ಬ್ರೇಕಿಂಗ್ ನ್ಯೂಸ್

Forensic Expert Dr Mahabala Shetty, Dharmasthala case: ಧರ್ಮಸ್ಥಳ ಸ್ನಾನಘಟ್ಟ ಬಳಿ 20ಕ್ಕೂ ಹೆಚ್ಚು ಕೊಳೆತ ಶವಗಳನ್ನು ಪೋಸ್ಟ್ ಮಾರ್ಟಂ ಮಾಡಿದ್ದೆ, ಅವನ್ನು ಅಲ್ಲಿಯೇ ಹೂಳಲಾಗಿತ್ತು ; ಪ್ರಕರಣಕ್ಕೆ ಸ್ಫೋಟಕ ತಿರುವು ಕೊಟ್ಟ ಫಾರೆನ್ಸಿಕ್ ತಜ್ಞ ಡಾ.ಮಹಾಬಲ ಶೆಟ್ಟಿ    |    ಕನಸು ಕಮರಿಸಿದ ಅಪಘಾತ ; ವೈದ್ಯರ ಎಡವಟ್ಟು, ಸಕಾಲದಲ್ಲಿ ಚಿಕಿತ್ಸೆ ಸಿಗದೆ ಕೈಕಾಲಿನ ಶಕ್ತಿಯೇ ಊನ, ಕಂಗೆಟ್ಟ ವಿಶ್ವಕರ್ಮ ಕುಟುಂಬಕ್ಕೆ ಕ್ರಿಶ್ಚಿಯನ್ ಗೆಳೆಯರ ಆಸರೆ ! ಅರ್ಧಕ್ಕೆ ಉಳಿದುಬಿಟ್ಟ ಮನೆಗೆ ದಿಕ್ಕಿಲ್ಲದ ಸ್ಥಿತಿ, ಬೆಳಕು ಹರಿಸೀತೆ ಸಹೃದಯರ ಹಾರೈಕೆ ?!    |    Kannada Producer Ganesh, Film Dharmasthala File, Movie: 'ಧರ್ಮಸ್ಥಳ ಫೈಲ್ಸ್' ಸಿನಿಮಾ ಘೋಷಿಸಿದ ಕನ್ನಡದ ನಿರ್ಮಾಪಕ ಎ. ಗಣೇಶ್ ; ಸಮಸ್ಯೆ ಆದ್ರೆ ಚಿತ್ರತಂಡವೇ ಹೊಣೆ ಎಂಬ ಕಂಡೀಷನ್! ಕತೆ ಇನ್ನಷ್ಟೇ ಬರೆಸಬೇಕೆಂದ ಚಿತ್ರತಂಡ     |   

ಪುತ್ತೂರು ; ಕುಡಿದ ಅಮಲಿನಲ್ಲಿ ತಂದೆಯನ್ನೇ ಕೊಲೆಗೈದ ಮಗ ! 

18-08-20 12:47 pm       Mangalore Reporter   ಕರಾವಳಿ

ಮಗನೇ ತಂದೆಯನ್ನು ಕಡಿದು ಕೊಲೆಗೈದ ಪೈಶಾಚಿಕ ಕೃತ್ಯ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ. ಪುತ್ತೂರು ತಾಲೂಕಿನ ತಿಂಗಳಾಡಿ ಗ್ರಾಮದ ಬಾಲಯ ಎಂಬಲ್ಲಿ ನಿನ್ನೆ ತಡರಾತ್ರಿ ಈ ಘಟನೆ ನಡೆದಿದೆ.

ಪುತ್ತೂರು, ಆಗಸ್ಟ್ 18: ಕುಡಿತದ ಅಮಲಿನಲ್ಲಿ ಮಗನೇ ತಂದೆಯನ್ನು ಕಡಿದು ಕೊಲೆಗೈದ ಪೈಶಾಚಿಕ ಕೃತ್ಯ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ. ಕುಡಿತದ ಅಮಲು ತಲೆಗೇರಿ ತಂದೆ ಹಾಗೂ ಮಗ ಹೊಡೆದಾಡಿದ್ದು, ಈ ಸಂದರ್ಭ ಮಗ ತನ್ನ ಕೈಗೆ ಸಿಕ್ಕಿದ ಕತ್ತಿಯಿಂದ ತಂದೆಯ ಮೇಲೆ ಕಡಿದಿದ್ದು, ತಂದೆ ಆಸ್ಪತ್ರೆಗೆ ಸಾಗಿಸುವ ವೇಳೆಯೇ ಮೃತಪಟ್ಟಿದ್ದಾರೆ. 

ಪುತ್ತೂರು ತಾಲೂಕಿನ ತಿಂಗಳಾಡಿ ಗ್ರಾಮದ ಬಾಲಯ ಎಂಬಲ್ಲಿ ನಿನ್ನೆ ತಡರಾತ್ರಿ ಈ ಘಟನೆ ನಡೆದಿದೆ. 68 ವರ್ಷದ ಗಂಗಾಧರ ನಾಯ್ಕ ಕೊಲೆಯಾದವರಾಗಿದ್ದು ಪುತ್ರ ಶಶಿಧರ್ ನಾಯ್ಕ್ ಹತ್ಯೆಗೈದ ಆರೋಪಿಯಾಗಿದ್ದಾನೆ. 

ಅತ್ಯಂತ ಸ್ಥಿತಿವಂತ ಕುಟುಂಬವಾಗಿರುವ ಶಶಿಧರ್ ನಾಯ್ಕ್ ಹಾಗೂ ಆತನ ತಂದೆ ಗಂಗಾಧರ್ ನಾಯ್ಕ್ ತಿಂಗಳಾಡಿಯ ಬಾಲಯದಲ್ಲಿ ಕಳೆದ ಹಲವು ವರ್ಷಗಳಿಂದ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಈ ಕುಟುಂಬಕ್ಕೆ ಪುತ್ತೂರು ನಗರದ ಕೃಷ್ಣನಗರ ಎಂಬಲ್ಲಿಯೂ ಒಂದು ಮನೆಯಿದೆ. ಸ್ಥಿತಿವಂತ ಕುಟುಂಬದ ಮಗನಾದ ಶಶಿಧರ್ ನಾಯ್ಕ್ ಗೆ ಕುಡಿತದ ಜೊತೆಗೆ ಗಾಂಜಾದ ಚಟ ಇತ್ತೆಂದು ಸ್ಥಳೀಯರು ತಿಳಿಸಿದ್ದಾರೆ.

ನಿನ್ನೆ ಎಂದಿನಂತೆ ಕುಡಿದು ಮನೆಗೆ ಬಂದಿದ್ದ ಶಶಿಧರ್ ಕ್ಷುಲ್ಲಕ ವಿಚಾರಕ್ಕೆ ತಂದೆಯ ಜೊತೆಗೆ ಜಗಳಕ್ಕೆ ಇಳಿದಿದ್ದಾನೆ. ಈ ಸಂದರ್ಭದಲ್ಲಿ ತಂದೆ ಹಾಗೂ ಮಗನ ನಡುವೆ ತಳ್ಳಾಟ ನಡೆದಿದೆ. ರೊಚ್ಚಿಗೆದ್ದ ಶಶಿಧರ್ ನಾಯ್ಕ್ ಮನೆಯಲ್ಲೇ ಇದ್ದ ಕತ್ತಿಯಿಂದ ತಂದೆ ಗಂಗಾಧರ್ ನಾಯ್ಕ್ ಮೇಲೆ ಗಂಭೀರ ಹಲ್ಲೆ ನಡೆಸಿದ್ದಾನೆ. ಗಂಗಾಧರ್ ನಾಯ್ಕ್ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸುವ ವೇಳೆ ಸಾವನ್ನಪ್ಪಿದ್ದಾರೆ. ಪ್ರಕರಣ ಸಂಬಂಧಿಸಿ ಪುತ್ತೂರು ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.