ಬ್ರೇಕಿಂಗ್ ನ್ಯೂಸ್
29-01-21 05:46 pm Mangalore Correspondent ಕರಾವಳಿ
ಮಂಗಳೂರು, ಜ.29: ಪೊಲೀಸ್ ಸಿಬಂದಿಗೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಮತ್ತೊಂದು ಗ್ಯಾಂಗ್ ಕೈವಾಡ ಇರುವುದನ್ನು ಪೊಲೀಸರು ದೃಢಪಡಿಸಿದ್ದಾರೆ. ಕುದ್ರೋಳಿ ಪರಿಸರದಲ್ಲಿ ಸಕ್ರಿಯವಾಗಿರುವ ಕಾರ್ಖಾನೆ ಗ್ಯಾಂಗ್ ಎನ್ನುವ ಹೆಸರಲ್ಲಿ ಈ ಗ್ಯಾಂಗ್ ಸಕ್ರಿಯವಾಗಿದೆಯಂತೆ.
ಪೊಲೀಸರು ಎರಡು ದಿನಗಳ ಹಿಂದೆ ಪ್ರಕರಣ ಸಂಬಂಧಿಸಿ ಮಹಮ್ಮದ್ ಶಾಕೀರ್ (19(, ಅಕ್ಬರ್(30) ಮತ್ತು ಮಹಮ್ಮದ್ ಹನೀಫ್ (32) ಎಂಬ ಮೂವರನ್ನು ಬಂಧಿಸಿದ್ದರು. ಪೊಲೀಸರ ಮೇಲೆ ಪ್ರತೀಕಾರ ತೀರಿಸಲು ಸಂಚು ರೂಪಿಸಿದವರಲ್ಲಿ ಪೈಕಿ ಇವರ ಶಾಮೀಲಾತಿ ಕಂಡುಬಂದ ಹಿನ್ನೆಲೆಯಲ್ಲಿ ಪೊಲೀಸರು ಕ್ರಮ ಜರುಗಿಸಿದ್ದರು. ಇದೀಗ ಇವರು ತಮ್ಮಲ್ಲೇ ಕುದ್ರೋಳಿ ಮಸೀದಿ ಆಸುಪಾಸಿನಲ್ಲಿ ಕಾರ್ಖಾನೆ ಗ್ಯಾಂಗ್ ಎನ್ನುವ ಹೆಸರಲ್ಲಿ ಅಪರಾಧ ಚಟುವಟಿಕೆ ನಡೆಸುತ್ತಿದ್ದರು ಎಂಬ ಮಾಹಿತಿಯನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
ಪ್ರಕರಣ ಸಂಬಂಧಿಸಿ, ಪೊಲೀಸರು ಈ ಹಿಂದೆ ಆರು ಮಂದಿಯನ್ನು ಬಂಧಿಸಿದ್ದು ಅವರು ಮಾಯಾ ಗ್ಯಾಂಗ್ ಹೆಸರಲ್ಲಿ ಕಾರ್ಯಾಚರಿಸುತ್ತಿದ್ದರು ಎನ್ನುವುದನ್ನು ಪತ್ತೆ ಮಾಡಿದ್ದರು. ಆ ಸಂದರ್ಭದಲ್ಲಿ ಪ್ರಕರಣದಲ್ಲಿ ಮತ್ತೊಂದು ಗ್ಯಾಂಗ್ ಪಾತ್ರವೂ ಕಂಡುಬಂದಿದೆ ಎಂದು ಕಮಿಷನರ್ ತಿಳಿಸಿದ್ದರು. ಇದೀಗ ಎಸ್ಡಿಪಿಐ ಪಕ್ಷದಲ್ಲಿ ಸಕ್ರಿಯವಾಗಿರುವ ಅಕ್ಬರ್ ಸೇರಿದಂತೆ ಮೂವರನ್ನು ಪೊಲೀಸರು ಪತ್ತೆ ಮಾಡಿದ್ದು, ಇವರು ಕಾರ್ಖಾನೆ ಗ್ಯಾಂಗ್ ಹೆಸರಲ್ಲಿ ಕಾರ್ಯಾಚರಿಸುತ್ತಿದ್ದರು ಎನ್ನಲಾಗಿದೆ.
ಬಂದರು ಠಾಣೆ ಹೆಡ್ ಕಾನ್ಸ್ ಟೇಬಲ್ ಆಗಿರುವ ಗಣೇಶ್ ಕಾಮತ್ ಮೇಲೆ ಡಿ.16ರಂದು ಹಾಡಹಗಲೇ ನಗರದ ನ್ಯೂಚಿತ್ರಾ ಟಾಕೀಸ್ ಬಳಿ ನಿಂತಿದ್ದಾಗ ಇಬ್ಬರು ಬಂದು ಕತ್ತಿಯಿಂದ ಹಲ್ಲೆ ಮಾಡಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಇದಕ್ಕೆ ಸಂಬಂಧಿಸಿ ಸರಣಿಯಾಗಿ ಆರೋಪಿಗಳನ್ನು ಪತ್ತೆ ಮಾಡುತ್ತಿದ್ದಾರೆ. ಆರೋಪಿಗಳು ಕಳೆದ ವರ್ಷ ಡಿ.19ರಂದು ನಡೆದಿದ್ದ ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರನ್ನು ಟಾರ್ಗೆಟ್ ಮಾಡಿಕೊಂಡಿದ್ದರು. ಘಟನೆಗೆ ವರ್ಷ ತುಂಬುತ್ತಿರುವ ಸಂದರ್ಭದಲ್ಲೇ ಪೊಲೀಸರ ಮೇಲೆ ಪ್ರತೀಕಾರ ತೀರಿಸಬೇಕು ಎಂದು ಪ್ಲಾನ್ ಹಾಕಿದ್ದರು.
ಪೊಲೀಸರ ಮೇಲೆ ರಿವೇಂಜ್ ತೀರಿಸುವ ಮಾಯಾ ಗ್ಯಾಂಗ್ ಸಿಕ್ಕಿಬೀಳುತ್ತಲೇ, ಈಗ ಒಟ್ಟು ಘಟನೆಗೆ ಪ್ರೇರಣೆ ನೀಡಿದ್ದ ತಂಡವನ್ನು ಬಲೆಗೆ ಕೆಡವಲಾಗಿದೆ. ಅಪರಾಧ ಕೃತ್ಯ ಸಾಮಾನ್ಯ. ಆದರೆ, ಒಂದು ಪ್ರಕರಣವನ್ನು ಮುಂದಿಟ್ಟು ಪೊಲೀಸರ ಮೇಲೆ ರಿವೇಂಜ್ ತೀರಿಸುವಂಥ ನಡೆ ಅಪಾಯಕಾರಿ. ಇದನ್ನು ಗಂಭೀರವಾಗಿ ಪರಿಗಣಿಸುತ್ತೇವೆ ಎಂದು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ತಿಳಿಸಿದ್ದಾರೆ.
ಪೊಲೀಸ್ ಕೊಲೆಯತ್ನ ; ಮತ್ತೆ ಮೂವರು ಸಂಚುಕೋರರ ಸೆರೆ
ಪೊಲೀಸರಿಗೆ ಹಲ್ಲೆ ; ಮತ್ತೆ ಆರು ಮಂದಿ ಸೆರೆ, ಮಾಯಾ ಗ್ಯಾಂಗ್ ಗೋಲಿಬಾರ್ ಸಂಚು ಬಯಲು !! ಮುಚ್ಚಿಹೋಗಿದ್ದ ಕೇಸ್ ಮರುಜೀವ
Three arrested in connection with Attack on Police Head Constable near Car street are from Karkana Gang said Mangalore Police Commissioner Shashi Kumar.
24-05-25 07:45 pm
HK News Desk
Landslide Threat Returns in Shirur, Danger Zo...
24-05-25 06:04 pm
Hassan Marriage, wedding: ತಾಳಿ ಕಟ್ಟುವ ಸಮಯಕ್ಕೆ...
24-05-25 03:19 pm
ನವೆಂಬರ್ ವೇಳೆಗೆ ಜಿಪಂ, ತಾಪಂ ಚುನಾವಣೆ ಸಾಧ್ಯತೆ ; ರ...
23-05-25 02:35 pm
ಹಾಸನ ಜಿಲ್ಲೆಯಲ್ಲಿ ಮತ್ತೊಬ್ಬ ಮಹಿಳೆಯನ್ನು ತುಳಿದು ಸ...
23-05-25 11:54 am
23-05-25 08:08 pm
HK News Desk
ಭಾರತೀಯ ಹೈಕಮಷಿನ್ ಅಧಿಕಾರಿಗೆ ಗೇಟ್ ಪಾಸ್, 24 ಗಂಟೆಯ...
22-05-25 05:53 pm
ವಿದೇಶಕ್ಕೆ ಹೊರಟ ಸರ್ವಪಕ್ಷಗಳ ಏಳು ನಿಯೋಗ ; ಭಾರತದ ಸ...
22-05-25 05:43 pm
ಸಿಂಧು ಜಲ ಒಪ್ಪಂದ ಮರು ಪರಿಶೀಲಿಸಲು ಭಾರತ ಉತ್ಸುಕ ;...
21-05-25 12:57 pm
ಅಕ್ರಮ ಬಾಂಗ್ಲಾ ವಲಸಿಗರ ಪತ್ತೆಗೆ ಪ್ರತಿ ಜಿಲ್ಲೆಯಲ್ಲ...
20-05-25 02:36 pm
24-05-25 04:29 pm
Mangalore Correspondent
Mangalore Accident, Kolya: ಬೈಕ್ ಸ್ಕಿಡ್ ಆಗಿ ಸವ...
24-05-25 12:41 pm
Mangalore Lokayukta Raid, Pilikula: ಪಿಲಿಕುಳ ನ...
23-05-25 10:46 pm
Bantwal Heart Attack, Mangalore: ಪತ್ನಿಯ ಸೀಮಂತ...
23-05-25 06:04 pm
Mangalore Suhas Shetty, Nandan Mallya, BJP: ಸ...
23-05-25 05:38 pm
23-05-25 11:20 pm
Mangalore Correspondent
ಬಾಬ್ರಿ ಮಸೀದಿಗೆ ಪ್ರತೀಕಾರ, ಭಾರತದ ವಿರುದ್ಧ ದಾಳಿಗ...
23-05-25 01:25 pm
Valachil Murder, Mangalore crime: ಮದುವೆ ಸಂಬಂಧ...
23-05-25 10:02 am
Davangere Doctor, Stock Market Fraud: ಷೇರು ಮಾ...
22-05-25 02:22 pm
Mangalore Fraud, Currency trading scam: ಕರೆನ್...
19-05-25 09:38 pm