mangalore: ತಂದೆ ಸೇದಿ ಬಿಸಾಕಿದ ಬೀಡಿ...
17-06-25 01:48 pm
Mangalore Accident, Nanthoor, Doctor Amal: ಅತ...
17-06-25 12:43 pm
U T Khader, Mangalore: ದ್ವೇಷ ಭಾಷಣ, ಜಾಲತಾಣಗಳಲ್...
16-06-25 11:06 pm
17-06-25 05:06 pm
Bangalore Correspondent
Kolar ATM Robbery: ಕರ್ನಾಟಕದಲ್ಲಿ ಹೆಚ್ಚುತ್ತಿರುವ...
17-06-25 12:10 pm
Fake Currency Racket, Shivamogga: ಖೋಟಾ ನೋಟು ಚ...
16-06-25 03:05 pm
Bangalore Crime, House Maid, Chamrajpet: ಕೆಲಸ...
14-06-25 11:02 pm
Lokayukta Corruption, Bengaluru SP Srinath Jo...
14-06-25 05:59 pm