ಬ್ರೇಕಿಂಗ್ ನ್ಯೂಸ್
25-02-21 07:52 pm Mangaluru correspondant ಕರಾವಳಿ
ಉಳ್ಳಾಲ, ಫೆ.25: ಕಾಯಿ ಎಳತಾದರೂ ದೊಡ್ಡದಾಗಿ ನೇತಾಡುತ್ತಿರುವ ಅಸ್ಸಾಂ ತಳಿಯ ಸೋರೆ ಕಾಯಿಗಳು. ಹತ್ತಿರದಲ್ಲೇ ಇರೋ ಚಪ್ಪರದಲ್ಲಿ ಎಣಿಕೆಗೆ ಸಿಗದಷ್ಟು ಬೆಳೆದು ತೂಗುತ್ತಿರುವ ಹೀರೆ ಕಾಯಿಗಳು. ಅದರ ಸುತ್ತಲೂ ಹರಿವೆ, ಬದನೆ, ಬೆಂಡೆಕಾಯಿ ಮೂಲಂಗಿ, ಟೊಮೆಟೋ, ಮುಳ್ಳು ಸೌತೆಗಳ ಗೊಂಚಲು ಕಣ್ಮನ ಸೆಳೆಯುತ್ತದೆ.
ಉಳ್ಳಾಲದ ಕಾಪಿಕಾಡಿನಲ್ಲಿರುವ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಈಗ ನೋಡುಗರ ಕಣ್ಣಿಗೆ ಹಸಿರ ತಂಪು ನೀಡುತ್ತಿದೆ. ಸಂಶೋಧನಾ ಕೇಂದ್ರದಲ್ಲಿ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ, ಕೂಲಿ ಕಾರ್ಮಿಕರು ಸೇರಿ ಇಂತಹ ಸಾವಯವ ಕೃಷಿಯನ್ನು ನಡೆಸಿ ಸಫಲತೆ ಕಂಡಿದ್ದಾರೆ.


14 ಹೆಕ್ಟೇರ್ ಪ್ರದೇಶವನ್ನು ಹೊಂದಿರುವ ಸಂಶೋಧನಾ ಕೇಂದ್ರದಲ್ಲಿ ಗೇರು ಮೂಲ ಕೃಷಿಯಾಗಿದ್ದರೂ ಖಾಲಿ ಇರುವ ಜಾಗದಲ್ಲಿ ತರಕಾರಿಗಳ ಕೈ ತೋಟವನ್ನು ಬೆಳೆಯಲಾಗಿದೆ. ಅಸ್ಸಾಂ ಗಡಿ ಪ್ರದೇಶದಲ್ಲಿ ಬೆಳೆಯುವ ಸೋರೆ ಕಾಯಿಗಳು ಇಲ್ಲಿಯ ಪ್ರಮುಖ ಆಕರ್ಷಣೆ. ಅಸ್ಸಾಂ ತಳಿಯ ಸೋರೆ ಕಾಯಿಗಳನ್ನು ಇಲ್ಲಿ ಬೆಳೆದಿದ್ದು ಎಳೆಯದಾದರೂ ಅದರ ಗಾತ್ರ ಮಾತ್ರ ಎಲ್ಲರನ್ನೂ ಆಕರ್ಷಿಸುತ್ತಿದೆ.
ಚೈನಾದಲ್ಲೂ ಅಸ್ಸಾಂ ತಳಿಯ ಸೋರೆ ಕಾಯಿ ಬಹಳ ಫೇಮಸ್ ಅಂತೆ. ಜೊತೆಗೆ ಹತ್ತಿರದ ಬೃಹತ್ ಚಪ್ಪರದಲ್ಲಿ ಎಣಿಕೆಗೂ ಸಿಗದಷ್ಟು ಲೋಕಲ್ ಹೀರೆಕಾಯಿಗಳು, ಟೊಮೆಟೊ, ಮೂಲಂಗಿ, ಮುಳ್ಳು ಸೌತೆ, ಬದನೆ, ಬೆಂಡೆಕಾಯಿ ಕೈತೋಟಗಳು ಜನರನ್ನ ಕೃಷಿಯತ್ತ ಆಕರ್ಷಿಸುವಂತೆ ಮಾಡಿದೆ. ಕೇಂದ್ರದ ಸಿಬ್ಬಂದಿ ಮತ್ತು ಕೂಲಿ ಕಾರ್ಮಿಕರು ಸೇರಿ ತೋಟವನ್ನು ಬಹಳ ಚೆನ್ನಾಗಿ ಮಾಡಿದ್ದು ನೀರು, ಗೊಬ್ಬರಗಳನ್ನು ಹಾಕಿ ಸಲಹಿದ ಪರಿಣಾಮ ಸಮೃದ್ಧ ತರಕಾರಿ ಬೆಳೆದಿದ್ದಾರೆ.

ತೋಟದಲ್ಲಿ ಬೆಳೆದ ತರಕಾರಿಗಳನ್ನು ಕೇಂದ್ರದ 25 ಸಿಬ್ಬಂದಿಗಳು, ಕೂಲಿ ಕಾರ್ಮಿಕರಿಗೆ ಹಂಚಿ ಉಳಿದ ತರಕಾರಿಗಳಿಂದ ಸಿಗುವ ಬೀಜಗಳನ್ನು ಕೃಷಿಕರು ಮತ್ತು ಸಾರ್ವಜನಿಕರಿಗೆ ವಿತರಿಸಲಾಗುತ್ತಿದೆ.ಈ ಬಗ್ಗೆ ಪ್ರತಿಕ್ರಿಯಿಸಿದ ಉಳ್ಳಾಲ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ರವಿರಾಜ್ ಶೆಟ್ಟಿ, ಕೇಂದ್ರಕ್ಕೆ ಅನೇಕ ಕೃಷಿಕರು ಭೇಟಿ ನೀಡುತ್ತಿರುತ್ತಾರೆ. ಅವರಿಗೆ ಸ್ಪೂರ್ತಿ ನೀಡುವ ಉದ್ದೇಶದಿಂದ ಕೈ ತೋಟವನ್ನು ನಿರ್ಮಿಸಲಾಗಿದೆ.


ಮಂಗಳೂರು ನಗರ ಅಂತೂ ಹಸಿರು ಮುಕ್ತವಾಗುತ್ತಿದೆ. ಇರೋ ಸ್ವಲ್ಪ ಜಾಗದಲ್ಲಾದರೂ ಎಲ್ಲರೂ ಈ ರೀತಿ ತರಕಾರಿಗಳನ್ನಾದರೂ ಬೆಳೆಯಬಹುದು ಎಂದು ಜನರಲ್ಲಿ ಆತ್ಮವಿಶ್ವಾಸ ತುಂಬಲು ಕೈತೋಟ ನಿರ್ಮಿಸಲಾಗಿದೆ. ಅಲ್ಲದೆ ತಾರಸಿ ತೋಟದಲ್ಲೂ ಥರ್ಮಾಕೋಲಿನ ಪೆಟ್ಟಿಗೆಗಳಲ್ಲಿ ಯಾವ ರೀತಿ ತರಕಾರಿಗಳನ್ನು ಬೆಳೆಯಬಹುದೆಂದು ಇಲ್ಲಿ ತೋರಿಸಿಕೊಡಲಾಗಿದೆ ಎಂದಿದ್ದಾರೆ.
A plantation program was held at Ullal, Mangalore. Hundreds thronged to the venue to see various vegetables grown in different states of India.
04-11-25 04:38 pm
Bangalore Correspondent
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
04-11-25 10:51 pm
Mangalore Correspondent
Mangalore Police, Panambur Beach: ಗಂಡ - ಹೆಂಡತ...
04-11-25 08:37 pm
ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಹಣಕ್ಕಾಗಿ...
04-11-25 06:15 pm
ವ್ಯಾಟಿಕನ್ ಸಿಟಿಯ ಭಾರತದ ರಾಯಭಾರಿ ಆ್ಯಂಡ್ರಿಯಾ ಫಾನ್...
04-11-25 05:06 pm
ಧರ್ಮಸ್ಥಳ ಪ್ರಕರಣ ; ಎಸ್ಐಟಿ ತನಿಖಾ ಪ್ರಕ್ರಿಯೆಗೆ ಮಹ...
04-11-25 05:03 pm
04-11-25 02:11 pm
Mangalore Correspondent
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm