ಬ್ರೇಕಿಂಗ್ ನ್ಯೂಸ್
21-04-21 02:57 pm Mangalore Correspondent ಕರಾವಳಿ
ಮಂಗಳೂರು, ಎ.21: ಒಂದೆಡೆ ರಾತ್ರಿ ಕರ್ಫ್ಯೂ, ಇನ್ನೊಂದೆಡೆ ಹಗಲು ಹೊತ್ತಿನಲ್ಲಿ ಟಫ್ ರೂಲ್ಸ್ ಜಾರಿಗೊಳಿಸಿ ರಾಜ್ಯ ಸರಕಾರ ಆದೇಶ ಮಾಡಿದೆ. ಇದರಂತೆ, ಹೊಟೇಲ್, ಕ್ಯಾಂಟೀನ್, ದರ್ಶಿನಿ ಕೇಂದ್ರಗಳು ಬಂದ್ ಆಗಿದ್ದು, ಊಟ, ತಿಂಡಿಯ ಅಗತ್ಯ ಇದ್ದವರು ಪಾರ್ಸೆಲ್ ಒಯ್ಯಬೇಕೆಂದು ಸೂಚನೆ ನೀಡಲಾಗಿದೆ. ಹೊಟೇಲ್ ಇಲ್ಲದೆ ತೊಂದರೆ ಆಗಬಾರದೆಂಬ ನಿಟ್ಟಿನಲ್ಲಿ ಮಂಗಳೂರು ನಗರದಲ್ಲಿ ಕರ್ತವ್ಯಕ್ಕೆ ನಿಯೋಜನೆ ಆಗಿರುವ ಪೊಲೀಸರಿಗೆ ಕಮಿಷನರ್ ಕಚೇರಿ ಹಿಂಭಾಗದ ಮೈದಾನದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ.
ಪೊಲೀಸರೇ ಸೇರಿಕೊಂಡು ಮೈದಾನದಲ್ಲಿ ಊಟ ರೆಡಿ ಮಾಡುತ್ತಿದ್ದು, ಮೊದಲ ದಿನ 300 ಮಂದಿಗೆ ಊಟ ರೆಡಿ ಮಾಡಲಾಗಿತ್ತು. ಊಟ, ನೀರು ಸಿಗದೆ ಕರ್ತವ್ಯ ನಿರತ ಸಿಬಂದಿ ಪರದಾಟ ಅನುಭವಿಸಬಾರದು ಎಂಬ ನೆಲೆಯಲ್ಲಿ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಮುತುವರ್ಜಿ ವಹಿಸ್ಕೊಂಡು ಈ ವ್ಯವಸ್ಥೆ ಮಾಡಿದ್ದಾರೆ.
ಮಧ್ಯಾಹ್ನ 11 ಗಂಟೆಯಿಂದ ಮೂರು ಗಂಟೆ ವರೆಗೆ ಊಟದ ವ್ಯವಸ್ಥೆ ಮಾಡಲಾಗಿದ್ದು, ಮಂಗಳೂರು ನಗರ ಭಾಗದಲ್ಲಿ ಕರ್ತವ್ಯಕ್ಕೆ ನಿಯೋಜನೆ ಆದವರು ತಾವೇ ಬಂದು ಊಟ ಮಾಡಿಕೊಂಡು ಹೋಗಲು ಸೂಚಿಸಲಾಗಿದೆ. ಈಗ 25 ಸಾವಿರ ರೂಪಾಯಿ ಕೈಯಿಂದಲೇ ಸುರಿದು ಊಟದ ವ್ಯವಸ್ಥೆಯನ್ನು ಆರಂಭಿಸಿದ್ದೇವೆ. ಸರಕಾರದಿಂದ ಹಣ ಕ್ಲೈಮ್ ಮಾಡಲು ಆಗುತ್ತದೆಯೇ ನೋಡಬೇಕು ಎಂದಿದ್ದಾರೆ ಕಮಿಷನರ್ ಶಶಿಕುಮಾರ್.
ಕಮಿಷನರ್ ಕಚೇರಿಗೆ ತೆರಳುವುದಕ್ಕೂ ನಿರ್ಬಂಧ
ಸಾಮಾನ್ಯವಾಗಿ ಕಮಿಷನರ್ ಕಚೇರಿಗೆ ನೂರಾರು ಮಂದಿ ಆಗಮಿಸುತ್ತಾರೆ. ವಿವಿಧ ರೀತಿಯ ಅಗತ್ಯ ಕೆಲಸಗಳನ್ನು ಮಾಡಿಸುವುದಕ್ಕಾಗಿ ಕಚೇರಿಗೆ ಅಲೆದಾಡುತ್ತಾರೆ. ಆದರೆ, ಕೋವಿಡ್ ನಿರ್ಬಂಧ ಕಾರಣದಿಂದ ಮಂಗಳೂರು ಕಮಿಷನರ್ ಕಚೇರಿಗೆ ನೇರವಾಗಿ ಹೋಗುವಂತಿಲ್ಲ. ಹೊರಭಾಗದಲ್ಲಿ ಕಿಯೋಸ್ಕ್ ಮಾಡಲಾಗಿದ್ದು, ಅಲ್ಲಿಯೇ ಅರ್ಜಿಗಳನ್ನು ಕೊಡಬೇಕು. ಅಗತ್ಯ ಇದ್ದರೆ ಮಾತ್ರ ಕಮಿಷನರ್ ಅಥವಾ ಡಿಸಿಪಿಗಳನ್ನು ಭೇಟಿ ಮಾಡಲು ಅವಕಾಶ ನೀಡಲಾಗುತ್ತಿದೆ.
Night curfew in Karnataka, Mangalore Police Commissioner Shashi Kumar organises free food for Police Personnel till May 4th by his expenses. Police staff have highly appreciated commissioner for his commendable service.
17-05-25 01:44 pm
Bangalore Correspondent
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
17-05-25 10:51 pm
HK News Desk
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
ಡೊನಾಲ್ಡ್ ಟ್ರಂಪ್ ಟೀಕಿಸಿದ್ದ ಪೋಸ್ಟ್ ಡಿಲೀಟ್ ಮಾಡಿದ...
16-05-25 04:45 pm
ಮುಸ್ಲಿಂ ವ್ಯಕ್ತಿಗೆ ಕುರಾನ್ ಪ್ರಕಾರ ನಾಲ್ಕು ಮದುವೆ...
15-05-25 09:09 pm
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
17-05-25 10:09 pm
Mangalore Correspondent
Mangalore Balmatta Accident, Bus, Video: ನಿಂತ...
17-05-25 08:52 pm
Sakleshpur Subrahmanya Railway Electrificatio...
17-05-25 01:01 pm
CM Siddaramaiah, New Dc Office Mangalore Inau...
16-05-25 10:27 pm
Siddaramaiah, Cm Mangalore, BJP black flag: ಸ...
16-05-25 06:05 pm
17-05-25 05:00 pm
Bangalore Correspondent
Mangalore Stabbing, Panemangalore, Crime, Att...
16-05-25 11:06 pm
Belagavi Protest, Quran Burnt, Police, Crime:...
16-05-25 09:20 pm
Davanagere Crime, Gold Robbery: ಆನ್ಲೈನ್ ಗೇಮಿಂ...
15-05-25 11:06 pm
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm