ಬ್ರೇಕಿಂಗ್ ನ್ಯೂಸ್
06-03-21 03:06 pm Mangalore Correspondent ಕರಾವಳಿ
ಮಂಗಳೂರು, ಮಾ.6: ಮಂಗಳೂರಿನ ಕೆ.ಎಸ್. ರಾವ್ ರಸ್ತೆಯಲ್ಲಿರುವ ಸೂಪರ್ ಹ್ಯೂಮನ್ ಜೂಡೋ ಜಿಮ್ನಾಸ್ಟಿಕ್ ಕ್ಲಬ್ಬಿನ ಇಬ್ಬರು ಜೂಡೋ ಅತ್ಲೀಟ್ ಗಳು ನೇಪಾಳದಲ್ಲಿ ನಡೆದ ಟೂರ್ನಮೆಂಟಿನಲ್ಲಿ ಚಿನ್ನದ ಪದಕ ಪಡೆದಿದ್ದಾರೆ.
ಇಂಡೋ – ನೇಪಾಳ ಮಟ್ಟದ ಆಹ್ವಾನಿತ ಜಿಮ್ನಾಸ್ಟಿಕ್ ಕ್ಲಬ್ ಗಳ ಸದಸ್ಯರ ಟೂರ್ನಮೆಂಟಿನಲ್ಲಿ ಬಂಟ್ವಾಳ ತಾಲೂಕಿನ ಕಾಲಡ್ಕ ನಿವಾಸಿಗಳಾದ ನಿಶಿತ್ ಮತ್ತು ಧನಂಜಯ್ ಎಂಬ ಇಬ್ಬರು ಚಿನ್ನದ ಪದಕ ಪಡೆದಿದ್ದಾರೆ. ಇವರು ಮಂಗಳೂರಿನ ಸೂಪರ್ ಹ್ಯೂಮನ್ ಜಿಮ್ ನಲ್ಲಿ ಕೋಚ್ ಆಶಿಷ್ ಅವರಿಂದ ತರಬೇತು ಪಡೆದಿದ್ದರು. ಫೆ.24ರಿಂದ 28ರ ವರೆಗೆ ನೇಪಾಳದ ಕಸ್ಕಿ ಎನ್ನುವ ಪ್ರದೇಶದಲ್ಲಿ ಈ ಟೂರ್ನಮೆಂಟ್ ನಡೆದಿತ್ತು.
ಕಳೆದ ಬಾರಿ ಗೋವಾದಲ್ಲಿ ನಡೆದ ನೇಶನಲ್ ಜೂಡೋ ಚಾಂಪ್ಯನ್ ಶಿಪ್ಪಿನಲ್ಲಿ ನಿಶಿತ್ ಮತ್ತು ಧನಂಜಯ್ ಚಿನ್ನದ ಪದಕ ಗಳಿಸಿದ್ದರು. ಒಲಿಂಪಿಕ್ ಗೇಮ್ ಆಗಿರುವ ಜೂಡೋ ಕ್ರೀಡೆಯಲ್ಲಿ ಕರಾವಳಿಯ ಮಂದಿ ಸಾಧನೆ ಮಾಡಿದ್ದು ಕಡಿಮೆ. ಈಗ ಇವರಿಬ್ಬರ ಸಾಧನೆ ಮಂಗಳೂರಿನ ಮಂದಿಗೆ ಹೆಮ್ಮೆಯಾಗಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿರುವ ಈ ಜೋಡಿ ಒಲಿಂಪಿಕ್ ಕ್ರೀಡೆಯಲ್ಲಿ ಪದಕ ಗೆಲ್ಲುವಂತಾಗಲಿ ಎಂದು ಮೌ ಥಾಯ್ ಅಸೋಸಿಯೇಶನ್ ಆಫ್ ಕರ್ನಾಟಕ ಇದರ ಗೌರವಾಧ್ಯಕ್ಷ ಸದಾನಂದ ಶೆಟ್ಟಿ, ಅಸೋಸಿಯೇಶನ್ ಅಧ್ಯಕ್ಷ ರಾಜಗೋಪಾಲ್ ರೈ, ಅಸೋಸಿಯೇಶನ್ ಉಪಾಧ್ಯಕ್ಷ ಚಂದ್ರಹಾಸ ಶೆಟ್ಟಿ, ಬಿಜೆಪಿ ಯುವಮೋರ್ಚಾ ಮಂಗಳೂರು ದಕ್ಷಿಣ ಕ್ಷೇತ್ರದ ಅಧ್ಯಕ್ಷ ಸಚಿನ್ ರಾಜ್ ರೈ, ಮಂಗಳೂರಿನ ಸೂಪರ್ ಹ್ಯೂಮನ್ ಜಿಮ್ ಪಾಲುದಾರ ಬಿಪಿನ್ ರಾಜ್ ರೈ ಅಭಿನಂದಿಸಿದ್ದಾರೆ.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
26-08-26 02:05 pm
HK News Staffer
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
25-08-26 09:37 pm
HK News Staffer
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರೊಫೆಸರ್, ಮಂಗಳೂ...
24-08-26 06:25 pm
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
26-08-26 11:26 am
HK News Staffer
ವಿಜಯಪುರದಲ್ಲಿ ಭೀಕರ ದುರಂತ ; ನಾಪತ್ತೆಯಾಗಿದ್ದ ಒಂದೇ...
26-08-26 11:23 am
ಚಿಕ್ಕಮಗಳೂರು ; ಟಿಪ್ಪು ಕಟೌಟ್ ಜೊತೆಗೆ ಮುಜಾಹಿದ್ ಹಾ...
25-08-26 10:39 pm
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm
ವಿಟ್ಲ ; ಈಜಲು ತೆರಳಿದ್ದ ಎಸ್ಸಿಡಿಸಿಸಿ ಬ್ಯಾಂಕ್...
25-08-26 12:46 pm