ಬ್ರೇಕಿಂಗ್ ನ್ಯೂಸ್
01-04-21 06:19 pm Mangalore Correspondent ಕರಾವಳಿ
ಮಂಗಳೂರು, ಎ.1: ಬೆಂಗಳೂರಿನ ಜೈಲಿನಿಂದಲೇ ಮಂಗಳೂರಿನ ರೌಡಿಸಂ ಜಗತ್ತನ್ನು ಕೈಯಲ್ಲಿರಿಸಿಕೊಂಡಿರುವ ರೌಡಿ ಆಕಾಶ್ ಭವನ ಶರಣ್ ಗ್ಯಾಂಗಿನ ಮತ್ತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಶರಣ್ ಸೂಚನೆಯಂತೆ ಹಫ್ತಾ ವಸೂಲಿ ಮತ್ತು ತಮ್ಮ ವಿರೋಧಿಗಳನ್ನು ಮುಗಿಸಲು ಸಂಚು ನಡೆಸಿದ್ದ ಆರೋಪದಲ್ಲಿ ಶರಣ್ ತಮ್ಮ ದೀರಜ್ ಅಲಿಯಾಸ್ ಕುಟ್ಟ ಆಕಾಶಭವನ(26), ಮತ್ತು ಇವರಿಗೆ ಮಧ್ಯಪ್ರದೇಶದಿಂದ ಮಾರಕಾಸ್ತ್ರಗಳನ್ನು ಪೂರೈಸುತ್ತಿದ್ದ ರಾಜೇಶ್ ತೋಮರ್ ಅಲಿಯಾಸ್ ರಾಜ್ಬೀರ್ (31), ಮರಳು ದಂಧೆಯಲ್ಲಿ ತೊಡಗಿಸ್ಕೊಂಡು ಹಣಕಾಸು ಡೀಲ್ ನಡೆಸುತ್ತಿದ್ದ ಅದ್ಯಪಾಡಿ ನಿವಾಸಿ ರಾಕೇಶ್ ಕಂಬಳಿ(25), ಎಕ್ಕಾರಿನ ರಾಜೇಶ್ ಆಚಾರ್ಯ(38), ಆಕಾಶ್ಭವನ ನಂದನಪುರ ನಿವಾಸಿ ಸಾಗರ್ (23) ಎಂಬವರನ್ನು ಬಂಧಿಸಲಾಗಿದೆ.

ಈಗಾಗ್ಲೇ ಬೈಕ್ ಅಡ್ಡಗಟ್ಟಿ ದರೋಡೆ ನಡೆಸುತ್ತಿದ್ದ ಪ್ರಕರಣದಲ್ಲಿ ನಾಲ್ವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದರು. ದೀಕ್ಷಿತ್ ಪೂಜಾರಿ, ಚಂದ್ರಹಾಸ, ಪ್ರಜ್ವಲ್ ಮತ್ತು ಸಂತೋಷ್ ಪೂಜಾರಿಯನ್ನು ವಿಚಾರಣೆ ನಡೆಸಿದಾಗ, ಅವರು ಆಕಾಶಭವನ್ ಶರಣ್ ಸೂಚನೆಯಂತೆ ಕೆಲಸ ಮಾಡುತ್ತಿರುವುದು ತಿಳಿದುಬಂದಿತ್ತು. ಅಲ್ಲದೆ, ಮಂಗಳೂರಿನಲ್ಲಿ ತಾನೇ ಅಂಡರ್ ವರ್ಲ್ಡ್ ಕಿಂಗ್ ಆಗಬೇಕೆಂದು ಬಯಸುತ್ತಿದ್ದ ಆಕಾಶಭವನ ಶರಣ್ ವಿರುದ್ಧ ಇದ್ದವರನ್ನು ಕೊಲ್ಲಲು ಸಂಚು ರೂಪಿಸಿದ್ದು ಬಯಲಾಗಿತ್ತು. ಅದರಂತೆ, ವಿಚಾರಣೆ ನಡೆಸಿದಾಗ ಈ ಹಿಂದೆ ಭೂಗತ ಪಾತಕಿ ರವಿಪೂಜಾರಿ ಗ್ಯಾಂಗಿನಲ್ಲಿ ಗುರುತಿಸಿಕೊಂಡಿದ್ದ ಪ್ರದೀಪ್ ಮೆಂಡನ್, ಮಂಕಿಸ್ಟಾಂಡ್ ವಿಜಯ್ ಅವರನ್ನು ಕೊಲ್ಲಲು ಸಂಚು ರೂಪಿಸಿದ್ದು ತಿಳಿದು ಬಂದಿತ್ತು.


ಇದಲ್ಲದೆ, ಆಕಾಶಭವನ್ ಶರಣ್ ಸೂಚನೆಯಂತೆ ಕಂಕನಾಡಿ ಠಾಣೆ ವ್ಯಾಪ್ತಿಯ ಹಳೇ ರೌಡಿ ಗೌರೀಶ್ ಅಲಿಯಾಸ್ ಗೌರಿಯನ್ನು ಕೊಲೆ ಮಾಡಲು ಆತನ ತಮ್ಮ ಧೀರಜ್ ಮುಂದಾಗಿರುವುದು ತಿಳಿದುಬಂದಿತ್ತು. ಧೀರಜ್ ಗೆ ನೆರವು ನೀಡುತ್ತಿದ್ದ ಇತರ ಮೂವರನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿನ ರೌಡಿಸಂ ಲೋಕದಲ್ಲಿ ತನ್ನದೇ ಪಾರುಪತ್ಯ ಪಡೆಯುವುದಕ್ಕಾಗಿ ಆಕಾಶಭವನ್ ಶರಣ್ ಈ ಕೆಲಸವನ್ನು ಮಾಡಿದ್ದ ಎಂದು ಪೊಲೀಸರು ಶಂಕಿಸಿದ್ದಾರೆ. ಮೂವರ ಕೊಲೆ ಸಂಚಿನ ಆರೋಪದಲ್ಲಿ ಕಂಕನಾಡಿ ಪೊಲೀಸರು ಬೆಂಗಳೂರು ಜೈಲಿನಲ್ಲಿರುವ ಆಕಾಶಭವನ್ ಶರಣ್ ನನ್ನು ನ್ಯಾಯಾಲಯದ ಅನುಮತಿ ಪಡೆದು ವಶಕ್ಕೆ ಪಡೆಯಲು ಮುಂದಾಗಿದ್ದಾರೆ.
Mangalore Plotting murder and robbery Police arrest four of akash bhavan gang. The Kankandy Town police have succeeded in arresting the four.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
26-08-26 06:41 pm
HK News Staffer
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
25-08-26 09:37 pm
HK News Staffer
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರೊಫೆಸರ್, ಮಂಗಳೂ...
24-08-26 06:25 pm
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
26-08-26 11:26 am
HK News Staffer
ವಿಜಯಪುರದಲ್ಲಿ ಭೀಕರ ದುರಂತ ; ನಾಪತ್ತೆಯಾಗಿದ್ದ ಒಂದೇ...
26-08-26 11:23 am
ಚಿಕ್ಕಮಗಳೂರು ; ಟಿಪ್ಪು ಕಟೌಟ್ ಜೊತೆಗೆ ಮುಜಾಹಿದ್ ಹಾ...
25-08-26 10:39 pm
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm
ವಿಟ್ಲ ; ಈಜಲು ತೆರಳಿದ್ದ ಎಸ್ಸಿಡಿಸಿಸಿ ಬ್ಯಾಂಕ್...
25-08-26 12:46 pm