ಬ್ರೇಕಿಂಗ್ ನ್ಯೂಸ್
23-01-21 05:51 pm Mangalore Correspondent ಕರಾವಳಿ
ಮಂಗಳೂರು, ಜ.23: ಮಂಗಳೂರಿನ ಪೊಲೀಸರು ರಾತ್ರಿ ವೇಳೆ ತಿರುಗಾಡುವವರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ವಾಹನದಲ್ಲಿ ಕುಳಿತು ಕುಡಿಯುವುದು, ರಾತ್ರಿ ವೇಳೆ ವಿನಾಕಾರಣ ತಿರುಗಾಡುವುದು ಮಾಡುವಂತಿಲ್ಲ ಎಂದು ಹೊಸ ಕಮಿಷನರ್ ಪೊಲೀಸರಿಗೆ ಹೊಸ ಕೆಲಸ ಕೊಟ್ಟಿದ್ದಾರೆ. ಆದರೆ, ಇದೇ ವಿಚಾರವನ್ನು ಇಟ್ಟುಕೊಂಡು ವೇದಾಂತ್ ಶೆಣೈ ಎಂಬ ಯುವಕ ತನಗಾದ ಕಿರುಕುಳದ ಬಗ್ಗೆ ಇನ್ ಸ್ಟಾ ಗ್ರಾಮಿನಲ್ಲಿ ಹಂಚಿಕೊಂಡಿದ್ದಾನೆ.


ತಾನು ಬಲ್ಮಠದಲ್ಲಿ ಕೆಫೆ ಒಂದಕ್ಕೆ ರಾತ್ರಿ 8 ಗಂಟೆ ಸುಮಾರಿಗೆ ತೆರಳಿದ್ದಾಗ ಪೊಲೀಸರು ಬಂದು ತಮ್ಮನ್ನು ಜೀಪಿನಲ್ಲಿ ಹಾಕಿ ಕೊಂಡೊಯ್ದಿದ್ದರು. ಬಳಿಕ ಟೌನ್ ಹಾಲ್ ಬಳಿಯ ಮಿನಿ ಹಾಲ್ ಗೆ ಕರೆದೊಯ್ದು ನಮ್ಮನ್ನು ಕಳ್ಳರಂತೆ ಟ್ರೀಟ್ ಮಾಡಿದ್ದಾರೆ. ಅಲ್ಲಿ ನಮ್ಮ ವಿಳಾಸ, ಪೂರ್ವಾಪರ ಕೇಳಿಕೊಂಡು ಸುಮ್ಮನೆ ನಿಲ್ಲಿಸಿದ್ದಾರೆ. ಕಮಿಷನರ್ ಹೊರಗಡೆ ಹೋಗಿದ್ದಾರೆ, ಅಲ್ಲಿ ವರೆಗೂ ಕೂತಿರಿ ಎಂದು ಒರಟು ಭಾಷೆಯಲ್ಲಿ ಬೈದಿದ್ದಾರೆ. ನಾವೇನು ತಪ್ಪು ಮಾಡಿದ್ದೇವೆಂದು ಅಲ್ಲಿ ಕೂಡಿಹಾಕಿದ್ದಾರೆಂದು ಗೊತ್ತಿರಲಿಲ್ಲ. ಅಲ್ಲಿ ನೋಡಿದಾಗ ನೂರಕ್ಕೂ ಹೆಚ್ಚು ಮಂದಿ ಇದ್ದರು. ಎಲ್ಲರನ್ನೂ ನೆಲದಲ್ಲಿ ಕೂರಿಸಿದ್ದರು. ನಾಲ್ಕು ಗಂಟೆ ಕಾಲ ಕಾಯಿರಿ ಏನಾಗಲ್ಲ ಎಂದಿದ್ದಾರೆ. ಇದರಿಂದ ತುಂಬ ಕಿರುಕುಳ ಆಗಿದೆ ಎಂದು ಬರೆದುಕೊಂಡಿದ್ದು ಅದರ ಸ್ಕ್ರೀನ್ ಶಾಟ್ ಈಗ ವೈರಲ್ ಆಗಿದೆ.
ರಾತ್ರಿ ವೇಳೆ ಹೊರಗೆ ಹೋಗುವ ಮಂದಿ ಇನ್ನು ಜಾಗ್ರತೆ ಇರಿ. ಪೊಲೀಸರು ನಿಮ್ಮನ್ನು ಕಿಡ್ನಾಪ್ ಮಾಡುತ್ತಾರೆ. ಟೌನ್ ಹಾಲಲ್ಲಿ ಕೂಡಿಹಾಕಿ ಫೇಕ್ ಕೇಸ್ ಹಾಕಲು ಪ್ರಯತ್ನ ಪಡುತ್ತಾರೆ ಎಂದು ಬರೆದಿದ್ದಾರೆ. ಈ ಬಗ್ಗೆ ಪೊಲೀಸರು ಏನು ಆ್ಯಕ್ಷನ್ ತಗೋತಾರೋ ಗೊತ್ತಿಲ್ಲ.
Youth slams Mangalore Police Commissioner Shashi Kumar and team on Instagram for unnecessarily seizing people into custody at night. Also shares a brief incident of what happened to him.
25-05-26 09:38 pm
HK News Staffer
Student Suicide: ನೀಟ್ ಪರೀಕ್ಷೆ ಪಜೀತಿ ; ಪಿಯುಸಿಯ...
24-05-26 09:03 pm
ಕಪ್ಪೆಚಿಪ್ಪು ತೆಗೆಯಲು ನದಿಗಿಳಿದಿದ್ದ ಏಳು ಮಹಿಳೆಯರು...
24-05-26 05:36 pm
ಬೆಂಗಳೂರು ಜಿಬಿಎ ಚುನಾವಣೆಗೆ ವಿಜಯ್ ಪಕ್ಷ ಎಂಟ್ರಿ ?...
23-05-26 11:37 pm
ಸರ್ಕಾರಿ ಶಾಲೆಗಳಲ್ಲಿ ಕೇಸರಿ ಶಾಲು ಧರಿಸಲು ಅವಕಾಶ ಇಲ...
23-05-26 10:40 pm
25-05-26 08:18 pm
HK News Staffer
ಕಾಕ್ರೋಚ್ ಜನತಾ ಪಾರ್ಟಿ ವಿರುದ್ಧ ಸಿಬಿಐ ತನಿಖೆಗೆ ಸು...
25-05-26 05:29 pm
ಮತ್ತೆ ಇಂಧನ ಶಾಕ್..! 11 ದಿನದಲ್ಲಿ 4ನೇ ಬಾರಿ ಪೆಟ್ರ...
25-05-26 10:19 am
ರಾಜ್ಯಸಭೆ ಚುನಾವಣೆ ; ಮಲ್ಲಿಕಾರ್ಜುನ ಖರ್ಗೆ, ದೇವೇಗೌ...
23-05-26 08:47 pm
ಸಕಲೇಶಪುರ ವಿದ್ಯುದೀಕರಣ, ಸದ್ಯದಲ್ಲೇ 'ಮಂ- ಬೆಂ' ವಂದ...
23-05-26 03:53 pm
25-05-26 09:57 pm
HK News Staffer
‘ಲ್ಯಾಂಡ್ ಲಿಂಕ್ಸ್’ ಸಂಸ್ಥೆಯ ನಾಲ್ಕು ಸಭಾಭವನ ಏಕಕಾ...
25-05-26 04:23 pm
ಅಮೆರಿಕದಲ್ಲಿ ಧರ್ಮಗುರು, ಹುಟ್ಟೂರು ಮಂಗಳೂರಿನಲ್ಲಿ ಸ...
25-05-26 01:08 pm
Mukka Accident, Mangalore: ಮುಕ್ಕ ಬಳಿ ಭೀಕರ ಅಪಘ...
24-05-26 09:22 pm
ಕುಳೂರು ಸೇತುವೆಯಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಹ...
24-05-26 04:45 pm
26-05-26 11:56 am
HK News Staffer
Tablet Arif Murder: ಟ್ಯಾಬ್ಲೆಟ್ ಆರೀಫ್ ಕೊಲೆ ಪ್ರ...
25-05-26 11:00 pm
ಭಟ್ಕಳದಲ್ಲಿ ಮುರಿದ ಕೋಮು ಸಾಮರಸ್ಯದ ಕಟ್ಟೆ; ರಸ್ತೆ ನ...
25-05-26 09:40 pm
ಮುಸ್ಲಿಂ ಲೀಗ್ ಶಾಸಕನ ಬಗ್ಗೆ ವಾಟ್ಸಾಪ್ ಗ್ರೂಪಿನಲ್ಲಿ...
25-05-26 04:26 pm
ಭಟ್ಕಳದಲ್ಲಿ ದೇವರಕಟ್ಟೆ ನಿರ್ಮಾಣ ವಿಚಾರಕ್ಕೆ ಎರಡು ಗ...
25-05-26 02:23 pm