ಬ್ರೇಕಿಂಗ್ ನ್ಯೂಸ್
21-04-21 02:57 pm Mangalore Correspondent ಕರಾವಳಿ
ಮಂಗಳೂರು, ಎ.21: ಒಂದೆಡೆ ರಾತ್ರಿ ಕರ್ಫ್ಯೂ, ಇನ್ನೊಂದೆಡೆ ಹಗಲು ಹೊತ್ತಿನಲ್ಲಿ ಟಫ್ ರೂಲ್ಸ್ ಜಾರಿಗೊಳಿಸಿ ರಾಜ್ಯ ಸರಕಾರ ಆದೇಶ ಮಾಡಿದೆ. ಇದರಂತೆ, ಹೊಟೇಲ್, ಕ್ಯಾಂಟೀನ್, ದರ್ಶಿನಿ ಕೇಂದ್ರಗಳು ಬಂದ್ ಆಗಿದ್ದು, ಊಟ, ತಿಂಡಿಯ ಅಗತ್ಯ ಇದ್ದವರು ಪಾರ್ಸೆಲ್ ಒಯ್ಯಬೇಕೆಂದು ಸೂಚನೆ ನೀಡಲಾಗಿದೆ. ಹೊಟೇಲ್ ಇಲ್ಲದೆ ತೊಂದರೆ ಆಗಬಾರದೆಂಬ ನಿಟ್ಟಿನಲ್ಲಿ ಮಂಗಳೂರು ನಗರದಲ್ಲಿ ಕರ್ತವ್ಯಕ್ಕೆ ನಿಯೋಜನೆ ಆಗಿರುವ ಪೊಲೀಸರಿಗೆ ಕಮಿಷನರ್ ಕಚೇರಿ ಹಿಂಭಾಗದ ಮೈದಾನದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ.



ಪೊಲೀಸರೇ ಸೇರಿಕೊಂಡು ಮೈದಾನದಲ್ಲಿ ಊಟ ರೆಡಿ ಮಾಡುತ್ತಿದ್ದು, ಮೊದಲ ದಿನ 300 ಮಂದಿಗೆ ಊಟ ರೆಡಿ ಮಾಡಲಾಗಿತ್ತು. ಊಟ, ನೀರು ಸಿಗದೆ ಕರ್ತವ್ಯ ನಿರತ ಸಿಬಂದಿ ಪರದಾಟ ಅನುಭವಿಸಬಾರದು ಎಂಬ ನೆಲೆಯಲ್ಲಿ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಮುತುವರ್ಜಿ ವಹಿಸ್ಕೊಂಡು ಈ ವ್ಯವಸ್ಥೆ ಮಾಡಿದ್ದಾರೆ.




ಮಧ್ಯಾಹ್ನ 11 ಗಂಟೆಯಿಂದ ಮೂರು ಗಂಟೆ ವರೆಗೆ ಊಟದ ವ್ಯವಸ್ಥೆ ಮಾಡಲಾಗಿದ್ದು, ಮಂಗಳೂರು ನಗರ ಭಾಗದಲ್ಲಿ ಕರ್ತವ್ಯಕ್ಕೆ ನಿಯೋಜನೆ ಆದವರು ತಾವೇ ಬಂದು ಊಟ ಮಾಡಿಕೊಂಡು ಹೋಗಲು ಸೂಚಿಸಲಾಗಿದೆ. ಈಗ 25 ಸಾವಿರ ರೂಪಾಯಿ ಕೈಯಿಂದಲೇ ಸುರಿದು ಊಟದ ವ್ಯವಸ್ಥೆಯನ್ನು ಆರಂಭಿಸಿದ್ದೇವೆ. ಸರಕಾರದಿಂದ ಹಣ ಕ್ಲೈಮ್ ಮಾಡಲು ಆಗುತ್ತದೆಯೇ ನೋಡಬೇಕು ಎಂದಿದ್ದಾರೆ ಕಮಿಷನರ್ ಶಶಿಕುಮಾರ್.




ಕಮಿಷನರ್ ಕಚೇರಿಗೆ ತೆರಳುವುದಕ್ಕೂ ನಿರ್ಬಂಧ
ಸಾಮಾನ್ಯವಾಗಿ ಕಮಿಷನರ್ ಕಚೇರಿಗೆ ನೂರಾರು ಮಂದಿ ಆಗಮಿಸುತ್ತಾರೆ. ವಿವಿಧ ರೀತಿಯ ಅಗತ್ಯ ಕೆಲಸಗಳನ್ನು ಮಾಡಿಸುವುದಕ್ಕಾಗಿ ಕಚೇರಿಗೆ ಅಲೆದಾಡುತ್ತಾರೆ. ಆದರೆ, ಕೋವಿಡ್ ನಿರ್ಬಂಧ ಕಾರಣದಿಂದ ಮಂಗಳೂರು ಕಮಿಷನರ್ ಕಚೇರಿಗೆ ನೇರವಾಗಿ ಹೋಗುವಂತಿಲ್ಲ. ಹೊರಭಾಗದಲ್ಲಿ ಕಿಯೋಸ್ಕ್ ಮಾಡಲಾಗಿದ್ದು, ಅಲ್ಲಿಯೇ ಅರ್ಜಿಗಳನ್ನು ಕೊಡಬೇಕು. ಅಗತ್ಯ ಇದ್ದರೆ ಮಾತ್ರ ಕಮಿಷನರ್ ಅಥವಾ ಡಿಸಿಪಿಗಳನ್ನು ಭೇಟಿ ಮಾಡಲು ಅವಕಾಶ ನೀಡಲಾಗುತ್ತಿದೆ.
Night curfew in Karnataka, Mangalore Police Commissioner Shashi Kumar organises free food for Police Personnel till May 4th by his expenses. Police staff have highly appreciated commissioner for his commendable service.
02-02-26 11:02 pm
HK News Desk
ಮುಖಂಡರ ಬಳಿಕ ಮಕ್ಕಳ ದರ್ಬಾರ್! ದಾವಣಗೆರೆಯಲ್ಲಿ ಕಾಂಗ...
02-02-26 09:52 pm
ಆಸ್ತಿ ವಿಚಾರದಲ್ಲಿ ಗಲಾಟೆ ; ಬಾವನಿಗೆ ಕತ್ತಿಯೇಟು, ಅ...
02-02-26 08:14 pm
ಪೊಲೀಸರಿಗೇ ಸಡ್ಡು ; ಹಾಡಹಗಲೇ ಸಿಲಿಕಾನ್ ಸಿಟಿಯಲ್ಲಿ...
02-02-26 05:12 pm
ಮೂರು ದಶಕ ಕಳೆದರೂ ಮತ್ತೆ ಎಂಡೋ ಭೀತಿ ; ಉತ್ತರ ಕನ್ನಡ...
02-02-26 04:06 pm
02-02-26 10:40 pm
HK News Desk
ಎಪ್ರಿಲ್ 1ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿ ; ಐ...
02-02-26 11:59 am
ಕೇಂದ್ರ ಬಜೆಟ್ ; ಏಳು ಹೈಸ್ಪೀಡ್ ರೈಲು ಕಾರಿಡಾರ್ ಘೋಷ...
01-02-26 02:00 pm
ಫೆಬ್ರವರಿ 1ಕ್ಕೆ ದೇಶದ ಕಣ್ಣು ದೆಹಲಿ ಕಡೆ! ಟ್ಯಾಕ್ಸ್...
31-01-26 10:20 pm
ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಮಾವ ; ಪೆಟ್ರೋಲ್ ಸುರಿ...
31-01-26 09:38 pm
02-02-26 07:36 pm
Udupi Correspondent
ವಿಜಯೇಂದ್ರ ಕಾರ್ಯಶೈಲಿಗೆ ಮಾಜಿ ಸಂಸದ ನಳಿನ್ ಕುಮಾರ್...
02-02-26 05:09 pm
'ನನ್ನ ಭಾಷಣದ ಕಾರಣಕ್ಕೆ ಗಲಾಟೆ, ಸಂಘರ್ಷ ಆಗಿದ್ದಿದೆಯ...
01-02-26 10:29 pm
Karnataka High Court, Mahesh Shetty Timarodi:...
01-02-26 07:52 pm
ಸಿಜೆ ರಾಯ್ ಆತ್ಮಹತ್ಯೆ ಪ್ರಕರಣ ; ಐಟಿ ರಾಜಕೀಯ ಕಾರಣಕ...
31-01-26 08:40 pm
02-02-26 10:37 pm
Bangalore Correspondent
ಉಡುಪಿಯಲ್ಲಿ ಕಾಂಗ್ರೆಸ್ ಮುಖಂಡನ ಮೇಲೆ ತಲ್ವಾರು ದಾಳಿ...
02-02-26 12:16 pm
Kishor Salve Arrest: ಚೋರ್ಲಾ ಘಾಟ್ 400 ಕೋಟಿ ದರೋ...
01-02-26 03:41 pm
ಅಂದು ರೀಟಾ, ಇಂದು ಸಾದಿಯಾ! ಮದುವೆ ಬಳಿಕ ಬಲವಂತದ ಮತ...
31-01-26 01:33 pm
ಸಾವಿರಾರು ಕೋಟಿಗಳ ಒಡೆಯ ಸಿ.ಜೆ. ರಾಯ್ ಯಾರು?ಕಾನ್ಫಿಡ...
31-01-26 12:12 pm