ಬ್ರೇಕಿಂಗ್ ನ್ಯೂಸ್
30-01-21 05:08 pm Mangalore Correspondent ಕರಾವಳಿ
ಮಂಗಳೂರು, ಜ.30: ಮಂಗಳೂರು ನಗರದ ಅಡ್ಯಾರ್ – ಕಣ್ಣೂರಿನ ನೇತ್ರಾವತಿ ನದಿ ದಂಡೆಯಲ್ಲಿ ಕಿರುಚಿತ್ರದ ಶೂಟಿಂಗ್ ನಡೆಯುತ್ತಿದ್ದು, ನದಿಯಲ್ಲಿ ದಂಪತಿಯ ಶವ ತೇಲುತ್ತಿರುವ ಚಿತ್ರಣದ ಚಿತ್ರೀಕರಣ ನಡೆಯುತ್ತಿತ್ತು. ನದಿಯಲ್ಲಿ ಶವ ತೇಲುತ್ತಿರುವ ರೀತಿ ವಿಡಿಯೋ ಮಾಡಿದ ಕಿಡಿಗೇಡಿಗಳು ಜಾಲತಾಣದಲ್ಲಿ ಹರಿಯಬಿಟ್ಟು ನೇತ್ರಾವತಿಯಲ್ಲಿ ಶವ ಪತ್ತೆಯೆಂದು ವದಂತಿ ಹಬ್ಬಿಸಿದ್ದಾರೆ.
ನೇತ್ರಾವತಿ ನದಿಯಲ್ಲಿ ಮಲಗಿದ ರೀತಿ ಶವ ಕಂಡುಬಂದಿದ್ದ 15 ಸೆಕೆಂಡುಗಳ ವಿಡಿಯೋ ವಾಟ್ಸಪ್ ಗ್ರೂಪಿನಲ್ಲಿ ಭಾರೀ ವೈರಲ್ ಆಗಿದ್ದು, ವಿದೇಶಗಳಲ್ಲಿರುವ ಕರಾವಳಿ ಕನ್ನಡಿಗರು ಗಾಬರಿಗೊಂಡು ಮಾಧ್ಯಮದ ಮಂದಿಗೆ ಕರೆ ಮಾಡಿ ಕೇಳುತ್ತಿದ್ದಾರೆ. ವಿಡಿಯೋ ಕರಾವಳಿ ಮತ್ತು ಕರಾವಳಿ ಮೂಲದ ವಿದೇಶಿಗರು ಇರುವ ವಾಟ್ಸಪ್ ಗ್ರೂಪಿನಲ್ಲಿ ಶೇರ್ ಆಗಿತ್ತು. ವಿಡಿಯೋದಲ್ಲಿ ಬ್ಯಾರಿ ಭಾಷೆಯಲ್ಲಿ ನೇತ್ರಾವತಿಯಲ್ಲಿ ಶವ ಪತ್ತೆ ಎಂದು ಹೇಳಿಕೊಂಡಿದ್ದು, ಜನರನ್ನು ಗಾಬರಿಗೆ ಈಡುಮಾಡಿತ್ತು.

ವಾಸ್ತವದಲ್ಲಿ ನೋಡಿದರೆ, ಅದರಲ್ಲಿ ಎರಡು ಮೂರು ವಿಡಿಯೋಗಳಿದ್ದು ಶವ ತೇಲುತ್ತಿರುವುದು ಮತ್ತು ಬಳಿಕ ವಿಡಿಯೋ ಶೂಟ್ ಮಾಡುತ್ತಿರುವ ಕ್ಯಾಮರಾ ಸೇರಿದಂತೆ ಅಲ್ಲಿನ ಸಿಬಂದಿಯನ್ನು ತೋರಿಸಲಾಗುತ್ತೆ. ಆದರೆ, ಒಂದು ವಿಡಿಯೋದಲ್ಲಿ ಶವ ತೇಲುವ ಮಾತ್ರ ದೃಶ್ಯಗಳಿದ್ದು ಅದರಲ್ಲಿ ಆಡಿಯೋ ಕೊಟ್ಟು ಹರಿಯಬಿಡಲಾಗಿದೆ. ವಿಡಿಯೋದಲ್ಲಿ ಅಡ್ಯಾರಿನಲ್ಲಿ ಶವ ಪತ್ತೆಯೆಂದು ಹೇಳಿದ್ದು ಮಂಗಳೂರಿನ ಮಂದಿಯನ್ನು ಆತಂಕಕ್ಕೆ ಈಡುಮಾಡಿತ್ತು.
A video of couple suicide at Adyar Netravati river has gone viral on social media. A fact check by Headline Karnataka.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
26-08-26 12:01 pm
HK News Staffer
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
25-08-26 09:37 pm
HK News Staffer
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರೊಫೆಸರ್, ಮಂಗಳೂ...
24-08-26 06:25 pm
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
26-08-26 11:26 am
HK News Staffer
ವಿಜಯಪುರದಲ್ಲಿ ಭೀಕರ ದುರಂತ ; ನಾಪತ್ತೆಯಾಗಿದ್ದ ಒಂದೇ...
26-08-26 11:23 am
ಚಿಕ್ಕಮಗಳೂರು ; ಟಿಪ್ಪು ಕಟೌಟ್ ಜೊತೆಗೆ ಮುಜಾಹಿದ್ ಹಾ...
25-08-26 10:39 pm
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm
ವಿಟ್ಲ ; ಈಜಲು ತೆರಳಿದ್ದ ಎಸ್ಸಿಡಿಸಿಸಿ ಬ್ಯಾಂಕ್...
25-08-26 12:46 pm