ಬ್ರೇಕಿಂಗ್ ನ್ಯೂಸ್
22-04-21 11:44 am Mangalore Correspondent ಕರಾವಳಿ
ಮಂಗಳೂರು, ಎ.22: ಚಾಲಕನ ಬೇಜವಾಬ್ದಾರಿಯಿಂದ ಕಸ ವಿಲೇವಾರಿ ಮಾಡುವ ಟ್ರಕ್ ಇಳಿಜಾರಿನಲ್ಲಿ ನೇರವಾಗಿ ನುಗ್ಗಿ ಬಂದು ನಾಲ್ಕಾರು ವಾಹನಗಳಿಗೆ ಡಿಕ್ಕಿಯಾಗಿದ್ದಲ್ಲದೆ, ಮಾರುಕಟ್ಟೆಯ ಅಂಗಡಿಗಳಿಗೆ ನುಗ್ಗಿದ ಘಟನೆ ಕಂಕನಾಡಿ ಮಾರುಕಟ್ಟೆಯಲ್ಲಿ ನಡೆದಿದೆ.
ಮಂಗಳೂರು ನಗರದಲ್ಲಿ ಕಸ ಹೆಕ್ಕಲು ಗುತ್ತಿಗೆ ಪಡೆದಿರುವ ಆಂಟನಿ ವೇಸ್ಟ್ ಕಂಪನಿಯ ಟ್ರಕ್ಕನ್ನು ಚಾಲಕ ಕಂಕನಾಡಿ ಮಾರುಕಟ್ಟೆ ಬಳಿ ನಿಲ್ಲಿಸಿ, ಕೆಳಕ್ಕೆ ಇಳಿದಿದ್ದ. ಹಿಂದಿನಿಂದ ಕಾರ್ಮಿಕರು ಕಸ ತುಂಬಿಸುತ್ತಿದ್ದರು. ಚಾಲಕ ವಾಹನವನ್ನು ನ್ಯೂಟ್ರಲ್ ನಲ್ಲಿರಿಸಿ ಇಳಿದಿದ್ದರಿಂದ ಟ್ರಕ್ ಕೆಳಗೆ ಇಳಿದಿದ್ದು, ಅಲ್ಲಿದ್ದ ಮೂರು ಕಾರು ಮತ್ತು ಎರಡು ದ್ವಿಚಕ್ರ ವಾಹನಗಳ ಮೇಲೆ ಹರಿದಿದ್ದಲ್ಲದೆ, ಇಂಡಿಯನ್ ಚಿಕನ್ ಎನ್ನುವ ಕೋಳಿ ಮಾಂಸದ ಅಂಗಡಿಗೆ ನುಗ್ಗಿ ಜಖಂ ಮಾಡಿದೆ.
ಚಿಕನ್ ಶಾಪ್ ಎದುರಲ್ಲಿ ನಿಲ್ಲಿಸಿದ್ದ ಬೈಕ್ ಮತ್ತು ಸ್ಕೂಟರ್ ಸಂಪೂರ್ಣ ಅಪ್ಪಚ್ಚಿಯಾಗಿದ್ದು, ಅಂಗಡಿಯ ಇಬ್ಬರು ಸಿಬಂದಿ ಕಾಲಿಗೆ ಗಾಯಗೊಂಡಿದ್ದಾರೆ. ಟ್ರಕ್ ಅಂಗಡಿಯ ಮುಂಭಾಗಕ್ಕೆ ಬಡಿದು ನಿಂತಿದ್ದು, ಕೂಡಲೇ ಅದಕ್ಕೆ ಹತ್ತಿದ ಸ್ಥಳೀಯರು ವಾಹನವನ್ನು ಆಫ್ ಮಾಡಿದ್ದಾರೆ. ಘಟನೆ ಸಂದರ್ಭ ಹೆಚ್ಚು ಜನರು ಇಲ್ಲದ ಕಾರಣ ಪ್ರಾಣಾಪಾಯ ಆಗಿಲ್ಲ. ಸಾರ್ವಜನಿಕರು ಟ್ರಕ್ ಚಾಲಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಲೇ, ಆತ ಅಲ್ಲಿಂದ ಪರಾರಿಯಾಗಿದ್ದಾನೆ.
ಸ್ಥಳೀಯರ ಪ್ರಕಾರ, ಟ್ರಕ್ ಚಾಲಕ ಕೆಳಗಿಳಿದು ಮೊಬೈಲಲ್ಲಿ ಮಾತನಾಡುತ್ತಿದ್ದ. ಟ್ರಕ್ಕನ್ನು ನ್ಯೂಟ್ರಲ್ ನಲ್ಲಿರಿಸಿ ಕೆಳಕ್ಕೆ ಇಳಿದಿದ್ದೇ ತಪ್ಪು. ಆತನನ್ನು ಈ ಘಟನೆಗೆ ಹೊಣೆಯಾಗಿಸಬೇಕೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಳಿಕ ಕಂಕನಾಡಿ ಮತ್ತು ಟ್ರಾಫಿಕ್ ಪೊಲೀಸರು ಆಗಮಿಸಿ ಲಾರಿಯನ್ನು ತೆರವು ಮಾಡಿ ವಶಕ್ಕೆ ಪಡೆದಿದ್ದಾರೆ.
Four Cars and two wheelers completely damaged after a Mcc Antony Waste truck entered a Chicken Shop in Kankanady Market in Mangalore. The accident took place as driver kept the truck in nutral and got down of the truck.
14-08-25 03:51 pm
Bangalore Correspondent
DK Shivakumar, Dharmasthala, Virendra Heggade...
14-08-25 03:49 pm
IPS Alok Kumar, News: ಪೊಲೀಸ್ ಶಾಲೆಗಳಲ್ಲೇ ಲಂಚ,...
14-08-25 01:48 pm
Dharmasthala Case, Dinesh Gundu Rao: ಮತ್ತೆ ಗು...
13-08-25 07:03 pm
ವಜಾ ಹಿಂದೆ ದೊಡ್ಡ ಷಡ್ಯಂತ್ರ ಆಗಿದೆ, ರಾಹುಲ್ ಗಾಂಧಿ...
12-08-25 10:39 pm
14-08-25 07:24 pm
HK News Desk
ಯುಎಇ ಸುದ್ದಿ ; ಆರೇ ತಿಂಗಳಲ್ಲಿ ದುಬೈನಲ್ಲಿ 3,600ಕ್...
14-08-25 07:02 pm
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮೋಡಿ ಮಾಡಲಿದ್ದಾರ...
14-08-25 11:26 am
ತಾಯಿ ಜೊತೆ ಅಂಡಮಾನ್ ಹೋಗ್ತೀನಿ ಎಂದಿದ್ದ ಮಗಳು ; ಬೇಡ...
13-08-25 11:56 am
ಪುಣ್ಯಕ್ಷೇತ್ರ ಯಾತ್ರೆ ಹೊರಟವರ ಮೇಲೆರಗಿದ ಜವರಾಯ ; ರ...
13-08-25 10:41 am
14-08-25 10:29 pm
Mangalore Correspondent
SCDCC Bank Launches Special Independence Day...
14-08-25 01:12 pm
Bantwal Deputy Tahsildar, Lokayukta: 20 ಸಾವಿರ...
13-08-25 10:22 pm
Dharmasthala News Today, Point No 13: ಕಡೆಗೂ ಪ...
13-08-25 10:01 pm
The Ocean Pearl Brings “Flavors of India” to...
13-08-25 08:23 pm
14-08-25 05:31 pm
Bangalore Correspondent
Supreme Court, Actor Darshan Jail Order: ಸುಪ್...
14-08-25 11:51 am
Fake Stock Market Scam, Fraud: 10 ಲಕ್ಷ ಹೂಡಿಕೆ...
13-08-25 05:40 pm
Fraud, Laxmi Hebbalkar: ಸಚಿವೆ ಲಕ್ಷ್ಮೀ ಹೆಬ್ಬಾಳ...
13-08-25 04:14 pm
ಅನೈತಿಕ ಸಂಬಂಧ ಶಂಕೆ ; ಅತ್ತೆ ಮೇಲಿನ ದ್ವೇಷದಿಂದ ಕೊಲ...
12-08-25 12:36 pm