ಬ್ರೇಕಿಂಗ್ ನ್ಯೂಸ್
01-01-22 06:49 pm Mangalore Correspondent ಕರಾವಳಿ
ಕುಂದಾಪುರ, ಜ.1 : ರೌಡಿಗಳನ್ನು ಕಂಟ್ರೋಲ್ ಮಾಡಲು ಪೊಲೀಸರನ್ನು ನೇಮಕ ಮಾಡಿರುವುದು. ಪೊಲೀಸರೇ ರೌಡಿಗಳಾದರೆ ಯಾರು ಏನು ಮಾಡೋದು ? ಘಟನೆ ನಡೆದ ಎರಡು ದಿನಗಳ ನಂತರ ಒಬ್ಬ ಪೊಲೀಸ್ ಆಸ್ಪತ್ರೆ ದಾಖಲಾಗ್ತಾನೆ. ಕೌಂಟರ್ ಕೇಸ್ ಕೊಡ್ತಾನಂದ್ರೆ ಅದು ಸುಳ್ಳು ಕೇಸು ಅನ್ನೋದು ಗೊತ್ತಾಗತ್ತೆ. ಇದು ಅಪರಾಧ. ಕೋಟ ಪಿಎಸ್ಐ ಆಗಿದ್ದ ವ್ಯಕ್ತಿ ಪೊಲೀಸ್ ಇಲಾಖೆಗೆ ಫಿಟ್ಟೋ, ಅನ್ ಫಿಟ್ಟೋ ಅನ್ನೋದನ್ನು ನಮ್ಮ ಸರಕಾರ ನಿರ್ಧರಿಸುತ್ತದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅಬ್ಬರಿಸಿದ್ದಾರೆ.
ಕೋಟತಟ್ಟು ಗ್ರಾಮದ ಕೊರಗರ ಕಾಲನಿಗೆ ಭೇಟಿ ನೀಡಿ, ಅಲ್ಲಿನ ಜನರ ಅಹವಾಲು ಆಲಿಸಿದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, ರಾಜ್ಯದಲ್ಲಿ ಒಂದು ಲಕ್ಷ ಪೊಲೀಸ್ ಸಿಬಂದಿ ಇದ್ದಾರೆ. ಕೋಟ ಪಿಎಸ್ಐ ಇಡೀ ಪೊಲೀಸ್ ಇಲಾಖೆಗೆ ಕೆಟ್ಟ ಹೆಸರು ತಂದಿದ್ದಾನೆ. ಆತ ಒಂದು ದಾರ್ಷ್ಟ್ಯದ ವ್ಯಕ್ತಿ ಅಂತ ಕಾಣುತ್ತದೆ. ಯಾವುದೇ ವಿಚಾರ ಇದ್ದರೂ ಪೊಲೀಸರು ತಮ್ಮ ಮೇಲಧಿಕಾರಿಗಳಿಗೆ ಮಾಹಿತಿ ಕೊಡೋದು ಪದ್ಧತಿ. ಇಲ್ಲಿ ಆತ ಯಾರಿಗೂ ಮಾಹಿತಿ ಕೊಟ್ಟಿಲ್ವಂತೆ. ತಾನೇ ಸುಪ್ರೀಂ ಅಂತ ವರ್ತಿಸಿದ್ದಾನೆ. ಸರ್ಕಲ್, ಡಿವೈಎಸ್ಪಿ, ಎಸ್ಪಿಗೆ ಯಾರಿಗೂ ಮಾಹಿತಿ ಕೊಟ್ಟಿಲ್ಲ. ಆತನ ಅತಿರೇಕದ ವರ್ತನೆಯಿಂದಾಗಿ ಪೊಲೀಸ್ ಇಲಾಖೆಯ ಪರವಾಗಿ ನಾನು ತಲೆತಗ್ಗಿಸುವ ಸ್ಥಿತಿ ಬಂದಿದೆ.



ರಾಜ್ಯದಲ್ಲಿ ಒಳ್ಳೊಳ್ಳೆ ಪೊಲೀಸ್ ಅಧಿಕಾರಿಗಳು, ಸಿಬಂದಿ ಇದ್ದಾರೆ. ಇಂಥ ಘಟನೆಯಿಂದ ಅವರೆಲ್ಲ ತಲೆ ತಗ್ಗಿಸಬೇಕಾಗುತ್ತದೆ. ನಮ್ಮ ಇಲಾಖೆಯಲ್ಲಿ ಕೆಟ್ಟವರು ಇಲ್ಲ ಎನ್ನೋದಿಲ್ಲ. ಆದರೆ ಹೆಚ್ಚಿನವರು ಒಳ್ಳಯವರಿದ್ದಾರೆ. ಒಳ್ಳೆಯ ವ್ಯಕ್ತಿಗಳಿಂದಾಗಿ, ಪೊಲೀಸರಿಂದಾಗಿ ನಾವು ನೆಮ್ಮದಿಯಿಂದ ಮಲಗುವಂತಾಗಿದೆ. ಆದರೆ ತಪ್ಪು ಮಾಡಿದವರಿಗೆ ಏನು ಶಿಕ್ಷೆ ಕೊಡಬೇಕೋ ಅದನ್ನು ಕೊಡುತ್ತೇವೆ ಎಂದು ಆರಗ ಹೇಳಿದರು.


ಪೊಲೀಸ್ ಕಾನ್ಸ್ ಟೇಬಲ್, ಎರಡು ದಿನಗಳ ನಂತರ ದೂರು ಕೊಟ್ಟು ತಪ್ಪು ಮಾಡಿದ್ದಾನೆ. ಇದೊಂದು ದೊಡ್ಡ ಅಪರಾಧ. ಜನಸಾಮಾನ್ಯರು ಈ ರೀತಿ ಮಾಡ್ತಾರೆ. ಆದರೆ ಜನರನ್ನು ರಕ್ಷಣೆ ಮಾಡಬೇಕಾದ ಪೊಲೀಸರು ಇಂಥ ಕೆಲಸ ಮಾಡಬಾರದು. ಪಿಎಸ್ಐ ಅಮಾನತು ಮಾಡಿದ್ದೇವೆ. ಐವರು ಪೊಲೀಸರನ್ನು ವರ್ಗಾವಣೆ ಮಾಡಿದ್ದೇವೆ. ತನಿಖೆಯ ಬಳಿಕ ಅವರ ತಪ್ಪಿಗೂ ಶಿಕ್ಷೆ ಆಗುತ್ತದೆ. ಪೊಲೀಸರು ಕೌಂಟರ್ ಕೇಸ್ ಕೊಟ್ಟಿದ್ದಾರೆಂದು ಕಾಲನಿ ನಿವಾಸಿಗಳು ಯಾರು ಕೂಡ ಹೆದರಬೇಕಾಗಿಲ್ಲ. ಜನರ ಜೊತೆ ರಾಜ್ಯ ಸರಕಾರ ನಿಲ್ಲುತ್ತದೆ ಎಂದು ಗೃಹ ಸಚಿವರು ಹೇಳಿದರು.
ಕೋಟದಲ್ಲಿ ಪೊಲೀಸ್ ದೌರ್ಜನ್ಯ ; ಡಿಎಸ್ಪಿ ನೇತೃತ್ವದಲ್ಲಿ ತನಿಖೆಗೆ ಆದೇಶ - ಎಸ್ಪಿ ವಿಷ್ಣುವರ್ಧನ್
ಮೆಹಂದಿ ಕಾರ್ಯಕ್ರಮಕ್ಕೆ ನುಗ್ಗಿದ ಪೊಲೀಸರಿಂದ ಲಾಠಿಚಾರ್ಜ್ ! ಸಚಿವ ಕೋಟ ಊರಲ್ಲೇ ಬಡವರ ಮೇಲೆ ಪೊಲೀಸರ ದೌರ್ಜನ್ಯ !
ಕೊರಗ ಕಾಲನಿಯಲ್ಲಿ ಲಾಠಿಚಾರ್ಜ್ ; ಘಟನೆ ಬಗ್ಗೆ ಎಸ್ಪಿಯಿಂದ ವರದಿ ಕೇಳಿದ ರಾಷ್ಟ್ರೀಯ ಮಹಿಳಾ ಆಯೋಗ
Atrocity on Koraga community SI suspended, home minister Araga Dnyanendra states we will investigate wether case is true or false
09-11-25 06:53 pm
Bangalore Correspondent
ಇಪಿಎಫ್ ಸೊಸೈಟಿಯಲ್ಲಿ 70 ಕೋಟಿ ದುರ್ಬಳಕೆ ; ಅಕೌಂಟೆಂ...
09-11-25 03:47 pm
ISIS Terrorists, Umesh Reddy, Parappana Agrah...
08-11-25 10:29 pm
High Court Directs Kalaburagi: ಚಿತ್ತಾಪುರ ಆರೆಸ...
08-11-25 12:38 pm
ಯಾವ ಕ್ರಾಂತಿಯೂ ಆಗಲ್ಲ, ವಾಂತಿಯೂ ಆಗಲ್ಲ.. ನನಗೆ ಸಿದ...
07-11-25 09:59 pm
09-11-25 07:49 pm
HK News Desk
ಮುಸ್ಲಿಂ ವ್ಯಕ್ತಿಯ ಎರಡನೇ ಮದುವೆ ನೋಂದಣಿಗೆ ನಿರಾಕರಣ...
07-11-25 05:21 pm
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
09-11-25 10:27 pm
Mangalore Correspondent
ಬಹುಕೋಟಿ ವಂಚಕ ರೋಷನ್ ಸಲ್ದಾನಗೆ ಸೇರಿದ 2.85 ಕೋಟಿ ಮ...
09-11-25 03:50 pm
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm