ಬ್ರೇಕಿಂಗ್ ನ್ಯೂಸ್
15-04-21 04:57 pm Mangalore Correspondent ಕರಾವಳಿ
ಮಂಗಳೂರು, ಎ.15: ನಗರದ ಬಳ್ಳಾಲ್ ಬಾಗ್ ನಲ್ಲಿರುವ ಫೀಲ್ಡ್ ಸ್ಟಾರ್ ಹೈಪರ್ ಮಾರ್ಕೆಟ್ ಮಳಿಗೆ ಬೆಂಕಿಗೆ ಆಹುತಿಯಾಗಿದೆ. ನಿನ್ನೆ ರಾತ್ರಿ ಹತ್ತು ಗಂಟೆ ಸುಮಾರಿಗೆ ಬೆಂಕಿ ಬಿದ್ದಿದೆ ಎನ್ನಲಾಗುತ್ತಿದ್ದು, ಕ್ಷಣಮಾತ್ರದಲ್ಲಿ ಬೆಂಕಿ ಹರಡಿಕೊಂಡು ಮೇಲ್ಭಾಗದ ಫೋಮ್ ಸೀಲಿಂಗನ್ನು ಸುಟ್ಟು ಹಾಕಿದೆ.


ಫೀಲ್ಡ್ ಸ್ಟಾರ್ ಹೈಪರ್ ಮಾರ್ಕೆಟ್ ನಾಲ್ಕು ವರ್ಷಗಳ ಹಿಂದೆ ಆರಂಭಗೊಂಡ ಹೊಸ ರೀತಿಯ ಮಳಿಗೆ ಆಗಿತ್ತು. ಸಿಟಿ ಸೆಂಟರ್, ಬಿಗ್ ಬಝಾರ್ ನಲ್ಲಿರುವ ರೀತಿ ಎಲ್ಲವನ್ನೂ ಒಳಗೊಂಡ ಸೂಪರ್ ಮಾರ್ಕೆಟ್. ಆದರೆ, ಯಾವುದೇ ಬಿಲ್ಡಿಂಗ್ ಕಟ್ಟದೆ ನೆಲದಲ್ಲೇ ಅಷ್ಟು ದೊಡ್ಡ ಮಾದರಿಯಲ್ಲಿ ಹೈಪರ್ ಮಾರ್ಕೆಟ್ ಸ್ಥಾಪಿಸಿದ್ದು ಮಂಗಳೂರಿನಲ್ಲಿ ಅದೇ ಮೊದಲು. ಜೀನಸು, ತರಕಾರಿಯಿಂದ ತೊಡಗಿ ಮನೆ, ಕಚೇರಿಗೆ ಬೇಕಾಗುವ ಎಲ್ಲ ಸಾಮಗ್ರಿಗಳು ಅಲ್ಲಿ ದೊರೆಯುತ್ತಿದ್ದವು. ಹೀಗಾಗಿ ಕಡಿಮೆ ಅವಧಿಯಲ್ಲಿ ನಗರದ ಜನರ ಪಾಲಿಗೆ ಮೆಚ್ಚಿನ ಸೂಪರ್ ಮಾರ್ಕೆಟ್ ಆಗಿತ್ತು.



ಈಗ ಹತ್ತು ಗಂಟೆಗೆ ರಾತ್ರಿ ಕರ್ಫ್ಯೂ ವಿಧಿಸುವುದರಿಂದ ನಿನ್ನೆ ರಾತ್ರಿ 9.30ಕ್ಕೆ ಮಳಿಗೆ ಕ್ಲೋಸ್ ಮಾಡಿ ತೆರಳಿದ್ದೆವು. ಹತ್ತುವರೆ ಹೊತ್ತಿಗೆ ಹತ್ತಿರದ ಅಪಾರ್ಟ್ಮೆಂಟ್ ನಿವಾಸಿಗಳು ಮಳಿಗೆಯಲ್ಲಿ ಬೆಂಕಿ ಹತ್ತಿಕೊಂಡಿರುವುದನ್ನು ಕರೆ ಮಾಡಿ ತಿಳಿಸಿದ್ದಾರೆ. ನಾವು ಬಂದ ಬಳಿಕವೂ ಅಗ್ನಿಶಾಮಕ ಸಿಬಂದಿ ಬರುವಾಗ ಲೇಟ್ ಆಗಿತ್ತು. ಅಷ್ಟರಲ್ಲಿ ಬೆಂಕಿ ಹರಡಿದ್ದು ಒಳಭಾಗದ ಸೀಲಿಂಗ್ ಪೂರ್ತಿ ಸುಟ್ಟು ಹೋಗಿದ್ದು ಪ್ಲಾಸ್ಟಿಕ್ ಉರಿದು ಕೆಳಗೆ ಬಿದ್ದು ಕೆಳಭಾಗದಲ್ಲಿದ್ದ ಸಾಮಗ್ರಿಗಳು ಕೂಡ ಹಾಳಾಗಿವೆ ಎಂದು ಹೇಳಿದರು ಅಲ್ಲಿನ ಸಿಬಂದಿ.



ಒಂದು ಕೋಟಿ ನಷ್ಟ ಆಗಿರಬಹುದೆಂದು ಕೆಲವರು ಅಂದಾಜಿಸಿದ್ದಾರೆ. ಇನ್ಶೂರೆನ್ಸ್ ಕಂಪನಿಯವರು ಬಂದಿಲ್ಲ. ಇನ್ಶೂರೆನ್ಸ್ ಇದೆ. ಎಸಿಯಿಂದ ಬೆಂಕಿ ಹತ್ತಿಕೊಂಡಿರುವ ಸಾಧ್ಯತೆಯಿದೆ. ಆದರೆ, ನಾವು ರಾತ್ರಿ ವೇಳೆ ಎಸಿ ಸೇರಿದಂತೆ ಎಲ್ಲವನ್ನೂ ಆಫ್ ಮಾಡಿ ಹೋಗಿದ್ದೆವು. ಪ್ರಕರಣ ದಾಖಲಾಗಿದೆ, ನಷ್ಟ ಅಂದಾಜು ಮಾಡುತ್ತಿದ್ದಾರೆ ಎಂದರು ಇನ್ನೊಬ್ಬ ಸಿಬಂದಿ.
A short circuit has triggered fire Fieldstar HyperMartet at Ballalbagh in Mangalore here on Thursday April 15, leading to panic. It is estimated of one crore loss to the company.
05-11-25 06:15 pm
Bangalore Correspondent
ಮಾಜಿ ಸಚಿವ ಎಚ್.ವೈ ಮೇಟಿ ಬೆಂಗಳೂರಿನ ಆಸ್ಪತ್ರೆಯಲ್ಲಿ...
04-11-25 04:38 pm
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
05-11-25 10:48 pm
Mangalore Correspondent
ಮಕ್ಕಳಿಲ್ಲದ ದಂಪತಿಗೆ ವೃದ್ಧಾಪ್ಯದಲ್ಲಿ ಗೃಹ ಭಾಗ್ಯ !...
05-11-25 10:19 pm
ಇಂದಿರಾ ಹೆಗ್ಗಡೆಯವರ ‘ಬಾರಗೆರೆ ಬರಂಬು ತುಳುವೆರೆ ಪುಂ...
05-11-25 07:49 pm
ಅಕ್ರಮ ಗೋಹತ್ಯೆ, ಮಾಂಸಕ್ಕೆ ಬಳಕೆ ; ಆರೋಪಿಯ ಉಳ್ಳಾಲದ...
05-11-25 03:35 pm
ಮಂಗಳೂರು ಕಮಿಷನರ್ ಸುಧೀರ್ ರೆಡ್ಡಿ ಹೆಸರಿನಲ್ಲಿ ನಕಲಿ...
04-11-25 10:51 pm
05-11-25 09:39 pm
Mangalore Correspondent
ಇಪಿಎಫ್ಒ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಭಾರೀ...
05-11-25 05:27 pm
ನಕಲಿ ಷೇರು ಮಾರುಕಟ್ಟೆ ಮೇಲೆ ಹೂಡಿಕೆ ; ಫೇಸ್ಬುಕ್ ಗೆ...
04-11-25 02:11 pm
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm