ಬ್ರೇಕಿಂಗ್ ನ್ಯೂಸ್
10-03-21 06:10 pm Mangalore Correspondent ಕರಾವಳಿ
ಮಂಗಳೂರು, ಮಾ.10: ದೈವದರ್ಶನದಲ್ಲಿ ಹೇಳಿದಂತೆ ಪುರಾತನ ಬಾವಿಯೊಂದರಲ್ಲಿ ಶೋಧ ನಡೆಸಿದಾಗ 300 ವರ್ಷಗಳ ಹಿಂದಿನ ದೇವರ ಮೂರ್ತಿ ಪತ್ತೆಯಾದ ಘಟನೆ ಕಿನ್ನಿಗೋಳಿಯ ಬಳ್ಕುಂಜೆ ಸಮೀಪದ ಮೂಡಾಯಿಗುತ್ತಿನಲ್ಲಿ ನಡೆದಿದೆ.


ಬಳ್ಕುಂಜೆ ಮೂಡಾಯಿಗುತ್ತಿನ ಕುಟುಂಬಸ್ಥರಿಗೆ ಸೇರಿದ ಜಮೀನಿನಲ್ಲಿ ಮುಚ್ಚಿ ಹೋಗಿದ್ದ ಬಾವಿಯಲ್ಲಿ ದೈವದ ಮೂರ್ತಿ ಮತ್ತು ಪೂಜಾ ಪರಿಕರಗಳು ಪತ್ತೆಯಾಗಿವೆ. ಈ ಜಾಗದಲ್ಲಿ ಹಿಂದೆ ಮೂಡಾಯಿಗುತ್ತಿನ ಕುಟುಂಬಸ್ಥರು ದೈವಗಳ ಆರಾಧನೆ ನಡೆಸುತ್ತಿದ್ದರು. ಕಾಲಕ್ರಮೇಣ ಈ ಜಮೀನು ಪರರ ಪಾಲಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ಕುಟುಂಬಸ್ಥರು ತಮ್ಮ ಮೂಲ ಜಾಗವನ್ನು ಖರೀದಿಸಿ, ದೇವರ ಆರಾಧನೆಗೆಂದು ದೇವಸ್ಥಾನ ಕಟ್ಟಿದ್ದರು.


ಇತ್ತೀಚೆಗೆ ದೈವದರ್ಶನ ಮಾಡುತ್ತಿದ್ದ ಸಂದರ್ಭದಲ್ಲಿ "ಮುಚ್ಚಿ ಹೋದ ಹಳೆಯ ಬಾವಿಯನ್ನು ಮತ್ತೆ ತೋಡಬೇಕು. ಆಗ 300 ವರ್ಷಗಳ ಹಳೆಯ ದೈವದ ಮೂರ್ತಿ ಮತ್ತು ಪೂಜಾ ಪರಿಕರ ಸಿಗಲಿವೆ ಎಂದು ದೈವ ನುಡಿದಿತ್ತು. ನಿರಂತರ ಕಷ್ಟ ಎದುರಿಸುತ್ತಿದ್ದ ಹಿನ್ನೆಲೆ ದೈವದ ಮೊರೆ ಹೋಗಿದ್ದಾಗ ಕುಟುಂಬಸ್ಥರು ದೈವ ದರ್ಶನ ಇಟ್ಟಿದ್ದರು.

ಅದರಂತೆ, ಮನೆಯವರು ಆ ಜಾಗದಲ್ಲಿ ಬಾವಿ ತೋಡಿದ್ದು ಮಣ್ಣಿನಡಿಯಲ್ಲಿ ಮುಚ್ಚಿ ಹೋಗಿದ್ದ ಬಾವಿ ಪತ್ತೆಯಾಗಿದೆ. ಅಲ್ಲದೆ, ಬಾವಿ ಒಳಗೆ ಹಳೆಯದಾದ ಕಂಚಿನ ದೈವದ ಮೂರ್ತಿ, ಆಭರಣ, ಕತ್ತಿಗಳು ಪತ್ತೆಯಾಗಿವೆ.
300-year-old idol found inside well in kinnigoli Mangalore.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
26-08-26 02:05 pm
HK News Staffer
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
25-08-26 09:37 pm
HK News Staffer
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರೊಫೆಸರ್, ಮಂಗಳೂ...
24-08-26 06:25 pm
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
26-08-26 11:26 am
HK News Staffer
ವಿಜಯಪುರದಲ್ಲಿ ಭೀಕರ ದುರಂತ ; ನಾಪತ್ತೆಯಾಗಿದ್ದ ಒಂದೇ...
26-08-26 11:23 am
ಚಿಕ್ಕಮಗಳೂರು ; ಟಿಪ್ಪು ಕಟೌಟ್ ಜೊತೆಗೆ ಮುಜಾಹಿದ್ ಹಾ...
25-08-26 10:39 pm
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm
ವಿಟ್ಲ ; ಈಜಲು ತೆರಳಿದ್ದ ಎಸ್ಸಿಡಿಸಿಸಿ ಬ್ಯಾಂಕ್...
25-08-26 12:46 pm