ಬ್ರೇಕಿಂಗ್ ನ್ಯೂಸ್
            
                        05-02-21 04:49 pm Mangalore Correspondent ಕರಾವಳಿ
            ಮಂಗಳೂರು, ಫೆ.5: ಈ ದೇಶ ಹಾಳಾದರೆ, ಚಿಂತಿಲ್ಲ. ನಾಲ್ಕೈದು ಕಾರ್ಪೊರೇಟ್ ಕಂಪನಿಗಳಷ್ಟೆ ಉದ್ಧಾರವಾದರೆ ಸಾಕೆಂಬ ನೀತಿ ಬಿಜೆಪಿಯದ್ದು. ಮೊದಲೇ ವ್ಯಾಪಾರಿಗಳ ಪಕ್ಷವಾಗಿತ್ತು. ಈಗಂತೂ ಕಾರ್ಪೊರೇಟ್ ಕಂಪನಿಗಳ ಪಕ್ಷವಾಗಿ ಮಾರ್ಪಟ್ಟಿದೆ. ಯುಪಿಎ ಇದ್ದಾಗ 25 ಶೇ. ಎಫ್ ಡಿಐ ಕೊಟ್ಟಿದ್ದಕ್ಕೆ ಸ್ವದೇಶಿ ಜಾಗರಣ್ ಮಂಚ್ ನವರು ಹಾರಾಡಿದ್ದರು. ಈಗ ಮಂಚದ ಕಾಲೇ ಮುರಿದಿದೆ. ಬಿಜೆಪಿ ಸರಕಾರ ನೂರು ಶೇಕಡಾ ಎಫ್ ಡಿಐ ಕೊಟ್ಟಿದೆ.
ಹೀಗಂತಾ ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು ಮಾಜಿ ಸಚಿವ ರಮಾನಾಥ ರೈ. ನಗರದ ಕದ್ರಿಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ರಮಾನಾಥ ರೈ, ರೈತರ ಪ್ರತಿಭಟನೆ ವಿಚಾರದಲ್ಲಿ ಕೇಂದ್ರ ನಿರ್ಲಕ್ಷ್ಯ ತೋರಿದ್ದನ್ನು ಖಂಡಿಸಿ ಮಾತನಾಡಿದರು. ಪ್ರತಿಭಟನೆ ಹಿಂದೆ ಖಲೀಸ್ತಾನಿಗಳು ಇದ್ದಾರೆ, ಅಂತಾರಾಷ್ಟ್ರೀಯ ಸಂಚು ಇದೆ, ಪ್ರತಿಪಕ್ಷ ಇದೆ ಎನ್ನುತ್ತಿದ್ದಾರೆ. ಹಿಂದೆ ಖಲೀಸ್ತಾನಿಗಳನ್ನು ಮಟ್ಟ ಹಾಕಿ, ಇಂದಿರಾ ಗಾಂಧಿ ಅದಕ್ಕಾಗಿ ಪ್ರಾಣ ತ್ಯಾಗವನ್ನೇ ಮಾಡಿದ್ದರು. ಈಗ ಖಲೀಸ್ತಾನಿಗಳು ಬಂದಿದ್ದಾರೆ ಎನ್ನುವ ಮೋದಿ ಸರಕಾರಕ್ಕೆ ಅವರನ್ನು ಮಟ್ಟ ಹಾಕುವ ತಾಕತ್ತು ಇಲ್ಲವೇ ಎಂದು ಪ್ರಶ್ನೆ ಮಾಡಿದರು.

ಪೆಟ್ರೋಲ್ ದರದ ಬಗ್ಗೆ ಮಾತನಾಡಿದರೆ ದೇಶವಿರೋಧಿ ಪಟ್ಟ ಕಟ್ಟುತ್ತಾರೆ. ಇವರ ಪರವಾಗಿರುವ ಮಂದಿ ದೇಶಭಕ್ತರು, ವಿರೋಧ ಮಾತನಾಡಿದರೆ ದೇಶ ವಿರೋಧಿಗಳು. ಪೆಟ್ರೋಲ್ ರೇಟ್ ವಿಚಾರದಲ್ಲಿ ಪ್ರತಿಭಟನೆ ಮಾಡಿ ಅಧಿಕಾರಕ್ಕೆ ಬಂದಿದ್ದ ಬಿಜೆಪಿಯವರು ಈಗ ಯಾವ ಮುಖ ಇಟ್ಟುಕೊಂಡು ರೇಟು ಏರಿಸುತ್ತಿದ್ದಾರೆ. ಪೆಟ್ರೋಲಿಗೆ ಒಂದು ಸಾವಿರ ಆದರೂ ಮೋದಿಗೆ ಓಟು ಹಾಕುತ್ತೇವೆ ಎನ್ನುವ ಮನೋಭಾವನೆ ದಿವಾಳಿತನದ ಸಂಕೇತ. ಮಾನಸಿಕ ದಿವಾಳಿಯಾಗಿ ಈ ರೀತಿಯ ಮಾತು ಆಡುತ್ತಿದ್ದಾರೆ ಎಂದು ಹೇಳಿದ ರಮಾನಾಥ ರೈ, ರೈತರ ಪರವಾಗಿ ಟಿಕಾಯತ್ ಹಿಂದೆ ಯುಪಿಎ ಸರಕಾರ ಇದ್ದಾಗಲೂ ಪ್ರತಿಭಟನೆ ನಡೆಸಿದ್ದರು. ಈಗ ಅವರನ್ನು ಕಾಂಗ್ರೆಸ್ ಪರ ಎಂದು ಹಣೆಪಟ್ಟಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

ಸರಕಾರದ ಬಿಎಸ್ಸೆನ್ನೆಲ್ ಇರುವಾಗಲೇ ಅಂಬಾನಿಗೆ ಬೆಂಬಲವಾಗಿ ನಿಂತು ಖಾಸಗಿ ಜಿಯೋವನ್ನು ದೇಶಾದ್ಯಂತ ಹೇರಿಕೆ ಮಾಡಿದರು. ಈಗ ಬ್ಯಾಂಕನ್ನೂ ಖಾಸಗೀಕರಣ ಮಾಡುತ್ತಿದ್ದಾರೆ. ಈ ಸರಕಾರ ಮುಂದುವರಿದರೆ ದೇಶದಲ್ಲಿ ಪ್ರಜಾಪ್ರಭುತ್ವ, ಭಾರತದ ಸ್ಥಿತಿ ಹೀಗೇ ಇರುತ್ತದೆ ಎನ್ನುವ ಭರವಸೆ ಇಲ್ಲ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಇಬ್ರಾಹಿಂ ಕೋಡಿಜಾಲ್, ಶಶಿಧರ್ ಹೆಗ್ಡೆ, ಅಬ್ದುಲ್ ರವೂಫ್, ನವೀನ್ ಡಿಸೋಜ, ಅಪ್ಪಿ, ಯುವ ಕಾಂಗ್ರೆಸ್ ನೂತನ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ ಉಪಸ್ಥಿತರಿದ್ದರು.
            
            
            Congress leader and former minister B Ramanath Rai on Friday, February 5 said that the BJP-led union government in the centre is looting the poor to fill the pockets of the rich.
    
            
             03-11-25 05:17 pm
                        
            
                  
                Bangalore Correspondent    
            
                    
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
    
            
             03-11-25 01:13 pm
                        
            
                  
                HK News Desk    
            
                    
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
    
            
             03-11-25 10:47 pm
                        
            
                  
                Mangalore Correspondent    
            
                    
ಡಿ.27 ರಂದು 9ನೇ ವರ್ಷದ ಮಂಗಳೂರು ಕಂಬಳ ; ಈ ಬಾರಿ ’ನ...
03-11-25 05:20 pm
ಸಸಿಹಿತ್ಲು ಬೀಚ್ ನಲ್ಲಿ ನೀರಾಟಕ್ಕಿಳಿದು ಬೆಂಗಳೂರಿನ...
03-11-25 12:37 pm
ಧರ್ಮಸ್ಥಳ ಪ್ರಕರಣ ; ಗುರುತು ಪತ್ತೆಯಾಗದ 38 ಪ್ರಕರಣಗ...
02-11-25 10:23 pm
ಮಂಗಳೂರು ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಕೂಟಕ್ಕೆ ತೆ...
02-11-25 06:57 pm
    
            
             03-11-25 12:33 pm
                        
            
                  
                Mangalore Correspondent    
            
                    
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್...
31-10-25 10:57 pm