ಬ್ರೇಕಿಂಗ್ ನ್ಯೂಸ್
            
                        03-02-21 06:13 pm Mangalore Correspondent ಕರಾವಳಿ
            ಸುಬ್ರಹ್ಮಣ್ಯ, ಫೆ.3: ಕೊನೆಗೂ ಅರಣ್ಯಾಧಿಕಾರಿಗಳ ಆಪರೇಶನ್ ಚಿರತೆ ಠುಸ್ಸಾಯ್ತು. ಬೆಳಗ್ಗಿನಿಂದ ಬೋನು, ಬಲೆ ಹಿಡಿದು ಕಾರ್ಯಾಚರಣೆ ಮಾಡಿದ್ದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿಯೇ ಚಿರತೆ ಪರಾರಿಯಾಗಿದೆ.
ಬೆಳಗ್ಗಿನಿಂದಲೇ ಅರಣ್ಯಾಧಿಕಾರಿಗಳು ಒಂದೆಡೆ ಬೋನು, ಮತ್ತೊಂದು ಕಡೆ ಬಲೆ ಹಿಡಿದು ಚಿರತೆಯನ್ನು ಹಿಡಿಯಲು ಹರಸಾಹಸ ಮಾಡಿದ್ದರು. ಚಿರತೆ ಇನ್ನೇನು ಕೈಗೆ ಸಿಕ್ಕೇಬಿಡ್ತು ಎನ್ನುವಾಗಲೇ ಒಮ್ಮೆಗೆ ಹೊರಗೆ ಬಂದಿದ್ದ ಚಿರತೆ ಬಲೆಯೊಳಗೆ ಸಿಲುಕುತ್ತಲೇ ಎಗರಾಡಿದೆ. ಬಲೆಯನ್ನು ಕಚ್ಚಿ ಹೊರಗೆ ಓಡುವ ಪ್ರಯತ್ನದಲ್ಲಿದ್ದಾಗಲೇ ಬಲೆ ತುಂಡಾಯಿತೋ ಏನೋ ಗೊತ್ತಿಲ್ಲ. ಬಲೆಯ ಅಡಿಭಾಗದಿಂದ ಚಿರತೆ ಹೊರಬಂದಿದ್ದು ಜನರನ್ನು ನೋಡಿ ಬೆದರಿ ಓಟಕ್ಕಿತ್ತಿದ್ದು ಪೊದೆಗಳ ನಡುವೆ ಓಡಿ ಪರಾರಿಯಾಗಿದೆ.


ಒಮ್ಮೆಗೆ ಚಿರತೆ ಹೊರಗೆ ಬಂದಿದ್ದು ಗೊತ್ತಾಗುತ್ತಲೇ ಅಲ್ಲಿ ಸೇರಿದ್ದ ಪರಿಸರ ಜನರು, ಪೊಲೀಸರು, ಮಾಧ್ಯಮದ ವ್ಯಕ್ತಿಗಳು ಕೂಡ ಚಿರತೆಯ ಬಗ್ಗೆ ಹೆದರಿ ಓಟಕ್ಕಿತ್ತಿದ್ದಾರೆ. ಅತ್ತ ಚಿರತೆಯೂ ಓಡಿದ್ದು, ಅದಾಗಲೇ ಕಾಡಿನಲ್ಲಿ ಮರೆಯಾಗಿತ್ತು. ಇಂದು ಮುಂಜಾವಿನ ವೇಳೆಗೆ, ಸುಬ್ರಹ್ಮಣ್ಯ ಬಳಿಯ ಕೈಕಂಬದ ರೇಗಪ್ಪ ಎಂಬವರ ಮನೆ ಆವರಣಕ್ಕೆ ಬಂದಿದ್ದ ಚಿರತೆ ನಾಯಿಯನ್ನು ಹಿಡಿಯಲೆಂದು ಬೆನ್ನಟ್ಟಿ ಬಂದಿತ್ತು. ನಾಯಿ ಪ್ರಾಣ ಭಯದಲ್ಲಿ ಮನೆಯ ಟಾಯ್ಲೆಟ್ ಕೋಣೆಗೆ ಹೊಕ್ಕಿತ್ತು. ಇದೇ ವೇಳೆ, ನಾಯಿಯನ್ನು ಹುಡುಕುತ್ತಾ ಹಿಂದೆ ಓಡಿದ್ದ ಮನೆಯಲ್ಲಿದ್ದ ಮಹಿಳೆ ಒಳಗೆ ಚಿರತೆ ಇರುವುದನ್ನು ಕಂಡು ಟಾಯ್ಲೆಟಿಗೆ ಬಾಗಿಲು ಹಾಕಿದ್ದಾರೆ.


ಆಬಳಿಕ ಸ್ಥಳೀಯರು ಸೇರಿದ್ದು ಅರಣ್ಯಾಧಿಕಾರಿಗಳು ಮತ್ತು ಸುಬ್ರಹ್ಮಣ್ಯ ಪೊಲೀಸರನ್ನು ಕರೆಸಿದ್ದಾರೆ. ಚಿರತೆ ಹಿಡಿಯಲೆಂದು ಬೋನು, ಹಗ್ಗ, ಬಲೆ ಎಲ್ಲವನ್ನೂ ಸ್ಥಳಕ್ಕೆ ತಂದು ಏನೋ ಆಪರೇಶನ್ ಮಾಡಲು ಪ್ಲಾನ್ ಹಾಕಿದ್ದರು. ಆದರೆ, ಮಧ್ಯಾಹ್ನ ಮೂರು ಗಂಟೆ ವೇಳೆಗೆ ಬಲೆಯ ನಡುವಿನಿಂದಲೇ ತಪ್ಪಿಸಿಕೊಂಡು ಮೇಲ್ಛಾವಣಿ ಹಾರಿ ತಪ್ಪಿಸಿಕೊಂಡಿದ್ದು ಸುಬ್ರಹ್ಮಣ್ಯದಲ್ಲಿ ಜನರ ಬಾಯಲ್ಲಿ ಹಾಸ್ಯದ ನಗೆ ಉಗ್ಗಿಸಿದೆ.
Read: ಸುಬ್ರಹ್ಮಣ್ಯ ; ನಾಯಿ ಅಟ್ಟಿಸಿ ಬಂದು ಟಾಯ್ಲೆಟ್ ಒಳಗೆ ಸಿಕ್ಕಿಬಿದ್ದ ಚಿರತೆ !
            
            
            
    
            
             03-11-25 05:17 pm
                        
            
                  
                Bangalore Correspondent    
            
                    
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
    
            
             03-11-25 01:13 pm
                        
            
                  
                HK News Desk    
            
                    
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
    
            
             03-11-25 10:47 pm
                        
            
                  
                Mangalore Correspondent    
            
                    
ಡಿ.27 ರಂದು 9ನೇ ವರ್ಷದ ಮಂಗಳೂರು ಕಂಬಳ ; ಈ ಬಾರಿ ’ನ...
03-11-25 05:20 pm
ಸಸಿಹಿತ್ಲು ಬೀಚ್ ನಲ್ಲಿ ನೀರಾಟಕ್ಕಿಳಿದು ಬೆಂಗಳೂರಿನ...
03-11-25 12:37 pm
ಧರ್ಮಸ್ಥಳ ಪ್ರಕರಣ ; ಗುರುತು ಪತ್ತೆಯಾಗದ 38 ಪ್ರಕರಣಗ...
02-11-25 10:23 pm
ಮಂಗಳೂರು ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಕೂಟಕ್ಕೆ ತೆ...
02-11-25 06:57 pm
    
            
             03-11-25 12:33 pm
                        
            
                  
                Mangalore Correspondent    
            
                    
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್...
31-10-25 10:57 pm