ಬ್ರೇಕಿಂಗ್ ನ್ಯೂಸ್
22-01-21 02:23 pm Mangalore Correspondent ಕರಾವಳಿ
ಮಂಗಳೂರು, ಜ.22: ಕೇಂದ್ರ ಸರಕಾರ ಜಾರಿಗೆ ತರುತ್ತಿರುವ ರೈತ ವಿರೋಧಿ ಕಾನೂನನ್ನು ದೇಶದ ಪ್ರತಿ ಮನೆಯವರು ವಿರೋಧಿಸಬೇಕು. ಇದರಿಂದ ಬಡವರ ಹೊಟ್ಟೆಗೆ ಹೊಡೆಯುವ ಹುನ್ನಾರ ಇದೆ. ಈ ಕಾನೂನು ಜಾರಿಗೆ ಬಂದರೆ ಕೇಂದ್ರ ಸರಕಾರದ ಫುಡ್ ಕಾರ್ಪೊರೇಷನ್ನಿಗೆ ಭತ್ತ ಸಿಗುವುದಿಲ್ಲ. ರೈತರಿಂದ ಭತ್ತ ಸಿಗದಿದ್ದರೆ ದೇಶಾದ್ಯಂತ ರಾಜ್ಯಗಳಿಗೆ, ಅಮೂಲಕ ರೇಷನ್ ಅಂಗಡಿಗಳಿಗೆ ಅಕ್ಕಿ ನೀಡುವ ವಿಧಾನವೇ ಬುಡಮೇಲಾಗಲಿದೆ ಎಂದು ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಯು.ಟಿ.ಖಾದರ್ ಆತಂಕ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನ ಕಾಂಗ್ರೆಸ್ ಭವನದಲ್ಲಿ ಮಾತನಾಡಿದ ಯು.ಟಿ.ಖಾದರ್, ಯುಪಿಎ ಸರಕಾರ ಜಾರಿಗೆ ತಂದಿರುವ ಆಹಾರ ಭದ್ರತಾ ಕಾಯ್ದೆಯಡಿ ಎಲ್ಲ ರಾಜ್ಯಗಳಿಗೆ ಫುಡ್ ಕಾರ್ಪೊರೇಶನ್ನಿಂದ 3 ರೂ.ಗೆ ಅಕ್ಕಿ ನೀಡಲಾಗುತ್ತದೆ. ಅದನ್ನು ಆಯಾ ರಾಜ್ಯಗಳು 3 ರೂ. ಅಥವಾ ಬಿಪಿಎಲ್ ಕಾರ್ಡುದಾರರಿಗೆ ಉಚಿತವಾಗಿ ನೀಡುತ್ತವೆ. ಪ್ರಸ್ತಾವಿತ ಕಾನೂನು ಜಾರಿಯಾದಲ್ಲಿ ರೈತರು ಸರಕಾರದ ಎಪಿಎಂಸಿಗೆ ಅಥವಾ ಫುಡ್ ಕಾರ್ಪೊರೇಶನ್ನಿಗೆ ಭತ್ತ ನೀಡಬೇಕೆಂಬ ನಿಯಮ ಇರುವುದಿಲ್ಲ. ಕಂಪನಿಗಳಿಗೆ ಹೆಚ್ಚು ಕ್ರಯಕ್ಕೆ ಮಾರಾಟ ಮಾಡಬಹುದು. ಮುಂದೆ ದೇಶದ ಬಡವರಿಗೆ ಅಕ್ಕಿ ಸಿಗಲು ಸಾಧ್ಯವೇ ಎಂದು ಪ್ರಶ್ನೆ ಮಾಡಿದರು.
ಕಳೆದ ಮೂರು ತಿಂಗಳಿಂದ ಚಳಿ, ಗಾಳಿಯನ್ನು ಲೆಕ್ಕಿಸದೆ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ಬಿಜೆಪಿಯ ಸರಕಾರ ರೈತರ ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಜನಸಾಮಾನ್ಯರನ್ನು ಯಾವಾಗ ಆಡಳಿತ ಕಡೆಗಣಿಸುತ್ತದೋ ಆವತ್ತೇ ಅಲ್ಲಿನ ಆಡಳಿತದ ಅವನತಿ ಶುರುವಾಗುತ್ತದೆ ಎಂದು ವಿವೇಕಾನಂದರು ಹೇಳಿದ್ದರು. ಬಿಜೆಪಿ ಸರಕಾರದ ಪಾಲಿಗೆ ವಿವೇಕಾನಂದರ ಮಾತು ನಿಜವಾಗುತ್ತಿದೆ. ಬಿಜೆಪಿ ಸರಕಾರದ ಪತನ, ವನತಿ ಶುರುವಾಗಿದೆ. ಕೇಂದ್ರದ ಕೃಷಿ ಕಾನೂನು ವಿರುದ್ಧ ದೇಶಾದ್ಯಂತ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ ಎಂದು ಹೇಳಿದರು.

ಶಾಲೆ, ಕಾಲೇಜಿನ ಬಗ್ಗೆ ರಾಜ್ಯ ಸರಕಾರ ಸ್ಪಷ್ಟ ನೀತಿ ರೂಪಿಸಲು ವಿಫಲವಾಗಿದೆ. ಗೊಂದಲ ನಿರ್ಮಿಸುತ್ತಿದ್ದಾರೆ. ಇನ್ನು ನಾಲ್ಕು ತಿಂಗಳು ಇರುವಾಗ ಪೋರ್ಷನ್ ಕಟ್ ಮಾಡಿ ಶಿಕ್ಷಣ ವರ್ಷ ಪೂರ್ತಿಗೊಳಿಸಲು ಹೊರಟಿದೆ. ಇದರಿಂದ ವಿದ್ಯಾರ್ಥಿಗಳಿಗೆ ಅನ್ಯಾಯ ಆಗುವುದಿಲ್ಲವೇ.. ಹತ್ತನೇ ಕ್ಲಾಸಿನ ವಿದ್ಯಾರ್ಥಿಗಳು ಏನು ಮಾಡಬೇಕು. ಅವರಿಗೆ ಪೂರ್ತಿ ಸಿಲೆಬಸ್ ಸಿಗದಿದ್ದರೆ, ಪರೀಕ್ಷೆ ಹೇಗೆ ಬರೆಯುತ್ತಾರೆ. ಇದೇ ವೇಳೆ, ಇನ್ನೂ ಅತಿಥಿ ಉಪನ್ಯಾಸಕರ ನೇಮಕಾತಿ ಆಗಿಲ್ಲ. 80 ಶೇ. ಸರಕಾರಿ ಕಾಲೇಜುಗಳು ಅತಿಥಿ ಉಪನ್ಯಾಸಕರಿಂದಲೇ ನಡೆಯಬೇಕಿದ್ದರೆ, ಅವರಿಲ್ಲದೆ ಕಾಲೇಜು ಹೇಗೆ ನಡೆಯಬೇಕು ಎಂದು ಪ್ರಶ್ನೆ ಮಾಡಿದರು.
ಉಳ್ಳಾಲದಲ್ಲಿ ದೈವಸ್ಥಾನ, ಭಜನಾ ಮಂದಿರದ ಅಪವಿತ್ರಗೊಳಿಸಿರುವ ಪ್ರಕರಣದಲ್ಲಿ ಪೊಲೀಸರು ಕೂಡಲೇ ಆರೋಪಿಗಳನ್ನು ಪತ್ತೆ ಮಾಡಬೇಕು. ಮಂಗಳೂರಿನಲ್ಲಿ ಕೊಟ್ಟಾರ ಮತ್ತು ಅತ್ತಾವರದಲ್ಲಿ ಇಂಥ ಕೃತ್ಯಗಳಾದಾಗ ಯಾಕೆ ಆರೋಪಿಗಳನ್ನು ಪತ್ತೆ ಮಾಡುವ ಕೆಲಸ ಆಗಿಲ್ಲ. ಪೊಲೀಸರು ವಿಫಲರಾದರೆ, ಸಮಾಜದಲ್ಲಿ ಪೊಲೀಸರ ಬಗ್ಗೆ ಭಯ ಇಲ್ಲದಿದ್ದರೆ ಇಂಥ ಕೃತ್ಯ ಮರುಕಳಿಸುತ್ತದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಜಿಲ್ಲಾ ಕಾರ್ಯದರ್ಶಿ ಶುಭೋದಯ ಆಳ್ವ ಮತ್ತಿತರರು ಇದ್ದರು.
Congress UT Khader slams at Central Government over Ration to people at the press meet held at congress office in Mangalore.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
26-08-26 12:01 pm
HK News Staffer
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
25-08-26 09:37 pm
HK News Staffer
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರೊಫೆಸರ್, ಮಂಗಳೂ...
24-08-26 06:25 pm
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
26-08-26 11:26 am
HK News Staffer
ವಿಜಯಪುರದಲ್ಲಿ ಭೀಕರ ದುರಂತ ; ನಾಪತ್ತೆಯಾಗಿದ್ದ ಒಂದೇ...
26-08-26 11:23 am
ಚಿಕ್ಕಮಗಳೂರು ; ಟಿಪ್ಪು ಕಟೌಟ್ ಜೊತೆಗೆ ಮುಜಾಹಿದ್ ಹಾ...
25-08-26 10:39 pm
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm
ವಿಟ್ಲ ; ಈಜಲು ತೆರಳಿದ್ದ ಎಸ್ಸಿಡಿಸಿಸಿ ಬ್ಯಾಂಕ್...
25-08-26 12:46 pm