ಬ್ರೇಕಿಂಗ್ ನ್ಯೂಸ್
13-04-26 10:35 pm HK News Staffer ದೇಶ - ವಿದೇಶ
ಮುಂಬೈ, ಎಪ್ರಿಲ್ 13: ಬಹುರಾಷ್ಟ್ರೀಯ ಕಂಪನಿ ಟಿಸಿಎಸ್ ನಲ್ಲಿ ಹೈಫೈ ಲವ್ ಜಿಹಾದ್, ಮತಾಂತರ, ಸೆಕ್ಸ್ ದಂಧೆ ನಡೆಯುತ್ತಿರುವ ಗಂಭೀರ ಆರೋಪ ಕೇಳಿಬಂದಿದ್ದು ಮಹಾರಾಷ್ಟ್ರ ಪೊಲೀಸರು ಘಟನೆ ಸಂಬಂಧಿಸಿ 9 ಪ್ರತ್ಯೇಕ ಎಫ್ಐಆರ್ ದಾಖಲಿಸಿದ್ದಾರೆ. ಅಲ್ಲದೆ, ಕಂಪನಿಯ ಎಚ್ಆರ್ ಮ್ಯಾನೇಜರ್ ಸೇರಿದಂತೆ ಏಳು ಮಂದಿಯನ್ನು ಬಂಧಿಸಿದ್ದಾರೆ.
ಟಿಸಿಎಸ್ ಕಂಪನಿಯ ನಾಸಿಕ್ ಕಚೇರಿಯಲ್ಲಿ ಇಂತಹ ಆರೋಪ ಕೇಳಿಬಂದಿದ್ದು, ಹಲವಾರು ಟೆಕ್ಕಿಗಳು ತಮ್ಮನ್ನು ಬೀಫ್ ತಿನ್ನುವಂತೆ ಪೀಡಿಸಿರುವುದು, ನಮಾಜ್ ಮಾಡುವಂತೆ ಒತ್ತಡ ಹೇರಿರುವುದು, ಸೆಕ್ಸ್ ದಂಧೆಗೆ ಬಳಸಿ ಮತಾಂತರಕ್ಕೆ ಯತ್ನಿಸಿರುವ ಬಗ್ಗೆ ಕಂಪನಿಯ ಹಿರಿಯ ಸಿಬಂದಿ ಬಗ್ಗೆ ಆರೋಪ ಮಾಡಿದ್ದಾರೆ. ಸಂಸ್ಥೆಯ ಉದ್ಯೋಗಿಗಳು ಹಿರಿಯ ಮುಸ್ಲಿಂ ಸಹೋದ್ಯೋಗಿಗಳು ನಡೆಸುತ್ತಿರುವ ಕಿರುಕುಳದ ಬಗ್ಗೆ ಪದೇ ಪದೇ ದೂರಿತ್ತಿದ್ದರೂ ಎಚ್ಆರ್ ಮ್ಯಾನೇಜರ್ ನಿರ್ಲಕ್ಷ್ಯ ವಹಿಸಿದ್ದಾನೆ. ಇದಕ್ಕಾಗಿ ಎಚ್ಆರ್ ವಿಭಾಗದ ಅಸಿಸ್ಟೆಂಟ್ ಮ್ಯಾನೇಜರ್ ನನ್ನು ಪೊಲೀಸರು ಬಂಧಿಸಿದ್ದಾರೆ.


ಹೊಸತಾಗಿ ಕೆಲಸ ಕೇಳಿಕೊಂಡು ಬಂದ ಯುವತಿಯರನ್ನು ರಾಕೆಟ್ ಗೆ ಬಳಸುತ್ತಿದ್ದು, ಅವರನ್ನು ಕೆಲಸ ತೆಗೆಸಿಕೊಡುವ ಭರವಸೆ ಕೊಟ್ಟು ದುರ್ಬಳಕೆ ಮಾಡುತ್ತಿದ್ದರು. ಅಲ್ಲದೆ, ಅವರ ಫೋಟೋ, ವಿಡಿಯೋ ತೆಗೆದಿಟ್ಟು ಬ್ಲಾಕ್ಮೇಲ್ ಮಾಡುತ್ತಿದ್ದರು. ಎಚ್ಆರ್ ಮ್ಯಾನೇಜರ್ ನಿರ್ಲಕ್ಷ್ಯ ವಹಿಸಿದ್ದು ಪದೇ ಪದೇ ಕೃತ್ಯ ಮರುಕಳಿಸಲು ಕಾರಣವಾಗಿದೆ. ಕೃತ್ಯದಲ್ಲಿ ಮಹಿಳಾ ಉದ್ಯೋಗಿಗಳು ಕೂಡ ತೊಡಗಿಸಿದ್ದು, ಕೃತ್ಯ ಬಯಲಾಗುತ್ತಲೇ ತಲೆಮರೆಸಿಕೊಂಡಿದ್ದಾರೆ ಎಂದು ಎಸಿಪಿ ಸಂದೀಪ್ ಮಿಟ್ಕೆ ತಿಳಿಸಿದ್ದಾರೆ.
ನಾಶಿಕ್ ಜಿಲ್ಲಾಧಿಕಾರಿ ಆಯುಷ್ ಪ್ರಸಾದ್ ಲೈಂಗಿಕ ದೌರ್ಜನ್ಯ ವಿರೋಧಿ ಕಾಯ್ದೆಯಡಿ ತನಿಖೆಗೆ ಆದೇಶ ಮಾಡಿದ್ದಾರೆ. ಇದರ ಬೆನ್ನಲ್ಲೇ ಮಹಾರಾಷ್ಟ್ರ ಸರಕಾರ ತನಿಖೆಗೆ ವಿಶೇಷ ತಂಡವನ್ನು ನೇಮಕ ಮಾಡಿದೆ. ವಿಷಯ ಬೆಳಕಿಗೆ ಬರುತ್ತಲೇ ಆರೋಪ ಹೊತ್ತ ಹಿರಿಯ ಸಿಬಂದಿಯನ್ನು ಟಿಸಿಎಸ್ ಕಂಪನಿ ಕೆಲಸದಿಂದ ತೆಗೆದುಹಾಕಿದೆ.
ಕೆಲವು ಸೀನಿಯರ್ ಉದ್ಯೋಗಿಗಳು ಹೇಳುವ ಪ್ರಕಾರ, ಇಂತಹ ಸೆಕ್ಸ್ ದಂಧೆ ಎಲ್ಲ ಕಡೆಯೂ ಆಗುತ್ತದೆ, ಆದರೆ ಇಲ್ಲಿ ಮಹಿಳಾ ಉದ್ಯೋಗಿಗಳನ್ನು ಬೇರೆ ಬೇರೆ ಆಮಿಷವೊಡ್ಡಿ ಲೈಂಗಿಕ ದೌರ್ಜನ್ಯಕ್ಕೆ ಬಳಸಿಕೊಳ್ಳಲಾಗಿದೆ. ಆನಂತರ, ಅವರನ್ನು ಮತಾಂತರಕ್ಕೆ ಪೀಡಿಸಿದ್ದಾರೆ. ಹಿಂದು ದೇವರನ್ನು ನಿಂದಿಸಿ ಅಲ್ಲಾನೊಬ್ಬನೇ ದೇವರು ಎಂದು ಹೇಳುತ್ತ, ಅಲ್ಲಾನನ್ನು ಪೂಜಿಸಲು ಒತ್ತಾಯಿಸಿದ್ದಾರೆ. ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪಗಳಿದ್ದು, ಮಹಾರಾಷ್ಟ್ರ ಸರಕಾರ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದೆ.
21-08-26 03:42 pm
HK News Staffer
ಆಟೋಗಳ ರೀತಿ ಗಂಟೆಗೆ 55 ಕಿಮೀ ಓಡುವ ರೈಲುಗಳನ್ನೇ ‘ಸೂ...
19-08-26 09:55 pm
ಬೆಂಗಳೂರಿನಲ್ಲಿ ಎಚ್1ಎನ್1 ಸೋಂಕು ಹೆಚ್ಚಳ ; ಖಾಸಗಿ ಶ...
19-08-26 09:52 pm
ಹನೂರು ಎನ್ಕೌಂಟರ್; ತಮಿಳುನಾಡು ಕ್ಯಾತೆ ಬೆನ್ನಲ್ಲೇ...
19-08-26 05:38 pm
ವಂದೇ ಮಾತರಂ ವಿವಾದ ; ಜೈಲಿಗೆ ಹಾಕಿದ್ರೂ ನಾನು ವಂದೇ...
19-08-26 02:15 pm
20-08-26 10:55 am
HK News Staffer
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
'ಜನ ಗಣ ಮನ' ಗೀತೆಯನ್ನು ಬ್ರಿಟನ್ ರಾಣಿಯ ಹೊಗಳಲು ಬರೆ...
19-08-26 12:10 pm
ಬಿಜೆಪಿಯ ಯುವ ಮೋರ್ಚಾಗೆ ಹೊಸ ಸಾರಥಿ ; ತೇಜಸ್ವಿ ಸೂರ್...
18-08-26 02:42 pm
21-08-26 09:54 pm
HK News Staffer
Mfc Hotel Raid, Mangalorr: ಕೆಎಫ್ ಸಿ ಬಳಿಕ ಮಂಗಳ...
21-08-26 08:17 pm
ಬೆಂಗಳೂರು, ಮಂಗಳೂರು ಸೇರಿ ರಾಜ್ಯಾದ್ಯಂತ 36 ರೈಲ್ವೇ...
21-08-26 03:12 pm
ಬೆಳ್ತಂಗಡಿ ; ಹುಳ ಬಿದ್ದ ಪಡಿತರ ಅಕ್ಕಿ ಪೂರೈಕೆ, 50ಕ...
20-08-26 05:16 pm
ಪುತ್ತೂರು ; ಕಡಿದು ಬಿದ್ದ ವಿದ್ಯುತ್ ತಂತಿಯನ್ನು ಮರು...
19-08-26 08:40 pm
21-08-26 12:20 pm
HK News Staffer
ಇಷ್ಟದ ವಿದ್ಯಾರ್ಥಿಯನ್ನು ಕಂಡು “ಏಯ್ ಬಾಬೂ” ಎಂದಿದ್ದ...
21-08-26 11:03 am
ಎಸಿಪಿ ಕಚೇರಿ ಅಂಗಳದಲ್ಲೇ ಮಹಾಲಕ್ಷ್ಮಿ ದೇವಸ್ಥಾನಕ್ಕೆ...
20-08-26 08:06 pm
8.50 ಲಕ್ಷ ನಗದು ಹಣದೊಂದಿಗೆ ಬೈಕಿನಲ್ಲಿ ಬರುತ್ತಿದ್ದ...
20-08-26 05:33 pm
ಕೋಟೆಪುರ ಕೊಳೆತ ಶವ ಪತ್ತೆ ಪ್ರಕರಣ ; ವ್ಯಕ್ತಿಯ ಕೊಲೆ...
20-08-26 04:25 pm